MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಕೇದಾರನಾಥ ಕ್ಷೇತ್ರದ ಕುರಿತು ಯಾರಿಗೂ ತಿಳಿಯದ ಅಚ್ಚರಿ ಮೂಡಿಸುವ ರಹಸ್ಯಗಳು

ಕೇದಾರನಾಥ ಕ್ಷೇತ್ರದ ಕುರಿತು ಯಾರಿಗೂ ತಿಳಿಯದ ಅಚ್ಚರಿ ಮೂಡಿಸುವ ರಹಸ್ಯಗಳು

ಕೇದಾರನಥ ಕ್ಷೇತ್ರದ ಕುರಿತಾಗಿ ಅಚ್ಚರಿ ಮೂಡಿಸುವ ಕೆಲವೊಂದು ರಹಸ್ಯಗಳು ಇಲ್ಲಿವೆ. ಭಕ್ತರ ದರ್ಶನಕ್ಕಾಗಿ ಇದೀಗ ತೆರೆದಿರುವ ಕೇದಾರನಾಥ ಕ್ಷೇತ್ರದ ಬಗ್ಗೆ ನೀವು ತಿಳಿಯಿರಿ.  

2 Min read
Pavna Das
Published : May 03 2025, 12:01 PM IST| Updated : May 05 2025, 12:37 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರತಿ ವರ್ಷ ಲಕ್ಷಾಂತರ ಭಕ್ತರು ಕೇದಾರನಾಥ (Kedarnath)ಧಾಮಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು 6 ತಿಂಗಳು ಮುಚ್ಚಲ್ಪಟ್ಟಿರುತ್ತದೆ ಮತ್ತು ಉಳಿದ 6 ತಿಂಗಳು ಭಕ್ತರಿಗೆ ಬಾಗಿಲು ತೆರೆದಿರುತ್ತದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ನಿಗೂಢತೆಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು.
 

28

ಕೇದಾರನಾಥ ಧಾಮದ ಬಾಗಿಲುಗಳು 6 ತಿಂಗಳ ಕಾಲ ಮುಚ್ಚಿರುತ್ತವೆ ಮತ್ತು ಈ ಸಮಯದಲ್ಲಿ ದೇವಾಲಯದ ಒಳಗೆ ಯಾವಾಗಲೂ ದೀಪ ಉರಿಯುತ್ತಲೇ ಇರುತ್ತೆ ಅನ್ನೋದು ಗೊತ್ತಾ? ಆರು ತಿಂಗಳ ನಂತರ ಬಾಗಿಲು ತೆರೆದಾಗ, ದೇವಾಲಯದ ಒಳಗೆ ಒಂದು ದೀಪ ಉರಿಯುತ್ತಿರುವುದು ಕಂಡುಬರುತ್ತದೆ.
 

Related Articles

Related image1
ಸಾವಿನ ಸಮೀಪ ಹೋಗಿಬಂದ ಜಾಹ್ನವಿ ಕಪೂರ್​, ಸಾರಾ ಅಲಿ ಖಾನ್​! ಶಾಕಿಂಗ್​ ಘಟನೆ ರಿವೀಲ್​
Related image2
ಕೇದಾರನಾಥದಲ್ಲಿ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ…. ರೀಲ್ಸ್ ಮಾಡಿದ್ರೆ ಇಲ್ಲ ದರ್ಶನ ಭಾಗ್ಯ, ನೇರ ಮನೆಗೆ!
38

ಮಹಾಭಾರತ ಯುದ್ಧದ (Mahabharat War) ನಂತರ ಪಾಂಡವರು ತಮ್ಮ ಪಾಪಗಳಿಗೆ ಪರಿಹಾರ ಪಡೆಯಲು ಕೇದಾರನಾಥ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರಂತೆ. ಕೇದಾರನಾಥ ಧಾಮದಲ್ಲಿ, ಶಿವನು ಪಾಂಡವರ ಮುಂದೆ ಗೂಳಿಯ ರೂಪದಲ್ಲಿ ಕಾಣಿಸಿಕೊಂಡನು ಮತ್ತು ಇದಾದ ನಂತರ ಭೂ-ಶಿವಲಿಂಗವು ಅಲ್ಲಿ ಹುಟ್ಟಿಕೊಂಡಿತು.
 

48
Photo by Alok Kumar

Photo by Alok Kumar

ಕೇದಾರನಾಥ ಧಾಮ ಶಿವನ ದೇಗುಲ ಆಗಿರೋದ್ರಿಂದ ಶೈವ ಸಮುದಾಯದ ಪುರೋಹಿತರು ಮಾತ್ರ ಇಲ್ಲಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಶಿವನ ದರ್ಶನ ಪಡೆಯುವುದೇ ಒಂದು ಪುಣ್ಯದ ಕೆಲಸ. 
 

58

ನೀವು ಬದರಿನಾಥಕ್ಕೆ (Badarinath) ಹೋದರೆ ಕೇದಾರನಾಥಕ್ಕೆ ಭೇಟಿ ನೀಡದೆ ನಿಮ್ಮ ಪ್ರವಾಸ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕಷ್ಟವಾದರೂ ಪರವಾಗಿಲ್ಲ, ಕೇದರನಾಥನ ದರ್ಶನ ಪಡೆಯೋದನ್ನು ಮರೆಯಬೇಡಿ. 
 

68

ಈ ದೇವಾಲಯವನ್ನು ಮೊದಲು ಪಾಂಡವರು ನಿರ್ಮಿಸಿದರು (Kedarnath built by Pandavas) ಎಂದು ಹೇಳಲಾಗುತ್ತದೆ ಆದರೆ ವಿನಾಶದಿಂದಾಗಿ ಆ ದೇವಾಲಯ ಮರೆಯಾಯಿತು ಎನ್ನಲಾಗಿದೆ. ನಂತರ ಆದಿ ಶಂಕರಾಚಾರ್ಯರು (Adi Shankaryacharya)ಇದನ್ನು ನಿರ್ಮಿಸಿದರು ಎನ್ನಲಾಗುತ್ತೆ. ಕೇದಾರನಾಥ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ದೇವಾಲಯದಿಂದ ಭೈರವನಾಥನು ಕೇದಾರನಾಥವನ್ನು ರಕ್ಷಿಸುತ್ತಾನೆ ಎನ್ನುವ ನಂಬಿಕೆ ಸಹ ಇದೆ..
 

78

ಭವಿಷ್ಯದಲ್ಲಿ ಕೇದಾರನಾಥ ಮತ್ತು ಬದರಿನಾಥ ತೀರ್ಥಯಾತ್ರೆಗಳು ಕಣ್ಮರೆಯಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನಂತರ ಹೊಸ ತೀರ್ಥಯಾತ್ರೆ ಹೊರಹೊಮ್ಮುತ್ತೆ ಎನ್ನಲಾಗಿದೆ, ಹಾಗಾಗಿ ಶೀಘ್ರದಲ್ಲೇ ಕೇದಾರನಾಥ, ಬದರಿನಾಥಕ್ಕೆ ಭೇಟಿ ನೀಡಿ.
 

88

ಕೇದಾರನಾಥಕ್ಕೆ ಬರುವ ಗಾಳಿಯು ನೇರವಾಗಿ ಸ್ವರ್ಗದಿಂದ (breeze from heaven) ಬರುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ನೀವು ಒಂದು ಬಾರಿಯಾದರೂ ಈ ಭೂಮಿ ಮೇಲಿರುವ ಸ್ವರ್ಗಕ್ಕೆ ಭೇಟಿ ನೀಡಲೇಬೇಕು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಸ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved