MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಶಿವನಮುಖ, ದೇವಕೆರೆ, ಹೂವಿನ ಬಳ್ಳಿ; ರಾಜ್ಯದ ಪ್ರಮುಖ ನಗರಗಳ ಹಿಂದಿನ ಹೆಸರು ಕೇಳಿದ್ರೆ ಖುಷಿ ಆಗುತ್ತೆ!

ಶಿವನಮುಖ, ದೇವಕೆರೆ, ಹೂವಿನ ಬಳ್ಳಿ; ರಾಜ್ಯದ ಪ್ರಮುಖ ನಗರಗಳ ಹಿಂದಿನ ಹೆಸರು ಕೇಳಿದ್ರೆ ಖುಷಿ ಆಗುತ್ತೆ!

Cities in Karnataka: ಕಾಲಕ್ಕೆ ತಕ್ಕಂತೆ ಬದಲಾದ ನಗರಗಳ ಹೆಸರುಗಳ ಬಗ್ಗೆ ತಿಳಿಯಿರಿ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ನಗರಗಳ ಹಿಂದಿನ ಹೆಸರುಗಳ ಮಾಹಿತಿ ಇಲ್ಲಿದೆ.

2 Min read
Author : Mahmad Rafik
| Updated : Mar 15 2025, 05:56 PM IST
Share this Photo Gallery
  • FB
  • TW
  • Linkdin
  • Whatsapp
19
ನಗರಗಳ ಹೆಸರು

ನಗರಗಳ ಹೆಸರು

ಕಾಲದಿಂದ ಕಾಲಕ್ಕೆ ಕೆಲವು ವಸ್ತುಗಳು ಬದಲಾಗುತ್ತಿರುತ್ತವೆ. ಹಾಗೆಯೇ ಹೆಸರುಗಳು ಸಹ ಬದಲಾವಣೆಗೊಂಡಿರುತ್ತವೆ. ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ನಗರಗಳ ಮೂಲ ಹೆಸರು ಏನು ಎಂಬುದರ  ಮಾಹಿತಿ ಇಲ್ಲಿದೆ.

29
ಬೆಂಗಳೂರು - Bengaluru

ಬೆಂಗಳೂರು - Bengaluru

ರಾಜಧಾನಿ ಬೆಂಗಳೂರು ಮೂಲ ಹೆಸರು 'ಬೆಂದ ಕಾಳೂರು' ಎಂದು ಕರೆಯಲಾಗುತ್ತಿತ್ತು. ಕಾಲನಂತರ ಇದು ಬೆಂಗಳೂರು ಆಗಿ ಬದಲಾಯ್ತು. ಬೆಂದ ಕಾಳೂರಿನ ಅರ್ಥ ಬೇಯಿಸಿದ ಅವರೆಕಾಳು ಎಂದರ್ಥ. ಕಳೆದುಹೋದ ಹೊಯ್ಸಳ ರಾಜನಿಗೆ ದಯಾಳು ಮಹಿಳೆ ಬೇಯಿಸಿದ ಕಾಳುಗಳನ್ನು ತಿನ್ನಿಸಿದಳು ಎಂಬ ಕಾರಣಕ್ಕೆ ಈ ಹೆಸರು ಬಂತು ಎಂಬ ಕಥೆ ಇದೆ.

39
ಮೈಸೂರು - Mysuru

ಮೈಸೂರು - Mysuru

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೆಸರು ಮಹಿಷಾಸುರ ಪಟ್ಟಣ  ಎಂದು ಕರೆಯಲಾಗುತ್ತಿತ್ತು. ಮಹಿಷಾಸುರನನ್ನು ತಾಯಿ ಚಾಮುಂಡೇಶ್ವರಿ ಹತ ಮಾಡಿದ ಬಳಿಕ ಈ ಪಟ್ಟಣವನ್ನು ಮಹಿಷಾಸುರ ಪಟ್ಟಣ ಎಂದು ಕರೆಯಲಾಯ್ತು. ಕಾಲನಂತರ ಇದು ಮೈಸೂರು ಎಂದು  ಕರೆಯಲಾಯ್ತು.

49
ಹೂವಿನ ಬಳ್ಳಿ - Hubballi

ಹೂವಿನ ಬಳ್ಳಿ - Hubballi

ಚೋಟಾ ಮುಂಬೈ ಅಂತಾನೇ ಕರೆಸಿಕೊಳ್ಳುವ ಹುಬ್ಬಳ್ಳಿಯನ್ನು "ಹೂವಿನ ಬಳ್ಳಿ"  ಎಂದು ಕರೆಯಲಾಗುತ್ತಿತ್ತು. ಈ ನಗರದಲ್ಲಿ ಅತಿಹೆಚ್ಚು ಹೂಗಳ ವ್ಯಾಪಾರ ನಡೆಯುತ್ತಿತ್ತು. ಹಾಗಾಗಿ ಇದನ್ನು ಹೂಗಳ ನಗರ ಎಂದು ಫೇಮಸ್ ಆಗಿತ್ತು.

59
ಮಂಗಳೂರು - Mangaluru

ಮಂಗಳೂರು - Mangaluru

ಇನ್ನು ಕರ್ನಾಟಕದ ಹೆಬ್ಬಾಗಿಲು ಮಂಗಳೂರು ನಗರವನ್ನು ದೇವತೆ ಮಂಗಳಾದೇವಿ ಹೆಸರಿನಿಂದ ಗುರುತಿಸಲಾಗುತ್ತಿತ್ತು . 9ನೇ ಶತಮಾನದಲ್ಲಿ ರಾಜನೊಬ್ಬ ಮಂಗಳಾದೇವಿ ದೇವಸ್ಥಾನವನ್ನ ನಿರ್ಮಾಣ ಮಾಡುತ್ತಾನೆ. ಇಂದು ಮಂಗಳೂರು ಎಂದು ಕರೆಯಲಾಗುತ್ತದೆ 

69
ಶಿವಮೊಗ್ಗ - Shivamogga

ಶಿವಮೊಗ್ಗ - Shivamogga

ಶಿವನ ಮುಖವೇ ಇಂದು ಶಿವಮೊಗ್ಗ ಆಗಿದೆ. ಇದಕ್ಕೆ ಸಿಹಿ ಮೊಗ್ಗೆ ಎಂಬ ಹೆಸರು ಇತ್ತು ಎಂದು ಹೇಳಲಾಗುತ್ತದೆ. ಸಿಹಿ ಮೊಗ್ಗೆಯೇ ಬದಲಾದ ಕಾಲದಲ್ಲಿ ಶಿವಮೊಗ್ಗ ಎಂದು ಕರೆಯಲಾಗುತ್ತದೆ. ಹಿರಿಯರು ಇದನ್ನು ಶಿವಮೊಗ್ಗೆ ಅಂತಾನೇ ಎಂದು ಕರೆಯುತ್ತಾರೆ. ಇಲ್ಲಿಯ ಜೋಗ ಜಲಪಾತ ವಿಶ್ವ ಪ್ರಸಿದ್ಧವಾಗಿದೆ.

79
ಬೆಳಗಾವಿ - Belagavi

ಬೆಳಗಾವಿ - Belagavi

ಗಡಿ ಜಿಲ್ಲೆ, ಕುಂದಾ ನಗರಿ ಬೆಳಗಾವಿಯನ್ನು "ವೆನುಗ್ರಾಮ" ಎಂದು ಕರೆಯಲಾಗುತ್ತಿತ್ತು. ವೆನುಗ್ರಾಮ ಅಂದ್ರೆ ಬಂಬೂ ಹಳ್ಳಿ ಎಂದರ್ಥ. ಹಾಗೆ ಇದನ್ನು ಕೋಟೆಗಳ ನಾಡು ಎಂದು ಕರೆಯಲಾಗುತ್ತದೆ. 

89
ದಾವಣಗೆರೆ - Davanagere

ದಾವಣಗೆರೆ - Davanagere

ಬೆಣ್ಣೆ ನಗರಿ ದಾವಣಗೆರೆ ಹೆಸರು ದೇವ-ಕೆರೆಯಿಂದ ಬಂತು ಎಂಬ ನಂಬಿಕೆ ಇದೆ. ಅಂದ್ರೆ ಇಲ್ಲಿಯ ದೇವರ ಕೆರೆ ಇಲ್ಲಿತ್ತು. ದಾರಿಹೋಕರು, ವ್ಯಾಪಾರಿಗಳು, ಪ್ರವಾಸಿಗರು ಈ ಕೆರೆಯ ನೀರು ಕುಡಿದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.  ದೇವ-ಕೆರೆಯಿಂದ ದಾವಣಗೆರೆಯಾಗಿ ಬದಲಾಗಿದೆ.

99
ಬಳ್ಳಾರಿ - Ballary

ಬಳ್ಳಾರಿ - Ballary

ಬಿಸಿಲು ನಾಡು ಬಳ್ಳಾರಿಯ  ಮೂಲ ಹೆಸರು ಬಳ್ಳೇಶ್ವರಿ ಆಗಿತ್ತು. ಬಳ್ಳೇಶ್ವರಿ ಅನ್ನೋದು ದೇವತೆಯ ಹೆಸರು ಆಗಿದೆ. ಕಲ್ಲು ಬಂಡೆಗಳಿಂದ ಈ ಪ್ರದೇಶ ಆವರಿಸೋದರಿಂದ ಇದನ್ನು ಬಳ್ಳಾರಿ ಎಂದು ಕರೆಯಲಾಗುತ್ತಿದೆ ಎಂಬ ನಂಬಿಕೆಯೂ ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಹುಬ್ಬಳ್ಳಿ
ಬೆಂಗಳೂರು
ಮೈಸೂರು
ದಾವಣಗೆರೆ
ಬೆಳಗಾವಿ
ಶಿವಮೊಗ್ಗ
ಮಂಗಳೂರು

Latest Videos
Recommended Stories
Recommended image1
Masan Holi: ಕಾಶಿಯಲ್ಲಿ ನಡೆಯುತ್ತೆ ಚಿತಾ ಭಸ್ಮದ ಹೋಳಿ… ಈ ಸ್ಮಶಾನ ಹೋಳಿಯ ರಹಸ್ಯ ಏನು?
Recommended image2
ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ
Recommended image3
ಅಯ್ಯಯ್ಯೋ! ಬೆಂಗಳೂರು ಹೋಟೆಲ್‌ನಲ್ಲಿ ನನ್ ಚಿನ್ನದ ಸರ ಕದ್ದವ್ರೇ ಎಂದ ಯುವತಿ; ಅಸಲಿ ಸತ್ಯ ಬಿಚ್ಚಿಟ್ಟ ಸಿಬ್ಬಂದಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved