- Home
- Life
- Health
- ಮಳೆಗಾಲದಲ್ಲಿ ಈ ಹುಳು ಮೆದುಳಿಗೆ ತಲುಪುವ ಅಪಾಯ ಹೆಚ್ಚು; ಇವೆರೆಡು ಲಕ್ಷಣ ಕಾಣಿಸಿಕೊಂಡ್ರೆ ವೈದ್ಯರನ್ನ ಕಾಣಿ!
ಮಳೆಗಾಲದಲ್ಲಿ ಈ ಹುಳು ಮೆದುಳಿಗೆ ತಲುಪುವ ಅಪಾಯ ಹೆಚ್ಚು; ಇವೆರೆಡು ಲಕ್ಷಣ ಕಾಣಿಸಿಕೊಂಡ್ರೆ ವೈದ್ಯರನ್ನ ಕಾಣಿ!
ಈ ಕೆಳಕಂಡ ಲಕ್ಷಣಗಳು ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ ಮತ್ತು ಡಾಕ್ಟರನ್ನ ಸಂಪರ್ಕಿಸಿ ಎಂದು ವೈದ್ಯರು ಎರಡು ಲಕ್ಷಣಗಳ ಬಗ್ಗೆ ಎಚ್ಚರಿಸಿದ್ದಾರೆ.

ಈ ಬಗ್ಗೆ ಎಚ್ಚರಿಕೆ
ಮಳೆಗಾಲದ ಮಳೆಯು ಸುಡುವ ಶಾಖದಿಂದ ಪರಿಹಾರ ನೀಡುವುದರ ಜೊತೆಗೆ ಅಪಾಯವನ್ನೂ ಹೆಚ್ಚಿಸುತ್ತದೆ. ಈ ಋತುವಿನಲ್ಲಿ ಆಹಾರ ಮತ್ತು ನೀರಿನಲ್ಲಿ ಇರುವ ಸೂಕ್ಷ್ಮಜೀವಿಗಳಿಂದ ಸೋಂಕಿನ ಅಪಾಯ ಹೆಚ್ಚು. ಮುಂಬೈನ ವೈದ್ಯರು ಇದಕ್ಕೆ ಸಂಬಂಧಿಸಿದ ಟೇಪ್ ವರ್ಮ್ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮುಂಬೈನ ಮೀರಾ ರಸ್ತೆಯಲ್ಲಿರುವ ವೋಕ್ಹಾರ್ಡ್ ಆಸ್ಪತ್ರೆಯೂ ಈ ಬಗ್ಗೆ ಆರೋಗ್ಯ ಎಚ್ಚರಿಕೆ ನೀಡಿದೆ.
ನೀರು ಮತ್ತು ಆಹಾರದಿಂದ ಸೋಂಕು
ಈ ವರದಿಯನ್ನು ಉಲ್ಲೇಖಿಸಿ ಫ್ರೀ ಪ್ರೆಸ್ ಜರ್ನಲ್ ಮುಂಬೈನಲ್ಲಿ ಮೆದುಳಿನ ಸೋಂಕನ್ನು ಉಂಟುಮಾಡುವ ಪರಾವಲಂಬಿ(Parasite)ಯಿಂದ ಸೋಂಕಿನ ಅಪಾಯ ಹೆಚ್ಚು ಎಂದು ಹೇಳಿದೆ. ಏಕೆಂದರೆ ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ನೀರು ಸಂಗ್ರಹವಾಗುತ್ತದೆ. ನೀರು ಮತ್ತು ಆಹಾರವು ಸೋಂಕಿಗೆ ಒಳಗಾಗಬಹುದು.
ನ್ಯೂರೋಸಿಸ್ಟಿಸರ್ಕೋಸಿಸ್ ಸೋಂಕು
ಅಂದಹಾಗೆ ಈ ಋತುವಿನಲ್ಲಿ ಈ ಕೆಳಕಂಡ ಲಕ್ಷಣಗಳು ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ ಮತ್ತು ಡಾಕ್ಟರನ್ನ ಸಂಪರ್ಕಿಸಿ ಎಂದು ವೈದ್ಯರು ಎರಡು ಲಕ್ಷಣಗಳ ಬಗ್ಗೆ ಎಚ್ಚರಿಸಿದ್ದಾರೆ. ಇದು ನ್ಯೂರೋಸಿಸ್ಟಿಸರ್ಕೋಸಿಸ್ ಸೋಂಕೂ ಆಗಿರಬಹುದು, ಇದು ತುಂಬಾ ಅಪಾಯಕಾರಿ ಎಂದು ಸಾಬೀತಾಗಿದೆ.
ಸರಿಯಾಗಿ ಬೇಯಿಸಿ, ತೊಳೆಯಿರಿ
ವೋಕ್ಹಾರ್ಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ನರವಿಜ್ಞಾನಿ ಡಾ. ಪವನ್ ಪೈ ಅವರ ಪ್ರಕಾರ, ಮಳೆಗಾಲದಲ್ಲಿ ಅನೇಕ ಬಾರಿ ನೈರ್ಮಲ್ಯವನ್ನು ಪಾಲಿಸಲಾಗುವುದಿಲ್ಲ. ಜನರು ಸರಿಯಾಗಿ ಬೇಯಿಸದ ಹಂದಿಮಾಂಸ ಅಥವಾ ಸರಿಯಾಗಿ ಸ್ವಚ್ಛಗೊಳಿಸದ ತರಕಾರಿಗಳನ್ನು ತಿನ್ನುತ್ತಾರೆ, ಇದರಲ್ಲಿ ಟೇಪ್ ವರ್ಮ್ ಲಾರ್ವಾಗಳು ಇರಬಹುದು. ಇವು ದೇಹದೊಳಗೆ ಒಮ್ಮೆ ಪ್ರವೇಶಿಸಿದ ನಂತರ ಈ ಅದೃಶ್ಯ ಹುಳುಗಳು ಮೆದುಳನ್ನು ತಲುಪಿ ಚೀಲಗಳನ್ನು ರೂಪಿಸುತ್ತವೆ, ಇದನ್ನೇ ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯಲಾಗುತ್ತದೆ.
ರೋಗನಿರೋಧಕ ಶಕ್ತಿ ಕಡಿಮೆಯಿದ್ದವರಲ್ಲಿ
ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ನಿಮಗೆ ಇದ್ದಕ್ಕಿದ್ದಂತೆ ಆಗಾಗ್ಗೆ ತಲೆನೋವು ಅಥವಾ ಕಾಯಿಲೆಗೆ ಗುರಿಯಾದಂತೆ ಅನಿಸಿದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಜೀವವನ್ನು ಉಳಿಸಿಕೊಳ್ಳಲು ಈ ಹೆಜ್ಜೆ ಮುಖ್ಯವಾಗಬಹುದು.
ಸಿಡಿಸಿ ಪ್ರಕಾರ...
ಇಂತಹ ರೋಗವನ್ನು ತಡೆಗಟ್ಟುವ ವಿಧಾನಗಳನ್ನು ಸಹ ವೋಕಾರ್ಡ್ ಆಸ್ಪತ್ರೆ ಜನರಿಗೆ ತಿಳಿಸಿದೆ. ಯಾವಾಗಲೂ ಫಿಲ್ಟರ್ ಮಾಡಿದ ಅಥವಾ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಎಲ್ಲಾ ತರಕಾರಿಗಳು ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆದ ನಂತರ ತಿನ್ನಿರಿ. ನೀವು ಮಾಂಸವನ್ನು ಬೇಯಿಸುತ್ತಿದ್ದರೆ, ಹೆಚ್ಚಿನ ತಾಪಮಾನದಲ್ಲಿ ಚೆನ್ನಾಗಿ ಬೇಯಿಸಿ. ಸಿಡಿಸಿ ಪ್ರಕಾರ , ನ್ಯೂರೋಸಿಸ್ಟಿಸರ್ಕೋಸಿಸ್ ಎಂಬುದು ಲಾರ್ವಾ ಚೀಲಗಳಿಂದ ಉಂಟಾಗುವ ಪರಾವಲಂಬಿ ಸೋಂಕು, ಇದನ್ನು ಟೇನಿಯಾ ಸೋಲಿಯಮ್ ಅಥವಾ ಹಂದಿ ಟೇಪ್ ವರ್ಮ್ ಎಂದೂ ಕರೆಯುತ್ತಾರೆ. ಲಾರ್ವಾಗಳಿಂದ ರೂಪುಗೊಂಡ ಚೀಲಗಳು ದೇಹದ ಎಲ್ಲಿಯಾದರೂ ಸಂಭವಿಸಬಹುದು ಮತ್ತು ಮೆದುಳಿನಲ್ಲಿರುವ ಚೀಲಗಳನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯಲಾಗುತ್ತದೆ.
ಈ ಸಮಸ್ಯೆಯನ್ನು CDC ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಿದೆ. ಇದರ ಪ್ರಕಾರ, ಮೆದುಳಿಗೆ ಹಾನಿ ಮಾಡುವ ಸಾಮರ್ಥ್ಯವು ಅದರ ಅತ್ಯಂತ ಅಪಾಯಕಾರಿ ರೂಪವಾಗಿದೆ. ಇದನ್ನು ನಿರ್ಲಕ್ಷಿಸಬಾರದು ಮತ್ತು ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.