MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಗಾಜಿಯಾಬಾದ್ ದುರಂತ: ಮಕ್ಕಳು ಹೀಗಾಗಲು ಕಾರಣ ಮೊಬೈಲ್‌ ಮಾತ್ರವಲ್ಲ, ನಿಜವಾದ ಕಾರಣ ಇದೇ!

ಗಾಜಿಯಾಬಾದ್ ದುರಂತ: ಮಕ್ಕಳು ಹೀಗಾಗಲು ಕಾರಣ ಮೊಬೈಲ್‌ ಮಾತ್ರವಲ್ಲ, ನಿಜವಾದ ಕಾರಣ ಇದೇ!

Ghaziabad Tragedy: ಒಂಟಿತನವನ್ನು ಅನುಭವಿಸುತ್ತಿರುವವರೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಮನೋವೈದ್ಯರಾದ ಡಾ. ತಾರಾಚಂದ್ ತಿಳಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ ಓದಿ..   

2 Min read
Author : Ashwini HR
Published : Feb 07 2026, 03:04 PM IST
Share this Photo Gallery
  • FB
  • TW
  • Linkdin
  • Whatsapp
14
ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ಒತ್ತಡ
Image Credit : X

ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ಒತ್ತಡ

ಗಾಜಿಯಾಬಾದ್‌ನಲ್ಲಿ ನಡೆದ ದುರಂತವು ಕೇವಲ ಆಘಾತಕಾರಿ ವಿಚಾರವಲ್ಲದೆ, ಎಚ್ಚರಿಕೆಯ ಗಂಟೆಯೂ ಕೂಡ. ಈ ರೀತಿಯ ಘಟನೆಗಳು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ಒತ್ತಡ ಮತ್ತು ತೀವ್ರವಾದ ಒಂಟಿತನವನ್ನು ಅನುಭವಿಸುತ್ತಿರುವವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಮನೋವೈದ್ಯರಾದ ಡಾ. ತಾರಾಚಂದ್ ತಿಳಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ ಓದಿ..

24
ಭಯದಿಂದ ಮೌನಕ್ಕೆ ಶರಣು
Image Credit : X

ಭಯದಿಂದ ಮೌನಕ್ಕೆ ಶರಣು

ವೈದ್ಯರು ಹೇಳುವ ಪ್ರಕಾರ, ವ್ಯಕ್ತಿಯು ತನಗೆ ಮಾತ್ರ ಕಷ್ಟ ಬಂದಿದೆ. ಈ ಸಮಸ್ಯೆಯಿಂದ ಹೊರಬರಲು ಸಾಧ್ಯವೇ ಇಲ್ಲ ಎಂದು ಭಾವಿಸಿ ಸಾವೊಂದೇ ಪರಿಹಾರ ಎಂಬ ಕಠಿಣ ನಿರ್ಧಾರ ಕೈಗೊಳ್ಳುವ ಸಂಭವ ಇರುತ್ತದೆ. ಯುವ ಪೀಳಿಗೆಯು ಮಾನಸಿಕ ಆರೋಗ್ಯದ ಸುತ್ತ ಮೌನದ ಗೋಡೆಯನ್ನು ನಿರ್ಮಿಸಿಕೊಂಡಿದ್ದು, ಇಂತಹ ಅಪಾಯದ ಮುನ್ಸೂಚನೆಗಳನ್ನು ಅರಿಯುವುದು ಕಷ್ಟವಾಗಿದೆ. ಜನರು ಭರವಸೆ ಕಳೆದುಕೊಳ್ಳುತ್ತಿದ್ದಾರೆ, ಭವಿಷ್ಯದ ಬಗೆಗೆ ಯೋಜನೆಗಳನ್ನು ಹಾಕಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಮತ್ತು ತಮ್ಮೊಳಗೆ ತಾವು ಕುಸಿಯುತ್ತಿದ್ದಾರೆ. ಸಮಾಜ ನಮ್ಮನ್ನು ಹೇಗೆ ನೋಡುತ್ತದೆಯೋ ಎಂಬ ಭಯದಿಂದ ಮೌನಕ್ಕೆ ಶರಣಾಗುತ್ತಿದ್ದಾರೆ.

Related Articles

Related image1
Tunisha Sharma Suicide: ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಅನಿಸೋದ್ಯಾಕೆ ?
Related image2
Suicide case: ರಸ್ತೆ ಅಪಘಾತದಿಂದ ಖಿನ್ನತೆ: ನೈಜೀರಿಯನ್‌ ಪ್ರಜೆ ಅತ್ಮಹತ್ಯೆ
34
ಡಾಕ್ಟರ್ ಹೇಳಿದ್ದೇನು?
Image Credit : X

ಡಾಕ್ಟರ್ ಹೇಳಿದ್ದೇನು?

ಈ ರೀತಿಯ ಪರಿಸ್ಥಿತಿ ಬದಲಾಗಬೇಕು. ಮಕ್ಕಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗಮನಿಸುವುದು ಮತ್ತು ಪರಿಸ್ಥಿತಿ ಕೈಮೀರುವ ಮೊದಲೇ ಸಹಾಯ ಕೇಳುವುದನ್ನು ಪ್ರೋತ್ಸಾಹಿಸಬೇಕಿದೆ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದ್ದು, ನೀವು ಅತಿಯಾದ ಒತ್ತಡದಲ್ಲಿದ್ದರೆ ಅಥವಾ ನಿಮ್ಮ ಸುತ್ತಮುತ್ತಲಿನಲ್ಲಿ ಯಾರಾದರೂ ಈ ರೀತಿ ಮಾನಸಿಕವಾಗಿ ಕುಗ್ಗಿದ್ದರೆ ದಯವಿಟ್ಟು ಅವರೊಂದಿಗೆ ಮಾತನಾಡಿ. ನೆರವು ಕೋರುವುದು ಕೇವಲ ಒಂದು ಆಯ್ಕೆಯಲ್ಲ, ಅದೊಂದು ಬದುಕುವ ದಾರಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯ ಇಂದು ನಮ್ಮ ಮುಂದಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ.

44
ಈ ಹಂತದಲ್ಲಿ ಬಹಳ ಮುಖ್ಯ
Image Credit : X

ಈ ಹಂತದಲ್ಲಿ ಬಹಳ ಮುಖ್ಯ

ಪ್ರಸಕ್ತ ಗಾಜಿಯಾಬಾದ್‌ ಪ್ರಕರಣವು ಮಕ್ಕಳೆಡೆಗಿನ ಪೋಷಕರ ಕಾಳಜಿ ಮತ್ತು ಕೌಟುಂಬಿಕ ವಾತಾವರಣದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿರುವ ತಾರಾಚಂದ್ ಅವರು ಮಕ್ಕಳು ಮತ್ತು ಹದಿಹರೆಯದವರಿಗೆ ತಮ್ಮ ಪಾಲಕರಿಂದ ನಿರಂತರವಾಗಿ ಭಾವನಾತ್ಮಕ ಬೆಂಬಲ ಮತ್ತು ಯಾವುದೇ ಪೂರ್ವಾಗ್ರಹವಿಲ್ಲದ ಮುಕ್ತ ಸಂವಹನದ ಅಗತ್ಯವಿರುತ್ತದೆ. ಪೋಷಕರ ಪ್ರೀತಿ, ಬಾಂಧವ್ಯ, ಮಕ್ಕಳ ಮಾತುಗಳನ್ನು ಆಲಿಸುವಿಕೆಯ ತಾಳ್ಮೆ ಹಾಗೂ ಸದಾ ರಕ್ಷಣಾ ಕವಚದಂತೆ ಕಾಪಾಡಿಕೊಳ್ಳುವುದು ಈ ಹಂತದಲ್ಲಿ ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಅವುಗಳನ್ನು ಗಮನಿಸುತ್ತಿರಬೇಕು. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿನ ಹಾನಿಕಾರಕ ವಿಷಯಗಳಿಗೆ ಒಡ್ಡಿಕೊಳ್ಳುವುದು, ಸೈಬರ್ ಬೆದರಿಕೆ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಸಂಸ್ಕೃತಿ ಅಥವಾ ಅತಿರಂಜಿತ ಸುದ್ದಿಗಳು ಮಕ್ಕಳ ಮಾನಸಿಕ ದುರ್ಬಲತೆಯನ್ನು ಮತ್ತು ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಆರೋಗ್ಯ

Latest Videos
Recommended Stories
Recommended image1
Dry Fish: ಒಣ ಮೀನು ಪುರುಷರಿಗೆ ಒಳ್ಳೇದು... ಆಗಾಗ್ಗೆ ಸೇವಿಸ್ತಾ ಇದ್ರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..
Recommended image2
ಊಟದ ನಂತ್ರ ಒಂದು ಏಲಕ್ಕಿ ತಿಂದ್ರೆ ಏನಾಗುತ್ತೆ? ಇದು ಬರೀ ಮೌತ್‌ ಫ್ರೆಶ್ನರ್‌ ಅಲ್ವೇ ಅಲ್ಲ
Recommended image3
Thyroid Problem: ನಿಮಗೂ ಸಮಸ್ಯೆ ಇದ್ರೆ ಪ್ರತಿದಿನದ ಆಹಾರಗಳಲ್ಲಿ ಇವುಗಳನ್ನು ಅವಾಯ್ಡ್ ಮಾಡಿ
Related Stories
Recommended image1
Tunisha Sharma Suicide: ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಅನಿಸೋದ್ಯಾಕೆ ?
Recommended image2
Suicide case: ರಸ್ತೆ ಅಪಘಾತದಿಂದ ಖಿನ್ನತೆ: ನೈಜೀರಿಯನ್‌ ಪ್ರಜೆ ಅತ್ಮಹತ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved