MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಮಾಂಸ ಪ್ರಿಯರಿಗೊಂದು ಬ್ಯಾಡ್ ನ್ಯೂಸ್… ಇಂಥ ಮಾಂಸ ತಿಂದ್ರೆ ಮರೆವಿನ ಖಾಯಿಲೆ ಬರುತ್ತಂತೆ!

ಮಾಂಸ ಪ್ರಿಯರಿಗೊಂದು ಬ್ಯಾಡ್ ನ್ಯೂಸ್… ಇಂಥ ಮಾಂಸ ತಿಂದ್ರೆ ಮರೆವಿನ ಖಾಯಿಲೆ ಬರುತ್ತಂತೆ!

ನೀವು ರೆಡ್ ಮೀಟ್, ವಿಶೇಷವಾಗಿ ಸಂಸ್ಕರಿಸಿದ ಕೆಂಪು ಮಾಂಸವನ್ನು ನಿಯಮಿತವಾಗಿ ಸೇವಿಸಿದರೆ, ಅದು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಕಂಡುಹಿಡಿದಿದೆ.   

2 Min read
Author : Pavna Das
Published : Aug 07 2024, 01:54 PM IST
Share this Photo Gallery
  • FB
  • TW
  • Linkdin
  • Whatsapp
16

ನೀವು ರೆಡ್ ಮೀಟ್ (Red Meat) ಪ್ರಿಯರೇ, ಹಾಗಿದ್ರೆ ಈ ಶಾಕಿಂಗ್ ಸುದ್ದಿ ನಿಮಗಾಗಿ. ವಿಶೇಷವಾಗಿ ಸಂಸ್ಕರಿಸಿದ ಕೆಂಪು ಮಾಂಸದಿಂದ ತಯಾರಿಸಿದ ಬರ್ಗರ್, ಪಿಜ್ಜಾ ಅಥವಾ ಸ್ಯಾಂಡ್ವಿಚ್‌ಗಳನ್ನು ತಿನ್ನೋದು ನಿಮಗೆ ತುಂಬಾ ಇಷ್ಟವಾಗಿದ್ರೆ ಅಲರ್ಟ್ ಆಗಿರಿ. ಏಕೆಂದರೆ ಹಾಗೆ ಮಾಡೋದ್ರಿಂದ ನೀವು ಮರೆವಿನ ಖಾಯಿಲೆಗೆ ಗುರಿಯಾಗಬಹುದೆಂದು ಇತ್ತೀಚಿನ ಸಂಶೋಧನೆಯೊಂದು ಕಂಡು ಹಿಡಿದಿದೆ. 

26

ಹೆಚ್ಚು ಸಂಸ್ಕರಿಸಿದ ಕೆಂಪು ಮಾಂಸ ತಿನ್ನುವವರು ಬುದ್ಧಿಮಾಂದ್ಯತೆಯ (Alzheimer) ಹೆಚ್ಚಿನ ಅಪಾಯ ಹೊಂದಿದ್ದಾರೆಂದು  ಅಲ್ಝೈಮರ್ಸ್ ಅಸೋಸಿಯೇಷನ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸಂಶೋಧನೆಯಲ್ಲಿ ಉಲ್ಲೇಖಿಸಿದೆ. ಆದರ ಬದಲಿಗೆ ಬೀಜಗಳು, ಬೀನ್ಸ್ ಅಥವಾ ಬೇಳೆಕಾಳು ಸೇವಿಸುವವರು ಬುದ್ಧಿಮಾಂದ್ಯತೆಯ ಅಪಾಯದಿಂದ ಪಾರಾಗಲಿದ್ದಾರಂತೆ. 

36

ಕೆಂಪು ಮಾಂಸ ಮತ್ತು ಬುದ್ಧಿಮಾಂದ್ಯತೆಯ ನಡುವಿನ ಸಂಬಂಧ
ಸಂಸ್ಕರಿಸಿದ ಕೆಂಪು ಮಾಂಸ ಮತ್ತು ಬುದ್ಧಿಮಾಂದ್ಯತೆಯ ನಡುವೆ ಸಂಭಾವ್ಯ ಸಂಬಂಧವಿರಬಹುದು ಎಂದು ತಜ್ಞರು ಹೇಳುತ್ತಾರೆ. ಸಾಸೇಜ್ ಮತ್ತು ಬೇಕನ್ ನಂತಹ ವಸ್ತುಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ (cholesterol) ತುಂಬಾ ಹೆಚ್ಚಿವೆ. ಇದನ್ನು ಅತಿಯಾಗಿ ಸೇವಿಸಿದರೆ, ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಪ್ಲೇಕ್ ಸಂಗ್ರಹವಾಗುತ್ತೆ, ಇದು ಅಪಧಮನಿಗಳು ಕಿರಿದಾಗುವಿಕೆಗೆ ಕಾರಣವಾಗಬಹುದು ಮತ್ತು ಮೆದುಳಿಗೆ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಕೋಶ ಸಾಕಷ್ಟು ಆಮ್ಲಜನಕ ಮತ್ತು ಪೋಷಣೆಯನ್ನು ಪಡೆಯುವುದಿಲ್ಲ, ಇದರಿಂದ ಬುದ್ದಿಮಾಂದ್ಯತೆ ಹೆಚ್ಚಬಹದು. 

46

ಕೆಂಪು ಮಾಂಸದ ಸೇವನೆ ಹೃದ್ರೋಗ, (heart problem) ಅಧಿಕ ರಕ್ತದೊತ್ತಡ (High Blood Pressure), ಪರಿಧಮನಿ ಕಾಯಿಲೆ ಮತ್ತು ಪಾರ್ಶ್ವವಾಯುವಿನಂಥ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಮೆದುಳು ಸೇರಿ ದೇಹದ ವಿವಿಧ ಭಾಗಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ದೀರ್ಘಕಾಲದ ಉರಿಯೂತ ಮತ್ತು ರಕ್ತನಾಳಗಳ ಅಸಮರ್ಪಕ ಕಾರ್ಯನಿರ್ವಹಣೆ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು.

56

ತಜ್ಞರು ಹೇಳುವಂತೆ ನಾವು ಗ್ರಿಲಿಂಗ್, ಫ್ರೈಯಿಂಗ್ ಅಥವಾ ಬ್ರಾಯ್ಲಿಂಗ್‌ನಂಥ ಹೆಚ್ಚಿನ ಶಾಖ ವಿಧಾನದೊಂದಿಗೆ ಮಾಂಸವನ್ನು ಬೇಯಿಸಿದಾಗ, ಹೆಟೆರೊಸೈಕ್ಲಿಕ್ ಅಮೈನ್‌ಗಳು (HCA) ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂಥ ಅಪಾಯಕಾರಿ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದು ಮೆದುಳಿನಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಊತಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ ಇದು ಜೀವಕೋಶಗಳ ಹಾನಿ ಮತ್ತು ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರೋದರಿಂದ ಇದು ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ನ್ಯೂರೋಡಿಜೆನರೇಟಿವ್ ಕಾಯಿಲೆಗಳಿಗೆ (Neurodegenerative Diseases) ಕಾರಣವಾಗಬಹುದು.

66

ಯಾವ ಆಹಾರಗಳು ಬುದ್ಧಿಮಾಂದ್ಯತೆಯನ್ನು ತಡೆಯುತ್ತವೆ
ಸಂಸ್ಕರಿಸಿದ ಕೆಂಪು ಮಾಂಸದ ಬದಲಾಗಿ ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಿದರೆ ಬುದ್ಧಿಮಾಂದ್ಯತೆ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಸೂಚಿಸಿದೆ. ಬೀಜಗಳು ಮತ್ತು ದ್ವಿದಳ ಧಾನ್ಯಗಳು ಮೆದುಳಿನ ಆರೋಗ್ಯವನ್ನು (mental health) ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆರೋಗ್ಯ

Latest Videos
Recommended Stories
Recommended image1
Fasting: ಖಾಲಿ ಹೊಟ್ಟೆಯಲ್ಲಿ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಗೊತ್ತಾ?
Recommended image2
Stronger Hair: ಪಾರ್ಲರ್‌ಗೆ ಹೋಗೋದು ನಿಲ್ಲಿಸಿ, ನಿಮ್ಮ ಕೂದಲು ಸ್ಟ್ರಾಂಗ್ ಆಗ್ಬೇಕಾ? ಹಾಗಾದ್ರೆ ಈ 10 ಆಹಾರಗಳು ತಿನ್ನಿ ಸಾಕು!
Recommended image3
ಮಕ್ಕಳ ಮೆದುಳು ಚುರುಕಾಗಬೇಕೇ? ಹಾಗಿದ್ರೆ ಈ 7 ಆಹಾರ ತಪ್ಪದೇ ತಿನ್ನಿಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved