MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • Entertainment
  • ಲೈಟ್ಸ್, ಕ್ಯಾಮೆರಾ, ಅಕ್ಷನ್ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ; ಆ ಕಣ್ಣೀರ ಕಥೆಯ ಹಿಂದೇನಿದೆ ಗೊತ್ತಾ?

ಲೈಟ್ಸ್, ಕ್ಯಾಮೆರಾ, ಅಕ್ಷನ್ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ; ಆ ಕಣ್ಣೀರ ಕಥೆಯ ಹಿಂದೇನಿದೆ ಗೊತ್ತಾ?

ಸಿನಿಮಾ ಅಂದ್ರೆ ಅಲ್ಲಿ ಬಣ್ಣವಿದೆ, ಬೆಡಗಿದೆ, ಪ್ರಸಿದ್ಧಿಯ ಹಪಹಪಿಯಿದೆ. ಒಮ್ಮೆ ಕ್ಯಾಮೆರಾ ಮುಂದೆ ನಿಂತು ಚಪ್ಪಾಳೆ ಗಿಟ್ಟಿಸಿಕೊಂಡವರು ಆ ಲೋಕವನ್ನು ಬಿಟ್ಟು ಹೊರಬರುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬರು ‘ಗ್ಲಾಮರ್’ ಲೋಕ ಬಿಟ್ಟು ಸುಪ್ರೀಂ ಕೋರ್ಟ್ ಲಾಯರ್ ಆಗಿದ್ದಾರೆ.

2 Min read
Author : Shriram Bhat
Published : Sep 01 2026, 11:39 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

South Indian Actress Reshma Rathore Success Story, Cinema to Lawyer-ರೇಷ್ಮಾ ರಾಥೋಡ್: ಸಿನಿಮಾ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿಯ ರೋಚಕ ಜೀವನ ಪಯಣ!

ಸಿನಿಮಾ ಅಂದ್ರೆ ಅಲ್ಲಿ ಬಣ್ಣವಿದೆ, ಬೆಡಗಿದೆ, ಪ್ರಸಿದ್ಧಿಯ ಹಪಹಪಿಯಿದೆ. ಒಮ್ಮೆ ಕ್ಯಾಮೆರಾ ಮುಂದೆ ನಿಂತು ಚಪ್ಪಾಳೆ ಗಿಟ್ಟಿಸಿಕೊಂಡವರು ಆ ಲೋಕವನ್ನು ಬಿಟ್ಟು ಹೊರಬರುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬರು ತೆಲುಗು ಸುಂದರಿ "ಗ್ಲಾಮರ್ ಅನ್ನೋದು ಬರಿ ಕ್ಷಣಿಕ, ನ್ಯಾಯಕ್ಕಾಗಿ ಹೋರಾಡುವುದೇ ನಿಜವಾದ ಬದುಕು" ಎಂದು ಸಾಬೀತುಪಡಿಸಿದ್ದಾರೆ. ಅವರೇ ಟಾಲಿವುಡ್‌ನ ಮಾಜಿ ನಟಿ, ಪ್ರಸ್ತುತ ಸುಪ್ರೀಂ ಕೋರ್ಟ್‌ನ ಖಡಕ್ ವಕೀಲೆ ರೇಷ್ಮಾ ರಾಥೋಡ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಬೆಳ್ಳಿತೆರೆಯ ಮಿಂಚು:

ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಮಣ್ಣಿನ ಮಗಳಾದ ರೇಷ್ಮಾ ಅವರಿಗೆ ಬಾಲ್ಯದಿಂದಲೇ ನಟನೆಯೆಂದರೆ ಅಪಾರ ಪ್ರೀತಿ. ಬಾಲನಟಿಯಾಗಿಯೇ ಬಣ್ಣ ಹಚ್ಚಿದ್ದ ಇವರು, ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಚಿತ್ರರಂಗದ ಕಣ್ಣಿಗೆ ಬಿದ್ದರು. ಖ್ಯಾತ ನಿರ್ದೇಶಕ ಮಾರುತಿ ಅವರ ಕಣ್ಣು ಈ ಪ್ರತಿಭೆಯ ಮೇಲೆ ಬಿತ್ತು. ಅವರ ನಿರ್ದೇಶನದ ಸೂಪರ್ ಹಿಟ್ ಯೂತ್ ಫುಲ್ ಸಿನಿಮಾ 'ಈರೋಜುಲ್ಲೋ' ಮೂಲಕ ರೇಷ್ಮಾ ರಾಥೋಡ್ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಮೊದಲ ಚಿತ್ರವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದರಿಂದ ರೇಷ್ಮಾಗೆ ಅವಕಾಶಗಳ ಸುರಿಮಳೆಯೇ ಆಯಿತು.

Related Articles

Related image1
ಕೊನೆಗೂ ಸಂಭಾವನೆ ಗುಟ್ಟು ಬಿಚ್ಚಿಟ್ಟ ಕಿಚ್ಚ ಸುದೀಪ್.. 'ಬಿಗ್ ಬಾಸ್ ಕನ್ನಡ ಶೋ'ಗೆ ಈ ನಟ ಪಡೆಯೋದೆಷ್ಟು ಗೊತ್ತಾ?
Related image2
ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?
37
Image Credit : Instagram

ಅಷ್ಟೇ ಅಲ್ಲದೆ, ವಿಕ್ಟರಿ ವೆಂಕಟೇಶ್ ಅವರ 'ಬಾಡಿಗಾರ್ಡ್' ಚಿತ್ರದಲ್ಲಿ ನಾಯಕಿಯ ಆಪ್ತ ಗೆಳತಿಯಾಗಿ, ದಿವಂಗತ ನಟ ಉದಯ್ ಕಿರಣ್ ಅವರೊಂದಿಗೆ 'ಜೈ ಶ್ರೀರಾಮ್' ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ರೇಷ್ಮಾ ಚಿರಪರಿಚಿತರಾದರು.

47
Image Credit : Instagram

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಕಪ್ಪು ಸುಂದರಿ:

2017ರವರೆಗೂ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ರೇಷ್ಮಾಗೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಬಣ್ಣದ ಲೋಕದ ಅನಿಶ್ಚಿತತೆ ಅವರಿಗರಿವಾಯಿತು. ಈ ಹಂತದಲ್ಲಿ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು. ಅದುವೇ ತನ್ನ ತಾಯಿ ರಾಧಾಬಾಯಿ ರಾಥೋಡ್ (ಹೈಕೋರ್ಟ್ ವಕೀಲೆ) ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು. ತಾಯಿಯ ವೃತ್ತಿಯೇ ಮಗಳಿಗೆ ಸ್ಪೂರ್ತಿಯಾಯಿತು. ಮೆಕಪ್ ಕಿಟ್ ಪಕ್ಕಕ್ಕಿಟ್ಟು ಕೈಗೆ ಕಾನೂನು ಪುಸ್ತಕಗಳನ್ನು ಎತ್ತಿಕೊಂಡರು.

57
Image Credit : Instagram

ಕರಾಮತ್ತಿನ ಕಪ್ಪು ಕೋಟು:

ಸಿನಿಮಾದ ಡೈಲಾಗ್‌ಗಳಿಗಿಂತ ಸಂವಿಧಾನದ ವಿಧಿಗಳು ಅವರಿಗೆ ಹೆಚ್ಚು ಆಪ್ತವೆನಿಸಿದವು. ಕಾನೂನು ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ರೇಷ್ಮಾ, ವಕೀಲೆಯಾಗಿ ವೃತ್ತಿ ಜೀವನ ಆರಂಭಿಸಿದರು. ತಮ್ಮ ಚುರುಕುತನ ಮತ್ತು ಜಾಣ್ಮೆಯಿಂದಾಗಿ ಇಂದು ಅವರು ದೇಶದ ಅತ್ಯುನ್ನತ ನ್ಯಾಯಾಲಯವಾದ ದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾ ಸೆಟ್‌ನಲ್ಲಿ ಲೈಟ್ಸ್‌ಗಳ ನಡುವೆ ಇರುತ್ತಿದ್ದ ಹುಡುಗಿ ಇಂದು ನ್ಯಾಯಾಲಯದ ಪೀಠದ ಮುಂದೆ ನ್ಯಾಯಕ್ಕಾಗಿ ವಾದಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ!

67
Image Credit : Instagram

ಮಾದರಿ ವ್ಯಕ್ತಿತ್ವ:

ಕೇವಲ ನ್ಯಾಯಾಲಯಕ್ಕೆ ಸೀಮಿತವಾಗದ ರೇಷ್ಮಾ, ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದಾರೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂದು ನಟಿಯಾಗಿ ಜನರ ಮನರಂಜಿಸಿದ್ದ ರೇಷ್ಮಾ, ಇಂದು ವಕೀಲೆಯಾಗಿ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ.

77
Image Credit : Instagram

"ಸಿನಿಮಾ ಪ್ರಪಂಚದಿಂದ ಸುಪ್ರೀಂ ಕೋರ್ಟ್‌ವರೆಗೆ" ರೇಷ್ಮಾ ನಡೆದು ಬಂದ ಹಾದಿ ಕೇವಲ ಒಂದು ಬದಲಾವಣೆಯಲ್ಲ, ಅದು ದೃಢ ನಿರ್ಧಾರದ ವಿಜಯೋತ್ಸವ. ಸಾಧಿಸುವ ಛಲವಿದ್ದರೆ ಗ್ಲಾಮರ್ ಲೋಕದಿಂದ ಜಸ್ಟಿಸ್ ಲೋಕದವರೆಗೂ ಎಲ್ಲಿ ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ ಇವರೇ ಸಾಕ್ಷಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮನರಂಜನಾ ಸುದ್ದಿ
ಟಾಲಿವುಡ್
ಕಾಲಿವುಡ್
ಸುಪ್ರೀಂ ಕೋರ್ಟ್

Latest Videos
Recommended Stories
Recommended image1
"ಪಿಎ ಕ್ಯಾರೆಕ್ಟರ್ ಸಿಗುತ್ತೆ": ಸೀರಿಯಲ್‌ನಿಂದ ದೂರ ಉಳಿದ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಗೌಡ ಕೊಟ್ಟ ಉತ್ತರವಿದು
Recommended image2
ಒಂದು ಕಾಲದಲ್ಲಿ ಆಟೋ ಚಾಲನೆ, ದಿನಕ್ಕೆ ಗಳಿಸ್ತಿದ್ದದ್ದು 50 ರೂಪಾಯಿ; ಇಂದು 100 ಕೋಟಿ ಸಂಭಾವನೆ ಪಡೆಯುವ ಸ್ಟಾರ್!
Recommended image3
ಆರು ದಿನದಲ್ಲಿ ಯಶ್ ‘ಟಾಕ್ಸಿಕ್’ ಬಾಚಿಕೊಂಡಿದ್ದೆಷ್ಟು ಕೋಟಿ ಗೊತ್ತಾ?
Related Stories
Recommended image1
ಕೊನೆಗೂ ಸಂಭಾವನೆ ಗುಟ್ಟು ಬಿಚ್ಚಿಟ್ಟ ಕಿಚ್ಚ ಸುದೀಪ್.. 'ಬಿಗ್ ಬಾಸ್ ಕನ್ನಡ ಶೋ'ಗೆ ಈ ನಟ ಪಡೆಯೋದೆಷ್ಟು ಗೊತ್ತಾ?
Recommended image2
ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved