MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Yash Toxic Movie Live Updates
Toxic Movie Review
Karnataka Cabinet Reshuffle
KPSC Exam Scam
Karnataka BJP Padayatra
RSS vs Priyank Kharge
Onion Price Hike
FSSAI New Guidelines
Ajit Doval China Visit
Operation Sindoor 2025
  • Home
  • Entertainment
  • Brahmagantu Serial ಮುಗಿಯುತ್ತಿದ್ದಂತೆಯೇ ನಟಿ ದಿಯಾ ಪಾಲಕ್ಕಲ್​ ಕೊಟ್ಟರು ಭರ್ಜರಿ ಗುಡ್​ನ್ಯೂಸ್​

Brahmagantu Serial ಮುಗಿಯುತ್ತಿದ್ದಂತೆಯೇ ನಟಿ ದಿಯಾ ಪಾಲಕ್ಕಲ್​ ಕೊಟ್ಟರು ಭರ್ಜರಿ ಗುಡ್​ನ್ಯೂಸ್​

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ದೀಪಾ ಪಾತ್ರದ ಮೂಲಕ ಮನೆಮಾತಾದವರ ನಟಿ ದಿಯಾ ಪಾಲಕ್ಕಲ್ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗುಣವೇ ಶ್ರೇಷ್ಠ ಎಂಬ ಸಂದೇಶ ಸಾರಿದ ಈ ಧಾರಾವಾಹಿಯ ನಾಯಕಿ, ಬಾಲನಟಿಯಾಗಿ ಪಯಣ ಆರಂಭಿಸಿ ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

2 Min read
Author : Suchethana D
Published : Aug 26 2026, 06:25 PM IST
Share this Photo Gallery
  • FB
  • TW
  • Linkdin
  • Whatsapp
16
ಸೌಂದರ್ಯಕ್ಕಿಂತ ಗುಣ ಮುಖ್ಯ
Image Credit : sumantvkannada Instagram

ಸೌಂದರ್ಯಕ್ಕಿಂತ ಗುಣ ಮುಖ್ಯ

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹೌದು. ಇವಳೇ ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತ ಬ್ರಹ್ಮಗಂಟು ಸೀರಿಯಲ್​ನಲ್ಲಿ, ಕೊನೆಗೂ ಗುಣನೇ ಮುಖ್ಯ ಎಂದು ತೋರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಲ್ಲರ ಮನಸ್ಸನ್ನು ಕದ್ದವರು
Image Credit : Diya Palakkal Instagram

ಎಲ್ಲರ ಮನಸ್ಸನ್ನು ಕದ್ದವರು

ಇಂತಿಪ್ಪ ದೀಪಾ ಇದೀಗ ದಿಶಾ ಆಗಿ ಎಲ್ಲರ ಮನಸ್ಸನ್ನು ಕದ್ದವರು ದಿಯಾ ಪಾಲಕ್ಕಲ್​ (Diya Palakkal). ಇಂದು ದಿಯಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅಷ್ಟಕ್ಕೂ, ದಿಯಾ ಪಾಲಕ್ಕರ್​ ನಿಜ ಜೀವನದಲ್ಲಿ ಸುರಸುಂದರಿ. ಸೀರಿಯಲ್​, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್​ ಮಾಡುವುದು ಇದೆ. ಆದರೆ ಈ ಸೀರಿಯಲ್​ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್​ ಮಾಡಲಾಗಿತ್ತು

Related Articles

Related image1
Amruthadhaare Serial: ಲಗ್ಗೇಜ್​ ಜೊತೆ ಜೈದೇವನ ಮನೆಗೇ ಉಳಿಯಲು ಬಂದಳು ಮಧುರಾ- ಮುಂದಿರೋದೇ ರೋಚಕ ಟ್ವಿಸ್ಟ್​
Related image2
Lakshmi Nivasa: ಪತ್ನಿಗೆ ಕೆಲಸ ಕೊಟ್ಟವನನ್ನೇ ಜಜ್ಜಿದ ಜಯಂತ್​: ಉಫ್​! ಈ ಸೈಕೋ ಮನಸ್ಥಿತಿಗೆ ನೆಟ್ಟಿಗರು ಫುಲ್​ ಖುಷ್​
36
ಬಾಲ ನಟಿಯಾಗಿ ಎಂಟ್ರಿ
Image Credit : others

ಬಾಲ ನಟಿಯಾಗಿ ಎಂಟ್ರಿ

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.

46
ಮೊದಲ ಬಾರಿ ನಾಯಕಿ
Image Credit : Instagram

ಮೊದಲ ಬಾರಿ ನಾಯಕಿ

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿತ್ತು. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

56
ಅಭಿಮಾನಿಗಳಿಗೆ ಗುಡ್​ನ್ಯೂಸ್​
Image Credit : Instagram

ಅಭಿಮಾನಿಗಳಿಗೆ ಗುಡ್​ನ್ಯೂಸ್​

ಇದೀಗ ದಿಯಾ ಅವರು ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. sumantvkannadaಕ್ಕೆ ನೀಡಿರುವ ಸಂದರ್ಶನದಲ್ಲಿ, ನಟಿ, ಸದ್ಯ ಫೈನಲ್​ ಇಯರ್​ ಡಿಗ್ರಿಯಲ್ಲಿ ಇದ್ದೇನೆ. ಶೀಘ್ರವೇ ಸಿನಿಮಾದಲ್ಲಿ ಬರುವ ಬಗ್ಗೆ ಘೋಷಣೆ ಮಾಡುತ್ತೇನೆ ಎನ್ನುವ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲು ರೆಡಿಯಾಗಿರುವುದಾಗಿ ತಿಳಿಸಿದ್ದಾರೆ

66
ಹೊಸ ಹೊಸ ಪ್ರಾಜೆಕ್ಟ್​
Image Credit : Instagram

ಹೊಸ ಹೊಸ ಪ್ರಾಜೆಕ್ಟ್​

ಕಾಲೇಜಿನ ಎಕ್ಸಾಂ ಮುಗಿದ ಮೇಲೆ ಹೊಸ ಹೊಸ ಪ್ರಾಜೆಕ್ಟ್​ಗಳನ್ನು ತೆಗೆದುಕೊಳ್ಳುತ್ತೇನೆ ಸದ್ಯ ಪರೀಕ್ಷೆಯ ಮೇಲೆ ಗಮನ ಇದೆ, ಶೀಘ್ರದಲ್ಲಿಯೇ ನಿಮಗೆಲ್ಲಾ ಹೊಸ ವಿಷಯ ಹೇಳುತ್ತೇನೆ ಎಂದಿದ್ದಾರೆ ನಟಿ. ದಿಯಾ ಅವರನ್ನು ಮತ್ತೊಮ್ಮೆ ಸೀರಿಯಲ್​ನಲ್ಲಿ ನೋಡುವ ಆಸೆ ಅವರ ಫ್ಯಾನ್ಸ್​ದು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬ್ರಹ್ಮಗಂಟು ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
Toxic: ರಾಕಿ ಭಾಯ್‌ನ ಈ ಲುಕ್‌ ಹಿಂದಿರುವವರು ಇವರೆ! ‘ಕೆಜಿಎಫ್’ನಿಂದ ‘ಟಾಕ್ಸಿಕ್’ವರೆಗೆ ಇವರದ್ದೇ ಕೈಚಳಕ!
Recommended image2
ಒಂದೇ ಒಂದು ಮೆಸೇಜ್‌ ನಟಿ ರುಕ್ಮಿಣಿ ವಸಂತ್ ಜೀವನವನ್ನೇ ಬದಲಿಸಿತು: ಇಂದು ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್!
Recommended image3
‘ಡಾಕ್ಟರ್ ಅನುಮತಿ ಇಲ್ಲದೆ ಮಾಡಬೇಡಿ’: ಪ್ರೆಗ್ನೆನ್ಸಿಯಲ್ಲೂ ನಟಿ ಸಮಂತಾ ಹೆವಿ ವರ್ಕೌಟ್
Related Stories
Recommended image1
Amruthadhaare Serial: ಲಗ್ಗೇಜ್​ ಜೊತೆ ಜೈದೇವನ ಮನೆಗೇ ಉಳಿಯಲು ಬಂದಳು ಮಧುರಾ- ಮುಂದಿರೋದೇ ರೋಚಕ ಟ್ವಿಸ್ಟ್​
Recommended image2
Lakshmi Nivasa: ಪತ್ನಿಗೆ ಕೆಲಸ ಕೊಟ್ಟವನನ್ನೇ ಜಜ್ಜಿದ ಜಯಂತ್​: ಉಫ್​! ಈ ಸೈಕೋ ಮನಸ್ಥಿತಿಗೆ ನೆಟ್ಟಿಗರು ಫುಲ್​ ಖುಷ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved