MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮಾಜಿ ಪ್ರೇಯಸಿ ಗುಂಗಲ್ಲೇ ಇಳಯರಾಜ ರಚಿಸಿದ ಹಾಡಂತೆ ಇದು!

ಮಾಜಿ ಪ್ರೇಯಸಿ ಗುಂಗಲ್ಲೇ ಇಳಯರಾಜ ರಚಿಸಿದ ಹಾಡಂತೆ ಇದು!

ಇಳಯ ರಾಜ. ಭೂಮಿಗೇ ರಾಜನಂತಿರುವ ಖ್ಯಾತ ಸಂಗೀತ ಸಂಯೋಜಕ, ಗೀತ ರಚನೆಕಾರ ಇಳಯರಾಜ ಅವರ ಹಾಡುಗಳು ಎಂದೆಂದಿಗೂ ಅಮರ. ಜೊತೆ ಜೊತೆಯಲಿ, ಮಣಿರತ್ನಂ ನಿರ್ದೇಶಿಸಿದ ಪಲ್ಲವ ಅನುಪಲ್ಲಿವಿ ಚಿತ್ರದ ನಗುವ ನಯನದಂಥ ಹಾಡುಗಳು ಅದೆಷ್ಟು ಸಾರಿ ಕೇಳಿದರೂ ಮನಸ್ಸಿಗೆ ಮುದ ನೀಡುವಂಥದ್ದು. ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಚಿತ್ರಗೀತೆಗಳಿಗೆ ಜೀವ ತುಂಬಿದ ಇಳಯರಾಜ ಅವರ ಹಾಡುಗಳು ಹಿಟ್ ಆಗಿದ್ದು ಒಂದೆರಡಲ್ಲ. ಇಂಥ ಸಂಗೀತ ಮಾಂತ್ರಿಕ ತಮ್ಮ ಮಾಜಿ ಪ್ರೆಯಸಿಯನ್ನು ನೆನಪಲ್ಲಿಟ್ಟಿಕೊಂಡು ರಚಿಸಿದ ಹಾಡಂತೆ ಇದು!

2 Min read
Anusha Kb
Published : Sep 16 2024, 03:49 PM IST| Updated : Sep 16 2024, 04:20 PM IST
Share this Photo Gallery
  • FB
  • TW
  • Linkdin
  • Whatsapp
14

ಸಂಗೀತ ಮಾಂತ್ರಿಕ ಇಳಯರಾಜಾ ಅವರ ಹಾಡುಗಳಿಗೆ ಫಿದಾ ಆಗದವರಿಲ್ಲ, ತಮಿಳಿನ ಸಂಗೀತ ಸಂಯೋಜಕರಾದರು ಅವರು ಕನ್ನಡದಲ್ಲೂ ಹಲವು ಸೂಪರ್ ಹಿಟ್‌ ಹಾಡುಗಳನ್ನು ನೀಡಿದ್ದಾರೆ. ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ, ಶಂಕರ್‌ನಾಗ್‌ ನಟನೆಯ ಗೀತಾ ಚಿತ್ರದ ಜೊತೆಯಲಿ ಜೊತೆ ಜೊತಿಯಲಿ ಈ ಎಲ್ಲಾ ಖ್ಯಾತ ಸಿನಿಮಾಗಳ ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿರುವುದರಿಂದ ಕನ್ನಡಿಗರಿಗೆ ಅವರು ನಮ್ಮವರೇ ಅನಿಸಿದ್ದಾರೆ. ಇಂತಹ  ಇಳಯರಾಜ ಅವರಿಗೂ ಒಂದು ಲವ್ ಸ್ಟೋರಿ ಇತ್ತು. ತಮ್ಮ ಮಾಜಿ ಪ್ರೇಯಸಿಗಾಗಿ ಅವರು ಹಾಡೊಂದನ್ನು ಬರೆದಿದ್ದರು ಎಂಬ ವಿಚಾರ ನಿಮಗೆ ಗೊತ್ತಾ?

ತಮಿಳಿನ ತಂಗರ್ ಬಚ್ಚನ್ ನಿರ್ದೇಶನದಲ್ಲಿ 2002 ರಲ್ಲಿ ಬಿಡುಗಡೆಯಾದ ಚಿತ್ರ ಅಲಗಿ. ಇದರಲ್ಲಿ ಪ್ರಶಾಂತ್, ದೇವಯಾನಿ, ನಂದಿತಾ ದಾಸ್ ಮುಂತಾದ ದೊಡ್ಡ ತಾರಾಬಳಗವೇ ಇತ್ತು. ಈ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಸಂಗೀತ ಮಾಂತ್ರಿಕ ಇಳಯರಾಜಾ ಅವರ ಸಂಗೀತ. ಇದರಲ್ಲಿನ 'ಪಾಟು ಸೊಲ್ಲಿ ಪಾಡ ಸೊಲ್ಲಿ', 'ಓಳಿಯಲೇ ತೆರಿಯುವಧು ದೇವತಯ', 'ಕುರುವಿ ಕೊಡಂಜ ಕೊಯ್ಯಾ ಪಳಂ' ಮುಂತಾದ ಹಾಡುಗಳು ದೊಡ್ಡ ಹಿಟ್ ಆದವು.

 

24

ಇದರಲ್ಲಿ ಇನ್ನೊಂದು ವಿಶೇಷ ಹಾಡಿದೆ. ಅದುವೇ 'ಉನ್ ಕುತ್ತಮಾ ಏನ್ ಕುತ್ತಮಾ' ಹಾಡು. ಈ ಹಾಡಿನ ಸನ್ನಿವೇಶ ಸಿನಿಮಾದಲ್ಲಿ ತುಂಬಾ ಭಾವುಕವಾಗಿರುತ್ತದೆ. ವೈದ್ಯನಾಗಿರುವ ಪ್ರಶಾಂತ್ ತನ್ನ ಮಾಜಿ ಪ್ರೇಯಸಿಯನ್ನು ಕಷ್ಟದ ಪರಿಸ್ಥಿತಿಯೊಂದರಲ್ಲಿ ಭೇಟಿಯಾಗುತ್ತಾನೆ. 'ಹೇಗೋ ಬದುಕಬೇಕಾದವಳು ಹೀಗೆ ರಸ್ತೆಯಲ್ಲಿ ನಿಂತಿದ್ದಾಳಲ್ಲ' ಎಂದು ನೋವಿನಿಂದ ಇರುವಾಗ ಈ ಹಾಡು ಪ್ರಾರಂಭವಾಗುತ್ತದೆ. ಈ ಹಾಡು ಭಾವುಕವಾಗಿರಲು ಮುಖ್ಯ ಕಾರಣ ಅದರ ಸಾಹಿತ್ಯ. ಈ ಹಾಡನ್ನು ಬರೆದವರು ಬೇರೆ ಯಾರೂ ಅಲ್ಲ, ಭಾರತದ ಖ್ಯಾತ ಸಂಗೀತ ಮಾಂತ್ರಿಕ ಇಳಯರಾಜಾ. ಈ ಹಾಡಿನಲ್ಲಿ ಒಂದು ಆಳವಾಗಿ ಅರ್ಥ ನೀಡುವ ಸಾಲೊಂದಿದೆ. 'ರಸ್ತೆಯಲ್ಲಿ ನುಡಿಸಿದರೂ ವೀಣೆಗೆ ಸಂಗೀತವಿದೆ, ಅದು ವ್ಯರ್ಥವಾಗುವುದಿಲ್ಲ ಕೇಳುವ ಹೃದಯವಿದೆ, ಮೃದುವಾಗಿ ಹಾಡುತ್ತದೆ ವೀಣೆಯೊಂದಿಗೆ' ಎಂಬ ಸಾಲು ಎಂಥವರ ಮನಸ್ಸನ್ನೂ ನಾಡುವುದರಲ್ಲಿ ಅನುಮಾನವೇ ಇಲ್ಲ. 

34

ಇಳಯರಾಜಾ ಹೀಗೆ ಭಾವನಾತ್ಮಕವಾಗಿ ಬರೆದಿದ್ದಾರೆ ಎಂದರೆ ಅದಕ್ಕೆ ಅವರ ಮಾಜಿ ಪ್ರೇಯಸಿಯೂ ಒಂದು ಕಾರಣ ಎಂದು ಹೇಳಲಾಗುತ್ತದೆ. ಇಳಯರಾಜಾ ಗಾಯತ್ರಿ ಎಂಬುವವರನ್ನು ಬಹುವಾಗಿ ಪ್ರೀತಿಸುತ್ತಿದ್ದರಂತೆ. ಆದರಿದು ಒನ್ ವೇ ಲವ್. ವೀಣಾ ವಾದನದಲ್ಲಿ ನಿಷ್ಣಾತರಾಗಿದ್ದ ವೀಣಾ ಅವರನ್ನು ಇಳಯರಾಜಾ ತುಂಬಾ ಹಚ್ಚಿಕೊಂಡಿದ್ದರಂತೆ. ಆದರೆ ಸಂಗೀತ ಮಾಂತ್ರಿಕನ ಪ್ರೀತಿಯನ್ನು ಸ್ವೀಕರಿಸಲು ನಿರಾಕರಿಸಿದ ಗಾಯತ್ರಿ, ತಮ್ಮ ಸಮುದಾಯದ ವ್ಯಕ್ತಿಯೊಂದಿಗೆ ವಿವಾಹವಾಗಿ ಊರು ಬಿಟ್ಟು ವಿದೇಶಕ್ಕೆ ತೆರಳಿದರಂತೆ. ಗಾಯತ್ರಿ ಮೇಲಿನ ಪ್ರೇಮ ವಿಫಲವಾದ ನಂತರವೇ ಅವರಿಗೆ ಸಿನಿಮಾದಲ್ಲಿ ಹೊಸ ತಿರುವು ಸಿಕ್ಕಿ, ಯಶಸ್ವಿ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದರು.  ಹೀಗಾಗಿ ಮಾಜಿ ಪ್ರೇಯಸಿ ನೆನಪಿನಲ್ಲಿ 'ಅಳಗಿ' ಚಿತ್ರದಲ್ಲೊಂದು ಹಾಡು ಬರೆದಿದ್ದಾರೆನ್ನಲಾಗುತ್ತದೆ. ಇಳಯರಾಜಾ. ಅದರಲ್ಲಿ ವೀಣೆಯನ್ನು ಉಲ್ಲೇಖಿಸಿ ಅವರು ಬರೆದ ಸಾಲುಗಳು ತಮ್ಮ ಮಾಜಿ ಪ್ರೇಯಸಿಗಾಗಿ ಬರೆದಿರಬಹುದು ಎಂದೇ ಮಂದಿ ಮಾತನಾಡಿಕೊಳ್ಳುತ್ತಾರೆ.

44

ಇತ್ತ ಕನ್ನಡದಲ್ಲಿ ಅವರು ಸಂಯೋಜಿಸಿದ ಮಧುರ ಹಾಡುಗಳಿಗೆ ತಲೆದೂಗದ ಜನರಿಲ್ಲ, ಅವರು ಸಂಗೀತ ಸಂಯೋಜಿಸಿದ ನಗುವ ನಯನ, ಜೀವ ಹೂವಾಗಿದೆ, ಕೆಳದೆ ನಿಮಗೀಗ, ತಂಗಾಳಿಯಲ್ಲಿ ನಾನು, ಜೊತೆಯಲ್ಲಿ ಜೊತೆ ಜೊತೆಯಲ್ಲಿ, ನಗು ಎಂದಿಗೂ... ಇವೆಲ್ಲಾ ಹಳೆಯ ಹಾಡುಗಳಾದರೂ ಇಂದಿಗೂ ಜನ ಗುನುಗುನಿಸುವ ಸದಾ ನೆನಪು ಮಾಡಿಕೊಳ್ಳುವ ಇಳಯರಾಜ ಸಂಯೋಜನೆಯ ಕನ್ನಡದ ಸೂಪರ್ ಹಿಟ್ ಹಾಡುಗಳಾಗಿವೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಇಳಯರಾಜ
ಸಂಗೀತ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Sobhita Dhulipala: ತಂದೆಯಾಗಲಿದ್ದಾರೆ ನಾಗ ಚೈತನ್ಯ.. ಸಮಂತಾಗೆ ದೊಡ್ಡ ಆಘಾತ!
Recommended image2
'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
Recommended image3
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved