MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಅಮ್ಮ ಮಾಡಿದ್ದ ಸಾಲ ತೀರಿಸೋದಕ್ಕಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದ ನಟ ಸೂರ್ಯ

ಅಮ್ಮ ಮಾಡಿದ್ದ ಸಾಲ ತೀರಿಸೋದಕ್ಕಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದ ನಟ ಸೂರ್ಯ

ತಮಿಳು ನಟ ಸೂರ್ಯ ಜಗತ್ತಿನೆಲ್ಲೆಡೆ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಹಿಂದೊಮ್ಮೆ ತಾಯಿ ಮಾಡಿದ ಸಾಲ ತೀರಿಸುವ ಸಲುವಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದರಂತೆ. ಅವರಿಗೆ ಅಲ್ಲಿ 1,200 ರೂ. ಸಿಕ್ಕಿತಂತೆ ಈ ಬಗ್ಗೆ ಒಂದು ಸ್ಟೋರಿ

2 Min read
Anusha Kb
Published : Oct 24 2024, 02:37 PM IST| Updated : Oct 24 2024, 02:40 PM IST
Share this Photo Gallery
  • FB
  • TW
  • Linkdin
  • Whatsapp
15

ಕಾಲಿವುಡ್ ಸೂಪರ್‌ಸ್ಟಾರ್ ಸೂರ್ಯ ಆಕಸ್ಮಿಕವಾಗಿ ನಟರಾದವರು. ಹೌದು, ನೀವು ಸರಿಯಾಗಿ ಓದಿದ್ದೀರಿ! ಇತರ ಸ್ಟಾರ್ ಮಕ್ಕಳಂತೆ, ಸೂರ್ಯ ತನ್ನ ನಟ ತಂದೆ ಶಿವಕುಮಾರ್ ಅವರ ಮಾರ್ಗದಲ್ಲಿ ಮುನ್ನಡೆಯುವ ಬಯಕೆಯನ್ನು ಹೊಂದಿರಲಿಲ್ಲ. ಬದಲಾಗಿ, ಅವರು ತಿಂಗಳಿಗೆ 1,200 ರೂ. ಸಂಬಳದೊಂದಿಗೆ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸಗಾರನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅವರನ್ನು ಚಲನಚಿತ್ರಗಳಿಗೆ ಬರುವಂತೆ ಮಾಡಿತು.

25
ನಟ ಸೂರ್ಯ

ನಟ ಸೂರ್ಯ

ಹೇಳುತ್ತಾ ಹೋದರೆ ಇದೊಂದು ಸುಧೀರ್ಘ ಕತೆಯಾಗಲಿದೆ. ಆದರೆ ನಾನು ನನ್ನ ಅಭಿಮಾನಿಗಳಿಗೆ ನಾನು ಹೇಗೆ ಭಾವಿಸುತ್ತೇನೆ. ಅದು ಎಂದರೆ ನನಗೆಷ್ಟು  ಹೆಚ್ಚು ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ ಸೂರ್ಯ ಗಾರ್ಮೆಂಟ್ಸ್ ಉದ್ಯಮದಲ್ಲಿ ತಮ್ಮ ಆರಂಭಿಕ ದಿನಗಳು ಹೇಗಿದ್ದವು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಓರ್ವ ಟ್ರೈನಿಯಾಗಿ ಸೇರಿಕೊಂಡ ಅವರಿಗೆ  ಮೊದಲ 15 ದಿನಗಳವರೆಗೆ ಕೇವಲ 750 ರೂ. ವೇತನ ನೀಡಲಾಯ್ತು., ಆದರೆ ಸುಮಾರು ಮೂರು ವರ್ಷಗಳ ನಂತರ, ಅವರು ತಿಂಗಳಿಗೆ 8,000 ರೂ. ವೇತನ ಸಿಕ್ಕಿತ್ತು.

35
ನಟ ಸೂರ್ಯ

ನಟ ಸೂರ್ಯ

ಸೂರ್ಯ ತಾಯಿ ಮಗನೊಂದಿಗೆ ಕುಟುಂಬದ ಆರ್ಥಿಕ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದರು.ನಾನು 25,000 ರೂ. ಸಾಲ ಪಡೆದಿದ್ದೇನೆ ಮತ್ತು ಈ ವಿಚಾರ ನಿಮ್ಮ ತಂದೆಗೆ ತಿಳಿದಿಲ್ಲ. ಎಂದು ತಾಯಿ ಹೇಳಿದಾಗ ಆಘಾತಕ್ಕೊಳಗಾದ ಸೂರ್ಯ ಕುಟುಂಬದ ಉಳಿತಾಯದ ಬಗ್ಗೆ ಕೇಳಿದಾಗ ತಮ್ಮ ಕುಟುಂಬದ ಬ್ಯಾಂಕ್ ಬ್ಯಾಲೆನ್ಸ್ ಒಂದು ಲಕ್ಷ ದಾಟಿಲ್ಲ ಎಂಬುದನ್ನು ತಿಳಿದುಕೊಂಡರು. ಅವರ ತಂದೆ ಶಿವಕುಮಾರ್ ಕೂಡ ಆ ಸಮಯದಲ್ಲಿ ಹೆಚ್ಚು ಚಿತ್ರಗಳನ್ನು ಮಾಡುತ್ತಿರಲಿಲ್ಲ. ನನ್ನ ತಾಯಿ ಆ ಮೊತ್ತವನ್ನು ಪಾವತಿಸಲು ಹೆಣಗಾಡುತ್ತಿರುವುದನ್ನು ನಾನು ನೋಡಿದಾಗ, ಅದು ನನಗೆ ತುಂಬಾ ನೋವುಂಟುಮಾಡಿತು. ನಾನು ನನ್ನಷ್ಟಕ್ಕೆ ನಾನೇ ಯೋಚಿಸಿದೆ, 'ನಾನು ಏನು ಮಾಡುತ್ತಿದ್ದೇನೆ? ಎಂದು ಸೂರ್ಯ ಹೇಳಿಕೊಂಡಿದ್ದಾರೆ. 

ಸೂರ್ಯ ಮುಂದೆ ನವೆಂಬರ್ 14 ರಂದು ಬಿಡುಗಡೆಯಾಗಲಿರುವ ಕಂಗುವಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ನನ್ನ ತನ್ನ ತಂದೆ ಎಂದಿಗೂ ನಿರ್ಮಾಪಕರಿಂದ ತಮ್ಮ ವೇತನವನ್ನು ಕೇಳಲಿಲ್ಲ ಹಾಗೂ ಅವರು ಎಂದಿಗೂ ತಮ್ಮ ಸಂಬಳವನ್ನು ಕೇಳುತ್ತಿರಲಿಲ್ಲ. ನಿರ್ಮಾಪಕರೇ ವೇತನ ಕೊಡುವವರೆಗೂ ಅವರು ಕಾಯುತ್ತಿರುತ್ತಿದ್ದರು ಎಂದು ಸೂರ್ಯ ಹೇಳಿಕೊಂಡಿದ್ದಾರೆ.

45
ಸೂರ್ಯ

ಸೂರ್ಯ

ಸೂರ್ಯ ಆರಂಭದಲ್ಲಿ ತಮ್ಮದೇ ಆದ ಒಂದು ಕಾರ್ಖಾನೆಯನ್ನು ನಿರ್ಮಿಸಲು ಬಯಸಿದ್ದರು, ತನ್ನ ತಂದೆ ಅದಕ್ಕೆ ಒಂದು ಕೋಟಿ ಖರ್ಚು ಮಾಡುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ನನ್ನ ತಾಯಿಯೊಂದಿಗಿನ ಆ ಒಂದು ಸಂಭಾಷಣೆ ಎಲ್ಲವನ್ನೂ ಬದಲಾಯಿಸಿತು, ಎಂದು ಸೂರ್ಯ ಹೇಳಿಕೊಂಡಿದ್ದಾರೆ. ತನ್ನ ಪೂರ್ವಜರ ಸಿನಿಮಾ ಹಿನ್ನೆಲೆಯಿಂದಾಗಿ ಹಲವಾರು ಸಿನಿಮಾಗಳಲ್ಲಿ ನಟಿಸುವ ಆಫರ್ ಬಂದರು ತನಗೆ ಸಿನಿಮಾ ರಂಗವನ್ನು ಪ್ರವೇಶಿಸುವ ಉದ್ದೇಶವಿರಲಿಲ್ಲ, ಮೊದಲು ಬಾರಿ ಕ್ಯಾಮೆರಾ ಎದುರಿಸುವ ಐದು ದಿನಗಳ ಮೊದಲು, ನಾನು ಇದನ್ನು ಮಾಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಸೂರ್ಯ ಹೇಳಿಕೊಂಡಿದ್ದಾರೆ. 

ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ, "ನಾನು ಹಣಕ್ಕಾಗಿ ಈ ವೃತ್ತಿಯನ್ನು ಪ್ರಾರಂಭಿಸಿದೆ. ನಾನು ನನ್ನ ತಾಯಿಯ ಸಾಲವನ್ನು ತೀರಿಸುವ ಗುರಿಯೊಂದಿಗೆ ಈ ವಲಯವನ್ನು ಪ್ರವೇಶಿಸಿದೆ. ಹೀಗೆ ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ಶರವಣನ್ ಶಿವಕುಮಾರ್ ಹೆಸರಿನ ನಾನು ಸೂರ್ಯನಾದೆ ಎಂದು ಸೂರ್ಯ ಹೇಳಿಕೊಂಡಿದ್ದಾರೆ.

55

ಅಲ್ಲದೇ ಮೊದಲ ಶಾಟ್ ಅನ್ನು ತಾವು ಯಾರೆಂದು ತಿಳಿಯದ ಜನರಿಂದ ಸುತ್ತುವರೆದಿರುವ ಸ್ಥಳದಲ್ಲಿ ತಮ್ಮ ಮೊದಲ ಶಾಟ್ ಅನ್ನು ಅವರು ನೆನಪಿಸಿಕೊಂಡರು. ನನ್ನ ಶಾಟ್ ನಂತರ, ಅವರು ಕೂಗುವುದು ಮತ್ತು ಚಪ್ಪಾಳೆ ತಟ್ಟುವುದನ್ನು ನಾನು ಕೇಳಿದೆ. ಅಂದಿನಿಂದ, ಪೀಳಿಗೆಗಳು ಬದಲಾಗಿವೆ, ಪ್ರೇಕ್ಷಕರು ಬದಲಾಗಿದ್ದಾರೆ, ಆದರೆ ನಾನು ಬೇಷರತ್ತಾದ ಪ್ರೀತಿಯನ್ನು ಪಡೆಯುತ್ತಲೇ ಇದ್ದೇನೆ ಎಂದು ಸೂರ್ಯ ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕಾಲಿವುಡ್
ನಟ ಸೂರ್ಯ
Latest Videos
Recommended Stories
Recommended image1
ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ರಜನಿಕಾಂತ್? ಮಲ್ಟಿಸ್ಟಾರರ್ ಮೂವಿಯನ್ನ ಇವರೇನಾ ಡೈರೆಕ್ಟ್ ಮಾಡೋದು!
Recommended image2
ರಾಜಮೌಳಿ-ಮಹೇಶ್ ಬಾಬು ‘ವಾರಣಾಸಿ’ ಸಿನಿಮಾದಲ್ಲಿ ದರ್ಶನ್? ಉತ್ತರಾಧಿಕಾರಿ ಬಂದಾಯ್ತು: ಏನಿದು ಹೊಸ ಸುದ್ದಿ!
Recommended image3
ಪುಷ್ಪ ನಟಿಗೆ ದೊಡ್ಡ ಹೊಡೆತ ಕೊಟ್ಟ ಆ ಒಂದು ನಿರ್ಧಾರ.. ಟಾಪ್ ನಿರೂಪಕಿ ಈಗ ಒಂಟಿಯಾದರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved