MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ ತೆಲುಗು ಹೀರೋ ಜೂ. NTR ನಿಜ ಜೀವನದಲ್ಲಿ ಅಭಿಮಾನಿಗಳ ಪಾಲಿನ ದೇವತಾ ಮನುಷ್ಯ!

ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ ತೆಲುಗು ಹೀರೋ ಜೂ. NTR ನಿಜ ಜೀವನದಲ್ಲಿ ಅಭಿಮಾನಿಗಳ ಪಾಲಿನ ದೇವತಾ ಮನುಷ್ಯ!

ಬಾಲಿವುಡ್ ಗೆ ಹೋಲಿಕೆ ಮಾಡಿದ್ರೆ, ದಕ್ಷಿಣ ಭಾರತದ ಸೆಲೆಬ್ರಿಟಿಗಳು ತಮ್ಮ ಉತ್ತಮ ನಡವಳಿಕೆ ಮತ್ತು ಜೀವಂತಿಕೆಗೆ ಹೆಸರುವಾಸಿಯಾಗಿದ್ದಾರೆ ಅನ್ನೋದ್ರಲ್ಲಿ ತಪ್ಪಿಲ್ಲ. ಅದರಲ್ಲೂ ನಾಯಕ ನಟರು ತಮ್ಮ ಸಹ ನಟರು, ಅಭಿಮಾನಿಗಳೊಂಡಿಗೆ ತುಂಬಾನೆ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ. ಹೆಚ್ಚಿನ ನಟರು ತಮ್ಮ ಯಶಸ್ಸಿನಿಂದ ಅಹಂಕಾರ ತೋರಿಸುವಂತವರು ಅಲ್ವೇ ಅಲ್ಲ, ಅವರಲ್ಲಿ ಒಬ್ಬರು ಜೂ. NTR.  

2 Min read
Author : Pavna Das
| Updated : Sep 03 2024, 04:05 PM IST
Share this Photo Gallery
  • FB
  • TW
  • Linkdin
  • Whatsapp
17

ಬಾಲಿವುಡ್ ಮಂದಿಗೆ ತಮ್ಮ ನಾಯಕರು ಅಂದ್ರೆ ಕ್ರೇಜ್ ಜಾಸ್ತಿಯಾಗಿದ್ರೆ, ನಮ್ಮ ದಕ್ಷಿಣದ ಜನರು ಹೆಚ್ಚಾಗಿ ತಮ್ಮ ಹೀರೋಗಳನ್ನು ದೇವರಂತೆ ನೋಡ್ಕೋತಾರೆ. ಉದಾಹರಣೆಗೆ ಡಾ. ರಾಜಕುಮಾರ್ ಇರಬಹುದು, ಪುನೀತ್ ರಾಜಕುಮಾರ್ (Puneeth Rajkumar), ರಜನಿಕಾಂತ್ ಇವರಲ್ಲೆಲ್ಲಾ ಅಭಿಮಾನಿಗಳು ದೇವರನ್ನ ಕಂಡಿದ್ದಾರೆ. ಕಾರಣ ಇವರು ನಿಜ ಜೀವನದಲ್ಲಿ ಹೀರೋಗಳಂತೆ ಇರದೇ, ಸಾಮಾನ್ಯ ಜನರೊಂದಿಗೆ ಸಾಮಾನ್ಯನಾಗಿದ್ದುಕೊಂಡು ಸಹಾಯ ಮಾಡುವ ರೀತಿ. 
 

27

ಇವತ್ತು ಅಂತದ್ದೇ ಒಬ್ಬ ನಟನ ಬಗ್ಗೆ ಹೇಳ್ತಿದ್ದೀವಿ. ಇವರು ತೆಲುಗಿನ ಸೂಪರ್ ಸ್ಟಾರ್ ನಟ, ಆದರೆ ಅಭಿಮಾನಿಗಳು ಅಂದ್ರೆ ಇವರಿಗೆ ಪ್ರಾಣ. ಅಭಿಮಾನಿಗಳಿಗಾಗಿ ತುಂಬಾನೆ ಡೆಡಿಕೇಟ್ ಆಗಿರುವ ನಟ ಜೂನಿಯರ್ NTR. ನಿಸ್ವಾರ್ಥ ಭಾವದಿಂದ ಇವರು ಮಾಡುತ್ತಿರೋ ಸೇವೆಗಳ ಬಗ್ಗೆ ತಿಳಿದ್ರೆ ನಿಮಗೆ ಶಾಖ್ ಆಗಬಹುದು. 
 

37

ಆರ್ ಆರ್ ಆರ್ ಖ್ಯಾತಿಯ ನಟ ಜೂನಿಯರ್ ಎನ್’ಟಿಆರ್ (Jr NTR) ಸುಮಾರು 11 ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೆ ತನ್ನ ಮೃತ ಅಭಿಮಾನಿಯೊಬ್ಬರ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ? ಜನರು ತಮ್ಮ ಮನೆಯವರನ್ನೇ ಸರಿಯಾಗಿ ನೋಡಿಕೊಳ್ಳಲ್ಲ, ಇನ್ನು ಬೇರೆಯವರನ್ನ ನೋಡಿಕೊಳ್ಳೊ ಮಾತೆಲ್ಲಿಂದ ಅಲ್ವಾ? ಆದರೆ NTR ಬರೋಬ್ಬರಿ 11 ವರ್ಷಗಳಿಂದ ತನ್ನ ಮೃತ ಅಭಿಮಾನಿಯ ಕುಟುಂಬದ ಪೂರ್ತಿ ಜವಾಬ್ಧಾರಿಯನ್ನು ಹೊತ್ತಿದ್ದಾರೆ. 
 

47

2013 ರಲ್ಲಿ ಜೂನಿಯರ್ ಎನ್ಟಿಆರ್ ಅವರ 'ಬಾದ್ಶಾ' ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ನಟನ ಲಕ್ಷಾಂತರ ಅಭಿಮಾನಿಗಳು (fans) ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಜನರಲ್ಲಿ ಕ್ರೇಜ್ ಎಷ್ಟಿತ್ತು ಎಂದರೆ ನೂಕು ನುಗ್ಗಲು ಉಂಟಾಗಿ ಹಲವು ಸಮಸ್ಯೆಗಳು ಸಂಭವಿಸಿತ್ತು. ಈ ಸಂದರ್ಭದಲ್ಲಿಎನ್’ಟಿಆರ್ ಅಭಿಮಾನಿಯೊಬ್ಬ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದನು. 
 

57

ವಿಷಯ ತಿಳಿದ ನಂತರ ದುಃಖಿತರಾದ ಜೂನಿಯರ್ ಎನ್ಟಿಆರ್ ಮೊದಲು ಅಭಿಮಾನಿಯ ಕುಟುಂಬವನ್ನು ಭೇಟಿ ಮಾಡಿ ಸಮಾಧಾನ ಮಾಡಿದರು. ಜೊತೆಗೆ ತಕ್ಷಣ ಆ ಕುಟುಂಬಕ್ಕೆ ಸುಮಾರು 5 ಲಕ್ಷ ರೂಪಾಯಿಗಳ ಧನ ಸಹಾಯ (financial help)  ಕೂಡ ಮಾಡಿದರು. . ಅಷ್ಟೇ ಅಲ್ಲ, ಕಳೆದ 11 ವರ್ಷಗಳಿಂದ, ನಟ ಆ ಮೃತ ಅಭಿಮಾನಿಯ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಆ ಕುಟುಂಬವನ್ನು ಸಲಹುತ್ತಿದ್ದಾರೆ ಅನ್ನೋದು ನಿಜ. 
 

67

ಇದಲ್ಲದೆ, ಜೂನಿಯರ್ ಎನ್ಟಿಆರ್ ಅಂದ್ರೆ ಜನರಿಗೆ ಎಷ್ಟೊಂದು ಕ್ರೇಜ್ ಇತ್ತು ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇದು.  2004 ರಲ್ಲಿ ನಟನ ಚಿತ್ರ 'ಆಂಧ್ರವಾಲಾ' ಬಿಡುಗಡೆಯಾದಾಗ, ಅದರ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸುಮಾರು 10 ಲಕ್ಷ ಜನರು ಬಂದಿದ್ದರು. ಇಷ್ಟು ದೊಡ್ಡ ಜನಸಮೂಹವನ್ನು ಯಾರೂ ನಿರೀಕ್ಷಿಸಿರಲಿಲ್ಲ, ಆದ್ದರಿಂದ ಈ ಜನರಿಗೆ ಯಾವುದೇ ವಿಶೇಷ ವ್ಯವಸ್ಥೆ ಕೂಡ ಮಾಡಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವೇ ಮಧ್ಯಪ್ರವೇಶಿಸಿ ನಟನ ಅಭಿಮಾನಿಗಳಿಗಾಗಿ ಸುಮಾರು 9 ವಿಶೇಷ ರೈಲುಗಳನ್ನು ಓಡಿಸಬೇಕಾಯಿತು. ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ 9 ವಿಶೇಷ ರೈಲುಗಳನ್ನ ಓಡಿಸಿದ ಕೀರ್ತಿ ಎನ್‌ಟಿಆರ್ ಗೆ ಸಲ್ಲುತ್ತದೆ. 
 

77

ಇನ್ನು ಈಗ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 31 ಜನರು ಸಾವನ್ನಪ್ಪಿದ್ದು ಮತ್ತು ವ್ಯಾಪಕ ಹಾನಿ ಕೂಡ ಸಂಭವಿಸಿದೆ. ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಈ ಸಂದರ್ಭದಲ್ಲಿ ಜೂನಿಯರ್ ಎನ್‌ಟಿಆರ್ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.ಇದಲ್ಲದೇ ಹಲವು ರೀತಿಯಲ್ಲಿ ಸಮಾಜ ಸೇವೆಗಳನ್ನು ಮಾಡುತ್ತ ಬಂದಿದ್ದಾರೆ. ಈ ಎಲ್ಲಾ ಕಾರ್ಯಗಳನ್ನ ನೋಡಿದ್ರೆ ಖಂಡಿತವಾಗಿಯೂ ಎನ್‌ಟಿಆರ್ ಅವರನ್ನು ದೇವತಾ ಮನುಷ್ಯ ಅಂತಾನೆ ಹೇಳಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಟಾಲಿವುಡ್

Latest Videos
Recommended Stories
Recommended image1
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
Recommended image2
ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!
Recommended image3
ಆಜ್ ಕಿ ರಾತ್ ಮಾದಕತೆಗೆ ಹೊಸ ದಾಖಲೆ ಸೃಷ್ಟಿ, ಓಡೋಡಿ ಬಂದು ಧನ್ಯವಾದ ಹೇಳಿದ ತಮನ್ನಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved