Krishna Janmashtami 2026 : ಸೆಪ್ಟೆಂಬರ್ 4 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗ್ತಿದೆ. ಈ ದಿನ ಐದು ಗ್ರಹಗಳ ವಿಶೇಷ ಸಂಯೋಗವಾಗಲಿದೆ. ಯಾವರಾಶಿಗೆ ಲಾಭ ಎಂಬ ವಿವರ ಇಲ್ಲಿದೆ.
ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4, ಶುಕ್ರವಾರದಂದು ಆಚರಿಸಲಾಗುತ್ತಿದೆ. ಕೃಷ್ಣನ ಆರಾಧನೆ, ಉಪವಾಸ ಮತ್ತು ಪೂಜೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿ, ಜ್ಯೋತಿಷ್ಯ ದೃಷ್ಟಿಯಿಂದಲೂ ಅತ್ಯಂತ ವಿಶೇಷವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ಜನ್ಮಾಷ್ಟಮಿಯಂದು ಹಲವು ಪ್ರಮುಖ ಗ್ರಹಗಳು ಬಲಿಷ್ಠ ಸ್ಥಾನದಲ್ಲಿರಲಿದ್ದು, ಅಪರೂಪದ ಗ್ರಹ ಸಂಯೋಗಗಳು ರೂಪುಗೊಳ್ಳಲಿವೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೂ ಕಂಡುಬರಲಿದೆ. ವಿಶೇಷವಾಗಿ ನಾಲ್ಕು ರಾಶಿಗಳಿಗೆ ಈ ಅವಧಿ ಹೆಚ್ಚು ಶುಭಕರವಾಗಿರಲಿದೆ.
5 ಪ್ರಮುಖ ಗ್ರಹ ಸಂಯೋಗ
ಈ ಬಾರಿ ಚಂದ್ರನು ವೃಷಭ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರಲಿದ್ದಾನೆ. ಜ್ಞಾನ ಮತ್ತು ಭಾಗ್ಯಕಾರಕ ಎಂದು ಪರಿಗಣಿಸಲಾಗುವ ಗುರು ಗ್ರಹವು ಕರ್ಕಾಟಕ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರಲಿದೆ. ಇದರ ಜೊತೆಗೆ ಆತ್ಮಕಾರಕ ಸೂರ್ಯನು ತನ್ನದೇ ಆದ ಸಿಂಹ ರಾಶಿಯಲ್ಲಿ ಮತ್ತು ಶುಕ್ರನು ತನ್ನ ಸ್ವರಾಶಿಯಾದ ತುಲಾದಲ್ಲಿ ಇರಲಿದ್ದಾನೆ. ಬುಧನೂ ಶುಭ ಸ್ಥಾನದಲ್ಲಿರುವುದರಿಂದ ಈ ಗ್ರಹಗಳ ಸಂಯೋಗವು ವಿಶೇಷ ಫಲಗಳನ್ನು ನೀಡಬಹುದು ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ.
ಇದರ ಜೊತೆಗೆ ಮಂಗಳ ಮತ್ತು ಶುಕ್ರನ ನಡುವೆ ನವಪಂಚಮ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗವು ಹಣ, ವೈಭವ ಮತ್ತು ಭೌತಿಕ ಸೌಕರ್ಯಗಳಿಗೆ ಸಂಬಂಧಿಸಿದಂತೆ ಶುಭ ಫಲಗಳನ್ನು ನೀಡಲಿದೆ.
ಈ 4 ರಾಶಿಗಳಿಗೆ ವಿಶೇಷ ಅದೃಷ್ಟ
ವೃಷಭ ರಾಶಿ
ಜನ್ಮಾಷ್ಟಮಿಯಂದು ಚಂದ್ರನು ವೃಷಭ ರಾಶಿಯಲ್ಲೇ ಉಚ್ಚ ಸ್ಥಾನದಲ್ಲಿರಲಿದ್ದಾನೆ. ಇದರಿಂದ ವೃಷಭ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಮಾನ-ಸಮ್ಮಾನ ಹೆಚ್ಚಾಗಲಿದೆ. ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹಣದ ಹೊಸ ಮೂಲಗಳು ತೆರೆದುಕೊಳ್ಳಬಹುದು. ಹೊಸ ಹೂಡಿಕೆ ಮಾಡಲು ಬಯಸುವವರಿಗೆ ಈ ಸಮಯ ಅನುಕೂಲಕರವಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಗುರು ಉಚ್ಚ ಸ್ಥಾನದಲ್ಲಿರುವುದು ಮತ್ತು ಚಂದ್ರನು ಉಚ್ಚ ಸ್ಥಾನದಲ್ಲಿರುವುದು ಈ ರಾಶಿಯವರಿಗೆ ವಿಶೇಷವಾಗಬಹುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೊಸ ಉದ್ಯೋಗದ ಅವಕಾಶ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಲಾಭದ ಅವಕಾಶಗಳು ಹೆಚ್ಚಾಗಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯೂ ಇದೆ.
ಸಿಂಹ ರಾಶಿ
ಸೂರ್ಯನು ತನ್ನದೇ ಆದ ಸಿಂಹ ರಾಶಿಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಹೆಚ್ಚಾಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಥವಾ ಉನ್ನತ ಅಧಿಕಾರಿಗಳೊಂದಿಗೆ ವ್ಯವಹರಿಸುವವರಿಗೆ ಅನುಕೂಲಕರ ಬೆಳವಣಿಗೆಗಳು ಕಾಣಿಸಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಲಾಭವಾಗುವ ಸಾಧ್ಯತೆ ಹಾಗೂ ಅನಿರೀಕ್ಷಿತ ಹಣದ ಅವಕಾಶವಿದೆ.
ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರನು ತನ್ನದೇ ರಾಶಿಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಮಂಗಳ ಮತ್ತು ಶುಕ್ರನ ನಡುವಿನ ನವಪಂಚಮ ಯೋಗವು ಹಣಕಾಸು ಮತ್ತು ವ್ಯಾಪಾರದಲ್ಲಿ ಅನುಕೂಲಕರ ಫಲಗಳನ್ನು ನೀಡಲಿದೆ. ವ್ಯಾಪಾರದಲ್ಲಿ ದೊಡ್ಡ ಒಪ್ಪಂದಗಳು ಕೈಗೂಡುವ ಸಾಧ್ಯತೆ ಇದೆ. ಕಲೆ, ಮಾಧ್ಯಮ, ಫ್ಯಾಷನ್ ಮತ್ತು ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ.
ಜನ್ಮಾಷ್ಟಮಿಯಂದು ಮಾಡಬೇಕಾದ ಪರಿಹಾರವೇನು?
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಬೆಣ್ಣೆ-ಸಕ್ಕರೆ ನೈವೇದ್ಯ ಅರ್ಪಿಸುವುದು ಶುಭ ಎಂದು ನಂಬಲಾಗಿದೆ. ಪೂಜೆಯಲ್ಲಿ ತುಳಸಿ ದಳವನ್ನು ಬಳಸುವುದು ಮತ್ತು ಶ್ರೀಕೃಷ್ಣನ ಮಂತ್ರವನ್ನು ಜಪಿಸುವುದಕ್ಕೂ ವಿಶೇಷ ಮಹತ್ವವಿದೆ. ʻಓಂ ನಮೋ ಭಗವತೇ ವಾಸುದೇವಾಯʼ ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಬೇಕು. ಈ ರೀತಿಯಾಗಿ ಶ್ರೀಕೃಷ್ಣನನ್ನು ಆರಾಧಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶುಭಫಲಗಳು ದೊರೆಯುತ್ತವೆ.


