Asianet Suvarna News Asianet Suvarna News

ಗಣೇಶ ಹಬ್ಬಕ್ಕೆ ಪೂಜೆ ಸಾಮಗ್ರಿ ತರಲು ಬಂದಿದ್ದ ಪೊಲೀಸ್ ಪೇದೆ ಲಾರಿ ಚಕ್ರಕ್ಕೆ ಸಿಲುಕಿ ದಾರುಣ ಸಾವು!

ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹಿಂತಿರುಗುವ ವೇಳೆ ಕಾಂಕ್ರಿಟ್ ಲಾರಿ ಹರಿದು ಪೊಲೀಸ್ ಪೇದೆಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ನಡೆದಿದೆ.

A police constable died in an accident at gadag bhoomareddy circle today rav
Author
First Published Sep 6, 2024, 2:50 PM IST | Last Updated Sep 6, 2024, 2:50 PM IST

ಗದಗ (ಸೆ.6): ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹಿಂತಿರುಗುವ ವೇಳೆ ಕಾಂಕ್ರಿಟ್ ಲಾರಿ ಹರಿದು ಪೊಲೀಸ್ ಪೇದೆಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ನಡೆದಿದೆ.

ರಮೇಶ್ ಡಂಬಳ (45), ಮೃತ ದುರ್ದೈವಿ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್. ನೈಟ್ ಶಿಫ್ಟ್ ಪಾಳಿ ಮುಗಿಸಿ ಬೆಳಗ್ಗೆ ಮನೆಗೆ ಬಂದಿದ್ದ ಪೇದೆ. ಇಂದು ಗಣೇಶ ಹಬ್ಬ ಹಿನ್ನೆಲೆ ಪೂಜೆ ಮಾಡಲು ಮಾರ್ಕೆಟ್‌ನಿಂದ ಹಣ್ಣು, ಹೂ ಪೂಜಾ ಸಾಮಗ್ರಿ ಖರೀದಿಸಲು ಮಾರ್ಕೆಟ್‌ಗೆ ಬಂದಿದ್ದರು. ಪೂಜಾ ಸಾಮಗ್ರಿ ಖರೀದಿಸಿ ಮಾರ್ಕೆಟ್‌ನಿಂದ ಪೊಲೀಸ್ ಕ್ವಾಟ್ರಸ್ ಹೊರಡುವ ವೇಳೆ ಇದೇ ಮಾರ್ಕೆಟ್ ಏರಿಯಾದಿಂದ ಎಪಿಎಂಸಿ ಬಳಿ ಕಾಂಕ್ರಿಟ್ ಲಾರಿ ಹೊರಟಿದೆ. ಲಾರಿ ಓವರ್ ಟೇಕ್ ಮಾಡಲು ಮುಂದಾದಾಗ ನಡೆದಿರುವ ಅಪಘಾತ. ಲಾರಿ ಚಕ್ರ ತಲೆಯ ಮೇಲೆ ಹರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಪೇದೆ.

 

ನಾಟಕ ನೋಡಲು ಹೊರಟವರ ಮೇಲೆ ಹರಿದ ಪಲ್ಸರ್ 200cc ಬೈಕ್; ನಾಲ್ವರು ದುರ್ಮರಣ!

ಅಪಘಾತದಿಂದ ಜನ ಜಮಾಯಿಸಿ ಭೂಮರೆಡ್ಡಿ ಸರ್ಕಲ್ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಗದಗ ಟ್ರಾಫಿಕ್ ಪೊಲೀಸರು ಸ್ಥಳ ಕ್ಲೀಯರ್ ಮಾಡಿದರು. ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

Latest Videos
Follow Us:
Download App:
  • android
  • ios