ಬೆಂಗಳೂರಿನಲ್ಲಿ ಫರ್ನಿಚರ್ ಗೋಡೌನಲ್ಲಿ ಬೆಂಕಿ ದುರಂತ ನಡೆದಿದೆ. ಬಾಣಸವಾಡಿಯ ಕಲ್ಕೆರೆ ಸಮೀಪದ ಗೋಡೌನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಮೊದಲು ಫರ್ನೀಚರ್ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ನಾಲ್ಕು ಇತರ ಗೋಡೌನ್ಗೆ ಬೆಂಕಿ ವ್ಯಾಪಿಸಿದೆ. ನಾಲ್ಕು ಅಗ್ನಿಶಾಮಕ ದಳ ವಾಹನ ಬೆಂಕಿ ನಂದಿಸಲು ಹರಸಾಹಸ ಪಟ್ಟಿದೆ. ಬೆಂಕಿ ಅವಘಡ, ರಾಜ್ಯ ರಾಜಕಾರಣ, ಬಳ್ಳಾರಿ ಗಲಭೆ ಪ್ರಕರಣದಲ್ಲಿನ ಮಹತ್ವದ ಬೆಳವಣಿಗೆ ಸೇರಿದಂತೆ ರಾಜ್ಯದ ಸಮಗ್ರ ಸುದ್ದಿಯ ಲೈವ್ ಅಪ್ಡೇಟ್.
10:35 PM (IST) Jan 10
09:36 PM (IST) Jan 10
09:13 PM (IST) Jan 10
ಕಾರವಾರದಲ್ಲಿ 21 ವರ್ಷದ ಯುವತಿ ರಿಶೆಲ್ ಡಿಸೋಜಾ, ಸಹಪಾಠಿ ಚಿರಾಗ್ ಕೊಠಾರಕರ್ನ ಪ್ರೀತಿಯ ಕಿರುಕುಳಕ್ಕೆ ಬೇಸತ್ತು ಆತ್ಮ೧ಹತ್ಯೆ 'ನನ್ನನ್ನು ಪ್ರೀತಿಸದಿದ್ದರೆ ಸತ್ತು ಹೋಗು' ಎಂದು ಆರೋಪಿ ಪ್ರಚೋದನೆ ನೀಡಿದ್ದರಿಂದ ಮನನೊಂದು ಆಕೆ ಈ ಕೃತ್ಯ ಎಸಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು.
08:37 PM (IST) Jan 10
ಬೆಂಗಳೂರಿನ 550 ಬಡ ಕುಟುಂಬಗಳಿಗೆ ಮನೆ ನೀಡಲು ಬಿಬಿಎಂಪಿ ಹಣ ಜಮೆ ಮಾಡಿದ್ದರೂ, ಫಲಾನುಭವಿಗಳ ಪಟ್ಟಿಯನ್ನು ನೀಡದ ಕಾರಣ ಮನೆ ಹಂಚಿಕೆ ಸ್ಥಗಿತಗೊಂಡಿದೆ. ರಾಜೀವ್ ಗಾಂಧಿ ವಸತಿ ನಿಗಮದ ಪ್ರಕಾರ, ಪಟ್ಟಿ ಬಂದ ತಕ್ಷಣ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ ಮನೆ ಹಂಚಲಾಗುವುದು ಮತ್ತು ಹಣ ಸುರಕ್ಷಿತವಾಗಿದೆ.
08:16 PM (IST) Jan 10
ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ, ಗವಿಸಿದ್ದೇಶ್ವರ ಸ್ವಾಮೀಜಿಗಳು ಸ್ವತಃ ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ್ದಾರೆ. ಶ್ರೀಗಳ ಈ ಸರಳತೆ ಮತ್ತು 'ಕಾಯಕವೇ ಕೈಲಾಸ' ತತ್ವದ ಪಾಲನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
07:34 PM (IST) Jan 10
ರಾಜಶೇಖರ ರೆಡ್ಡಿ ಹತ್ಯೆ ಪ್ರಕರಣ ಮತ್ತು ತಮ್ಮ ಮೇಲಿನ ಹತ್ಯೆ ಸಂಚಿನ ಬಗ್ಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಿಬಿಐ ತನಿಖೆಗೆ ಆಗ್ರಹ. ರಾಜ್ಯ ಸರ್ಕಾರದ ಸಿಐಡಿ ತನಿಖೆ ತಿರಸ್ಕರಿಸಿರುವ ಅವರು, ಜ. 17 ರಂದು ಬೃಹತ್ ಪಾದಯಾತ್ರೆ, ಸ್ಮಶಾನಕ್ಕೆ ಸಂಬಂಧಿಸಿದ ಸ್ಫೋಟಕ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಣೆ!
07:14 PM (IST) Jan 10
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುವುದರಿಂದ, 'ಹಿಜಾಬ್ ಧರಿಸಿದ ಮಗಳು' ಒಂದು ದಿನ ದೇಶದ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.
07:00 PM (IST) Jan 10
ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ 55 ಕಿ.ಮೀ. ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾರ್ಯವು ಕೇವಲ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಾಧನೆಯು ಪಶ್ಚಿಮಘಟ್ಟದ ಮೂಲಕ ರೈಲು ಸಂಚಾರಕ್ಕೆ ಹೊಸ ಚೈತನ್ಯ ನೀಡಲಿದೆ.
06:56 PM (IST) Jan 10
ಪುನೀತ್ ರಾಜ್ಕುಮಾರ್ ಅವರ ಕಪ್ಪು ಬಣ್ಣದ ಕಾರಣಕ್ಕೆ ಮನೆಯಲ್ಲಿ ಬೇಸರಗೊಂಡಿದ್ದ ಘಟನೆಯನ್ನು ಪಾರ್ವತಮ್ಮ ರಾಜ್ಕುಮಾರ್ ಹಳೆಯ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಪೂರ್ಣಿಮಾ ಕ್ರೀಮ್ ಹಚ್ಚುತ್ತಿದ್ದ ಬಗ್ಗೆ ಹಾಗೂ ಡಾ. ರಾಜ್ಕುಮಾರ್ 'ಕಪ್ಪು ಕಸ್ತೂರಿ' ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
06:54 PM (IST) Jan 10
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ಮತ್ತು ಟ್ಯುಟಿಕಾರನ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ. ಮಂಗಳೂರು ರೈಲ್ವೆ ಅಭಿವೃದ್ಧಿ, ರೈಲು ವಿಳಂಬ, ವಂದೇ ಭಾರತ್ ಸೇರಿದಂತೆ ಹೊಸ ರೈಲುಗಳ ಬೇಡಿಕೆ ಮತ್ತು ನಿಲ್ದಾಣ ಅಭಿವೃದ್ಧಿ ಕುರಿತು ಸಂಸದ ಕ್ಯಾ. ಬ್ರಜೇಶ್ ಚೌಟ ಅವರೊಂದಿಗೆ ಚರ್ಚೆ ನಡೆಸಲಾಗಿದೆ.
06:48 PM (IST) Jan 10
ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆ ರಾಜಕೀಯ ತಿರುವು ಪಡೆದಿದೆ. ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಂತ್ರಸ್ತರನ್ನು ಭೇಟಿ ಮಾಡಿ, ಕಾನೂನುಬದ್ಧ ದಾಖಲೆಗಳಿದ್ದರೂ ಮನೆ ಕೆಡವಿರುವುದನ್ನು 'ಬುಲ್ಡೋಜರ್ ಭಾಗ್ಯ' ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
06:48 PM (IST) Jan 10
2015ರ ವಿಶೇಷ ಒಲಂಪಿಕ್ಸ್ನಲ್ಲಿ ಅಮೇರಿಕಾದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ವಿಶೇಷ ಚೇತನ ಪ್ರತಿಭೆ ಆರ್. ಪ್ರಸಾದ್, ಇಂದು ಯಾವುದೇ ಸರ್ಕಾರಿ ಪ್ರೋತ್ಸಾಹವಿಲ್ಲದೆ ಜೀವನ ಸಾಗಿಸಲು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ನರಕಸದೃಶ ಜೀವನ ನಡೆಸುತ್ತಿದ್ದಾರೆ.
06:38 PM (IST) Jan 10
06:35 PM (IST) Jan 10
ಬಿಗ್ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತ ತಲುಪಿದ್ದು, ಕೊನೆಯ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡಗೆ ಮತ್ತು ಈ ಸೀಸನ್ನ ಚಪ್ಪಾಳೆಯನ್ನು ಧ್ರುವಂತ್ಗೆ ನೀಡಿದ್ದು, ಇದು ವೀಕ್ಷಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
06:28 PM (IST) Jan 10
ಕಾರ್ಕಳದ ಪಾಳುಬಿದ್ದ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ನಿರ್ವಹಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿರ್ಮಿತಿ ಕೇಂದ್ರವೇ ಸಂಪೂರ್ಣ ಜವಾಬ್ದಾರಿಯಾಗಿ
06:12 PM (IST) Jan 10
ಬೊಮ್ಮನಹಳ್ಳಿಯ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ ಆತ್ಮ*ಹತ್ಯೆಗೆ ಶರಣಾಗಿದ್ದು, ಕಾಲೇಜು ಉಪನ್ಯಾಸಕರ ನಿರಂತರ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಸಹಪಾಠಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
05:56 PM (IST) Jan 10
ಎರಡು ಕೋಟಿ ಉದ್ಯೋಗ ಕೊಡ್ತಿವಿ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ಇದೀಗ ಮಹಾತ್ಮ ಗಾಂಧಿಯವರನ್ನೇ ದೇಶದಿಂದ ಹೊರಗೆ ಹಾಕುವ ಯತ್ನ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
05:53 PM (IST) Jan 10
05:50 PM (IST) Jan 10
ಬಿಗ್ಬಾಸ್ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಟಾಸ್ಕ್ವೊಂದರಲ್ಲಿ ವಿವಾದ ಭುಗಿಲೆದ್ದಿದೆ. ಕಂಬ ಹಿಡಿದು ನಿಲ್ಲುವ ಟಾಸ್ಕ್ನಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ನಿಯಮ ಉಲ್ಲಂಘಿಸಿ ಮೋಸದಿಂದ ಗೆದ್ದಿದ್ದಾರೆ ಎಂದು ವೀಕ್ಷಕರು ಆರೋಪಿಸುತ್ತಿದ್ದಾರೆ. ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.
05:41 PM (IST) Jan 10
ಮಾಜಿ ಸಿಎಂ ಹೆಚ್ಡಿಕೆ ಅವರು ಸಿಎಂ ಕುರಿತು ನೀಡಿದ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರವಾಗಿದ್ದು, ಅವರ ಬೆಳವಣಿಗೆಯನ್ನು ಸಹಿಸಲಾಗದೆ ಜೆಡಿಎಸ್ ನಾಯಕರು ಅವರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
05:20 PM (IST) Jan 10
ಹಳಿಯಾಳ ತಾಲೂಕಿನ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ ಪೋಷಕರು, ಅಕ್ಕಿ ಮೂಟೆಗಳ ಮೇಲಿನ ಇಲಿ-ಹಲ್ಲಿ ಮಲ, ಕೊಳೆತ ತರಕಾರಿ ಮತ್ತು ಕಳಪೆ ನೈರ್ಮಲ್ಯ ಕಂಡು ಆಘಾತ. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ದೂರು ನೀಡಿದರೆ ಟಿಸಿ ಕೊಡುವ ಬೆದರಿಕೆ ಹಾಕುತ್ತಿರುವ ಬಗ್ಗೆ ತಿಳಿದು, ಪೋಷಕರು ಆಕ್ರೋಶ.
04:51 PM (IST) Jan 10
04:41 PM (IST) Jan 10
ಬೆಂಗಳೂರಿನ ನಟ ಮೋಹನ್ ರಾಜ್ ವಿರುದ್ಧ ವಿಚ್ಛೇದಿತ ಮಹಿಳೆಯೊಬ್ಬರು 36 ಲಕ್ಷ ರೂ. ವಂಚನೆ, ಲಿವಿಂಗ್-ಇನ್ ಬಳಿಕ ಕೈಕೊಟ್ಟ ಆರೋಪ. ಆದರೆ, ಮೋಹನ್ ರಾಜ್ ಈ ಆರೋಪ ನಿರಾಕರಿಸಿದ್ದು, ಮಹಿಳೆಯೇ ತಮಗೆ ಹಣ ನೀಡಬೇಕಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಈ ಪ್ರಕರಣ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲು
04:37 PM (IST) Jan 10
ಅತೃಪ್ತ ಆತ್ಮಗಳು ಮತ್ತು ಪಂಚಭೂತಗಳ ದೋಷದಿಂದ ಜಾಗತಿಕವಾಗಿ ಸಾವು-ನೋವುಗಳು ಹೆಚ್ಚಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜೊತೆಗೆ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಎಂದು ತಿಳಿಸಿದ್ದಾರೆ.
04:28 PM (IST) Jan 10
'ಸತ್ಯ' ಸೀರಿಯಲ್ ಖ್ಯಾತಿಯ ನಟಿ ಅನು ಜನಾರ್ದನ್ ಅವರು 'ಬ್ರೋ' ಪದದ ಬಳಕೆಯನ್ನು ಏಕೆ ನಿಲ್ಲಿಸಿದರು ಎಂಬುದನ್ನು ವಿವರಿಸಿದ್ದಾರೆ. ಸಹನಟ ಒಬ್ಬರು 'ಬ್ರೋ' ಶಬ್ದದ ಅರ್ಥ ಹೇಳಿದ ಮೇಲೆ ಅಲ್ಲಿಂದ ಎಂದಿಗೂ ಬಳಲಿಲ್ಲ ಎಂದಿದ್ದಾರೆ. ಹಾಗಿದ್ರೆ ಏನದು ಅರ್ಥ?
04:13 PM (IST) Jan 10
03:54 PM (IST) Jan 10
Bigg Boss Kannada Season 12 Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರ ಹುಡುಗ ಹೇಗಿರಬೇಕು ಎಂದು ಚರ್ಚೆ ಆಗಿದೆ. ಆ ವೇಳೆ ಅವರು ಉತ್ತರವನ್ನು ಕೂಡ ನೀಡಿದ್ದಾರೆ. ಈಗ ಅವರಿಗೆ ಪ್ರಪೋಸಲ್ ಬಂದಿದೆ.
03:50 PM (IST) Jan 10
03:30 PM (IST) Jan 10
Actress Gowthami Gowda: ನಮ್ಮ ಜೀವನ ಶೈಲಿ, ಆಹಾರ, ಮಾನಸಿಕ ಆರೋಗ್ಯದ ನಿಮಿತ್ತ ಇಂದು ಹೆಣ್ಣು ಮಕ್ಕಳಿಗೆ PCOD, PCOS ಬರುತ್ತಿದೆ. ತಾಯಿಯಾದ ಬಳಿಕ ದಪ್ಪ ಆಗ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರಧಾರಿ ಗೌತಮಿ ಗೌಡ ತಾಯಿಯಾದಮೇಲೆ ದಪ್ಪಗಾಗಿದ್ದರು, ಈಗ ತೂಕ ಇಳಿಸಿಕೊಂಡಿದ್ದಾರೆ.
03:27 PM (IST) Jan 10
ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಎರಡು ಗುಂಪಾಗಿ ಮನೆಯಲ್ಲಿ ಆಟವಾಡಿದವರ ನಡುವೆ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ಚಪ್ಪಾಳೆ ಕೊಡುವುದಕ್ಕೆ ಕಾರಣವೇನು ನೀವೇ ನೋಡಿ..
03:04 PM (IST) Jan 10
03:00 PM (IST) Jan 10
02:58 PM (IST) Jan 10
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ, ಧ್ರುವಂತ್ ಒಮ್ಮೆ ಜಗಳ ಆಡುತ್ತಾರೆ, ಇನ್ನೊಮ್ಮೆ ಸ್ನೇಹದಿಂದ ಕೂಡ ಇರುತ್ತಾರೆ. ಅಶ್ವಿನಿ ಅವರ ಬಗ್ಗೆ ಧ್ರುವಂತ್ ಅವರು ಬಿಗ್ ಬಾಸ್ ಕ್ಯಾಮರಾದ ಮುಂದೆ ಬಂದು ಮಾತನಾಡಿದ್ದುಂಟು. ಈಗ ಗಿಲ್ಲಿ ಮುಂದೆ ಮಾತನಾಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.
02:29 PM (IST) Jan 10
Bigg Boss Kannada Season 12 Episoe: ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಗೆ ನಂದಗೋಕುಲ ಧಾರಾವಾಹಿ ಟೀಂ ಬಂದಿದೆ. ಮಾಧವನ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದರು. ಆ ವೇಳೆ ಮದುವೆ ಬಗ್ಗೆ ಚರ್ಚೆಯಾಗಿದೆ. ಈ ನಡುವೆ ಗಿಲ್ಲಿ ನಟನ ಬಗ್ಗೆ ನಂದಕುಮಾರ್ ಮಾತನಾಡಿದ್ದಾರೆ.
02:16 PM (IST) Jan 10
ಗದಗ ನಗರದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು, ರೈತರು ಆತನಿಗೆ ಕಡಲೆಕಾಯಿ ಹಾರ ಹಾಕಿ ಕಂಬಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ಕುಡಿಯಲು ಹಣವಿಲ್ಲದ ಕಾರಣ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ ಕಳ್ಳತನ
01:33 PM (IST) Jan 10
01:25 PM (IST) Jan 10
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ನೀಡಬೇಕಿದ್ದ ಸುಮಾರು 10 ಕೋಟಿ ರೂಪಾಯಿ ಬಡ್ಡಿ ಹಣವನ್ನು ಪಾವತಿಸದ ಕಾರಣ, ಧಾರವಾಡ ಜಿಲ್ಲಾ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ರೈತರ ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ.
12:45 PM (IST) Jan 10
Actor Yash Toxic Movie: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ರಾಯ ಪಾತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನೋಡಿದ ಅನೇಕರು ಹಸಿಬಿಸಿ ದೃಶ್ಯಗಳ ಬಗ್ಗೆ ಬೇಸರ ಹೊರಹಾಕಿದ್ದರು. ಈಗ ಟಾಕ್ಸಿಕ್ ವಿರುದ್ಧ ದೂರು ದಾಖಲಾಗಿದೆ.
12:40 PM (IST) Jan 10
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ನಿ ಭುವನೇಶ್ವರಿಯನ್ನು ಗುಂಡಿಕ್ಕಿ ಕೊಂದ ಪತಿ ಬಾಲಮುರುಗನ್, ಪೊಲೀಸರ ವಿಚಾರಣೆಯಲ್ಲಿ 3ನೇ ವ್ಯಕ್ತಿಯ ಹಸ್ತಕ್ಷೇಪ ಇರುವುದನ್ನೂ ಬಾಯಿ ಬಿಟ್ಟಿದ್ದಾನೆ. ಈ ಕೊಲೆ ಕೇಸ್ ಗಂಡ ಹೆಂಡತಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದ ಪೊಲೀಸರಿಗೆ ಇದು ಶಾಕ್ ಆಗಿದೆ.
12:31 PM (IST) Jan 10
ಯಶ್ ಅವರ ‘ಟಾಕ್ಸಿಕ್’ ಚಿತ್ರದ ಕಾರ್ ಸೀನ್ನಲ್ಲಿರುವ ನಟಿ ಯಾರು ಎನ್ನುವ ಚರ್ಚೆಗಳು ಆ ಸೀನ್ನಷ್ಟೇ ಬಿಸಿಬಿಸಿಯಾಗಿದೆ. ಈ ನಟಿಯ ಇನ್ಸ್ಟಾಗ್ರಾಮ್ ಐಡಿ ಸೇರಿದಂತೆ ಸೋಷಿಯಲ್ ಮೀಡಿಯಾ ಖಾತೆಗಳನ್ನು ಆಗಲೇ ಪತ್ತೆ ಮಾಡಿದ್ದಾರೆ.