MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಗದಗ: ಜಮೀನಿನಿಂದ ಬೆಳ್ಳಂಬೆಳಗ್ಗೆ ಬೆಳೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಆಸಾಮಿಗೆ ಕಡಲೆ ಹಾರ ಹಾಕಿ ಶಾಸ್ತಿ!

ಗದಗ: ಜಮೀನಿನಿಂದ ಬೆಳ್ಳಂಬೆಳಗ್ಗೆ ಬೆಳೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಆಸಾಮಿಗೆ ಕಡಲೆ ಹಾರ ಹಾಕಿ ಶಾಸ್ತಿ!

ಗದಗ ನಗರದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು, ರೈತರು ಆತನಿಗೆ ಕಡಲೆಕಾಯಿ ಹಾರ ಹಾಕಿ ಕಂಬಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ಕುಡಿಯಲು ಹಣವಿಲ್ಲದ ಕಾರಣ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ ಕಳ್ಳತನ

1 Min read
Author : Gowthami K
Published : Jan 10 2026, 02:16 PM IST
Share this Photo Gallery
  • FB
  • TW
  • Linkdin
  • Whatsapp
15
ಕಡಲೆಕಾಯಿ ಕಳ್ಳತನ
Image Credit : Asianet News

ಕಡಲೆಕಾಯಿ ಕಳ್ಳತನ

ಗದಗ: ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿಗೆ ರೈತರು ಸಾರ್ವಜನಿಕವಾಗಿ ಶಾಸ್ತಿ ನೀಡಿದ ಘಟನೆ ಗದಗ ನಗರ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಗದಗದ ಸರ್ವಜ್ಞ ಸರ್ಕಲ್ ಸಮೀಪ ಈ ಘಟನೆ ನಡೆದಿದ್ದು, ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರ ಕೈಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ.

25
ವಾಯುವಿಹಾರಕ್ಕೆ ಬಂದ ಜನರ ಬಳಿ ಸಿಕ್ಕಿಬಿದ್ದ
Image Credit : Asianet News

ವಾಯುವಿಹಾರಕ್ಕೆ ಬಂದ ಜನರ ಬಳಿ ಸಿಕ್ಕಿಬಿದ್ದ

ಪೊಲೀಸರ ಹಾಗೂ ಸ್ಥಳೀಯರ ಮಾಹಿತಿಯಂತೆ, ಬೆಳಗಿನ ಜಾವವೇ ರೈತರ ಜಮೀನಿಗೆ ನುಗ್ಗಿದ ಖದೀಮನು ಕಡಲೆ ಗಿಡಗಳನ್ನು ಕಿತ್ತುಕೊಂಡು ಎರಡು ಚೀಲದಷ್ಟು ಕಡಲೆಕಾಯಿ ಗಿಡಗಳನ್ನು ದೊಡ್ಡ ಚೀಲದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ. ಈ ವೇಳೆ ವಾಯುವಿಹಾರಕ್ಕೆ ಬಂದ ಜನರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಅವರು ಈ ವಿಷಯವನ್ನು ಜಮೀನಿನ ಮಾಲೀಕರಿಗೆ ತಿಳಿಸಿದ್ದಾರೆ.

Related Articles

Related image1
ಕಡಲೆಕಾಯಿ ಪರಿಷೆ ಮುಗಿತಿದ್ದಂತೆ ಪುಷ್ಪ ಪ್ರದರ್ಶನ, ಹೂವಿನಿಂದ ಕಂಗೊಳಿಸಲಿದೆ ಕಬ್ಬನ್ ಪಾರ್ಕ್
Related image2
ದಿನಾ ಬಡವರ ಬಾದಾಮಿ ಕಡಲೆಕಾಯಿ ತಿನ್ನೋದ್ರಿಂದ ಯಾವೆಲ್ಲಾ ಕಾಯಿಲೆ ಗುಣವಾಗುತ್ತೆ ಗೊತ್ತಾ?
35
ಕಳ್ಳನಿಗೆ ಧರ್ಮದೇಟು
Image Credit : Asianet News

ಕಳ್ಳನಿಗೆ ಧರ್ಮದೇಟು

ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಬಳಿಕ ಆತನಿಗೆ ಕಡಲೆಕಾಯಿ ಹಾರ ಹಾಕಿ, ಸರ್ವಜ್ಞ ಸರ್ಕಲ್ ಬಳಿಯ ಕಂಬಕ್ಕೆ ಕಟ್ಟಿಹಾಕಿ ಶಾಸ್ತಿ ಮಾಡಿರುವುದು ಕಂಡುಬಂದಿತು. ಈ ದೃಶ್ಯ ಕೆಲಕಾಲ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಗೊಂದಲಕ್ಕೆ ಕಾರಣವಾಯಿತು.

45
ಕುಡಿಯಲು ಹಣ ಇರಲಿಲ್ಲ, ಅದಕ್ಕಾಗಿ ಕಳ್ಳತನ
Image Credit : Asianet News

ಕುಡಿಯಲು ಹಣ ಇರಲಿಲ್ಲ, ಅದಕ್ಕಾಗಿ ಕಳ್ಳತನ

ನಂತರ ರೈತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, “ಕುಡಿಯಲು ಹಣ ಇರಲಿಲ್ಲ, ಅದಕ್ಕಾಗಿ ಕಳ್ಳತನ ಮಾಡಿದೆ” ಎಂದು ಕಳ್ಳ ರೈತರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನನ್ನು ಚಿದಾನಂದ ಎಂದು ಗುರುತಿಸಲಾಗಿದ್ದು, ಆತ ಗಂಗಾವತಿಯಿಂದ ರೈಲ್ವೆ ಮೂಲಕ ಗದಗಕ್ಕೆ ಬಂದು ಕಳ್ಳತನ ನಡೆಸಿದ್ದಾನೆ ಎಂಬುದು ತಿಳಿದುಬಂದಿದೆ.

55
ರೈತರ ಶ್ರಮದ ಬೆಳೆ ಕಳ್ಳತನ
Image Credit : Asianet News

ರೈತರ ಶ್ರಮದ ಬೆಳೆ ಕಳ್ಳತನ

ರೈತರ ಶ್ರಮದ ಬೆಳೆಗಳನ್ನು ಕದ್ದ ಘಟನೆಗೆ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕಳ್ಳತನಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಘಟನೆ ಗದಗ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ರೈತರ ಬೆಳೆ ರಕ್ಷಣೆಗೆ ಹೆಚ್ಚಿನ ಭದ್ರತೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ರೈತರು
ಗದಗ
ಸುದ್ದಿ
ಮದ್ಯ
ಕಳ್ಳತನ ಪ್ರಕರಣ

Latest Videos
Recommended Stories
Recommended image1
ರೈತರ ಭೂಸ್ವಾಧೀನ ಹಣಕ್ಕೆ ಬಡ್ಡಿ ಕೊಡದ ಸರ್ಕಾರ; ರಾಷ್ಟ್ರೀಯ ಹೆದ್ದಾರಿ ಕಚೇರಿ ಜಪ್ತಿ ಮಾಡಿದ ಕೋರ್ಟ್!
Recommended image2
ಡಿವೋರ್ಸ್ ನೋಟೀಸ್ ನೀಡಿದ ಹೆಂಡ್ತಿಯನ್ನು ಶೂಟ್ ಮಾಡಿದ ಗಂಡ; 3ನೇ ವ್ಯಕ್ತಿ ಹಸ್ತಕ್ಷೇಪ ಕೇಳಿ ಪೊಲೀಸರೇ ಶಾಕ್!
Recommended image3
ಬೆಂಗಳೂರು ಶಾಕಿಂಗ್: ಧರ್ಮಸ್ಥಳ ಸಂಘಕ್ಕೆ ಸಾಲ ಕಟ್ಟಲು ಎತ್ತಿಟ್ಟ ಹಣದಿಂದ ₹200 ರೂ ತೆಗೆದ ಪತಿ, ಪತ್ನಿ ನೇಣಿಗೆ ಶರಣು!
Related Stories
Recommended image1
ಕಡಲೆಕಾಯಿ ಪರಿಷೆ ಮುಗಿತಿದ್ದಂತೆ ಪುಷ್ಪ ಪ್ರದರ್ಶನ, ಹೂವಿನಿಂದ ಕಂಗೊಳಿಸಲಿದೆ ಕಬ್ಬನ್ ಪಾರ್ಕ್
Recommended image2
ದಿನಾ ಬಡವರ ಬಾದಾಮಿ ಕಡಲೆಕಾಯಿ ತಿನ್ನೋದ್ರಿಂದ ಯಾವೆಲ್ಲಾ ಕಾಯಿಲೆ ಗುಣವಾಗುತ್ತೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved