MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಸಿದ್ದರಾಮಯ್ಯರನ್ನು ಲೀಸ್ ಸಿಎಂ ಎಂದು ಅಣಕಿಸಿದ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಖಡಕ್ ಪ್ರಶ್ನೆ, 'ಡ್ಯಾಡಿ' ಯಾರು?

ಸಿದ್ದರಾಮಯ್ಯರನ್ನು ಲೀಸ್ ಸಿಎಂ ಎಂದು ಅಣಕಿಸಿದ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಖಡಕ್ ಪ್ರಶ್ನೆ, 'ಡ್ಯಾಡಿ' ಯಾರು?

ಮಾಜಿ ಸಿಎಂ  ಹೆಚ್‌ಡಿಕೆ ಅವರು ಸಿಎಂ ಕುರಿತು ನೀಡಿದ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರವಾಗಿದ್ದು,  ಅವರ ಬೆಳವಣಿಗೆಯನ್ನು ಸಹಿಸಲಾಗದೆ ಜೆಡಿಎಸ್ ನಾಯಕರು ಅವರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2 Min read
Author : Gowthami K
Published : Jan 10 2026, 05:41 PM IST
Share this Photo Gallery
  • FB
  • TW
  • Linkdin
  • Whatsapp
16
ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರದ ಪ್ರತಿಬಿಂಬ
Image Credit : our own

ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರದ ಪ್ರತಿಬಿಂಬ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ ಅವರು, ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರದ ಪ್ರತಿಬಿಂಬ ಎಂದು ಆರೋಪಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, “ಭಾರಿ ಕೈಗಾರಿಕಾ ಸಚಿವರು ನಮ್ಮ ಮುಖ್ಯಮಂತ್ರಿಯ ಬಗ್ಗೆ ‘ಲೀಸ್ ಸಿಎಂ’ ಎಂದು ಹೇಳಿಕೆ ನೀಡಿರುವುದು ಅತ್ಯಂತ ಅಸಹ್ಯಕರ. ದೇವೇಗೌಡರು ಹಿಂದೆ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಎಷ್ಟು ಅನ್ಯಾಯ ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ, ಅವರಿಗೂ ಗೊತ್ತಿದೆ” ಎಂದು ಹೇಳಿದರು.

26
ಸಿದ್ದರಾಮಯ್ಯ ರಾಜಕೀಯ ಹೋರಾಟದ ಪ್ರತೀಕ
Image Credit : Social Media

ಸಿದ್ದರಾಮಯ್ಯ ರಾಜಕೀಯ ಹೋರಾಟದ ಪ್ರತೀಕ

ಬೇರೆ ಯಾರ ಮೇಲಾದರೂ ಇಂತಹ ಕುತಂತ್ರಗಳು ನಡೆದಿದ್ದರೆ ಅವರ ರಾಜಕೀಯ ಜೀವನವೇ ಅಂತ್ಯವಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ದೃತಿಗೆಡಲಿಲ್ಲ. ಅವರು ಹೋರಾಟದ ಮೂಲಕ ಮುಂದೆ ಬಂದವರು. ಕಾಂಗ್ರೆಸ್‌ನಲ್ಲಿ ಇದ್ದಾಗ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರು. ಅದಕ್ಕೂ ಮೊದಲು ನಿಮ್ಮ ಪಕ್ಷದಲ್ಲಿದ್ದಾಗಲೂ ಪಕ್ಷದ ನಿಯಮ ಪಾಲಿಸಿದ್ದರು. ಅರಸು ಅವರ ನಂತರ ರಾಜ್ಯದಲ್ಲಿ ದೊಡ್ಡ ಒಬಿಸಿ ನಾಯಕನಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದಾರೆ. ಇದನ್ನು ಸಹಿಸಲಾಗದೆ ನಿರಂತರವಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

Related Articles

Related image1
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟೂಕೊಡಲ್ಲ, ಇಳಿಯೋದು ಇಲ್ಲ; ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ!
Related image2
ಕುಮಾರಸ್ವಾಮಿ ಗಂಭೀರ ರಾಜಕಾರಣಿಯಲ್ಲ, ಆರೋಪಕ್ಕೆ ಉತ್ತರಿಸುವುದಿಲ್ಲ : ಡಿ.ಕೆ.ಶಿವಕುಮಾರ್‌
36
‘ಡ್ಯಾಡಿ ಇಸ್ ಹೋಮ್’ ಟೀಸರ್ ಸಾಲಿಗೆ ವ್ಯಂಗ್ಯ
Image Credit : our own

‘ಡ್ಯಾಡಿ ಇಸ್ ಹೋಮ್’ ಟೀಸರ್ ಸಾಲಿಗೆ ವ್ಯಂಗ್ಯ

ಜೆಡಿಎಸ್ ಯುವ ನಾಯಕರು ಟಾಕ್ಸಿಕ್ ಟೀಸರ್ ನಂತೆ ಏಐ ವಿಡಿಯೋ ಮಾಡಿರುವ ‘ಡ್ಯಾಡಿ ಇಸ್ ಹೋಮ್’ ಎಂಬ ಟೀಸರ್ ಸಾಲಿಗೂ ಪ್ರದೀಪ್ ಈಶ್ವರ್ ತೀವ್ರ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಡ್ಯಾಡಿನಾ? ನಿಖಿಲ್ ಕುಮಾರಸ್ವಾಮಿ ಡ್ಯಾಡಿನಾ? ಎಂಬ ಗೊಂದಲ ಜನರಲ್ಲಿ ಇದೆ. ಕುಮಾರಸ್ವಾಮಿ ಡ್ಯಾಡಿ ಆಗಿದ್ರೆ ದೇವೇಗೌಡರು ಮತ್ತೆ ಸಿಎಂ ರೇಸ್‌ಗೆ ಬರ್ತಾರಾ? ಎಂದು ಪ್ರಶ್ನಿಸಿದರು. “ಡ್ಯಾಡಿ ಇಸ್ ಹೋಮ್ ವಿತ್ ಹೂಮ್? ಅದು ಕಾಂಗ್ರೆಸ್‌ನೊ, ಬಿಜೆಪಿನೊ ಎಂಬುದೇ ಸ್ಪಷ್ಟವಿಲ್ಲ” ಎಂದು ಟೀಕಿಸಿದರು.

46
ಬಿಜೆಪಿ ಜೊತೆಗಿನ ಮೈತ್ರಿಗೆ ಪ್ರಶ್ನೆ
Image Credit : our own

ಬಿಜೆಪಿ ಜೊತೆಗಿನ ಮೈತ್ರಿಗೆ ಪ್ರಶ್ನೆ

2028ರಲ್ಲಿ ಸಿಎಂ ಆಗಬೇಕು ಎಂಬ ಕನಸು ಕಾಣುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಬಿಜೆಪಿ ನಾಯಕರು ಕೈಕಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಪ್ರತಿಯೊಂದು ಫೈಲ್‌ಗೂ ಮೋದಿ, ಅಮಿತ್ ಶಾ, ಸಂತೋಷ್ ಜಿ.ಎಸ್. ಒಪ್ಪಿಗೆ ಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿಯೇ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಇಳಿದಿದ್ದಾರೆ” ಎಂದು ಹೇಳಿದರು. ಲೋಕಲ್ ಚುನಾವಣೆಗಳನ್ನು ಪ್ರತ್ಯೇಕ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಜೊತೆ ಮೈತ್ರಿ ಯಾಕೆ? ಭಯನಾ ಸರ್? ಎಂದು ಪ್ರಶ್ನಿಸಿದರು.

56
ಸಿಎಂ ಆಗಿದ್ದು ಅದೃಷ್ಟದಿಂದ: ಕಟುವಾದ ಟೀಕೆ
Image Credit : our own

ಸಿಎಂ ಆಗಿದ್ದು ಅದೃಷ್ಟದಿಂದ: ಕಟುವಾದ ಟೀಕೆ

ನೀವು ಲಕ್‌ನಿಂದ ಸಿಎಂ ಆದವರು. ನಮ್ಮ ಜಮೀರ್ ಅಣ್ಣ ಕಾರ್ ಡ್ರೈವಿಂಗ್ ಮಾಡಿ, ನೀವೆಲ್ಲ ಬಸ್‌ನಲ್ಲಿ ಹೋಗಿದ್ದೀರಾ. ಆಗ ಕಾಂಗ್ರೆಸ್ ಶಾಸಕರ ಆಶೀರ್ವಾದದಿಂದ ಸಿಎಂ ಆದ್ರಿ. ಆದರೆ ಡಿಕೆ ಶಿವಕುಮಾರ್ ಹಾಗಲ್ಲ. ಅವರು ಸ್ವಂತ ಶಕ್ತಿಯಿಂದ ಬೆಳೆದ ನಾಯಕ ಎಂದು ಹೇಳಿದರು. ನಿಮಗೆ ಒಕ್ಕಲಿಗ ಸಮುದಾಯದ ನಾಯಕ ಬೆಳೆಯುವುದು ಇಷ್ಟವಿಲ್ಲವೇ? ಡಿಕೆ ಶಿವಕುಮಾರ್ ಒಕ್ಕಲಿಗರ ಪರಮೋಚ್ಚ ನಾಯಕನಾಗಿಬಿಡುತ್ತಾರೆ ಎಂಬ ಭಯವೇ? ಒಕ್ಕಲಿಗ ಲೀಡರ್ ಬೆಳೆಯಬಾರ್ದಾ?

66
ಡಿಕೆಶಿ ವಿರುದ್ಧ ನಿರಂತರ ಟಾರ್ಗೆಟ್ ಆರೋಪ
Image Credit : our own

ಡಿಕೆಶಿ ವಿರುದ್ಧ ನಿರಂತರ ಟಾರ್ಗೆಟ್ ಆರೋಪ

ಒಕ್ಕಲಿಗರ ಕಂಟ್ರೋಲ್ ಕುಮಾರಸ್ವಾಮಿ ಮನೆಯಂಗಳದಿಂದ ಡಿಕೆಶಿ ಮನೆಗೆ ಬಂದುಬಿಟ್ಟಿದೆ. ಕರ್ನಾಟಕದ ಒಕ್ಕಲಿಗರು ಒಪ್ಪಿಕೊಂಡಿರುವ ನಾಯಕ ಡಿಕೆ ಶಿವಕುಮಾರ್” ಎಂದು ಹೇಳಿದರು. “ಡಿಕೆ ಶಿವಕುಮಾರ್ ಅವರನ್ನು ಬೆಳಿಗ್ಗೆ-ಸಂಜೆ ಎನ್ನದೆ ನಿರಂತರವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೆ ಬಂದು ಕನಕಪುರದಲ್ಲಿ ಬಂಡೆಯಂತೆ ನಿಂತವರು ಅವರು. ಯಾಕೆ ವಿನಾ ಕಾರಣ ಟಾರ್ಗೆಟ್ ಮಾಡ್ತೀರಾ?” ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸಿದ್ದರಾಮಯ್ಯ
ಪ್ರದೀಪ್ ಈಶ್ವರ್
ಹೆಚ್.ಡಿ. ಕುಮಾರಸ್ವಾಮಿ
ಕರ್ನಾಟಕ ರಾಜಕೀಯ

Latest Videos
Recommended Stories
Recommended image1
ಮಕ್ಕಳ ಅನ್ನದಲ್ಲಿ ಇಲಿ-ಹಲ್ಲಿಗಳ ಮಲ: ಮಕ್ಕಳಿಂದಲೇ ಶೌಚಾಲಯ ಕ್ಲೀನಿಂಗ್; ಇದು ಇಂದಿರಾ ಗಾಂಧಿ ವಸತಿ ಶಾಲೆಯೋ? ನರಕವೋ?
Recommended image2
ಸತ್ತಮೇಲೆ ಸಂಸ್ಕಾರವಾಗದ ಅತೃಪ್ತ ಆತ್ಮಗಳ ಸಂಚಾರ ಹೆಚ್ಚಳ; 2026ರಲ್ಲಿ ಮನುಕುಲಕ್ಕೆ ಆಪತ್ತು-ಕೋಡಿಶ್ರೀ ಭವಿಷ್ಯ
Recommended image3
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟೂಕೊಡಲ್ಲ, ಇಳಿಯೋದು ಇಲ್ಲ; ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ!
Related Stories
Recommended image1
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟೂಕೊಡಲ್ಲ, ಇಳಿಯೋದು ಇಲ್ಲ; ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ!
Recommended image2
ಕುಮಾರಸ್ವಾಮಿ ಗಂಭೀರ ರಾಜಕಾರಣಿಯಲ್ಲ, ಆರೋಪಕ್ಕೆ ಉತ್ತರಿಸುವುದಿಲ್ಲ : ಡಿ.ಕೆ.ಶಿವಕುಮಾರ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved