LIVE NOW
Published : Jan 30, 2026, 07:32 AM ISTUpdated : Jan 30, 2026, 11:04 PM IST

State News Live: ಆಗಾಗ ಪಾರ್ಟಿ ಮಾಡ್ತೇನೆ, ಲಿಂಗ ಹಾಕಿ ಊಟ ಮಾಡಲ್ಲ, ಮಾಂಸಾಹಾರ ಸೇವನೆಗೆ ಡಾಲಿ ಧನಂಜಯ್ ಸ್ಪಷ್ಟನೆ

ಸಾರಾಂಶ

ಬೆಂಗಳೂರು (ಜ.30): ಗೃಹಲಕ್ಷ್ಮಿ ಬಳಿಕ ಅನ್ನಭಾಗ್ಯದ ಹಣವನ್ನೂ ಸರ್ಕಾರ ಬಾಕಿ ಇರಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಜನವರಿಯ ಅಕ್ಕಿಯನ್ನು ಸರ್ಕಾರ ನೀಡಿಲ್ಲ. ಅಕ್ಕಿಗೆ ಮೀಸಲಿಟ್ಟ 667 ಕೋಟಿ ಎಲ್ಲಿ ಹೋಯ್ತು? ಎಂದು ವಿಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ. ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಇರೋದನ್ನು ರಾಜ್ಯದ ಜನರ ಮುಂದೆ ಇರಿಸಿದ್ದ ಬಿಜೆಪಿ ಸದಸ್ಯ ಮಹೇಶ್‌ ಟೆಂಗಿನಕಾಯ ಅವರೇ ಈ ಪ್ರಶ್ನೆ ಮಾಡಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್‌ ಮುನಿಯಪ್ಪ ಕೂಡ ಉತ್ತರ ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:04 PM (IST) Jan 30

ಆಗಾಗ ಪಾರ್ಟಿ ಮಾಡ್ತೇನೆ, ಲಿಂಗ ಹಾಕಿ ಊಟ ಮಾಡಲ್ಲ, ಮಾಂಸಾಹಾರ ಸೇವನೆಗೆ ಡಾಲಿ ಧನಂಜಯ್ ಸ್ಪಷ್ಟನೆ

ಆಗಾಗ ಪಾರ್ಟಿ ಮಾಡ್ತೇನೆ, ಲಿಂಗ ಹಾಕಿ ಊಟ ಮಾಡಲ್ಲ ಎಂದು ನಟ ಡಾಲಿ ಧನಂಜಯ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನ್ ವೆಜ್ ಬಿರಿಯಾಣಿ ತಿನ್ನೋ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದಾರೆ.

 

Read Full Story

10:43 PM (IST) Jan 30

ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು - ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ತಾಳಗುಪ್ಪವರೆಗೆ ವಿಸ್ತರಣೆ

ಸಾಗರದ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ಫೆಬ್ರವರಿ 3 ರಿಂದ 11 ರವರೆಗೆ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.  

Read Full Story

10:30 PM (IST) Jan 30

ಶಿವರಾತ್ರಿ ಪ್ರಯುಕ್ತ, ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ರೈಲು ಯಾವೆಲ್ಲ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ

ಶಿವರಾತ್ರಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಫೆಬ್ರವರಿ 13 ಮತ್ತು 16 ರಂದು ಸಂಚರಿಸಲಿದ್ದು, ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Read Full Story

10:18 PM (IST) Jan 30

ಬೆಂಗಳೂರು - ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸೋ ಮೆಮೋ ರೈಲು ಸಮಯ ಪರಿಷ್ಕರಣೆ

ಪ್ರಯಾಣಿಕರ ಬಹುದಿನಗಳ ಬೇಡಿಕೆ ಮತ್ತು ಸಂಸದ ಎಂ. ಮಲ್ಲೇಶಬಾಬು ಅವರ ಪ್ರಯತ್ನದ ಫಲವಾಗಿ, ಬೆಂಗಳೂರು ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸುವ ಮೆಮೋ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಫೆಬ್ರವರಿ 2ರಿಂದ ಜಾರಿಗೆ ಬರುವ ಈ ಹೊಸ ವೇಳಾಪಟ್ಟಿ .

Read Full Story

10:10 PM (IST) Jan 30

ಬಿಜೆಪಿ-ಜೆಡಿಎಸ್ ಮೈತ್ರಿ ಇದ್ರೂ ಪಕ್ಷದಿಂದ ನನಗೇ ಟಿಕೆಟ್ - ಮಾಜಿ ಶಾಸಕ ಪ್ರೀತಂ ಗೌಡ ವಿಶ್ವಾಸ

ಬಿಜೆಪಿ-ಜೆಡಿಎಸ್ ಮೈತ್ರಿಯಿದ್ದರೂ ತಮಗೆ ಹಾಸನ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವನ್ನು ಮಾಜಿ ಶಾಸಕ ಪ್ರೀತಮ್ ಗೌಡ ವ್ಯಕ್ತಪಡಿಸಿದ್ದಾರೆ. ಕೊಡಗಿನಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ನೋವಾಗದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. 

Read Full Story

09:58 PM (IST) Jan 30

ಸಿಜೆ ರಾಯ್ ಸಾವಿಗೂ ಕೆಲವೇ ಕ್ಷಣ ಮುನ್ನ ನಡೆದಿತ್ತು 3 ಅನುಮಾನಸ್ಪದ ಘಟನೆ, ದೂರು ದಾಖಲು

ಸಿಜೆ ರಾಯ್ ಸಾವಿಗೂ ಕೆಲವೇ ಕ್ಷಣ ಮುನ್ನ ನಡೆದಿತ್ತು 3 ಅನುಮಾನಸ್ಪದ ಘಟನೆ, ಈ ಕುರಿತು ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಈ ಸ್ಫೋಟಕ ಮಾಹಿತಿ ಉಲ್ಲೇಖಿಸಿದ್ದಾರೆ.

Read Full Story

09:45 PM (IST) Jan 30

ರಾಯಚೂರು - ಮರಳು ದಂಧೆಕೋರರಿಗೆ ಡಿಸಿ ನಿತೀಶ್‌ ಕೆ ಖಡಕ್ ವಾರ್ನ್; ವಾಹನ ಸೀಜ್, ಬೀಳುತ್ತೆ ದಂಡ!

ರಾಯಚೂರು ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ನಿತೀಶ್ ಕೆ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ.

Read Full Story

09:19 PM (IST) Jan 30

CJ Roy Death - ಈಗ ನಾನು ಮಾತಾಡಿದ್ರೆ ರಾಜಕೀಯ ಆಗುತ್ತೆ - ಐಟಿ ಕಿರುಕುಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಗರಂ!

CJ Roy Death ಐಟಿ ದಾಳಿಯ ಸಂದರ್ಭದಲ್ಲಿ ಉದ್ಯಮಿ ಸಿ.ಜೆ. ರಾಯ್ ಆತ್ಮ೧ಹತ್ಯೆ ಮಾಡಿಕೊಂಡ ಘಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಐದು ನಿಮಿಷ ಸಮಯ ಕೇಳಿ ರಾಯ್ ಪ್ರಾಣ ಬಿಟ್ಟಿದ್ದು, ಅಧಿಕಾರಿಗಳ ಕಿರುಕುಳವನ್ನು ಡಿಕೆಶಿ ಖಂಡಿಸಿದ್ದಾರೆ. 

Read Full Story

09:02 PM (IST) Jan 30

ತಮ್ಮ ನಾಳೆ ಸಿಗುತ್ತೇನೆ ಅಂದಿದ್ದ ಇಂದು ಹೀಗಾಯ್ತ, ಸಿಜೆ ರಾಯ್ ಸಾವಿಗೆ ಸಹೋದರ ವೈಟ್‌ಗೋಲ್ಡ್ ಎಂಡಿ ಸಿಜೆ ಬಾಬು ಕಂಬನಿ

ಕಾನ್ಫಿಡೆಂಟ್ ಗ್ರೂಪ್‌ನ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಅನಿರೀಕ್ಷಿತ ನಿಧನದ ನಂತರ, ಅವರ ಸಹೋದರ ಸಿ.ಜೆ. ಬಾಬು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನೀಡಿದ ನಿರಂತರ ಮಾನಸಿಕ ಹಿಂಸೆ ಮತ್ತು ಒತ್ತಡವೇ ತಮ್ಮನ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಿದ್ದಾರೆ.

Read Full Story

08:53 PM (IST) Jan 30

ಚಿಕ್ಕಮಗಳೂರಿನ ಅಂತರಘಟ್ಟೆ ಜಾತ್ರೆಯಲ್ಲಿ ದುರಂತ - ಸಿಪಿಐ ಮೈಮೇಲೆ ಹರಿದ ಎತ್ತಿನಗಾಡಿ, ಪ್ರಾಣಾಪಾಯದಿಂದ ಪಾರು!

ಚಿಕ್ಕಮಗಳೂರಿನ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಎತ್ತಿನಗಾಡಿ ಹರಿದು ಅವಘಡ ಸಂಭವಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

08:49 PM (IST) Jan 30

ಬಿಗ್ ಬಾಸ್ ವಿನ್ನರ್‌ಗೆ ₹50 ಲಕ್ಷ ನೀಡಿ 201 ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹1 ಕೋಟಿ ಘೋಷಿಸಿದ್ದ ಸಿಜೆ ರಾಯ್

ಸಿಜೆ ರಾಯ್ ಅವರದ್ದು ಅತ್ಯಂತ ಐಷಾರಾಮಿ ಬದುಕಾಗಿತ್ತು. ಸಾಮಾಜಿಕ ಕಾರ್ಯಗಳಿಗೆ ಹಿಂದೇಟು ಹಾಕುತ್ತಿರಲಿಲ್ಲ. ಬಿಗ್ ಬಾಸ್ ವಿನ್ನರ್‌ಗೆ ₹50 ಲಕ್ಷ ನೀಡಿ 201 ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹1 ಕೋಟಿ ಘೋಷಿಸಿದ್ದ ಸಿಜೆ ರಾಯ್.

 

Read Full Story

08:47 PM (IST) Jan 30

CJ Roy Death - ಕೋಟಿ ಇದ್ದರೂ ನೆಮ್ಮದಿಯಿಲ್ಲ; ಶ್ರೀಮಂತ ಉದ್ಯಮಿಗಳ ಆತ್ಮ*ಹತ್ಯೆಯ ಹಿಂದಿನ ಕಹಿ ಸತ್ಯ ಏನು?

CJ Roy Death Reason: ಐಟಿ ದಾಳಿಗೆ ಹೆದರಿ, ಕಾನ್ಫಿಡೆಂಟ್‌ ಗ್ರುಪ್‌ ಮಾಲೀಕ ಸಿಜೆ ರಾಯ್‌ ಅವರು ಗನ್‌ನಿಂದ ಶೂಟ್‌ ಮಾಡಿಕೊಂಡು ನಿಧನರಾಗಿದ್ದಾರೆ. ಶ್ರೀಮಂತರು ಈ ರೀತಿ ಮಾಡುವುದು ಯಾಕೆ? ಇದಕ್ಕೆ ಕಾರಣ ಏನಿರಬಹುದು?

 

Read Full Story

08:31 PM (IST) Jan 30

ಮಂಡ್ಯ - ಕಸಾಯಿಖಾನೆಗೆ ಸಾಗಿಸುತ್ತಿದ್ದ ಕಾರು ಪಲ್ಟಿ; ಹತ್ತು ಕರುಗಳ ದಾರುಣ ಸಾವು, ಬಾಯಿಗೆ ಬಟ್ಟೆ ಕಟ್ಟಿ ಸಾಗಿಸುತ್ತಿದ್ದ ಕಟುಕರು!

ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿ ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ಸ್ಕಾರ್ಪಿಯೋ ಕಾರು ಪಲ್ಟಿಯಾಗಿ 10ಕ್ಕೂ ಹೆಚ್ಚು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದು ಕಾರಿನಲ್ಲಿ 35 ಕರುಗಳನ್ನು ಬಾಯಿಗೆ ಬಟ್ಟೆ ಕಟ್ಟಿ ಅಮಾನವೀಯವಾಗಿ ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Read Full Story

08:27 PM (IST) Jan 30

ಬಳುಕುವ ಬಳ್ಳಿಯಂತಿರೋ CJ Roy ಮಗಳು ಯಾರು? ಅಷ್ಟೆಲ್ಲ ಫಾಲೋವರ್ಸ್‌ ಇರೋದ್ಯಾಕೆ?

Who is CJ Roy Daughter Ria: ಐಟಿ ದಾಳಿಗೆ ಬೇಸತ್ತು, ದುರಂತ ಅಂತ್ಯ ಕಂಡ ಕಾನ್ಫಿಡೆಂಟ್‌ ಗ್ರುಪ್‌ ಮಾಲೀಕ ಸಿಜೆ ರಾಯ್‌ ಅವರಿಗೆ ಓರ್ವ ಮಗಳು, ಮಗ ಇದ್ದಾರೆ. ಅನೇಕರು ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕುತೂಹಲ ಹೊಂದಿದ್ದಾರೆ. 

Read Full Story

08:05 PM (IST) Jan 30

ಲಕ್ಕುಂಡಿ ಉತ್ಖನನ ನೇತೃತ್ವ ವಹಿಸಿದ್ದ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಟಿ.ಎಂ. ಕೇಶವ್ ನಿಧನ

ಗದಗ ತಾಲೂಕಿನ ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ, ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ್ (74) ಅವರು ನಿಧನರಾಗಿದ್ದಾರೆ. ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ತಮ್ಮ ನಿವಾಸದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Read Full Story

08:05 PM (IST) Jan 30

CJ Roy Death - ತಿಂಗಳುಗಳ ಹಿಂದೆ, ವಿಶ್ವದಲ್ಲೇ ಅಪರೂಪದ ರೋಲ್ಸ್‌ ರಾಯ್ಸ್‌ ಖರೀದಿಸಿದ್ದ ರಾಯ್;‌ ಅಷ್ಟು ಹುಚ್ಚು ಯಾಕೆ?

CJ Roy Death Reason: ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ, ಅಧ್ಯಕ್ಷ ಸಿ.ಜೆ. ರಾಯ್ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದವರು. ಒಂದು ಕಾಲದಲ್ಲಿ ಅವರ ಮನೆಯಲ್ಲಿ ಕಾರ್‌ ಕೂಡ ಇರಲಿಲ್ಲ.

 

Read Full Story

08:02 PM (IST) Jan 30

ತಲೆಯಲ್ಲಿ ಹುಳು ಆಗುತ್ತಾ? ಎಡಗಾಲು ಎಡಗೈಗೆ ಹಠಾತ್ ಪಿಟ್ಸ್ - ಸಿಟಿಸ್ಕ್ಯಾನ್ ರಿಪೋರ್ಟ್ ನೋಡಿ ರೈತನಿಗೆ ಆಘಾತ

ನಮ್ಮಲ್ಲಿ ಬಹುತೇಕರು ದೈನಂದಿನ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ವಿಶೇಷವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿರುವವರು ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು  ಆದರೆ ಹೀಗೆ ಮಾಡುವುದರಿಂದ ಎಷ್ಟು ದೊಡ್ಡ ಹಾನಿ ಸಂಭವಿಸಬಹುದು ಎಂಬ ಬಗ್ಗೆ ವೈದ್ಯರೊಬ್ಬರು ವೀಡಿಯೋ ಮಾಡಿ ಹೇಳಿಕೊಂಡಿದ್ದಾರೆ.

Read Full Story

07:39 PM (IST) Jan 30

ಅಲ್ಲಿ ಲವರ್‌ ಅಕ್ಕ, ಇಲ್ಲಿ ತಮ್ಮನ ಲವರ್ - ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು

ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಮತ್ತು ಝೀ ಕನ್ನಡದ 'ಕರ್ಣ' ಧಾರಾವಾಹಿಗಳು ತ್ರಿಕೋನ ಪ್ರೇಮಕಥೆಯ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿವೆ. ಎರಡೂ ಸೀರಿಯಲ್‌ಗಳಲ್ಲಿ ನಾಯಕ ತಾನು ಪ್ರೀತಿಸಿದ ಯುವತಿಯ ಬದಲಾಗಿ ಬೇರೊಬ್ಬರನ್ನು ಮದುವೆಯಾಗುವ ಸನ್ನಿವೇಶವಿದ್ದು, ಮುಂದಿನ ಕಥಾಹಂದರ ಕುತೂಹಲ ಕೆರಳಿಸಿದೆ.
Read Full Story

07:33 PM (IST) Jan 30

CJ Roy Death - ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್‌ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!

Cj Roy Death: ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ, ರಿಯಲ್‌ ಎಸ್ಟೇಟ್‌ ಉದ್ಯಮಿ ಸಿಜೆ ರಾಯ್‌ ಅವರು ಶೂಟ್‌ ಮಾಡಿಕೊಂಡು ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಇವರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸೈಟ್‌ ನೀಡಿದ್ದರಂತೆ.

 

Read Full Story

07:31 PM (IST) Jan 30

ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ - ಆ ಒಂದು ರೂಂ ಓಪನ್ ಮಾಡುವಂತೆ ಐಟಿ ಅಧಿಕಾರಿಗಳ ಒತ್ತಾಯ

ಉದ್ಯಮಿ ಸಿ.ಜೆ. ರಾಯ್ ಅವರು ಐಟಿ ದಾಳಿಯ ವೇಳೆ ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಭಾವಿ ರಾಜಕಾರಣಿಗೆ ಸೇರಿದ ಮಹತ್ವದ ದಾಖಲೆಗಳಿದ್ದ ಕೊಠಡಿಯನ್ನು ತೆರೆಯಲು ನಿರಾಕರಿಸಿದ್ದರಿಂದ ಉಂಟಾದ ಒತ್ತಡವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. 

Read Full Story

07:30 PM (IST) Jan 30

ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!

ಕಾವ್ಯಾ ಗೌಡ ಅವರು ಮಾಡಿರುವ ಈ ಪೋಸ್ಟ್ ಗೆ ಕಾರಣ ಪ್ರೇಮಾ ಅವರು ಮಾದ್ಯಮದ ಮುಂದೆ ನೀಡಿರುವ ಹೇಳಿಕೆಗಳು ವೈರಲ್ ಆಗಿರೋದು. ಕೆಲವರು ಪ್ರೇಮಾ ಪರವಾಗಿ ಮಾತನಾಡಿ ಕಾಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಕಾವ್ಯಾ ಗೌಡ ಅವರು ಈ ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಅದೇನು ಹೇಳಿದ್ದಾರೆ ನೋಡಿ..

Read Full Story

07:11 PM (IST) Jan 30

ನಾನಿಲ್ಲ ಅಂದ್ರೆ ಏನ್‌ ಮಾಡ್ತೀಯಾ? 2 ತಿಂಗಳ ಹಿಂದಷ್ಟೇ Dr CJ Roy ಕೇಳಿದ್ದ ಪ್ರಶ್ನೆಗೆ ಪತ್ನಿಯ ಅಚ್ಚರಿ ಉತ್ತರ ಏನು?

confident group owner cj roy: ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ, ಸಾವಿರಾರು ಕೋಟಿ ರೂಪಾಯಿ ಒಡೆಯ ಸಿಜೆ ರಾಯ್‌ ಅವರು ಶೂಟ್‌ ಮಾಡಿಕೊಂಡು ನಿಧನರಾಗಿದ್ದಾರೆ. ಐಟಿ ದಾಳಿಗೆ ಹೆದರಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪದೇ ಪದೇ ಇವರ ಉದ್ಯಮದ ಮೇಲೆ ಐಟಿ ದಾಳಿ ಆಗುತ್ತಲೇ ಇತ್ತು. 

 

Read Full Story

06:57 PM (IST) Jan 30

ತೆರಿಗೆ ದಾಳಿಗೆ ಬೇಸತ್ರಾ ಸಿ.ಜೆ.ರಾಯ್, ಕಾಫಿ ಡೇ ಸಿದ್ಧಾರ್ಥ್ ಸಾವು ಮುನ್ನೆಲೆಗೆ

ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್, ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು, ಈ ಹಿಂದೆ ಇದೇ ರೀತಿ ಐಟಿ ದಾಳಿಗೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡ ವಿ.ಜಿ. ಸಿದ್ದಾರ್ಥ್ ಹೆಗಡೆಯವರ ದುರಂತವನ್ನು ನೆನಪಿಸಿದೆ.

Read Full Story

06:49 PM (IST) Jan 30

ಆಟೋ ರಿಕ್ಷಾ ಚಾಲಕನಿಂದ ಕಾನ್ಫಿಡೆಂಟ್ ಆಗಿ ರಿಯಲ್ ಎಸ್ಟೇಟ್‌ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್, ಇನ್ನು ನೆನಪು ಮಾತ್ರ!

ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಡಾ. ಸಿ.ಜೆ. ರಾಯ್, ತೆರಿಗೆ ವಂಚನೆ ಆರೋಪದ ಮೇಲೆ ನಡೆದ ಐಟಿ ದಾಳಿಯ ನಂತರ ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆಟೋ ಚಾಲಕನಾಗಿ ಜೀವನ ಆರಂಭಿಸಿ ಸಾವಿರಾರು ಕೋಟಿ ಮೌಲ್ಯದ ಬಹುರಾಷ್ಟ್ರೀಯ ಸಾಮ್ರಾಜ್ಯ ಕಟ್ಟಿದ ಅವರ ಯಶಸ್ಸಿನ ಪಯಣ ಇಲ್ಲಿದೆ.

Read Full Story

06:47 PM (IST) Jan 30

ತುಂಗಾಭದ್ರಾ ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ ಹತ್ತು ಕೋಟಿ ವಾಪಸ್ ಪಡೆದ ಸರ್ಕಾರ? ಜನಾರ್ದನ ರೆಡ್ಡಿ ಆಕ್ರೋಶ

ತುಂಗಾಭದ್ರಾ ಡ್ಯಾಂ ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ 10 ಕೋಟಿ ರೂ. ಅನುದಾನವನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಈ ನಿರ್ಧಾರದಿಂದ ರೈತರಿಗೆ ಅನ್ಯಾಯವಾಗಿದ್ದು, ಹಣ ಬಿಡುಗಡೆ ಮಾಡದಿದ್ದರೆ ನಾಲ್ಕು ಜಿಲ್ಲೆಗಳ ರೈತರು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Read Full Story

06:27 PM (IST) Jan 30

ಎದೆಗೆ ಗುಂಡಿಟ್ಟು ಉದ್ಯಮಿ ಸಿಜೆ ರಾಯ್ ದುರಂತ ಅಂತ್ಯ, ಸಾವಿನ ಹಿಂದೆ ಹಲವು ಅನುಮಾನ

ಎದೆಗೆ ಗುಂಡಿಟ್ಟು ಉದ್ಯಮಿ ಸಿಜೆ ರಾಯ್ ದುರಂತ ಅಂತ್ಯ, ಸಾವಿನ ಹಿಂದೆ ಹಲವು ಅನುಮಾನ ಮೂಡಿಸಿದೆ. ಅತೀ ಶ್ರೀಮಂತ ಉದ್ಯಮಿಗೆ ಸವಾಲುಗಳು, ಆರೋಪಗಳು ಮೊದಲಲ್ಲ, ಐಟಿ ದಾಳಿಯೂ ಹೊಸದಲ್ಲ. ಆದರೆ ದಿಢೀರ್ ಗುಂಡು ಹಾರಿಸಿ ಅಂತ್ಯಕಂಡಿರುವ ಹಿಂದೆ ಅನುಮಾನ ಬಲವಾಗುತ್ತಿದೆ.

 

Read Full Story

06:08 PM (IST) Jan 30

ಗದಗ ವೀರಭದ್ರೇಶ್ವರ ಸನ್ನಿಧಿಯಲ್ಲಿ ಬುಸುಗುಟ್ಟಿದ 'ಜಟಾಧಾರಿ' ಸರ್ಪ - ನೋಡಿ ಮೂತ್ರ ಮಾಡಿಕೊಂಡ ಭಕ್ತರು!

ಗದಗಿನ ಐತಿಹಾಸಿಕ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ನಡೆಯುತ್ತಿದ್ದಾಗ ದೈತ್ಯಾಕಾರದ ಸರ್ಪವೊಂದು ಪ್ರತ್ಯಕ್ಷವಾಗಿದೆ. ತಲೆಯ ಮೇಲೆ ಕೂದಲು ಇದೆ ಎನ್ನಲಾದ ಈ ಸರ್ಪವು, ದೇವಸ್ಥಾನದ ಆವರಣದಲ್ಲಿ ಅಡಗಿರುವ ನಿಧಿಯನ್ನು ಕಾಯುತ್ತಿದೆ ಎಂಬ ಚರ್ಚೆ ಸ್ಥಳೀಯರಲ್ಲಿ ಆರಂಭವಾಗಿದೆ.
Read Full Story

05:41 PM (IST) Jan 30

ಐಟಿ ದಾಳಿಗೆ ಬೆದರಿ ಗುಂಡು ಹಾರಿಸಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮ**ತ್ಯೆ ಯತ್ನ

ಐಟಿ ದಾಳಿಗೆ ಬೆದರಿ ಗುಂಡು ಹಾರಿಸಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮ**ತ್ಯೆ ಯತ್ನ ಘಟನೆ ನಡೆದಿದೆ. ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಗದು ಬಹುಮಾನ ನೀಡುತ್ತಿದ್ದ ಸಿಜೆ ರಾಯ್ ಪರಿಸ್ಥಿತಿ ಗಂಬೀರ.

Read Full Story

05:39 PM (IST) Jan 30

3 ಮದುವೆಯಾಗಿ ಲಕ್ಷ-ಲಕ್ಷ ಲೂಟಿ; ಬ್ಯೂಟಿ ಸುಧಾರಣಿ ಮೇಲೆ ಕೇಸ್ ಜಡಿದ ಇಬ್ಬರು ಗಂಡಂದಿರು!

ದೊಡ್ಡಬಳ್ಳಾಪುರದ ಸುಧಾರಾಣಿ ಎಂಬ ಮಹಿಳೆ ಮೂರು ಮದುವೆಯಾಗಿ ಇಬ್ಬರು ಗಂಡಂದಿರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ. ಮೊದಲ ಗಂಡನನ್ನು ಬಿಟ್ಟು, ಎರಡನೇ ಗಂಡನಿಂದ ಹಣ ದೋಚಿ, ಇದೀಗ ಮೂರನೇ ವ್ಯಕ್ತಿಯೊಂದಿಗೆ ಸಂಸಾರ ನಡೆಸುತ್ತಿದ್ದಾಳೆ.  

Read Full Story

05:30 PM (IST) Jan 30

ತಮಗೆ ದಿನವೂ ಅಡುಗೆ ಮಾಡಿ ಬಡಿಸುವ ಅಡುಗೆ ಕೆಲಸದಾಕೆಗೆ ಸರ್‌ಫ್ರೈಸ್ ನೀಡಿದ ಹಾಸ್ಟೆಲ್ ಮಕ್ಕಳು

ಪಿಜಿಯಲ್ಲಿ ವಾಸಿಸುವ ಹುಡುಗಿಯರು ತಮ್ಮ ಅಡುಗೆ ಕೆಲಸದ ಮಹಿಳೆಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನಾಂಕವೇ ತಿಳಿಯದ ಆ ಮಹಿಳೆಗೆ ಕೇಕ್ ಕತ್ತರಿಸಿ, ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

05:27 PM (IST) Jan 30

KSRTC, BMTC ಬಸ್‌ಗಳಲ್ಲಿ ಇನ್ಮುಂದೆ ಗುಟ್ಕಾ ಜಾಹೀರಾತು ಬ್ಯಾನ್ - ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ

ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಎಸ್‌ಆರ್‌ಟಿಸಿ ಬಿಎಂಟಿಸಿ ಬಸ್‌ಗಳ ಮೇಲೆ ಗುಟ್ಕಾ ತಂಬಾಕು ಉತ್ಪನ್ನಗಳ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಅಳವಡಿಸಿರುವ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕಲು ಸೂಚಿಸಿದೆ.

Read Full Story

04:59 PM (IST) Jan 30

BIFFes Row - ಪ್ಯಾಲೆಸ್ಟೈನ್ ಸಿನಿಮಾ ಪ್ರದರ್ಶನಕ್ಕೆ ಸಚಿವ ಲಾಡ್ ಸಾಥ್; ಪ್ರಕಾಶ್ ರಾಜ್ ಪರ ಬ್ಯಾಟಿಂಗ್!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೈನ್ ಸಿನಿಮಾಗಳ ಪ್ರದರ್ಶನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್ ಹೇಳಿಕೆಯನ್ನು ಬೆಂಬಲಿಸಿದ ಅವರು, ಮಾಜಿ ಪ್ರಧಾನಿ ವಾಜಪೇಯಿ ಅವರ ನಿಲುವನ್ನು ಸ್ಮರಿಸಿದರು.

Read Full Story

04:56 PM (IST) Jan 30

ಬೆಂಗಳೂರಲ್ಲಿ ಸಾಕು ನಾಯಿ ಡೆಡ್ಲಿ ಅಟ್ಯಾಕ್, ಮಹಿಳೆಯ ಮುಖ ವಿರೋಪ, ಕತ್ತು-ತಲೆ ಭಾಗಕ್ಕೆ 50ಕ್ಕೂ ಹೆಚ್ಚು ಹೊಲಿಗೆ!

ಬೆಂಗಳೂರಿನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದೆ.  ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ನಾಯಿಯ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಈ ಘಟನೆಯು ನಗರದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆ,ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.

Read Full Story

04:46 PM (IST) Jan 30

ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

ಸಾಗರದ ಕ್ರಿಕೆಟ್‌ ಕ್ಲಬ್‌ನ ಶ್ರೀ ನಾಗೇಂದ್ರ ಕೆ ಪಂಡಿತ್ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಸುಮಾರು 50 ವರ್ಷಗಳ ಕ್ರಿಕೆಟ್ ಅನುಭವ ಹೊಂದಿರುವ ಅವರು ಕ್ರಿಕೆಟ್ ಅಕಾಡೆಮಿ ಮೂಲಕ ಯುವ ಪ್ರತಿಭೆಗಳನ್ನು ಪೋಷಿಸುತ್ತಿದ್ದಾರೆ.

Read Full Story

04:36 PM (IST) Jan 30

2023, 2024, 2025ರಲ್ಲೂ ಲವ್‌ ಬ್ರೇಕಪ್;‌ ಆಕೃತಿ ಬಲೆಗೆ ಬಿದ್ದಿದ್ದ ಕನ್ನಡ Bigg Boss ಸ್ಪರ್ಧಿ ಯಾರು?

ರೋಡೀಸ್ ಮತ್ತು ಸ್ಪ್ಲಿಟ್ಸ್‌ವಿಲ್ಲಾ ರಿಯಾಲಿಟಿ ಶೋ ಸ್ಪರ್ಧಿ ಆಕೃತಿ ನೇಗಿ, ಕಳೆದ ವರ್ಷ 'ರೈಸ್ ಅಂಡ್ ಫಾಲ್' (Rise and Fall) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ಅಂಶುಮತ್ ಎನ್ನುವ ಸ್ಪರ್ಧಿ ಜೊತೆ ಲವ್‌ನಲ್ಲಿ ಇರೋದಾಗಿ ಹೇಳಿದ್ದರು. ಈಗ ಇವರಿಬ್ಬರು ಬೇರೆ ಬೇರೆ ಆಗಿದ್ದಾರೆ.

 

Read Full Story

04:34 PM (IST) Jan 30

ವೈರಲ್ ಆದ ಪಿಜ್ಜಾ ಡೆಲಿವರಿ ಬಾಯ್ ವೀಡಿಯೋದ ಅಸಲಿಯತ್ತು ಇದು - ನೆಟ್ಟಿಗರಿಂದ ತೀವ್ರ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಯುವತಿಯೊಬ್ಬಳು ತನ್ನ ಕ್ಲಾಸ್‌ಮೇಟ್ ಪಿಜ್ಜಾ ಡೆಲಿವರಿ ಬಾಯ್ ಆಗಿದ್ದಕ್ಕೆ ಅವಮಾನಿಸುತ್ತಾಳೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಆ ವೀಡಿಯೋದ ಅಸಲಿಯತ್ತು ಬಯಲಾಗಿದ್ದು, ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

04:18 PM (IST) Jan 30

ಮೈಸೂರು - ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ ಮೈಸೂರು ಪೊಲೀಸರು! ಕೆಮಿಕಲ್ ಫ್ಯಾಕ್ಟರಿ ಮೇಲೆ ದಾಳಿ

ಮೈಸೂರಿನಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್‌ಸಿಬಿ ದಾಳಿಯ ನಂತರ, ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳನ್ನು ಶ್ವಾನದಳ ಮತ್ತು ಸೋಕೊ ತಂಡಗಳ ಸಹಾಯದಿಂದ ತಪಾಸಣೆ ಮಾಡಲಾಗುತ್ತಿದೆ.

Read Full Story

04:12 PM (IST) Jan 30

'50% ಕಾರ್ಪೊರೇಟ್ ಮಹಿಳಾ ಉದ್ಯೋಗಿಗಳು ವಿವಾಹೇತರ ಅಕ್ರಮ ಸಂಬಂಧ ಹೊಂದಿರುತ್ತಾರೆ!?' ಹೀಗಾಗಲು ಕಾರಣವೇನು?

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕಾರ್ಪೊರೇಟ್ ಮಹಿಳಾ ಉದ್ಯೋಗಿಯೊಬ್ಬರು, ಕಾರ್ಪೊರೇಟ್ ಉದ್ಯೋಗಿಗಳ ಪೈಕಿ ಶೇಕಡ 50ರಷ್ಟು ಮಂದಿ ವಿವಾಹೇತರ ಅಕ್ರಮ ಸಂಬಂಧ ಹೊಂದಿರುತ್ತಾರೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಷ್ಟಕ್ಕೂ ಹೀಗಾಗಲು ಕಾರಣವೇನು? ನೋಡೋಣ ಬನ್ನಿ

 

Read Full Story

03:56 PM (IST) Jan 30

500ಕ್ಕೆ 93 ಮಾರ್ಕ್ಸ್ ತೆಗೆದಿದ್ದೀ, ನೀನು ಪಾಸ್ ಆಗ್ತೀಯಾ, ಅವಮಾನಿಸಿದ ಶಿಕ್ಷಣಾಧಿಕಾರಿ, ಮನನೊಂದ ವಿದ್ಯಾರ್ಥಿನಿ ಆತ್ಮ*ಹತ್ಯೆ!

ಚಿಕ್ಕಮಗಳೂರಿನನಲ್ಲಿ, ಕಡಿಮೆ ಅಂಕ ಪಡೆದಿದ್ದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನಿಂದನೆಗೆ ಒಳಗಾದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯು ವಿದ್ಯಾರ್ಥಿಗಳ ಮೇಲಿನ ಅಂಕಗಳ ಒತ್ತಡ , ಅಧಿಕಾರಿಗಳ ವರ್ತನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read Full Story

03:49 PM (IST) Jan 30

Amruthadhaare Serial - ಹಾಸಿಗೆ ಒದ್ದೆ ಮಾಡ್ಕೊಂಡ ಅಪ್ಪು; ಸಿಂಹದಂತೆ ಘರ್ಜಿಸಿದ ಗೌತಮ್;‌ ಹಳೇ ಕಥೆ ಟ್ರ್ಯಾಕ್‌ಗೆ ಬಂತು

Amruthadhaare Kannada Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಈಗ ಹೊಸ ಜೀವನವನ್ನು ಶುರು ಮಾಡಿದ್ದಾರೆ. ಈ ನಡುವೆ ಜಯದೇವ್‌ನಿಂದ ಇವರ ಮಗ ಆಕಾಶ್‌ ಹೆದರಿಕೆಯಿಂದ ಬದುಕುತ್ತಿದ್ದಾನೆ. ಈಗ ಮಗನಿಗೋಸ್ಕರ ಗೌತಮ್‌ ಸಿಂಹದಂತೆ ಘರ್ಜನೆ ಮಾಡೋದು ಫಿಕ್ಸ್‌ ಎಂದುಕೊಳ್ಳಿ.

 

Read Full Story

More Trending News