Published : Oct 22, 2025, 06:46 AM ISTUpdated : Oct 22, 2025, 10:28 PM IST

Karnataka News Live: ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ, ನಾಳೆ ಮೊದಲ ಸಭೆ

ಸಾರಾಂಶ

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್ಎಸ್‌ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಕಲಬುರಗಿ ಹೈಕೋರ್ಟ್‌ ಪೀಠದ ಸೂಚನೆಯಂತೆ ಆರ್‌ಎಸ್‌ಎಸ್‌ ಜಿಲ್ಲಾ ಚಾಲಕ ಅಶೋಕ ಪಾಟೀಲ್, ಸಂಘದ ಮುಖಂಡರು, ಬೌದ್ಧಿಕ ಪ್ರಮುಖ ಕೃಷ್ಣಾ ಜೋಕಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಖುದ್ದು ಭೇಟಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಆರ್‌ಎಸ್ಎಸ್‌ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಭೀಮ್ ಆರ್ಮಿ ಸಂಘಟನೆಯವರು ನ.2ರಂದೇ ಚಿತ್ತಾಪುರದಲ್ಲಿ ತಮಗೂ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಭೀಮ್ ಆರ್ಮಿ ಭಾರತ ಐಕ್ರಾ ಮಿಶನ್ ಯುವ ಸಂಘಟನೆ ಪ್ರಮುಖರು ಮಂಗಳವಾರ ಡಿಸಿ ಕಚೇರಿಗೆ ತೆರಳಿ ನವೆಂಬರ್ 2ರಂದ ನಮಗೂ ಅನುಮತಿ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.

kadalekai parishe

10:28 PM (IST) Oct 22

ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ, ನಾಳೆ ಮೊದಲ ಸಭೆ

ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ, ನಾಳೆ ಮೊದಲ ಸಭೆ, ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಈ ಪರಿಷೇ ಅತ್ಯಂತ ಜನಪ್ರಿಯವಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ.

Read Full Story

10:24 PM (IST) Oct 22

ಪಾಂಡವರ ಪರ ಕರ್ಣ, ಮತ್ತೆ ಅದೇ ಸೆಂಟಿಮೆಂಟ್‌ನಲ್ಲಿ ಪ್ರಭಾಸ್.. 'ಫೌಜಿ' ಕಥೆ ಡಿಕೋಡ್ ಮಾಡಿದ ನೆಟ್ಟಿಗರು!

ಹನು ರಾಘವಪುಡಿ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಿರುವ ಹೊಸ ಸಿನಿಮಾದ ಪ್ರೀ ಲುಕ್ ಪೋಸ್ಟರ್‌ನಿಂದ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಈ ಚಿತ್ರದ ಕಥೆ ಏನು? ಇದರಲ್ಲಿ ಕರ್ಣನ ಅಂಶ ಹೇಗೆ ಇರಲಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

 

Read Full Story

09:53 PM (IST) Oct 22

ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದು ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ - ಸಂಸದ ಕ್ಯಾ.ಚೌಟ

ಸಿಎಂ ಸಿದ್ದರಾಮಯ್ಯನವರು ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಜನಪ್ರಿಯತೆ ಅರಗಿಸಿಕೊಳ್ಳಲು ಸಾಧ್ಯವಾಗದೆ ಸುಳ್ಳು ಹೇಳಿಕೆ ನೀಡುವ ಮೂಲಕ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.

Read Full Story

09:43 PM (IST) Oct 22

ಅನ್ಕೊಂಡಿದ್ದು ಒಂದು, ಆಗಿದ್ದು ಇನ್ನೊಂದು - ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ರಮೇಶ್‌ಗೆ ಆಯ್ತು ಭ್ರಮನಿರಸನ

ಕರ್ಣನ ಸಂತೋಷವನ್ನು ಕಸಿದುಕೊಳ್ಳಲು ರಮೇಶ್ ಮಾಡಿದ ಪ್ಲಾನ್ ವಿಫಲವಾಗಿದೆ. ಪತ್ನಿ ನಿಧಿ ಮತ್ತು ಅನಿರೀಕ್ಷಿತವಾಗಿ ತಾಳಿ ಕಟ್ಟಿದ ನಿತ್ಯಾ ಇಬ್ಬರೂ ಒಂದೇ ಸೂರಿನಡಿ ಬಂದರೂ, ಕರ್ಣನ ಮುಖದಲ್ಲಿನ ನಗು ಮಾಸಿಲ್ಲ. 

Read Full Story

09:21 PM (IST) Oct 22

ಕಾಂಗ್ರೆಸ್ಸಿಗೆ ಕರ್ನಾಟಕ ಎಟಿಎಂ - ರಾಜ್ಯ ಸರ್ಕಾರದ ವಿರುದ್ಧ ಸಂಸದ ಜಗದೀಶ್ ಶೆಟ್ಟರ್ ಕಿಡಿ

ಸಿದ್ದರಾಮಯ್ಯ ಆಡಳಿತದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ.‌ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ಕಾಂಗ್ರೆಸ್‌ ಎದುರು ಹಾಕಿಕೊಂಡಿದೆ. ಇದು ಕಾಂಗ್ರೆಸ್ಸಿನ ಅಂತ್ಯದ ಆರಂಭ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.

Read Full Story

08:56 PM (IST) Oct 22

Karna Serial - ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

ರಮೇಶ್‌ನ ಕುತಂತ್ರದಿಂದ ನಿಧಿ ಮತ್ತು ನಿತ್ಯಾ ಕರ್ಣನ ಮನೆ ಸೇರಿದ್ದು, ಇದರಿಂದ ತನ್ನೆಲ್ಲಾ ರಹಸ್ಯಗಳು ಬಯಲಾಗಬಹುದೆಂಬ ಆತಂಕದಲ್ಲಿ ನಯನತಾರಾ ಇದ್ದಾಳೆ. ಗಂಡನ ಸಂಚು ತಿಳಿದರೂ ಕರ್ಣನ ತಾಯಿ ಅಸಹಾಯಕಳಾಗಿದ್ದು, ಕರ್ಣ, ನಿತ್ಯಾ, ನಿಧಿಯ ಮುಂದಿನ ಜೀವನದ ಬಗ್ಗೆ ಕುತೂಹಲವಿದೆ.

Read Full Story

08:51 PM (IST) Oct 22

ಸಚಿವ ಪ್ರಿಯಾಂಕ್ ಖರ್ಗೆಗೆ ಜನತೆಯೇ ಪಾಠ ಕಲಿಸ್ತಾರೆ - ಮಾಜಿ ಸಚಿವ ಶ್ರೀರಾಮುಲು

ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಆರೆಸ್ಸೆಸ್ಸಿನೊಂದಿಗೆ ಸಂಘರ್ಷ ಮಾಡುತ್ತಿರುವ ಪ್ರಿಯಾಂಕ್ ಖರ್ಗೆಗೆ ಮುಂದಿನ ಚುನಾವಣೆಯಲ್ಲಿ ಕಲುಬುರಗಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

Read Full Story

08:37 PM (IST) Oct 22

ಮಠ, ಮಂದಿರಗಳೇ ಟಾರ್ಗೆಟ್, ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು

ಮಠ, ಮಂದಿರಗಳೇ ಟಾರ್ಗೆಟ್, ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು, ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹಲವು ಚಿನ್ನದ ಆಭರಣಗಳು, ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಲಾಗಿದೆ.

Read Full Story

08:35 PM (IST) Oct 22

ಗಾಯವಾದ್ರೂ ಲೆಕ್ಕಿಸದೆ ನಟನೆ.. 'ಥಾಮಾ' ಚಿತ್ರಕ್ಕಾಗಿ ರಶ್ಮಿಕಾ ಪಟ್ಟ ಕಷ್ಟ ನೋಡಿ - ಇಲ್ಲಿದೆ ವೈರಲ್ ಫೋಟೋಸ್

ಇತ್ತೀಚೆಗೆ ಬಿಡುಗಡೆಯಾದ 'ಥಾಮಾ' ಚಿತ್ರದಲ್ಲಿನ ನಟನೆಗೆ ರಶ್ಮಿಕಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಶೂಟಿಂಗ್ ವೇಳೆ ಪಟ್ಟ ಕಷ್ಟವನ್ನು ವಿವರಿಸಿ ರಶ್ಮಿಕಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read Full Story

08:34 PM (IST) Oct 22

Bigg Boss, ನಾನು ಇಲ್ಲಿ ಸಿಂಗಲ್‌, ನನ್ನ ಎಕ್ಸ್‌ ಕಳಿಸಿಕೊಡಿ, ಪ್ಲೀಸ್‌ ಎಂದು ಗೋಗರೆದ ಮಹಿಳಾ ಸ್ಪರ್ಧಿ!

Bigg Boss Show: ಬಿಗ್‌ ಬಾಸ್‌ ಶೋನಲ್ಲಿ ಪ್ರೀತಿ ಹುಟ್ಟುವುದು, ದ್ವೇಷವೂ ಆಗುವುದು, ಸ್ನೇಹ ದ್ವೇಷವಾಗಿ ತಿರುಗಿದರೂ ಆಶ್ಚರ್ಯವಿಲ್ಲ. ಈಗ ಬೇರೆ ಸ್ಪರ್ಧಿಗಳು ಲವ್‌ನಲ್ಲಿರೋದು ನೋಡಿ ಸ್ಪರ್ಧಿಯೋರ್ವರು ನನಗೆ ಎಕ್ಸ್‌ ಬೇಕು ಎಂದು ಹೇಳಿದ್ದಾರೆ. ಹಾಗಾದರೆ ಅವರು ಯಾರು? 

Read Full Story

08:13 PM (IST) Oct 22

ಸರ್ಕಾರದ ನಿರ್ದೇಶನದಂತೆ ಮುಜರಾಯಿ ದೇಗುಲಗಳಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ಗೋಪೂಜೆ!

ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಇಂದು ದೀಪಾವಳಿ (ಬಲಿಪಾಡ್ಯಮಿ) ಹಬ್ಬದ ದಿನ ಶಾಸ್ತ್ರೋಕ್ತವಾಗಿ ಗೋಪೂಜೆ ಕಾರ್ಯಕ್ರಮ ನೆರವೇರಿದೆ.

Read Full Story

07:59 PM (IST) Oct 22

ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಈ ನಾಯಕನಿಗಿದೆ, ಪುತ್ರ ಯತೀಂದ್ರ ಮಾತಿನಿಂದ ಸಂಚಲನ

ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಈ ನಾಯಕನಿಗಿದೆ, ಪುತ್ರ ಯತೀಂದ್ರ ಮಾತಿನಿಂದ ಸಂಚಲನ ಸೃಷ್ಟಿಯಾಗಿದೆ. 2028ರ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧಿಸಲ್ಲ, ಅವರ ಸ್ಥಾನ ತುಂಬಬಲ್ಲ ಶಕ್ತಿ ಯಾರಿಗಿದೆ ಅನ್ನೋದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Read Full Story

07:58 PM (IST) Oct 22

Sharade Serial - ಶಾರದೆ ಧಾರಾವಾಹಿಯಿಂದ ಏಕಕಾಲಕ್ಕೆ ಹೊರಬಿದ್ದ ನಟ, ನಟಿ! ಕಾರಣ ಏನು?

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶಾರದೆ ಧಾರಾವಾಹಿಯಿಂದ ಏಕಕಾಲಕ್ಕೆ ನಟ, ನಟಿ ಇಬ್ಬೂ ಹೊರಗಡೆ ಬಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

 

Read Full Story

07:41 PM (IST) Oct 22

ಪ್ರಜಾಪ್ರಭುತ್ವ ಉಳಿಯಲು ಮತಕಳ್ಳತನ ನಿಲ್ಲಲಿ - ಸಚಿವ ಆರ್.ಬಿ.ತಿಮ್ಮಾಪೂರ

ಬಿಜೆಪಿಯವರು ಮತ ಕಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಮತಕಳ್ಳತನ ನಿಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮತದಾರರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

Read Full Story

07:20 PM (IST) Oct 22

Lakshmi Nivasa - ಬಳೆ ವಿಷ್ಯದಲ್ಲಿ ವೀಕ್ಷಕರ ಲೆಕ್ಕಾಚಾರ ಉಲ್ಟಾ! ಕೈಕೊಟ್ಟ ಶಾಂತಮ್ಮ- ಸತ್ಯ ಗೊತ್ತಾಗೋಯ್ತು - ಕಥೆ ಫಿನಿಷ್​!

ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಜಾಹ್ನವಿಯ ಪ್ಲ್ಯಾನ್ ಫ್ಲಾಪ್ ಆಗುವ ಹಂತದಲ್ಲಿದೆ. ಜಾಹ್ನವಿಯ ಹಸಿರು ಬಳೆ ಸೈಕೋ ಜಯಂತ್ ಕೈಗೆ ಸಿಕ್ಕಿದ್ದು, ಆಕೆ ಬದುಕಿರುವುದನ್ನು ತಿಳಿದು ಆತ ಹೊಸ ಆಟ ಶುರುಮಾಡಿದ್ದಾನೆ. ಇದರಿಂದಾಗಿ ವಿಶ್ವ ಮತ್ತು ಜಾಹ್ನವಿಯ ಮುಂದಿನ ನಡೆ ನಿಗೂಢವಾಗಿದೆ.

Read Full Story

07:15 PM (IST) Oct 22

ಇನ್ಮುಂದೆ ಮೆಗಾಸ್ಟಾರ್ ಚಿರಂಜೀವಿ ಹೆಸರು, ಫೋಟೋ ಬಳಸಿದರೆ ಜೈಲು ಗ್ಯಾರಂಟಿ.. ಕೋರ್ಟ್ ಆದೇಶದಲ್ಲೇನಿದೆ?

ಮೆಗಾಸ್ಟಾರ್ ಚಿರಂಜೀವಿ ಅವರ ಹೆಸರು ಮತ್ತು ಫೋಟೋಗಳನ್ನು ಇಲ್ಲಿಯವರೆಗೆ ಯಾರು ಬೇಕಾದರೂ ಬಳಸುತ್ತಿದ್ದರು. ಹಣ ಮಾಡಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಹಾಗೆ ನಡೆಯುವುದಿಲ್ಲ. ಅವರ ಹೆಸರು, ಫೋಟೋಗಳನ್ನು ದುರುಪಯೋಗಪಡಿಸಿಕೊಂಡರೆ ಜೈಲು ಸೇರುವುದು ಖಚಿತ.

 

Read Full Story

07:14 PM (IST) Oct 22

ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್ ರೇP ಪ್ರಕರಣ, ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್ ರೇP ಪ್ರಕರಣ, ಮೂವರು ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಅರೆಸ್ಟ್ ಬಳಿಕ ಸ್ಫೋಟಕ ಮಾಹಿತಿ ಬಯಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಪೊಲೀಸರ ತನಿಖೆ ತೀವ್ರಗೊಂಡಿದೆ.

Read Full Story

06:54 PM (IST) Oct 22

ಬಿಜೆಪಿ ಸಿಎಂಗಳಿದ್ದಾಗ ಎಲ್ಲೆಲ್ಲಿಗೆ ಎಷ್ಟು ಹಣ ಹೋಗಿದೆ? - ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳಿದ್ದಾಗಿನ ನಾಲ್ವರು ಮುಖ್ಯಮಂತ್ರಿಗಳು ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಕಳುಹಿಸಿದ್ದರು ಎಂದು ಜನರಿಗೆ ಉತ್ತರ ಕೊಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

Read Full Story

06:44 PM (IST) Oct 22

ರೈಲು ಪ್ರಯಾಣಿಕರಿಗೆ ಕೊಡ್ತಿದ್ದ ಬಿಳಿ ಬ್ಲಾಂಕೆಟ್‌ಗಳಿಗೆ ವಿದಾಯ; ಹೊಸದಾಗಿ ಬಂತು ಪ್ರಿಂಟೆಡ್ ಹೊದಿಕೆ!

ಭಾರತೀಯ ರೈಲ್ವೆಯು ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಬಳಸಲಾಗುತ್ತಿದ್ದ ಕೊಳಕಾದ ಬಿಳಿ ಬ್ಲಾಂಕೆಟ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ. 'ವೋಕಲ್ ಫಾರ್ ಲೋಕಲ್' ಮಿಷನ್‌ನ ಭಾಗವಾಗಿ, ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ಪರಿಚಯಿಸಲಾಗಿದೆ.

Read Full Story

06:42 PM (IST) Oct 22

ಭ್ರಷ್ಟಾಚಾರದಲ್ಲಿ ದಾಖಲೆ ಬರೆಯುತ್ತಿರುವ ಕಾಂಗ್ರೆಸ್ ಸರ್ಕಾರ - ಸಂಸದ ಬಿ.ವೈ.ರಾಘವೇಂದ್ರ ಲೇವಡಿ

ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕುರಿತಂತೆ ಜನಸಾಮಾನ್ಯರು, ಮಾಧ್ಯಮಗಳು ಹೇಳುತ್ತಿರುವುದನ್ನು ಕೇಳಿಸಿ ಕೊಂಡಿದ್ದಲ್ಲಿ, ಸರ್ಕಾರ ತನ್ನ ಭ್ರಷ್ಟಾಚಾರದ ಕುರಿತು ದಾಖಲೆಗಳನ್ನು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದ್ದಾರೆ.

Read Full Story

06:41 PM (IST) Oct 22

ದುಷ್ಟ ಶಕ್ತಿಯೊಳಗೆ ದುರ್ಗಾ- ಹಿತಾಳ ಒಯ್ಯಲು ಬಂದ ಮಹಿಷಾಸುರ - Naa Ninna Bidalaare ರೋಚಕ ಸಂಚಿಕೆ

ಮಾಳವಿಕಾ ಕಳುಹಿಸಿದ ಮಹಿಷಾಸುರನಿಂದ ಹಿತಾಳ ಪ್ರಾಣಕ್ಕೆ ಕುತ್ತು ಬರುತ್ತದೆ. ಸಂಜೀವಿನಿ ತರಲು ಹೋದ ದುರ್ಗಾಳ ಪ್ರಯತ್ನ ವಿಫಲವಾದಾಗ, ಸ್ವತಃ ದೇವಿಯೇ ಪ್ರತ್ಯಕ್ಷಳಾಗಿ ಮಹಿಷಾಸುರನನ್ನು ಸಂಹರಿಸಿ ಹಿತಾಳನ್ನು ಕಾಪಾಡುತ್ತಾಳೆ.
Read Full Story

06:39 PM (IST) Oct 22

38ನೇ ವಯಸ್ಸಿಗೆ ನಿವೃತ್ತಿ, ಈಗ 300 ಕೋಟಿ ರೂ ಒಡೆಯನಾದ ಇನ್ಫೋಸಿಸ್ ಮಾಜಿ ಉದ್ಯೋಗಿ

38ನೇ ವಯಸ್ಸಿಗೆ ನಿವೃತ್ತಿ, ಈಗ 300 ಕೋಟಿ ರೂ ಒಡೆಯನಾದ ಇನ್ಫೋಸಿಸ್ ಮಾಜಿ ಉದ್ಯೋಗಿ ಬೆಂಗಳೂರಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ. ಇನ್ಫೋಸಿಸ್ 90ರ ದಶಕದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಉದ್ಯೋಗಿ ಸಿಂಪಲ್ ಲೈಫ್ ಬೆಳಕಿಗೆ ಬಂದಿದೆ.

Read Full Story

06:18 PM (IST) Oct 22

ಸಂವಿಧಾನ ವಿರೋಧಿ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಬಿದ್ದಿದೆ - ಸಿಎಂ ಸಿದ್ದರಾಮಯ್ಯ

ರಾಜ್ಯದ ಪ್ರಗತಿಗೆ ಕಂಟಕವಾಗಿ ಪರಿಣಮಿಸಿದ್ದ ಸಂವಿಧಾನ ವಿರೋಧಿ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕುವಲ್ಲಿ ನಮ್ಮ ಪೊಲೀಸರು ಯಶಸ್ಸು ಕಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.

Read Full Story

06:04 PM (IST) Oct 22

ಬೆಂಗಳೂರಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ ಮಾಡಿದ ಕುಡುಕರ ಗುಂಪು!

ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ, ಕಲ್ಕತ್ತಾ ಮೂಲದ ಮಹಿಳೆಯೊಬ್ಬರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story

05:51 PM (IST) Oct 22

5 ನಿಮಿಷಕ್ಕೆ 5 ಕೋಟಿ ಸಂಭಾವನೆ.. 800 ಕೋಟಿ ಬಜೆಟ್ ಸಿನಿಮಾದಲ್ಲಿ ಪೂಜಾ ಹೆಗ್ಡೆಗೆ ಬಂಪರ್ ಆಫರ್

ಬಹಳ ದಿನಗಳಿಂದ ಸರಿಯಾದ ಹಿಟ್ ಇಲ್ಲದೆ ನಟಿ ಪೂಜಾ ಹೆಗ್ಡೆ ಕಷ್ಟಪಡುತ್ತಿದ್ದಾರೆ. ಸತತ ಸೋಲುಗಳಿಂದಾಗಿ ಅವರಿಗೆ ಅದೃಷ್ಟವಿಲ್ಲದ ನಟಿ ಎಂಬ ಹೆಸರು ಬಂದಿದೆ. ಇದೀಗ 800 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ.

Read Full Story

05:47 PM (IST) Oct 22

Karna Serial - ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!

ಕರ್ಣನು ನಿತ್ಯಾಳನ್ನು ಮದುವೆಯಾಗಿದ್ದು, ನಿಧಿಗೆ ತೀವ್ರ ಆಘಾತವಾಗಿದೆ. ಈ ನಡುವೆ ಮನೆಗೆ ಬೆಂಕಿ ಬಿದ್ದಾಗ, ಕರ್ಣ ಕೊಟ್ಟ ಗೊಂಬೆಗಾಗಿ ನಿಧಿ ಬೆಂಕಿಯೊಳಗೆ ನುಗ್ಗುತ್ತಾಳೆ. ಕರ್ಣ ಅವಳನ್ನು ರಕ್ಷಿಸುತ್ತಾನಾದರೂ, ಆ ಗೊಂಬೆಯ ಹಿಂದಿನ ರಹಸ್ಯ ಮಾತ್ರ ಅವರಿಬ್ಬರಿಗೇ ತಿಳಿದಿದೆ.
Read Full Story

05:37 PM (IST) Oct 22

ಸಾಯುವ ಸ್ಥಿತಿಯಲ್ಲಿದ್ದ ನಿರ್ಮಾಪಕ.. ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂದಾಗ ಚಿರಂಜೀವಿ ಮಾಡಿದ್ದೇನು?

ಚಿರಂಜೀವಿ ಅವರ ಸಹಾಯದಿಂದ ಒಬ್ಬ ಸ್ಟಾರ್ ನಿರ್ಮಾಪಕರ ಪ್ರಾಣ ಉಳಿದಿದೆ. ಆ ನಿರ್ಮಾಪಕ ಚಿರಂಜೀವಿ ಜೊತೆ ಒಂದೇ ಒಂದು ಸಿನಿಮಾ ಮಾಡಿಲ್ಲ. ಆದರೂ ತಾನು ಜೀವನಪೂರ್ತಿ ಚಿರಂಜೀವಿಗೆ ಋಣಿಯಾಗಿರುತ್ತೇನೆ ಎಂದು ಆ ನಿರ್ಮಾಪಕ ಹೇಳಿದ್ದಾರೆ.

Read Full Story

05:26 PM (IST) Oct 22

ಚಿತ್ತಾಪುರ RSS ಪಥಸಂಚಲನಕ್ಕೆ ಭೀಮ್ ಆರ್ಮಿ ಬಳಿಕ ದಲಿತ ಪ್ಯಾಂಥರ್ಸ್ ಟಕ್ಕರ್; ಕೈಯಲ್ಲಿ ಲಾಠಿ, ನೀಲಿ ಶಾಲಿನ ನಡಿಗೆ!

ಕಲಬುರಗಿಯ ಚಿತ್ತಾಪುರದಲ್ಲಿ ನ. 2 ರಂದು RSS ಪಥಸಂಚಲನ ನಡೆಸಲು ಮುಂದಾಗಿದ್ದು, ಅದೇ ದಿನ 'ಭಾರತೀಯ ದಲಿತ ಪ್ಯಾಂಥರ್ಸ್' ಸಂಘಟನೆಯೂ ಪಥಸಂಚಲನಕ್ಕೆ ಅನುಮತಿ ಕೋರಿದೆ. ಇದು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಆತಂಕವನ್ನು ಸೃಷ್ಟಿಸಿದ್ದು, ಜಿಲ್ಲಾಡಳಿತವು ಹೈಕೋರ್ಟ್ ನಿರ್ದೇಶನಕ್ಕಾಗಿ ಕಾಯುತ್ತಿದೆ.

Read Full Story

05:21 PM (IST) Oct 22

ದೀಪಾವಳಿಗೆ ರಿಷಬ್‌ ಶೆಟ್ಟಿ ಮ್ಯಾಜಿಕ್ - ಕರ್ನಾಟಕದಲ್ಲಿ 200 ಕೋಟಿ ದಾಟಿದ ಕಾಂತಾರ ಚಾಪ್ಟರ್‌ 1 ಗಳಿಕೆ

‘ಕಾಂತಾರ ಚಾಪ್ಟರ್‌ 1’ ಕರ್ನಾಟಕದಲ್ಲಿ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಳಿಕೆ ಮಾಡಿದೆ. ಸುಮಾರು 200 ಕೋಟಿ ರು. ಗೂ ಅಧಿಕ ಕಲೆಕ್ಷನ್‌ ಮಾಡುವ ಮಾಡುವ ಮೂಲಕ ರಿಷಬ್‌ ಶೆಟ್ಟಿ ಸಿನಿಮಾ ಹೊಸ ದಾಖಲೆ ನಿರ್ಮಿಸಿದೆ.

Read Full Story

05:19 PM (IST) Oct 22

Karna Serial - ಮುಂದೆ ಕರ್ಣ-ನಿಧಿ ಮದುವೆಯೂ ಆಗತ್ತೆ; ಧಾರಾವಾಹಿಯಲ್ಲೇ ಸುಳಿವು ಸಿಕ್ಕಾಯ್ತು!

ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಹಾಗೂ ನಿತ್ಯಾ ಮದುವೆ ನಡೆಯಬೇಕಿತ್ತು. ನಿತ್ಯಾ ತಂಗಿ ನಿಧಿಗೆ ಆಗತಾನೇ ಕರ್ಣ ಪ್ರೇಮ ನಿವೇದನೆ ಮಾಡಿದ್ದನು. ಅಕ್ಕನ ಮದುವೆ ಆಗುತ್ತಿದ್ದಂತೆ ಕರ್ಣನ ಜೊತೆ ಸಪ್ತಪದಿ ತುಳಿಯಬೇಕು ಎಂದು ನಿಧಿ ಕನಸು ಕಾಣುತ್ತಿರುವಾಗಲೇ ಅನಾಹುತವೊಂದು ನಡೆಯಿತು.

 

Read Full Story

05:14 PM (IST) Oct 22

ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ರಿಷಬ್​ ಶೆಟ್ಟಿ ಪತ್ನಿ ಎಂಟ್ರಿ? ಗುಟ್ಟು ರಿವೀಲ್ ಮಾಡಿದ ಪ್ರಗತಿ

'ಕಾಂತಾರ' ಚಿತ್ರದ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ಅವರ ಪತ್ನಿ ಮತ್ತು ಚಿತ್ರದ ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ಸರಳತೆ ಮತ್ತು ಸೌಂದರ್ಯದಿಂದ ಮೆಚ್ಚುಗೆ ಗಳಿಸಿರುವ ಅವರು, ತಮಗೆ ತೆರೆಮರೆಯಲ್ಲಿ ಕೆಲಸ ಮಾಡುವುದೇ ಇಷ್ಟ ಎಂದು ಸ್ಪಷ್ಟಪಡಿಸಿದ್ದಾರೆ.  

Read Full Story

04:40 PM (IST) Oct 22

ಲವ್ ಮ್ಯಾರೇಜ್ ವಿಷಯಕ್ಕೆ ನ್ಯಾಯ ಪಂಚಾಯ್ತಿ, ನಾಲ್ವರಿಗೆ ಚಾಕು ಇರಿತ - ಆರೋಪಿಯ ಬಂಧನ

ಲವ್ ಮ್ಯಾರೇಜ್ ವಿಷಯಕ್ಕೆ ನ್ಯಾಯ ಪಂಚಾಯ್ತಿ ಮಾಡುವಾಗ ಚಾಕು ಇರಿದ ಘಟನೆ ಯಾದಗಿರಿ ನಗರದ ಹಳೆ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ. ಮಲ್ಲಪ್ಪ ಅಲಿಯಾಸ್ ನಿರ್ಮಲ್ ನಾಲ್ಕು ಜನರಿಗೆ ಚಾಕು ಇರಿದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

Read Full Story

04:38 PM (IST) Oct 22

ನಿತ್ಯಾಳನ್ನು ಮದುವೆಯಾಗದೆ ಓಡಿದ್ದ ತೇಜಸ್‌ ಸಿಕ್ಕಿಬಿದ್ದಾಯ್ತು; ರೊಚ್ಚಿಗೆದ್ದ Karna Serial ಪ್ರೇಕ್ಷಕರು

ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಮದುವೆ ಆಗಲು ಕಾಶಿಯಾತ್ರೆಗೆ ಹೋಗಿದ್ದ ತೇಜಸ್‌ ಇದ್ದಕ್ಕಿದ್ದಂತೆ ತಂದೆ-ತಾಯಿ ಜೊತೆ ಕಾಣೆ ಆಗಿದ್ದನು. ಇತ್ತ ನಿತ್ಯಾ ಪ್ರಗ್ನೆಂಟ್‌ ಕೂಡ ಆಗಿದ್ದಾಳೆ. ತೇಜಸ್‌ ಎಲ್ಲಿಗೆ ಹೋಗಿದ್ದಾನೆ ಎಂದು ಎಲ್ಲರೂ ಯೋಚಿಸುವಾಗ ಈಗ ಅವರು ಪ್ರತ್ಯಕ್ಷರಾಗಿದ್ದಾರೆ.

 

Read Full Story

04:20 PM (IST) Oct 22

ಡಿಕೆಶಿ ಟೆಂಪಲ್ ರನ್ - ಮಂತ್ರಾಲಯದಲ್ಲಿ ರಾಯರಿಗೆ ತುಲಾಭಾರ ಸೇವೆ ಮಾಡಿದ ಡಿ.ಕೆ. ಶಿವಕುಮಾರ್ ದಂಪತಿ!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಸಭೆಯಲ್ಲಿ, ಆಂಜನೇಯನ ಉದಾಹರಣೆ ನೀಡಿ ತ್ಯಾಗದ ರಾಜಕಾರಣದ ಮಹತ್ವವನ್ನು ತಿಳಿಸಿದರು.

Read Full Story

03:52 PM (IST) Oct 22

ಮೆನೋಪಾಸ್‌' ಬಗ್ಗೆ ದೀಪಿಕಾ ಪಡುಕೋಣೆ ಟ್ರೈನರ್‌ ಓಪನ್ ಟಾಕ್; ಈ 4 ಸೀಕ್ರೆಟ್ಸ್ ತಿಳಿಯಿರಿ!

ಮೆನೋಪಾಸ್‌ ಆರೋಗ್ಯ ಮತ್ತು ಸ್ವಾಸ್ಥ್ಯ: ಮುಟ್ಟು ನಿಲ್ಲುವ ಸಮಯದಲ್ಲಿಯೂ ನೀವು ಫಿಟ್ ಮತ್ತು ಕಾನ್ಫಿಡೆಂಟ್ ಆಗಿ ಕಾಣಲು ಬಯಸಿದರೆ, ಯಾಸ್ಮಿನ್ ಕರಾಚಿವಾಲಾ ಅವರ 4 ಆರೋಗ್ಯ ರಹಸ್ಯಗಳನ್ನು ಖಂಡಿತ ತಿಳಿಯಿರಿ.

Read Full Story

03:52 PM (IST) Oct 22

BBK 12 - ಕಿಚ್ಚು ಪದ ಬರೆಯೋಕೆ ಬರಲ್ಲ - ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡಗೆ ಕನ್ನಡ ಬರಲ್ವಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಅವರು ಮ್ಯೂಟೆಂಟ್‌ ರಘುಗೆ ಕನ್ನಡದಲ್ಲಿ ಮಾತನಾಡಿ ಎಂದು ವಾರ್ನ್‌ ಮಾಡಿದ್ದರು. ಆದರೆ ಅವರು ಇದೇ ಮನೆಯಲ್ಲಿ ನನಗೆ ಕನ್ನಡ ಬರಲ್ಲ ಎಂದು ಹೇಳಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

 

Read Full Story

03:45 PM (IST) Oct 22

ಅಮ್ಮನಂತೆಯೇ ಮಗಳು - ಪುತ್ರಿ ಜೊತೆ ಬಾಲಿವುಡ್​ ಸ್ಟಾರ್ಸ್​ ಬಾಲ್ಯದ ಫೋಟೋ- ಗೆಸ್​ ಮಾಡುವಿರಾ?

ಬಾಲಿವುಡ್ ತಾರಾ ದಂಪತಿ  ತಮ್ಮ ಮಗಳ ಮುಖವನ್ನು ದೀಪಾವಳಿಯಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಅಮ್ಮನನ್ನೇ ಹೋಲುವ ಮಗಳ ಫೋಟೋ ವೈರಲ್ ಆಗಿದ್ದು, ನಟಿ 'ದೀಪಾವಳಿ' ಎಂದು ಬರೆದಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.ಹಾಗಿದ್ದರೆ ಯಾರ ಫೋಟೋ ಇದು ಎಂದು ಹೇಳಬಲ್ಲಿರಾ? 

Read Full Story

03:43 PM (IST) Oct 22

ಬಿಗ್ ಬಾಸ್ ಮನೇಲಿ ರಘು ಫಿಸಿಕಲ್ ಟಾಸ್ಕ್‌ ನೋಡಿ ಬೆಚ್ಚಿಬಿದ್ದ ಸಹ ಸ್ಪರ್ಧಿಗಳು; ಮ್ಯೂಟೆಂಟ್ ಮುಂದೆ ಎಲ್ಲರೂ ಸೈಲೆಂಟ್!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮ್ಯೂಟೆಂಟ್ ರಘು, ನಾಣ್ಯ ಸಂಗ್ರಹ ಟಾಸ್ಕ್‌ನಲ್ಲಿ ತಮ್ಮ ಅಜಾನುಬಾಹು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇತರ ಸ್ಪರ್ಧಿಗಳಿಂದ ಬಲವಂತವಾಗಿ ನಾಣ್ಯಗಳನ್ನು ಕಿತ್ತುಕೊಂಡಿದ್ದು, ಅವರ ಈ ಆಟದ ವೈಖರಿಗೆ ರಿಷಾ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

02:47 PM (IST) Oct 22

ಮೈಸೂರು ಮಹಾರಾಣಿಯ ಹುಟ್ಟುಹಬ್ಬವಿಂದು - ಯದುವೀರ್​- ರಿಷಿಕಾ ಕುಮಾರಿಯ ರೋಚಕ ಲವ್​ ಸ್ಟೋರಿ ಇಲ್ಲಿದೆ

ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ತಮ್ಮ ಸರಳತೆಯಿಂದಲೇ ಹೆಸರುವಾಸಿಯಾದ ಅವರ ಪ್ರೇಮಕಥೆ, ದಿನಚರಿ ಮತ್ತು ಯದುವೀರ್ ಒಡೆಯರ್ ಅವರು ಹಂಚಿಕೊಂಡಿರುವ ಪ್ರೀತಿಯ ಶುಭಾಶಯದ ಕುರಿತು ಈ ಲೇಖನ ವಿವರಿಸುತ್ತದೆ.
Read Full Story

02:27 PM (IST) Oct 22

ಬೆಂಗಳೂರಿನ ಪಿಜಿಯಲ್ಲಿ ದುರಂತ; ತಿಗಣೆ ಔಷಧದ ವಿಷಕಾರಿ ವಾಸನೆಗೆ ತಿರುಪತಿ ಮೂಲದ ಬಿಟೆಕ್ ವಿದ್ಯಾರ್ಥಿ ಸಾವು

ಬೆಂಗಳೂರಿನ ಪಿಜಿಯೊಂದರಲ್ಲಿ ತಿಗಣೆ ನಿವಾರಣೆಗೆ ಸಿಂಪಡಿಸಿದ್ದ ಔಷಧದ ವಿಷಕಾರಿ ವಾಸನೆ ಸೇವಿಸಿ ಬಿಟೆಕ್ ವಿದ್ಯಾರ್ಥಿ ಪವನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪಿಜಿ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಹೆಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

More Trending News