MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!

Karna Serial: ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!

ಕರ್ಣನು ನಿತ್ಯಾಳನ್ನು ಮದುವೆಯಾಗಿದ್ದು, ನಿಧಿಗೆ ತೀವ್ರ ಆಘಾತವಾಗಿದೆ. ಈ ನಡುವೆ ಮನೆಗೆ ಬೆಂಕಿ ಬಿದ್ದಾಗ, ಕರ್ಣ ಕೊಟ್ಟ ಗೊಂಬೆಗಾಗಿ ನಿಧಿ ಬೆಂಕಿಯೊಳಗೆ ನುಗ್ಗುತ್ತಾಳೆ. ಕರ್ಣ ಅವಳನ್ನು ರಕ್ಷಿಸುತ್ತಾನಾದರೂ, ಆ ಗೊಂಬೆಯ ಹಿಂದಿನ ರಹಸ್ಯ ಮಾತ್ರ ಅವರಿಬ್ಬರಿಗೇ ತಿಳಿದಿದೆ.

1 Min read
Suchethana D
Published : Oct 22 2025, 05:47 PM IST
Share this Photo Gallery
  • FB
  • TW
  • Linkdin
  • Whatsapp
16
ರೋಚಕ ತಿರುವಿನಲ್ಲಿ ಕರ್ಣ
Image Credit : Zee Kannada

ರೋಚಕ ತಿರುವಿನಲ್ಲಿ ಕರ್ಣ

ಕರ್ಣ ಸೀರಿಯಲ್​ (Karna Serial) ರೋಚಕ ತಿರುವಿನಲ್ಲಿ ಸಾಗಿದೆ. ನಿಧಿ ಮತ್ತು ಕರ್ಣ ಇನ್ನೇನು ಮದುವೆಯಾಗುತ್ತಾರೆ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಷ್ಟರಲ್ಲಿಯೇ ನಿತ್ಯಾಳನ್ನು ಮದುವೆಯಾಗಿದ್ದಾನೆ ಕರ್ಣ.

26
ಮದುವೆ ಆಗೇ ಇಲ್ಲ
Image Credit : Zee Kannada

ಮದುವೆ ಆಗೇ ಇಲ್ಲ

ಆದರೆ ಇದು ಸಮಾಜದ ಕಣ್ಣಿಗಷ್ಟೇ ಮದುವೆ. ಆದರೆ ಅಸಲಿಗೆ ಕರ್ಣ ನಿತ್ಯಾಳ ಕುತ್ತಿಗೆಗೆ ಖುದ್ದು ತಾಳಿ ಕಟ್ಟಲಿಲ್ಲ. ನಾಲ್ಕು ಗೋಡೆಗಳ ನಡುವೆ ನಡೆದದ್ದೇ ಬೇರೆ. ಅಲ್ಲಿ ನಿತ್ಯಾ ತನ್ನ ಕುತ್ತಿಗೆಗೆ ತಾನೇ ತಾಳಿ ಕಟ್ಟಿಕೊಂಡಿದ್ದಾಳೆ. ಆದರೆ ಈ ವಿಷಯ ಅವರಿಬ್ಬರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ.

Related Articles

Related image1
ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ರಿಷಬ್​ ಶೆಟ್ಟಿ ಪತ್ನಿ ಎಂಟ್ರಿ? ಗುಟ್ಟು ರಿವೀಲ್ ಮಾಡಿದ ಪ್ರಗತಿ
Related image2
Brahmagantu Serial: ಅಕ್ಕನ ಮಾತು ಕೇಳಿ ದೀಪಾಗೆ ಬಡಿಯಿತು ಸಿಡಿಲು! ತ್ಯಾಗಮಯಿ, ಗಂಡನನ್ನು ಬಿಟ್ಟು ಕೊಡ್ತಾಳಾ?
36
ಗರ್ಭಿಣಿ ನಿತ್ಯಾ
Image Credit : Instagram

ಗರ್ಭಿಣಿ ನಿತ್ಯಾ

ಅದೇ ಇನ್ನೊಂದೆಡೆ ಅದಾಗಲೇ ನಿತ್ಯಾ ಗರ್ಭಿಣಿ ಕೂಡ ಆಗಿದ್ದಾಳೆ. ಇದು ಕೂಡ ಇಬ್ಬರಿಗೇ ಗೊತ್ತಿರುವ ವಿಷಯ. ಆದರೆ, ಪ್ರೀತಿಯ ಕನಸನ್ನು ಕಂಡಿದ್ದ ನಿಧಿಯ ಪಾಡು ಮಾತ್ರ ಯಾರಿಗೂ ಬೇಡ. ಕರ್ಣನ ಜೊತೆ ಸಪ್ತಪದಿ ತುಳಿಯುವ ಖುಷಿಯಲ್ಲಿದ್ದ ನಿಧಿಗೆ ಆಕಾಶವೇ ಕುಸಿದ ಅನುಭವವಾಗಿದೆ. ಅವಳಿಗೆ ಜೀವನವೇ ಬೇಡವಾಗಿದೆ.

46
ಬೆಂಕಿಯೊಳಗೆ ನುಗ್ಗಿದ ನಿಧಿ
Image Credit : Instagram

ಬೆಂಕಿಯೊಳಗೆ ನುಗ್ಗಿದ ನಿಧಿ

ಇದೇ ಸಂದರ್ಭದಲ್ಲಿ, ಮನೆಗೆ ಮನೆಗೆ ಬೆಂಕಿ ಬಿದ್ದಿದೆ. ಆದರೆ ಅದರಲ್ಲಿ ಕರ್ಣ ತನಗೆ ಕೊಟ್ಟಿದ್ದ ಗೊಂಬೆಗಾಗಿ ಜೀವನದ ಹಂಗನ್ನೇ ಬಿಟ್ಟು ನಿಧಿ ಧಗಧಗಿಸುವ ಮನೆಯೊಳಕ್ಕೆ ನುಗ್ಗಿದ್ದಾಳೆ.

56
ನಿಧಿಯ ಕಾಪಾಡಿದ ಕರ್ಣ
Image Credit : Zee Kannada

ನಿಧಿಯ ಕಾಪಾಡಿದ ಕರ್ಣ

ಇದನ್ನು ನೋಡಿ ಎಲ್ಲರೂ ಶಾಕ್​ ಆಗಿದ್ದಾರೆ. ನಿಧಿಗೆ ಏನೂ ಆಗಲು ನಾನು ಬಿಡುವುದಿಲ್ಲ ಎಂದ ಕರ್ಣ ಮನೆಯೊಳಕ್ಕೆ ನುಗ್ಗಿ ನಿಧಿಯನ್ನು ಕಾಪಾಡಿದ್ದಾನೆ. ಎಲ್ಲರೂ ನಿಧಿಗೆ ಬೈದಿದ್ದಾರೆ. ಆ ಗೊಂಬೆಗಾಗಿ ಹೀಗೆ ಮಾಡಿದ್ದಾ ಎಂದು ಪ್ರಶ್ನಿಸಿದ್ದಾರೆ.

66
ಗೊಂಬೆಯ ರಹಸ್ಯ
Image Credit : Instagram

ಗೊಂಬೆಯ ರಹಸ್ಯ

ಆದರೆ ಯಾರ ಎದುರೂ ಆ ಗೊಂಬೆಯ ರಹಸ್ಯವನ್ನು ಹೇಳುವುದು ಕರ್ಣನಿಗೂ ಸಾಧ್ಯವಿಲ್ಲ, ನಿಧಿಗೂ ಸಾಧ್ಯವಿಲ್ಲ. ನಿತ್ಯಾಗೆ ಇನ್ನೂ ಕರ್ಣ ಮತ್ತು ನಿಧಿಯ ಪ್ರೀತಿಯ ಬಗ್ಗೆಯೂ ತಿಳಿದಿಲ್ಲ. ಆದರೆ, ತಂಗಿಯ ಪರವಾಗಿ ನಿಂತಿರೋ ನಿತ್ಯ ಮಾತ್ರ ಏನೇ ಬಂದರೂ ಅವಳು ಇಷ್ಟಪಟ್ಟಿದ್ದು, ಅವಳಿಗೆ ಕೊಡುತ್ತೇನೆ ಎಂದಿದ್ದಾಳೆ. ಮುಂದೇನಾಗುತ್ತೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved