MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮೈಸೂರು ಮಹಾರಾಣಿಯ ಹುಟ್ಟುಹಬ್ಬವಿಂದು: Yaduveer​- Rishika Kumariಯ ರೋಚಕ ಲವ್​ ಸ್ಟೋರಿ ಇಲ್ಲಿದೆ

ಮೈಸೂರು ಮಹಾರಾಣಿಯ ಹುಟ್ಟುಹಬ್ಬವಿಂದು: Yaduveer​- Rishika Kumariಯ ರೋಚಕ ಲವ್​ ಸ್ಟೋರಿ ಇಲ್ಲಿದೆ

ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ತಮ್ಮ ಸರಳತೆಯಿಂದಲೇ ಹೆಸರುವಾಸಿಯಾದ ಅವರ ಪ್ರೇಮಕಥೆ, ದಿನಚರಿ ಮತ್ತು ಯದುವೀರ್ ಒಡೆಯರ್ ಅವರು ಹಂಚಿಕೊಂಡಿರುವ ಪ್ರೀತಿಯ ಶುಭಾಶಯದ ಕುರಿತು ಈ ಲೇಖನ ವಿವರಿಸುತ್ತದೆ.

2 Min read
Suchethana D
Published : Oct 22 2025, 02:47 PM IST
Share this Photo Gallery
  • FB
  • TW
  • Linkdin
  • Whatsapp
17
ಸರಳತೆಯ ಪ್ರತೀಕ
Image Credit : instagram

ಸರಳತೆಯ ಪ್ರತೀಕ

ತುಂಬಿಕ ಕೊಡ ತುಳುಕುವುದಿಲ್ಲ ಎನ್ನುವ ಗಾದೆಮಾತಿಗೆ ಸಾಕ್ಷಿಯಾಗಿರುವ ಕೆಲವೇ ಕೆಲವು ಜನರಲ್ಲಿ, ಮೈಸೂರು ಮಹಾರಾಜ ಸಂಸದ ಯದುವೀರ ದತ್ತ ವಡೆಯರ್​ ಅವರ ಪತ್ನಿ ಮಹಾರಾಣಿ ರಿಷಿಕಾ ಕುಮಾರಿ ಕೂಡ ಒಬ್ಬರು. ಮಹಾರಾಣಿಯಾಗಿದ್ದರೂ ತಮ್ಮ ಸರಳತೆಯಿಂದ ಸದಾ ಅವರು ಜನರ ಮನಸ್ಸನ್ನು ಗೆಲ್ಲುತ್ತಲೇ ಇದ್ದಾರೆ. ಇಂತಿಪ್ಪ ರಿಷಿಕಾ ಕುಮಾರಿ ಅವರಿಗೆ ಇಂದು (ಅಕ್ಟೋಬರ್​ 22) ಹುಟ್ಟುಹಬ್ಬದ ಸಂಭ್ರಮ.

27
ಯದುವೀರರ ವಿಷ್​
Image Credit : Instagram

ಯದುವೀರರ ವಿಷ್​

ಈ ಸಮಯದಲ್ಲಿ ಪತಿ ಯದುವೀರ ಅವರು ಪತ್ನಿಗೆ ಸೋಷಿಯಲ್​​ ಮೀಡಿಯಾದಲ್ಲಿ ಕ್ಯೂಟ್​ ಸಂದೇಶದೊಂದಿಗೆ ವಿಷ್​ ಮಾಡಿದ್ದಾರೆ. ಸನ್ನಿಧಾನ ಸವಾರಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

Related Articles

Related image1
ಅಮಿತಾಭ್‌ ಜೊತೆ ಅಧಿಕಪ್ರಸಂಗ ಮಾಡಿದ ಬಾಲಕನ ಸುದ್ದಿ ನಡುವೆಯೇ ಯದುವೀರ ದತ್ತ ಮಾತೀಗ ವೈರಲ್‌
Related image2
Naa Ninna Bidalaare ಅಮ್ಮ-ಮಗಳ ಭಾವುಕ ನೃತ್ಯ: ಅವಾರ್ಡ್​ ಫಂಕ್ಷನ್​ನಲ್ಲಿ ಕಣ್ಣೀರಿಟ್ಟ ನಟಿಯರು
37
ಯದುವೀರರ ವಿಷ್​
Image Credit : Instagram

ಯದುವೀರರ ವಿಷ್​

ಈ ಸಮಯದಲ್ಲಿ ಪತಿ ಯದುವೀರ ಅವರು ಪತ್ನಿಗೆ ಸೋಷಿಯಲ್​​ ಮೀಡಿಯಾದಲ್ಲಿ ಕ್ಯೂಟ್​ ಸಂದೇಶದೊಂದಿಗೆ ವಿಷ್​ ಮಾಡಿದ್ದಾರೆ. ಸನ್ನಿಧಾನ ಸವಾರಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

47
ಇಬ್ಬರು ಮಕ್ಕಳು
Image Credit : our own

ಇಬ್ಬರು ಮಕ್ಕಳು

ಅಂದಹಾಗೆ ತ್ರಿಷಿಕಾ, ರಾಜಸ್ಥಾನದ ದುಂಗರ್‌ಪುರ್ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರೀ ಕುಮಾರಿ ಅವರ ಪುತ್ರಿ. ಮೊದಲ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ 2017 ರಲ್ಲಿ ಜನಿಸಿದರೆ ಎರಡನೆಯ ಪುತ್ರ ಕಳೆದ ವರ್ಷ 2024 ರಲ್ಲಿ ಜನಿಸಿದ್ದಾನೆ.

57
ಯದುವೀರ ಮತ್ತು ತ್ರಿಷಿಕಾರ ಲವ್​ಸ್ಟೋರಿ
Image Credit : our own

ಯದುವೀರ ಮತ್ತು ತ್ರಿಷಿಕಾರ ಲವ್​ಸ್ಟೋರಿ

ಯದುವೀರ ಮತ್ತು ತ್ರಿಷಿಕಾರ ಲವ್​ಸ್ಟೋರಿ ಕೂಡ ರೋಚಕವಾಗಿದೆ. 2016ರ ಜೂನ್​ 27ರಂದು ಇವರ ವಿವಾಹ ನಡೆದಿದೆ. ಲಂಡನ್‌ನಲ್ಲಿ ಓದುತ್ತಿರುವಾಗಲೇ ಇವರಿಬ್ಬರ ಲವ್​ ಸ್ಟೋರಿ ಶುರುವಾಗಿದ್ದು. ಇವರಿಬ್ಬರೂ ಬಾಲ್ಯದಲ್ಲಿಯೇ ಫಂಕ್ಷನ್​ಗಳಲ್ಲಿ ಭೇಟಿಯಾಗುತ್ತಿದ್ದರೂ, ಸ್ನೇಹ ಏನೂ ಇರಲಿಲ್ಲ. ಯದುವೀರ್‌ ಅವರು ವಿದ್ಯಾನಿಕೇತನ ಸ್ಕೂಲಿನಲ್ಲಿ ಓದಿದರೆ, ತ್ರಿಶಿಕಾ ಬಾಲ್ಡ್‌ವಿನ್‌ ಕಾಲೇಜು, ಜ್ಯೋತಿನಿವಾಸ್‌ ಕಾಲೇಜು, ಕೆನಡಿಯನ್ ಇಂಟರ್‌ನ್ಯಾಷನಲ್‌ ಸ್ಕೂಲಿನಲ್ಲಿ ಕಲಿತವರು.

67
ಅಮೆರಿಕದಲ್ಲಿ ಪ್ರೀತಿ
Image Credit : our own

ಅಮೆರಿಕದಲ್ಲಿ ಪ್ರೀತಿ

ಬಳಿಕ ಉನ್ನತ ಶಿಕ್ಷಣಕ್ಕೆ ಇವರು ಹೋಗಿದ್ದು ಅಮೆರಿಕಕ್ಕೆ. ಅಲ್ಲಿಯೇ ಶುರುವಾಯ್ತು ಲವ್​ ಎಂದು ಹೇಳಲಾಗುತ್ತಿದೆ. ಅಮೆರಿಕದ ಆಮ್‌ಹರ್ಸ್ಟ್‌ನ ಮಸಾಚುಸೆಟ್ಸ್‌ ಯೂನಿವರ್ಸಿಟಿಯಲ್ಲಿ ಯದುವೀರ್‌ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಎಕಾನಮಿಕ್ಸ್ ಮತ್ತು ಇಂಗ್ಲಿಷ್‌ ಓದಿದರು. ಅದೇ ಸಂದರ್ಭದಲ್ಲಿ ತ್ರಿಶಿಕಾ ಕೂಡ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅದೇ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು ಹಾಗೂ ಇಬ್ಬರಲ್ಲೂ ಪ್ರೀತಿ ಮೂಡಿತ್ತು ಎಂದು ಆಪ್ತ ವಲಯಗಳು ಹೇಳುತ್ತವೆ.

77
ದಿನಚರಿ ಹೀಗಿದೆ
Image Credit : our own

ದಿನಚರಿ ಹೀಗಿದೆ

ಕೊನೆಗೆ ಇಬ್ಬರೂ ಮದುವೆಯಾಗಿ, ಈಗ ಇಬ್ಬರು ಮಕ್ಕಳ ಪಾಲಕರಾಗಿದ್ದಾರೆ. ಕುತೂಹಲದ ವಿಷಯ ಎಂದರೆ, ಮಹಾರಾಜರ ಕುಟುಂಬ ಅಲ್ವಾ, ಎಲ್ಲವೂ ಕಟ್ಟುನಿಟ್ಟು. ರಾತ್ರಿ ಒಂಬತ್ತೂವರೆಗೆಲ್ಲ ಮಲಗಿ, ಐದು ಗಂಟೆಗೆ ಏಳುವುದು ಇವರ ದಿನಚರಿ. ಇಬ್ಬರೂ ಯೋಗಾಭ್ಯಾಸ ಮಾಡುತ್ತಾರೆ, ತ್ರಿಷಿಕಾ ದಿನಕ್ಕೊಮ್ಮೆ ಹನುಮಾನ್‌ ಚಾಲೀಸಾ ಕೂಡ ಪಠಿಸುತ್ತಾರಂತೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮೈಸೂರು ಅರಮನೆ
ಯದುವೀರ್ ಒಡೆಯರ್
ಸಂಬಂಧಗಳು
ಮದುವೆ
ಹುಟ್ಟುಹಬ್ಬ

Latest Videos
Recommended Stories
Recommended image1
ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
Recommended image2
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
Recommended image3
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
Related Stories
Recommended image1
ಅಮಿತಾಭ್‌ ಜೊತೆ ಅಧಿಕಪ್ರಸಂಗ ಮಾಡಿದ ಬಾಲಕನ ಸುದ್ದಿ ನಡುವೆಯೇ ಯದುವೀರ ದತ್ತ ಮಾತೀಗ ವೈರಲ್‌
Recommended image2
Naa Ninna Bidalaare ಅಮ್ಮ-ಮಗಳ ಭಾವುಕ ನೃತ್ಯ: ಅವಾರ್ಡ್​ ಫಂಕ್ಷನ್​ನಲ್ಲಿ ಕಣ್ಣೀರಿಟ್ಟ ನಟಿಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved