Published : Aug 21, 2025, 07:32 AM ISTUpdated : Aug 22, 2025, 12:00 AM IST

Karnatata Latest News Live: ವಿಧಾನಸಭೆಯಲ್ಲಿ ಸಾರಾಯಿ ಅಂಗಡಿ ಕುರಿತ ಚರ್ಚೆ,ಭಾರೀ ಗದ್ದಲ

ಸಾರಾಂಶ

ಬೆಂಗಳೂರು (ಆ.21): ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ ನೀಡಲಾಗಿರುವ ₹42 ಸಾವಿರ ಕೋಟಿ ಅನುದಾನ ಪೈಕಿ 'ಪಂಚ ಗ್ಯಾರಂಟಿ ಯೋಜನೆ'ಗಳಿಗೆ ₹13 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ| ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ದಲಿತರ ಮೀಸಲು ಹಣ ಅನ್ಯ ಕಾರಣಕ್ಕೆ ಏಕೆ ಬಳಕೆ ಏಕೆ ಎಂದಿದ್ದಾರೆ.ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

12:00 AM (IST) Aug 22

ವಿಧಾನಸಭೆಯಲ್ಲಿ ಸಾರಾಯಿ ಅಂಗಡಿ ಕುರಿತ ಚರ್ಚೆ,ಭಾರೀ ಗದ್ದಲ

ಕಲಬುರಗಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿರುವ ಮದ್ಯದಂಗಡಿಯ ವಿರುದ್ಧ ವಿಧಾನಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆ ತೆರವಾದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.
Read Full Story

11:35 PM (IST) Aug 21

ಕ್ಲಸ್ಟರ್ ವಿವಿಗಳ ಗೊಂದಲ - ಉಪಕುಲಪತಿ ನೇಮಕ ವಿಳಂಬವೇಕೆ? ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

ರಾಜ್ಯ ವಿಧಾನಸಭೆಯಲ್ಲಿ ಕ್ಲಸ್ಟರ್ ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕಾತಿ ವಿಳಂಬ ಕುರಿತು ಚರ್ಚೆ ನಡೆಯಿತು. ಅಶ್ವಥನಾರಾಯಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು. ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿ, ವಿವಿಗಳ ಹಿತಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

Read Full Story

10:34 PM (IST) Aug 21

ನೀನು ಹಿಂದಿನ ಚುನಾವಣೆ ಗೆದ್ದಿಲ್ಲ, ನಿನಗೆ ಗೊತ್ತಿಲ್ಲ ಕೂತ್ಕೊ ಎಂದ ಸಿಎಂ, ಬಿಜೆಪಿ ಶಾಸಕ ಗಪ್ ಚುಪ್!

ತುಮಕೂರಿನಲ್ಲಿ ಕಾಂಗ್ರೆಸ್‌ ಭವನಕ್ಕೆ ಕಡಿಮೆ ಬೆಲೆಯಲ್ಲಿ ಭೂಮಿ ಮಾರಾಟ ಮಾಡಿರುವ ವಿಚಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
Read Full Story

10:14 PM (IST) Aug 21

ಚಿನ್ನಸ್ವಾಮಿ ದುರಂತದ ಬಳಿಕ ಮಹತ್ವದ ನಿರ್ಧಾರ, ತುಮಕೂರಿನಲ್ಲಿ 42 ಏಕರೆಯಲ್ಲಿ ಸ್ಟೇಡಿಯಂ

ಚಿನ್ನಸ್ವಾಮಿ ದುರಂತದ ಬಳಿಕ ರಾಜ್ಯ ಸರ್ಕಾರ ಇದೀಗ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ಮಾಡಿದೆ. ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ 60 ಸಾವಿರ ಸಾಮರ್ಥ್ಯ ಹೊಂದಿದ್ದು, 42 ಏಕರೆಯಲ್ಲಿ ತಲೆ ಎತ್ತಲಿದೆ.

 

Read Full Story

09:32 PM (IST) Aug 21

ಪ್ರಪೋಸಲ್‌ಗೆ ಗೆಳತಿ ಯೆಸ್ ಹೇಳುತ್ತಿದ್ದಂತೆ ಪರ್ವತದದಿಂದ ಜ್ವಾಲಾಮುಖಿ ಸ್ಫೋಟ, ವಿಡಿಯೋ

ಪ್ರವಾಸದ ನಡುವೆ ಗೆಳೆಯ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಗೆಳತಿಗೆ ಒಂದು ಕ್ಷಣ ಅಚ್ಚರಿಯಾಗಿದೆ. ಜೊತೆಗೆ ಭಾವುಕಳಾಗಿದ್ದಾಳೆ. ಗೆಳತಿ ಯೆಸ್ ಹೇಳುತ್ತಿದ್ದಂತೆ ಹಿಂಭಾಗದ ಪರ್ವತ ಶ್ರೇಣಿಯಿಂದ ಜ್ವಾಲಾಮುಖಿ ಸ್ಫೋಟಗೊಂಡ ಘಟನೆ ನಡೆದಿದೆ.

 

Read Full Story

08:39 PM (IST) Aug 21

ಹಾಗಲಕಾಯಿ ತರಲು ಮಾರ್ಕೆಟ್‌ಗೆ ಹೋಗಬೇಕಿಲ್ಲ, ಮನೆಯಲ್ಲೇ ಹೀಗೆ ಸುಲಭವಾಗಿ ಬೆಳೆಸಿ!

ಬೀಜ ನಾಟಿ ಮಾಡುವಾಗ ಸುಮಾರು 12 ಇಂಚು ಅಂತರ ಇರಲಿ. 2-3 ದಿನಗಳಲ್ಲಿ ಮೊಳಕೆಯೊಡೆಯುತ್ತದೆ, 5-6 ವಾರಗಳಲ್ಲಿ ಹೂ ಬಿಡಲು ಶುರುವಾಗುತ್ತದೆ.

Read Full Story

08:37 PM (IST) Aug 21

ರಾಜಸ್ಥಾನ ಗ್ರಾಮದಲ್ಲಿ ಡೈನೋಸರ್ ರೀತಿಯ ದೈತ್ಯ ಪ್ರಾಣಿ ಮೂಳೆ ಪತ್ತೆ, ಮಹತ್ವದ ಕುರುಹು

ರಾಜಸ್ಥಾನದ ಗ್ರಾಮವೊಂದು ಇದೀಗ ಡೈನೋಸರ್ ಕಾಲದ ಪಳೆಯುಳಿಕೆ ಪತ್ತೆಯಾಗುವ ಮೂಲಕ ಭಾರತದಲ್ಲಿನ ಪ್ರಾಣಿ ಸಂಕುಲದ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಡೈನೋಸರ್ ಪ್ರಾಣಿಗೆ ಹೋಲುವ ದೈತ್ಯ ಗಾತ್ರದ ಮೂಳೆ ಇಲ್ಲಿ ಪತ್ತೆಯಾಗಿದೆ.

 

Read Full Story

08:34 PM (IST) Aug 21

ಇಸ್ಪೀಟ್ ಆಡ್ತಿದ್ದ ಡಿಕೆಶಿ, ಸಿದ್ದರಾಮಯ್ಯ ಓಡೋದ್ರು; ನೋಡ್ತಾ ನಿಂತಿದ್ದ ಪರಮೇಶ್ವರ ಸಿಕ್ಕಾಕೊಂಡ್ರು; ಕಥೆ ಕಟ್ಟಿದ ಅಶೋಕ್!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಸ್ಪೀಟ್ ಆಟದ ಕಥೆಯನ್ನು ಹೇಳಿದರು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಸ್ಪೀಟ್ ಆಟದಿಂದ ತಪ್ಪಿಸಿಕೊಂಡರೆ, ಪರಮೇಶ್ವರ್ ಸಿಕ್ಕಿಬಿದ್ದರು ಎಂದರು.

Read Full Story

08:10 PM (IST) Aug 21

ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿರುದ್ಧ ಪ್ರತಿಭಟನೆ ಪುನೀತ್ ಕೆರೆಹಳ್ಳಿ ವಶಕ್ಕೆ, ಪೊಲೀಸರೊಂದಿಗೆ ಮಾತಿನ ಚಕಮಕಿ!

ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಬಂಧಿಸಿರುವುದಕ್ಕೆ ಪ್ರತಿಭಟನಾಕಾರರು ಸ್ವಾಗತ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪುನೀತ್ ಕೆರೆಹಳ್ಳಿಯವರನ್ನು ಕೊಡಗಿನಿಂದ ಹೊರಗೆ ಕಳುಹಿಸಿ ನೊಟೀಸ್ ಜಾರಿ ಮಾಡಲಾಗಿದೆ.

Read Full Story

08:00 PM (IST) Aug 21

ಚಿತ್ರದುರ್ಗ ವರ್ಷಿತಾ ಕೊಲೆ ಕೇಸ್ ರಿವೀಲ್ - 3ನೇ ಸ್ಟೇಜ್ ಕ್ಯಾನ್ಸರ್ ರೋಗಿ ಪ್ರೀತಿ ಮಾಡದಿದ್ದಕ್ಕೆ ಮರ್ಡರ್!

ಚಿತ್ರದುರ್ಗದಲ್ಲಿ ನಡೆದ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 3ನೇ ಸ್ಟೇಜ್ ಕ್ಯಾನ್ಸರ್ ಪೇಷಂಟ್‌ನ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

Read Full Story

07:52 PM (IST) Aug 21

AIIMS ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುವುದು ಹೇಗೆ? OPD ಯಿಂದ ಕೀಮೋವರೆಗಿನ ಸಂಪೂರ್ಣ ವೆಚ್ಚದ ಮಾಹಿತಿ ಇಲ್ಲಿದೆ

AIIMSನಲ್ಲಿ ಕ್ಯಾನ್ಸರ್ ಚಿಕಿತ್ಸೆಯು ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ಮತ್ತು ವಿಕಿರಣ ಚಿಕಿತ್ಸೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯ. ಬಡ ರೋಗಿಗಳಿಗೆ ಆರ್ಥಿಕ ಸಹಾಯ ಯೋಜನೆಗಳೂ ಲಭ್ಯ.
Read Full Story

07:52 PM (IST) Aug 21

ಜಿಯೋ ಧಮಾಕ, ₹349ಕ್ಕೆ 5ಜಿ ಡೇಟಾ, ಮನೆ ವೈಫೈ,ಕ್ಲೌಡ್ ಸ್ಟೋರೇಜ್ ಸೇರಿ 2600 ರೂ ಪ್ರಯೋಜನ

ಜಿಯೋ ಧಮಾಕ ಆಫರ್ ನೀಡಿದೆ. ಕೇವಲ 349 ರೂ ರೀಚಾರ್ಜ್ ಮಾಡಿದರೆ ಸಾಕು, ಬರೋಬ್ಬರಿ 2,600 ರೂಪಾಯಿ ಪ್ರಯೋಜನ ನೀಡಿದೆ. 5ಜಿ ಡೇಟಾ, ಜಿಯೋ ಹಾಟ್‌ಸ್ಟಾರ್, ಹೋಮ್ ವೈಫೈ, ಕ್ಲೌಡ್ ಸ್ಟೋರೇಜ್ ಸೇರಿಂತೆ ಹತ್ತು ಹಲವು ಉಚಿತ ಆಫರ್ ನೀಡಿದೆ.

Read Full Story

07:43 PM (IST) Aug 21

ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನ , ಹೈ ಬಿಪಿ ಸಮಸ್ಯೆಗೆ ಮಾತ್ರೆ ನೀಡಿದ ವೈದ್ಯರು

  ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಕೀಲರು ಜಾಮೀನು ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story

07:40 PM (IST) Aug 21

ರಮ್ಯಾ ನಮ್ಮನೆ ವಿಷ್ಯಾ ಮಾತಡ್ಬೇಕಾ? ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ಸಂದರ್ಶನವೊಂದರಲ್ಲಿ ಸಿನಿಮಾ ಮತ್ತು ನಟಿಯರ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story

07:29 PM (IST) Aug 21

ಬರೋಬ್ಬರಿ 70 ವರ್ಷ ಬಳಿಕ ಸೂರ್ಯನ ಜ್ವಾಲೆ ಸ್ಫೋಟದ ರಹಸ್ಯ ಬಿಡಿಸಿದ ನಾಸಾ

ಸೂರ್ಯನ ಕುರಿತು ಅಧ್ಯಯನಕ್ಕೆ ಇಸ್ರೋ ಆದಿತ್ಯ ನೌಕೆ ಉಡಾವಣೆ ಮಾಡಿದೆ. ಇತ್ತ ನಾಸಾ ಕಳೆದ 7 ದಶಕಗಳಿಂದ ಅಧ್ಯಯನ, ಸಂಶೋಧನೆ ನಡೆಸಿ ಇದೀಗ ಸೌರ ಜ್ವಾಲೆ ಹಾಗೂ ಸ್ಫೋಟದ ರಹಸ್ಯ ಬಿಚ್ಚಿಟ್ಟಿದೆ.

Read Full Story

07:22 PM (IST) Aug 21

ರಾಪಿಡೋಗೆ ₹10 ಲಕ್ಷ ದಂಡ - ಗ್ರಾಹಕರ ದಿಕ್ಕು ತಪ್ಪಿಸಿದ್ದಕ್ಕೆ CCPA ದಿಟ್ಟ ಕ್ರಮ! ಏನಿದು ಪ್ರಕರಣ?

ಐದು ನಿಮಿಷಗಳಲ್ಲಿ ಆಟೋ ಸೇವೆ ಅಥವಾ ₹50 ಹಣ ವಾಪಸು ಎಂಬ ಜಾಹೀರಾತಿನ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸಿದ್ದಕ್ಕಾಗಿ ರಾಪಿಡೋಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ₹10 ಲಕ್ಷ ದಂಡ ವಿಧಿಸಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ ಎಂದು CCPA ಖಚಿತಪಡಿಸಿದೆ.
Read Full Story

06:57 PM (IST) Aug 21

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡ ಪಾವತಿಸಲು ಶೇ.50 ಡಿಸ್ಕೌಂಟ್; 20 ದಿನ ಮಾತ್ರ ಅವಕಾಶ!

ಸೆಪ್ಟೆಂಬರ್ 12 ರವರೆಗೆ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ ಘೋಷಿಸಲಾಗಿದೆ. ಫೆಬ್ರವರಿ 11, 2023 ರವರೆಗಿನ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯಿಸುತ್ತದೆ. ಆನ್‌ಲೈನ್ ಅಥವಾ ಸಂಚಾರ ಪೊಲೀಸ್ ಕಚೇರಿಗಳಲ್ಲಿ ದಂಡ ಪಾವತಿಸಬಹುದು.
Read Full Story

06:33 PM (IST) Aug 21

ಆನ್‌ಲೈನ್ ಗೇಮಿಂಗ್ ಕಂಪೆನಿಗಳ ಕರಾಳ ಮುಖ ತೆರೆದಿಟ್ಟ ರೇಡಿಯೋ ಜಾಕಿ, ಗಂಡನಿಗೆ ನೀಡಿತ್ತು ಚಿತ್ರಹಿಂಸೆ

ಆನ್‌ಲೈನ್ ಗೇಮಿಂಗ್ ಕಂಪನಿಗಳಲ್ಲಿನ ವಿಷಕಾರಿ ವಾತಾವರಣ, ಮೋಸದ ವ್ಯವಹಾರ ಮಾದರಿಗಳು ಮತ್ತು ಅವುಗಳು ಆಟಗಾರರ ಮೇಲೆ ಬೀರುವ ವಿನಾಶಕಾರಿ ಪರಿಣಾಮಗಳನ್ನು ಈ ಲೇಖನವು ಬೆಳಕಿಗೆ ತರುತ್ತದೆ. ಸರ್ಕಾರದ ಹೊಸ ಮಸೂದೆಯು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಚರ್ಚಿಸುತ್ತದೆ.
Read Full Story

06:33 PM (IST) Aug 21

ಧರ್ಮಸ್ಥಳ ಪ್ರಕರಣದಲ್ಲಿ RSS ನಾಯಕನ ಹೆಸ್ರು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ಸೊರಕೆ

Congress Leader Vinay kumar Sorake: ಧರ್ಮಸ್ಥಳ ಪ್ರಕರಣದಲ್ಲಿ ಕಾಣದ ಕೈಯೊಂದು ಒಂದು ಕಡೆ ಚಿವುಟುವುದು, ಮತ್ತೊಂದು ಕಡೆ ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.

Read Full Story

06:28 PM (IST) Aug 21

ತಾಯಿ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ನೋವು ತೋಡಿಕೊಂಡ ಪುತ್ರಿ ಪೂಜಾ ಬೇಡಿ

ದೇವರ ಸ್ಥಳದಿಂದ ಕೊನೆಯ ಪತ್ರ ಬಂದಿತ್ತು. ಬಳಿಕ ತಾಯಿ ಬಗ್ಗೆ ಸುಳಿವಿಲ್ಲ. ಇಷ್ಟು ವರ್ಷವಾದರೂ ತಾಯಿಯ ಮೃತದೇಹವೂ ಪತ್ತೆಯಾಗಿಲ್ಲ ಎಂದು ಪುತ್ರಿ ಪೂಜಾ ಬೇಡಿ ನೋವು ತೋಡಿಕೊಂಡಿದ್ದಾರೆ. ಪೂಜಾ ಬೇಡಿಗೆ ಏನಾಗಿತ್ತು? ಕೊನೆಯ ಪತ್ರದಲ್ಲಿ ಏನಿತ್ತು?

Read Full Story

06:27 PM (IST) Aug 21

ಮಹೇಶ್ ಶೆಟ್ಟಿ ತಿಮರೋಡಿ ಬಂಧನ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೂವರು ಆರೋಪಿಗಳ ಬಂಧನ!

ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಬಂಧನ. ಬಂಧನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರು ಸಹಚರರ ಬಂಧನ.
Read Full Story

06:23 PM (IST) Aug 21

ವಕೀಲ ಜಗದೀಶ್ ಬಂಧನಕ್ಕೆ ತೆರಳಿದ ಪೊಲೀಸರು ಬರಿಗೈಲಿ ವಾಪಸ್; ಜಪ್ಪಯ್ಯ ಅಂದ್ರೂ ಬಾಗಿಲು ತೆಗೀಲಿಲ್ಲ!

ಜಾತಿ ನಿಂದನೆ ಆರೋಪದ ಮೇಲೆ ವಕೀಲ ಜಗದೀಶ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ತೆರಳಿದ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಜಗದೀಶ್ ಮನೆ ಬಾಗಿಲು ತೆರೆಯಲು ಮತ್ತು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ.
Read Full Story

06:22 PM (IST) Aug 21

Russia Ukraine War - ರಷ್ಯಾ ಉಕ್ರೇನ್‌ ಯುದ್ಧದ ಬಾಂಬ್‌ ದಾಳಿಯಿಂದ ಬಚಾವ್‌ ಆದ ಗ್ಲೋಬಲ್‌ ಕನ್ನಡಿಗ ರಾಮ್!

Global Kannadiga Mahabala Ramm: ಗ್ಲೋಬಲ್ ಕನ್ನಡಿಗ‌ ಅಲಿಯಾಸ್ ರಾಮ್‌ ಅವರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಬಚಾವ್‌ ಆಗಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

 

Read Full Story

05:54 PM (IST) Aug 21

ವಾಸ್ತು ಗಣಪತಿ ವಿಗ್ರಹದ ಬಳಿ ಮೂತ್ರ ವಿಸರ್ಜನೆ; ಪ್ರಶ್ನಿಸಿದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!

ಮೈಸೂರಿನಲ್ಲಿ ಗಣಪತಿ ವಿಗ್ರಹದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ ಆಟೋ ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story

05:27 PM (IST) Aug 21

ಬಳ್ಳಾರಿ to ಬೆಂಗಳೂರು - ಪರಾರಿಯಾಗಿರೋ ಯುಟ್ಯೂಬರ್​ Sameer MD​ ಇತಿಹಾಸ ಬಯಲು! ಫಂಡಿಂಗ್​ ಯಾರದ್ದು?

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಮೂಲಕ ಸುಳ್ಳು ವಿಡಿಯೋ ಮಾಡಿ ಒಂದಷ್ಟು ಅಭಿಮಾನಿಗಳನ್ನು ಪಡೆದಿದ್ದ ಯುಟ್ಯೂಬರ್​ ಸಮೀರ್​ ಎಂಡಿ ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ ಇವರ ಇತಿಹಾಸ ಬಯಲಾಗಿದೆ.

 

Read Full Story

05:06 PM (IST) Aug 21

ಜಗತ್ತು ನೋಡಿರದ ತಾಜ್‌ಮಹಲ್‌ ಒಳಗಿನ ಶಹಜಹಾನ್, ಮುಮ್ತಾಜ್ ಸಮಾಧಿಗಳ ರಹಸ್ಯ ವಿಡಿಯೋ ವೈರಲ್!

ಮೊಘಲ್ ಚಕ್ರವರ್ತಿ ಶಹಜಹಾನ್ ಮತ್ತು ಮುಮ್ತಾಜ್‌ಳ ಸಮಾಧಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಜ್ ಮಹಲ್ ಒಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿರುವ ಈ ಸಮಾಧಿಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಚರ್ಚೆಗೆ ಗ್ರಾಸವಾಗಿದೆ.
Read Full Story

05:04 PM (IST) Aug 21

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಚಿಕ್ಕಮ್ಮನ ಮಗನ ಮೊಬೈಲ್ ಬಳಸುತ್ತಿದ್ದ ಯೂಟ್ಯೂಬರ್ ಸಮೀರ್

ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ಪೊಲೀಸರ ಆಗಮನದ ಮುನ್ಸೂಚನೆ ಪಡೆದ ಸಮೀರ್ ತಲೆಮರೆಸಿಕೊಂಡಿದ್ದಾರೆ. ಸಮೀರ್ ತಮ್ಮ ಚಿಕ್ಕಮ್ಮನ ಮಗನ ಮೊಬೈಲ್ ಬಳಸಿ ಪೊಲೀಸರನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರು.
Read Full Story

05:00 PM (IST) Aug 21

ಯೂಟ್ಯೂಬರ್ ಸಮೀರ್ ಎಂಡಿಗೆ ಬಿಗ್ ರಿಲೀಫ್, ನಿರೀಕ್ಷಣಾ ಜಾಮೀರು ಮಂಜೂರು

ಧರ್ಮಸ್ಥಳ ವಿರುದ್ದ ಅಪಪ್ರಚಾರ ಮಾಡಿದ ಆರೋಪಡಿ ಯೂಟ್ಯೂಬರ್ ಸಮೀರ್ ಎಂಡಿ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಮಂಗಳೂರು ಕೋರ್ಟ್ ಸಮೀರ್ ಎಂಡಿಗೆ ನಿರೀಕ್ಷಾ ಜಾಮೀನು ಮಂಜೂರು ಮಾಡಿದೆ.

Read Full Story

04:54 PM (IST) Aug 21

ತಿಮರೋಡಿ ಬಂಧನ ಆಗಿದೆ, ಇನ್ನೊಬ್ಬ ಇದ್ದಾನೆ ಮೊದಲು ಅವನೂ ಅರೆಸ್ಟ್ ಆಗಬೇಕು - ಅಭಯ್ ಚಂದ್ರ ಜೈನ್ ಕಿಡಿ

ತಿಮರೋಡಿ ಬಂಧನವಾಗಿದ್ದು, ಮಟ್ಟಣ್ಣನನ್ನೂ ಬಂಧಿಸಬೇಕೆಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ ಒತ್ತಾಯಿಸಿದ್ದಾರೆ. ಮುಸುಕುಧಾರಿಯೂ ಸೇರಿ ಮೂವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ತಪ್ಪಿಸ್ಥರಿಗೆ ಶಿಕ್ಷಿಸಬೇಕು ಎಂದರು.

Read Full Story

04:16 PM (IST) Aug 21

ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರಿನ ರಹಸ್ಯ ಆಯುಧಗಳು - ಹೆಲಿನಾ ಮತ್ತು ಧ್ರುವಾಸ್ತ್ರ

ಹೆಲಿನಾ ಮತ್ತು ಧ್ರುವಾಸ್ತ್ರ ಕ್ಷಿಪಣಿಗಳು ಭಾರತೀಯ ಸೇನೆಯ ಆಧುನಿಕ ಮುಖ. ಈ 'ಫೈರ್ ಆ್ಯಂಡ್ ಫರ್ಗೆಟ್' ತಂತ್ರಜ್ಞಾನ ಶತ್ರು ಟ್ಯಾಂಕ್‌ಗಳನ್ನು ಮೇಲಿನಿಂದ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. 7 ಕಿಲೋಮೀಟರ್ ದೂರದಿಂದಲೇ ಶತ್ರು ಟ್ಯಾಂಕ್‌ಗಳನ್ನು ನಾಶಪಡಿಸಬಲ್ಲ ದೇಶೀಯ ನಿರ್ಮಾಣದ   ಕ್ಷಿಪಣಿ

Read Full Story

04:14 PM (IST) Aug 21

ಬಂಧನ ಭೀತಿ ನಡುವೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಯೂಟ್ಯೂಬರ್ ಸಮೀರ್

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಸಮೀರ್ ಎಂಡಿ ಸಮೀರ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಎಸ್ಕೇಪ್ ಆಗಿರುವ ಸಮೀರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

Read Full Story

03:55 PM (IST) Aug 21

ಸಿಎಂಗೆ ಮುಡಾ ಸಂಕಟ ತಂದಿದ್ದ ಸ್ನೇಹಮಯಿ ಕೃಷ್ಣ ಧರ್ಮಸ್ಥಳದ ಕೇಸಿಗೂ ಎಂಟ್ರಿ! ಯಾರ ವಿರುದ್ಧ ದೂರು ಕೊಟ್ರು?

ಮುಡಾ ಭೂ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಟ ತಂದಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ಧರ್ಮಸ್ಥಳದ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಹೋಗಿ ನಾಲ್ವರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಬಂಧನ ಮಾಡುವಂತೆ ಲಿಖಿತ ದೂರು ದಾಖಲಿಸಿದ್ದಾರೆ.

Read Full Story

03:45 PM (IST) Aug 21

ಬಂಧನ ಭೀತಿಯಿಂದ ಯೂಟ್ಯೂಬರ್ ಸಮೀರ್ ನಾಪತ್ತೆ, ಬನ್ನೇರುಘಟ್ಟ ಮನೆ ಜಾಲಾಡಿದ ಪೊಲೀಸ್

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಬಂಧನ ಭೀತಿ ಬೆನ್ನಲ್ಲೇ ನಾಪತ್ತೆಯಾಗಿದ್ದಾನೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಮನೆ ತಡಕಾಡಿದ ಪೊಲೀಸರು ಇದೀಗ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಹುಡುಕಾಟ ಆರಂಭಿಸಿದ್ದಾರೆ.

Read Full Story

03:19 PM (IST) Aug 21

ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಖಚಿತಪಡಿಸಿದ ಉಡುಪಿ ಪೊಲೀಸರು! ಬ್ರಹ್ಮಾವರದಲ್ಲಿ ಬಿಗುವಿನ ವಾತಾವರಣ

ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
Read Full Story

03:14 PM (IST) Aug 21

ಮೂರು ವರ್ಷದಿಂದ ನಟಿಗೆ ಕಿರುಕುಳ, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಾಸಕ

ಕಾಂಗ್ರೆಸ್ ಶಾಸಕ ಮೂರು ವರ್ಷಗಳಿಂದ ಸತತವಾಗಿ ಖ್ಯಾತ ನಟಿಗೆ ಅಶ್ಲೀಲ ಸಂದೇಶ, ಹೊಟೆಲ್‌ಗೆ ಬರುವಂತೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಸ್ವತಃ ನಟಿ ಈ ಕುರಿತು ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಕೋಲಾಹಲದ ನಡುವೆ ಕಾಂಗ್ರೆಸ್ ಶಾಸಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

Read Full Story

03:08 PM (IST) Aug 21

ಮಹಿಳಾ ಏಕದಿನ ವಿಶ್ವಕಪ್ - ಭಾರತಕ್ಕೆ ಚೊಚ್ಚಲ ಕಪ್ ಗೆಲ್ಲಿಸಿಕೊಡಲು ರೆಡಿಯಾದ ಐವರು ಯಂಗ್‌ಸ್ಟರ್ಸ್!

ಐಸಿಸಿ ಮಹಿಳಾ ವಿಶ್ವಕಪ್ ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ. ಭಾರತೀಯ ಮಹಿಳಾ ತಂಡದ 15 ಸದಸ್ಯರ ಪಟ್ಟಿ ಪ್ರಕಟವಾಗಿದೆ. ಈ ತಂಡದಲ್ಲಿ ಸ್ಥಾನ ಪಡೆದ ಐದು ಯುವ ಆಟಗಾರ್ತಿಯರ ಬಗ್ಗೆ ತಿಳಿದುಕೊಳ್ಳೋಣ.

 

Read Full Story

03:01 PM (IST) Aug 21

ಧರ್ಮಸ್ಥಳ ಪ್ರಕರಣ - ಯೂಟ್ಯೂಬರ್ ಸಮೀರ್ ಬಂಧನಕ್ಕೆ ಬೆಂಗಳೂರು ಮನೆ ಸುತ್ತುವರೆದ ಧರ್ಮಸ್ಥಳ ಪೊಲೀಸರು

ಧರ್ಮಸ್ಥಳದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ವಿಡಿಯೋ ವಿವಾದದಲ್ಲಿ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಸಾಕ್ಷಿದಾರರ ಬಗ್ಗೆ ತಪ್ಪು ಮಾಹಿತಿಗಳನ್ನು ಸೇರಿಸಿ ಯೂಟ್ಯೂಬ್‌ನಲ್ಲಿ ಪ್ರಕಟಿಸಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದಾರೆ.  

Read Full Story

02:59 PM (IST) Aug 21

ಗಣೇಶ ಚತುರ್ಥಿಗೆ ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು!

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ. ಆಗಸ್ಟ್ 26 ರಿಂದ ಈ ರೈಲು ಸೇವೆ ಲಭ್ಯವಿರುತ್ತದೆ.
Read Full Story

02:41 PM (IST) Aug 21

ಧರ್ಮಸ್ಥಳದ ಮುಸುಕುಧಾರಿ ಅನಾಮಿಕನ ಕಪಟ ಬಯಲು; ಮೊದಲ ಪತ್ನಿಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ

ಧರ್ಮಸ್ಥಳ ಪ್ರಕರಣದ ಮುಸುಕುಧಾರಿಯ ನಿಜಬದುಕು ಆತನ ಮೊದಲ ಪತ್ನಿಯಿಂದ ಬಯಲಾಗಿದೆ. ಮೋಸಗಾರ, ಸುಳ್ಳುಗಾರ ಎಂದು ಆರೋಪಿಸಿ, ಆತನ ಹಿಂದಿನ ಜೀವನದ ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ಕಸ ಗುಡಿಸುತ್ತಿದ್ದ, ಎರಡನೇ ಪತ್ನಿಯ ಒತ್ತಡದಿಂದ ಹೀಗೆ ಮಾಡುತ್ತಿದ್ದಾನೆ ಎಂದಿದ್ದಾರೆ.

Read Full Story

01:25 PM (IST) Aug 21

ಮಹೇಶ್ ಶೆಟ್ಟಿ ತಿಮರೋಡಿ ಮೇಲಿದೆ ಜಾಮೀನು ರಹಿತ ಕೇಸ್; ವಶಕ್ಕೆ ಪಡೆದ ಕಾರಣ ಬಿಚ್ಚಿಟ್ಟ ಎಸ್‌ಪಿ ಹರಿರಾಮ್ ಶಂಕರ್!

ಜಾಮೀನು ರಹಿತ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾರೆಂಟ್ ಹಾಗೂ ನೋಟಿಸ್‌ಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತಿಮರೋಡಿ ಪುನರಾವರ್ತಿತ ಆರೋಪಿಯೂ ಹೌದು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Read Full Story

More Trending News