Published : Nov 12, 2025, 07:30 AM ISTUpdated : Nov 13, 2025, 12:18 AM IST

State News Live: ₹30,000 ಸಂಬಳದಲ್ಲಿ ನೀವು ಯಾವ ಕಾರನ್ನು ಖರೀದಿಸಬಹುದು? ಇಲ್ಲಿವೆ ಕಡಿಮೆ ಬೆಲೆಯ ಕಾರುಗಳು!

ಸಾರಾಂಶ

ಬೆಂಗಳೂರು (ನ.12): ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವಿಚಾರದಲ್ಲಿ ಷಡ್ಯಂತ್ರ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕೇಸ್‌ನಲ್ಲಿ ನಮ್ಮನ್ನು ಸಿಲುಕಿಸಲು ಕೈದಿಗಳ ಕೈಗೆ ಮೊಬೈಲ್‌ ನೀಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧಪಟ್ಟ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಆರೋಪಿಗಳು ನಾವು ಮೊಬೈಲ್‌ ಬಳಸಿಲ್ಲ ಎಂದು ಹೇಳಿದ್ದರೆ, ವಿಕೃತಕಾಮಿ ಉಮೇಶ್ ರೆಡ್ಡಿ ತಾನು ಮೊಬೈಲ್‌ ಬಳಕೆ ಮಾಡಿದ್ದು ನಿಜ ಎಂದು ಹೇಳಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

Affordable Cars Under Rs 5 Lakh in India

12:18 AM (IST) Nov 13

₹30,000 ಸಂಬಳದಲ್ಲಿ ನೀವು ಯಾವ ಕಾರನ್ನು ಖರೀದಿಸಬಹುದು? ಇಲ್ಲಿವೆ ಕಡಿಮೆ ಬೆಲೆಯ ಕಾರುಗಳು!

Affordable Cars Under Rs 5 Lakh in India: ತಿಂಗಳಿಗೆ ₹30,000 ಸಂಬಳವಿದ್ದರೂ, ಸ್ಮಾರ್ಟ್ ಆರ್ಥಿಕ ಯೋಜನೆ ಮತ್ತು ಸಾಲದ ಸೌಲಭ್ಯಗಳ ಮೂಲಕ ಹೊಸ ಕಾರು ಖರೀದಿಸುವುದು ಸಾಧ್ಯ. ಈ ಲೇಖನವು 2025ರಲ್ಲಿ ಲಭ್ಯವಿರುವ ₹5 ಲಕ್ಷದೊಳಗಿನ ಕಾರುಗಳ ಮಾಹಿತಿ ನೀಡಲಾಗಿದೆ.

Read Full Story

11:38 PM (IST) Nov 12

ಭಟ್ಕಳ - ಡಿಸ್ಕೌಂಟ್ ಆಸೆ ತೋರಿಸಿ 300 ಜನರಿಗೆ ಪಂಗನಾಮ; ತಮಿಳುನಾಡು ಮೂಲದ ಮೂವರು ಅರೆಸ್ಟ್

ಭಟ್ಕಳದಲ್ಲಿ 'ಗ್ಲೋಬಲ್ ಎಂಟರ್ ಪ್ರೈಸಸ್' ಹೆಸರಿನಲ್ಲಿ ಡಿಸ್ಕೌಂಟ್ ಆಫರ್ ನೀಡಿ 300ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿದ್ದ  ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಶಹರ ಠಾಣೆ ಪೊಲೀಸರು ಒಂದು ವಾರದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read Full Story

11:12 PM (IST) Nov 12

ಲೋನ್ ಮಾಡಿ ಐಫೋನ್‌ ಖರೀದಿ, ಕಂತು ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

Palakkad Man Brutally Attacked Over iPhone Loan Default: ಮೊಬೈಲ್ ಫೋನ್ ಲೋನ್ ಕಂತು ಕಟ್ಟಿಲ್ಲ ಅಂತ ಪಾಲಕ್ಕಾಡ್ ಮೂಲದ ಯುವಕನಿಗೆ ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿ ಮನಬಂದಂತೆ ಥಳಿಸಿದ್ದಾನೆ. ಹಲ್ಲೆಯಿಂದ ಯುವಕನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ.  

Read Full Story

10:51 PM (IST) Nov 12

ಬೆಂಗಳೂರು - 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಆರೋಪ - ಸತ್ವ ಗ್ರೂಪ್ ಅಶ್ವಿನ್ ಸಂಚೆಟಿ ಅರೆಸ್ಟ್!

ಸಾವಿರಾರು ಕೋಟಿ ಮೌಲ್ಯದ 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿಯನ್ನು ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 1978ರಲ್ಲಿ ಜಮೀನು ಖರೀದಿಸಿದ್ದ ಮೂಲ ಮಾಲೀಕರಾದ ರಾಧ ಎಂಬುವವರು ಇತ್ತೀಚೆಗೆ ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. 

Read Full Story

09:45 PM (IST) Nov 12

ವಿದ್ಯಾರ್ಥಿಗಳ ವಿದೇಶ ಪ್ರಯಾಣ ಮುಂಗಡ ಹಣ ಅಕ್ರಮ - ಮೂವರ ಬಂಧನ; 1.9 ಕೋಟಿ ಲೂಟಿ ಬೆಳಕಿಗೆ!

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ವಿದ್ಯಾರ್ಥಿಗಳ ವಿದೇಶ ಪ್ರಯಾಣದ ಹಣದಲ್ಲಿ 1.9 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು, ನಕಲಿ ದಾಖಲೆ ಸೃಷ್ಟಿಸಿ ಹೇಗೆ ವಂಚಿಸುತ್ತಿದ್ದರು ಗೊತ್ತೇ?

Read Full Story

08:18 PM (IST) Nov 12

ದೆಹಲಿ ಸ್ಫೋಟದಲ್ಲಿ ಐ20 ಜೊತೆ ಮತ್ತೊಂದು ಕೆಂಪು ಕಾರು, ಶಂಕಿತ ಉಗ್ರ ಡಾ.ಉಮರ್ ಇಕೋ ಸ್ಪೋರ್ಟ್ ಪತ್ತೆ

ದೆಹಲಿ ಸ್ಫೋಟದಲ್ಲಿ ಐ20 ಜೊತೆ ಮತ್ತೊಂದು ಕೆಂಪು ಕಾರು, ಶಂಕಿತ ಉಗ್ರ ಡಾ.ಉಮರ್ ಇಕೋ ಸ್ಪೋರ್ಟ್ ಪತ್ತೆ ಮಾಡಲಾಗಿದೆ. ಸ್ಫೋಟ ಪ್ರಕರಣದಲ್ಲಿ ರೆಡ್ ಇಕೋ ಸ್ಪೋರ್ಟ್ ಪ್ರಮುಖ ಪಾತ್ರವಹಿಸಿರುವ ಕುರಿತು ಪೊಲೀಸರು ಕೆಲ ದಾಖಲೆ ಸಂಗ್ರಹಿಸಿದ್ದಾರೆ.

Read Full Story

07:54 PM (IST) Nov 12

ದೆಹಲಿ ಸ್ಫೋಟ ಪ್ರಕರಣಕ್ಕೆ ಇಂಟಲಿಜೆನ್ಸ್, ಭದ್ರತಾ ವ್ಯವಸ್ಥೆ ಫೇಲ್ಯೂರ್ ಕಾರಣ - ಸಂಸದೆ ಪ್ರಭಾ ಮಲ್ಲಿಕಾರ್ಜುನ್

ದೆಹಲಿಯ ಚಾಂದನಿ ಚೌಕ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, ಇದೊಂದು ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಖಂಡಿಸಿದ್ದಾರೆ. ಈ ಕೃತ್ಯವು 'ಆಪರೇಷನ್ ಸಿಂದೂರ್'ಗೆ ಭಯೋತ್ಪಾದಕರು ನೀಡಿದ ಉತ್ತರವಾಗಿರಬಹುದು ಎಂದಿದ್ದಾರೆ.

Read Full Story

07:42 PM (IST) Nov 12

ಮದುವೆ ಕಾರ್ಯಕ್ರಮದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಜೊತೆ ಸುಧಮೂರ್ತಿ ಭರ್ಜರಿ ಡ್ಯಾನ್ಸ್

ಮದುವೆ ಕಾರ್ಯಕ್ರಮದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಜೊತೆ ಸುಧಮೂರ್ತಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಡೋಲು ನಾದಕ್ಕೆ ಆಪ್ತರ ಜೊತೆ ಸೇರಿ ಇಬ್ಬರು ಶ್ರೀಮಂತ ಉದ್ಯಮಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.

 

Read Full Story

07:23 PM (IST) Nov 12

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮರಿ ವೀರಪ್ಪನ್! ದೈತ್ಯ ಹುಲಿಯನ್ನೇ ಮೂರು ತುಂಡು ಮಾಡಿ ಗೋವಿಂದ ಯಾರು?

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿಯನ್ನು ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗನದೊಡ್ಡಿ ಗೋವಿಂದ 'ಮರಿ ವೀರಪ್ಪನ್' ಎಂದು ಕುಖ್ಯಾತಿ ಪಡೆದಿದ್ದಾನೆ. ವೀರಪ್ಪನ್‌ನಂತೆಯೇ ದೊಡ್ಡ ಕಾಡುಗಳ್ಳನಾಗಿ ಬೆಳೆಯುವ ಮುನ್ನ ಈತನನ್ನು ಬಂಧಿಸಲು ಅರಣ್ಯ ಇಲಾಖೆ ಬಲೆ ಬೀಸಿದೆ.

Read Full Story

07:05 PM (IST) Nov 12

ಚಿಕ್ಕಮಗಳೂರು - ಗೃಹ ಸಚಿವರ ವಿರುದ್ಧ ಅವಹೇಳನ; ಬಿಜೆಪಿ ಮುಖಂಡ ಅರೆಸ್ಟ್, ಅಷ್ಟಕ್ಕೂ ಸಂತೋಷ್ ಕೊಟ್ಯಾನ್ ಹೇಳಿದ್ದೇನು?

ಗೃಹ ಸಚಿವ ಪರಮೇಶ್ವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಂಧನವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Read Full Story

07:01 PM (IST) Nov 12

'ಮೋನಿಕಾ' ಹಾಡಿಗೆ ರಿಯಲ್​ ಪುತ್ರಿ ಜೊತೆ ರಿಯಲ್​ ವೇಷದಲ್ಲಿ Naa Ninna Bidallare ಶಂಭು ಭರ್ಜರಿ ಸ್ಟೆಪ್​!

'ನಾ ನಿನ್ನ ಬಿಡಲಾರೆ' ಸೀರಿಯಲ್‌ನ ಭಯಾನಕ ಶಂಭು ಪಾತ್ರಧಾರಿಯ ನಿಜವಾದ ಹೆಸರು ಸಂತೋಷ್ ಕರ್ಕಿ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಇವರು, ತಮ್ಮ ಮಗಳೊಂದಿಗೆ ಡಾನ್ಸ್ ಮಾಡುವ ಮೂಲಕ ಮತ್ತು ನಾಟಕಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಿಜ ಜೀವನದ ವಿಭಿನ್ನ ಮುಖವನ್ನು ಪರಿಚಯಿಸಿದ್ದಾರೆ.
Read Full Story

06:29 PM (IST) Nov 12

ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ತುಷ್ಟೀಕರಣ ನೀತಿಯೇ ಕಾರಣ - ಎಂಎಲ್‌ಸಿ ರವಿಕುಮಾರ ವಾಗ್ದಾಳಿ

ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರು, ಕಾಂಗ್ರೆಸ್‌ನ ಹಿಂದಿನ ಆಡಳಿತದಲ್ಲಿ ಭಯೋತ್ಪಾದನೆಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಯುಪಿಎ ಅವಧಿಗಿಂತ ಮೋದಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು 70% ಕಡಿಮೆಯಾಗಿವೆ ಎಂದು ಅಂಕಿ-ಅಂಶ ಸಮೇತ ವಾಗ್ದಾಳಿ ನಡೆಸಿದರು.

Read Full Story

06:15 PM (IST) Nov 12

ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು

ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು , ಇಬ್ಬರು ವಿದ್ಯಾರ್ಥಿಗು ಈಜಲು ತೆರಳಿದಾಗ ಈ ಘಟನೆ ನಡೆದಿದೆ. ಆಳ ಹಿನ್ನೀರಿನಲ್ಲಿ ಈಜುವ ಸಾಹಸ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

Read Full Story

05:59 PM (IST) Nov 12

Bigg Boss 12 - ಸಮಸ್ಯೆ ಗಿಲ್ಲಿದಾ, ಗಿಲ್ಲಿನೇ ಸಮಸ್ಯೆನಾ? ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟ ಅಭಿಷೇಕ್​!

ಬಿಗ್​ಬಾಸ್​ನಲ್ಲಿ ವೀಕ್ಷಕರ ಮನಗೆದ್ದಿರುವ ಗಿಲ್ಲಿ ನಟ, ಟಾಸ್ಕ್​ಗಳಲ್ಲಿ ಸತತವಾಗಿ ಸೋಲುತ್ತಿದ್ದಾರೆ. ಈ ಸರಣಿ ಸೋಲಿನಿಂದಾಗಿ ತಾವೇ ತಂಡಕ್ಕೆ ಸಮಸ್ಯೆಯಾಗುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸುತ್ತಿದ್ದು,   ಸಹ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬೇರೆಯದ್ದೇ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ. ಏನದು? 

Read Full Story

05:11 PM (IST) Nov 12

ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್

ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್ ಮಾಡುತ್ತಿದ್ದಾರೆ. ಯುವತಿಯ ಜೊತೆ ಲಾಡ್ಜ್‌ಗ ಹೋಗಿದ್ದು ಮಾತ್ರ ಗೊತ್ತು, ಬೆಳಗ್ಗೆ ಎದ್ದಾಗ, ಹಣ ಚಿನ್ನ ಯಾವೂದು ಇಲ್ಲ. ಮಾಯಗಾತಿ ವಿರುದ್ದ ದೂರು ದಾಖಲಾಗಿದೆ.

Read Full Story

05:11 PM (IST) Nov 12

Naa Ninna Bidalaare - ಶರತ್​- ದುರ್ಗಾ ಮೊದಲ ರಾತ್ರಿ ಸಂಭ್ರಮ- ಹಾಲಿನ ಬದಲು ನೀರು; ಇದೇನಾಗೋಯ್ತು?

'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ಅಡೆತಡೆಗಳ ನಡುವೆಯೂ ಶರತ್ ಮತ್ತು ದುರ್ಗಾ ಮದುವೆ ನಡೆದಿದೆ. ಆದರೆ, ಮೊದಲ ರಾತ್ರಿಯಂದು ಶರತ್, ದುರ್ಗಾಳಿಂದ ದೂರ ಉಳಿದಿದ್ದು, ಅದೇ சமயம் ದುರ್ಗಾಗೆ ಅಕ್ಕ ಅಂಬಿಕಾಳ ಆತ್ಮ ಕಾಣಿಸಿಕೊಂಡು ಕಥೆಗೆ ಹೊಸ ತಿರುವು ನೀಡಿದೆ.
Read Full Story

04:55 PM (IST) Nov 12

ಮೈಸೂರು - ಬಲರಾಮನಿಗಾಗಿ ಕಟ್ಟಿಕೊಂಡ ಗಂಡನ ಮರ್ಮಾಂಗ ಹಿಸುಕಿ ಕೊಂದ ಪತ್ನಿ!

Wife kills husband in Nanjangud: ನಂಜನಗೂಡು ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ, ಪತಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ.. ಕೊಲೆಯನ್ನು ಆತ್ಮ೧ಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತ್ನಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

Read Full Story

04:37 PM (IST) Nov 12

ಭೂಮಿಯತ್ತ ಸೂರ್ಯನ ಕೆನ್ನಾಲಿಗೆ - ಏನಿದು ನಿಗೂಢ ಸೌರ ಜ್ವಾಲೆ?

ಸೂರ್ಯನಿಂದ ಸಿಡಿದ ವರ್ಷದ ಅತ್ಯಂತ ಶಕ್ತಿಶಾಲಿ X5.1 ಸೌರ ಜ್ವಾಲೆಯು ಭೂಮಿಯನ್ನು ತಲುಪಿದ್ದು, ಯುರೋಪ್ ಮತ್ತು ಆಫ್ರಿಕಾದಲ್ಲಿ ರೇಡಿಯೋ ಸಂವಹನವನ್ನು ಸ್ಥಗಿತಗೊಳಿಸಿದೆ. ಈ ಘಟನೆಯು G4 ಮಟ್ಟದ ಸೌರ ಬಿರುಗಾಳಿ ಮತ್ತು ವ್ಯಾಪಕ ಅರೋರಾಗಳ ಸಾಧ್ಯತೆಯನ್ನು ಹೆಚ್ಚಿಸಿದೆ. ಈ ಜ್ವಾಲೆಯು ಉಪಗ್ರಹ, ಜಿಪಿಎಸ್ ಪರಿಣಾಮ.

Read Full Story

04:13 PM (IST) Nov 12

ಅಂದರಿಕೆ ಮಂಚೋಡು...ವೇದಿಕೆಯಲ್ಲಿ ತೆಲುಗು ಗಾದೆ ಹೇಳಿ ಅಚ್ಚರಿಗೊಳಿಸಿದ ಸಿಎಂ ಸಿದ್ದರಾಮಯ್ಯ

ಅಂದರಿಕೆ ಮಂಚೋಡು...ವೇದಿಕೆ ಮೇಲೆ ತೆಲುಗು ಗಾದೆ ಹೇಳಿ ಎಲ್ಲರ ಅಚ್ಚರಿಗೊಳಿಸಿದ ಸಿಎಂ ಸಿದ್ದರಾಮಯ್ಯ, ಕುರುಬ ಸಂಘ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪರಿಸ್ಥಿತಿಗೆ ತಕ್ಕಂತೆ ತೆಲುಗು ಗಾದೆಯೊಂದನ್ನು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

 

Read Full Story

03:43 PM (IST) Nov 12

ನನ್ ಹೆಂಡ್ತಿಗೂ ಫ್ರೀ, ರೇವಣ್ಣ ಹೆಂಡ್ತಿಗೂ ಫ್ರಿ ಎಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ಸಿದ್ದರಾಮಯ್ಯ

ನನ್ ಹೆಂಡ್ತಿಗೂ ಫ್ರೀ, ರೇವಣ್ಣ ಹೆಂಡ್ತಿಗೂ ಫ್ರಿ ಎಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ಸಿದ್ದರಾಮಯ್ಯ, ಭಾಷಣದ ವೇಳೆ ಸಿದ್ದರಾಮ್ಯ ಆಡಿದ ಮಾತಿನಿಂದ ಮುಜುಗುರದ ಸನ್ನಿವೇಶ ಎದುರಾಗಿದೆ. ಮುಖಂಡರ ಸೂಚನೆ ಬಳಿಕ ಸಿದ್ದರಾಮಯ್ಯ ಮಾತು ಬದಲಿಸಿದ ಘಟನೆ ನಡೆದಿದೆ.

 

Read Full Story

03:40 PM (IST) Nov 12

ಪ್ರಿಯಾಂಕಾ ಉಪೇಂದ್ರ ಮೊಬೈಲ್‌ ಹ್ಯಾಕ್‌ ಮಾಡಿದ ಬಿಹಾರಿ ಅರೆಸ್ಟ್‌!

ನಟ ಉಪೇಂದ್ರ ಮತ್ತು ಪ್ರಿಯಾಂಕ ಅವರ ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದಾಶಿವನಗರ ಪೊಲೀಸರು ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್‌ನನ್ನು ಬಂಧಿಸಿದ್ದಾರೆ..

Read Full Story

03:16 PM (IST) Nov 12

ಬಿಹಾರ ಚುನಾವಣೆಗೆ ಒಂದು ದಿನ ಮುಂಚೆ ಬ್ಲಾಸ್ಟ್‌ ಹೇಗಾಯಿತು? ಪ್ರಶ್ನೆ ಮಾಡಿದ ಜಮೀರ್‌ ಅಹ್ಮದ್‌ ಖಾನ್‌

Minister Zameer Ahmed Khan Questions Delhi Blast Timing ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಸಮಯದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಎತ್ತಿದ್ದಾರೆ. ಬಿಹಾರ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ.

Read Full Story

03:12 PM (IST) Nov 12

ಹರ್ಯಾಣದಲ್ಲಿ ಹೇಳಿದ್ದು ಕಾಂಗ್ರೆಸ್ ಬಂದಿದ್ದು ಬಿಜೆಪಿ, ಈಗ ಬಿಹಾರದಲ್ಲಿ ನೋಡಿ ಎಂದ ಖರ್ಗೆ

ಹರ್ಯಾಣದಲ್ಲಿ ಹೇಳಿದ್ದು ಕಾಂಗ್ರೆಸ್ ಬಂದಿದ್ದು ಬಿಜೆಪಿ, ಈಗ ಬಿಹಾರದಲ್ಲಿ ನೋಡಿ ಎಂದ ಖರ್ಗೆ, ಎಕ್ಸಿಟ್ ಪೋಲ್ ಬಿಹಾರದಲ್ಲಿ ಬಿಜೆಪಿಗೆ ಗೆಲುವು ಎಂದಿದೆ. ಆದರೆ ಈ ಬಾರಿ ಕಾಂಗ್ರೆಸ್ ಬಿಹಾರದಲ್ಲಿ ಗೆಲುವು ಸಾಧಿಸಲಿದೆ ಎಂದು ಖರ್ಗೆ ಭವಿಷ್ಯ ನುಡಿದಿದ್ದಾರೆ.

Read Full Story

01:59 PM (IST) Nov 12

ನಟಿ ರಾಶಿಯನ್ನು ಅಸಭ್ಯವಾಗಿ ತೋರಿಸಿದ ನಿರ್ದೇಶಕನಿಗೆ ಪಾರ್ಟಿ ಕೊಟ್ಟ ಸ್ಟಾರ್ ಹೀರೋ - ಅಸಲಿಗೆ ಆಗಿದ್ದೇನು?

ನಾಯಕಿ ರಾಶಿ ಮತ್ತು ಶ್ರೀಕಾಂತ್ ಜೊತೆ ಸಿನಿಮಾ ಮಾಡಿ ವಿವಾದಕ್ಕೆ ಸಿಲುಕಿದ್ದ ನಿರ್ದೇಶಕನಿಗೆ ಮೆಗಾಸ್ಟಾರ್ ಚಿರಂಜೀವಿ ಪಾರ್ಟಿ ಕೊಟ್ಟಿದ್ದರು. ಆ ಸಿನಿಮಾ ಯಾವುದು? ಆ ವಿವಾದವೇನು? ಈ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

01:40 PM (IST) Nov 12

ವಯೋಸಹಜ ಕಾಯಿಲೆಯಿಂದ ತಿಥಿ ಸಿನಿಮಾ ಖ್ಯಾತಿಯ 'ಗಡ್ಡಪ್ಪ' ಚನ್ನೇಗೌಡ ನಿಧನ

2016ರ 'ತಿಥಿ' ಚಿತ್ರದ ಗಡ್ಡಪ್ಪ ಪಾತ್ರದಿಂದ ಪ್ರಸಿದ್ಧರಾಗಿದ್ದ ಹಿರಿಯ ನಟ ಚನ್ನೇಗೌಡ (89) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮಂಡ್ಯ ಜಿಲ್ಲೆಯ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಕೊನೆಯುಸಿರೆಳೆದರು.

Read Full Story

01:26 PM (IST) Nov 12

ಜಿಎಸ್‌ಟಿ ಟ್ರೇಲರ್ ಲಾಂಚ್ ಮಾಡಿದ ಉಪೇಂದ್ರ - ಸೃಜನ್ ಲೋಕೇಶ್‌ಗೆ ಆ ಗಿಫ್ಟ್ ಕೊಟ್ಟ ಸಚಿನ್ ತೆಂಡೂಲ್ಕರ್

ಜಿಎಸ್‌ಟಿ ಎಂದರೆ ಘೋಸ್ಟ್ ಇನ್ ಟ್ರಬಲ್ ಅಂತ. ಆದರೆ ಈಗ ಸಿನಿಮಾ ಬಿಡುಗಡೆ ಸಮಯದಲ್ಲಿ ಇದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ ‘ಗೋ ಸೀ ಇನ್ ಥಿಯೇಟರ್’ ಎಂದು ನಟ ಸೃಜನ್‌ ಲೋಕೇಶ್‌ ಹೇಳಿದರು.

Read Full Story

01:12 PM (IST) Nov 12

ಬಿಹಾರ ಚುನಾವಣೆ ಗೆಲ್ಲೋದು ಕಷ್ಟ ಅಂತಾ ದೆಹಲಿ ಸ್ಪೋಟ ನಡೆದಿರಬಹುದು - ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ದೆಹಲಿ ಬಾಂಬ್ ಸ್ಫೋಟದ ಹಿಂದೆ ಬಿಹಾರ ಚುನಾವಣೆ ಗೆಲ್ಲುವ ರಾಜಕೀಯ ಉದ್ದೇಶವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

Read Full Story

01:05 PM (IST) Nov 12

ಜೈಲಲ್ಲಿ ಸೂಪರಾಗಿ​ ನೋಡಿಕೊಂಡ್ರು ಎಂದ Bigg Boss ಸತೀಶ್​ - ಕಾರಣ ಕೇಳಿದ್ರೆ ಎಷ್ಟು ಚೆನ್ನಾಗಿ ನುಣುಚಿಕೊಂಡ್ರು ನೋಡಿ!

50 ಕೋಟಿ ರೂ. ನಾಯಿ ವಿಚಾರವಾಗಿ ಇಡಿ ದಾಳಿಗೆ ಒಳಗಾಗಿದ್ದ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಇದೀಗ ಜೈಲಿನ ಅನುಭವದ ಬಗ್ಗೆ ಮಾತನಾಡಿದ್ದಾರೆ. ಜೈಲೇ ದಿ ಬೆಸ್ಟ್, ಅಲ್ಲಿ ಅಪ್ಪ-ಅಮ್ಮನಿಗಿಂತ ಚೆನ್ನಾಗಿ ನೋಡಿಕೊಂಡರು ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Read Full Story

12:55 PM (IST) Nov 12

ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ಹಸು.. ಇದರ ತೂಕ 1100 ಕೆಜಿ - ದಿನಕ್ಕೆ ಎಷ್ಟು ಲೀಟರ್ ಹಾಲು ಕೊಡುತ್ತೆ?

ವಿಶ್ವದ ಅತ್ಯಂತ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ನೆಲೋರ್ ತಳಿಯ ವಿಯಾಟಿನಾ-19 ಪಾತ್ರವಾಗಿದೆ. ಈ ಹಸುವನ್ನು 40 ಕೋಟಿ ರೂಪಾಯಿಗೆ ಹರಾಜು ಮಾಡಲಾಗಿದೆ. 1100 ಕೆಜಿಗಿಂತ ಹೆಚ್ಚು ತೂಕವಿರುವ ಈ ಹಸುವಿನ ವಿಶೇಷತೆಗಳೇನು ಎಂದು ತಿಳಿಯೋಣ.

Read Full Story

12:34 PM (IST) Nov 12

ಬರೋಬ್ಬರಿ 5 ವರ್ಷದ ವಿಳಂಬದ ಬಳಿಕ ಕೊನೆಗೂ ಮುಗಿದ ಪಿಇಎಸ್ ಫ್ಲೈಓವರ್‌ ಕಾಮಗಾರಿ, ಶೀಘ್ರದಲ್ಲೇ ವಾಹನ ಸಂಚಾರಕ್ಕೆ ಮುಕ್ತ!

ಐದು ವರ್ಷಗಳ ವಿಳಂಬದ ನಂತರ ಬೆಂಗಳೂರಿನ ಪಿಇಎಸ್‌ ಫ್ಲೈಓವರ್ ಕಾಮಗಾರಿ ಅಂತಿಮವಾಗಿ ಮುಕ್ತಾಯವಾಗಿದೆ. ಆದರೆ, ಒಂದು ಸಮಸ್ಯೆ ಬಗೆಹರಿದರೆ, ರಾಜರಾಜೇಶ್ವರಿ ನಗರದ ಫ್ಲೈಓವರ್ ಕಾಮಗಾರಿ ಎರಡು ವರ್ಷಗಳಿಂದ ಸ್ಥಗಿತಗೊಂಡು ಜನರ ಆತಂಕಕ್ಕೆ ಕಾರಣವಾಗಿದೆ.
Read Full Story

12:31 PM (IST) Nov 12

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಕೈಗಾರಿಕಾ ಇಲಾಖೆಯ ಮೂಲಕ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆಯನ್ನು ಸ್ಥಾಪಿಸಲಾಗಿದೆ. ಸಿದ್ದರಾಮಯ್ಯ ಅವರು ಚಿತ್ರಕಲಾ ರಚನೆ ಮತ್ತು ಘಂಟಾ ನಾದದ ಮೂಲಕ ಉದ್ಘಾಟಿಸಿದರು.

Read Full Story

12:20 PM (IST) Nov 12

'ಆರ್ಯ ಹೆಲ್ತ್ ಇನ್ಶೂರೆನ್ಸ್' ಬಿಡುಗಡೆ ಮಾಡಿದ ನಾರಾಯಣ ಹೆಲ್ತ್ ಇನ್ಶೂರೆನ್ಸ್ - ಗ್ರಾಹಕರಿಗೆ GST ಪ್ರಯೋಜನ ಲಭ್ಯ

ಪ್ರತಿಷ್ಠಿತ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ (ನಾರಾಯಣ ಹೆಲ್ತ್ ಇನ್ಶೂರೆನ್ಸ್) ಸಂಸ್ಥೆಯು ಇದೀಗ 'ಆರ್ಯ ಹೆಲ್ತ್ ಇನ್ಶೂರೆನ್ಸ್' ಎಂಬ ವಿನೂತನ ರಿಟೇಲ್ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ.

Read Full Story

12:01 PM (IST) Nov 12

ದೇಶಿ ಕ್ರಿಕೆಟ್ ಆಡಲು ಕೊಹ್ಲಿ-ರೋಹಿತ್‌ಗೆ ಬಿಸಿಸಿಐ ಸ್ಪಷ್ಟ ಸಂದೇಶ; ತಮ್ಮ ನಿಲುವು ಸ್ಪಷ್ಟಪಡಿಸಿದ ಹಿಟ್‌ಮ್ಯಾನ್!

ಏಕದಿನ ಪಂದ್ಯಗಳಲ್ಲಿ ಮುಂದುವರಿಯಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ ಆಡಬೇಕೆಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ ಇಬ್ಬರಿಗೂ ಸೂಚಿಸಲಾಗಿದ್ದು, ರೋಹಿತ್ ಶರ್ಮಾ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದಾರೆ.  

Read Full Story

11:54 AM (IST) Nov 12

Amruthadhaare - ಒಂದೆಡೆ ಜೈದೇವ್​ನಿಂದ ಮಲ್ಲಿಗೆ ಮುಕ್ತಿ - ಇನ್ನೊಂದೆಡೆ ಶುರುವಾಯ್ತು ಅನುರಾಗ; ಮುಗಿಯತ್ತಾ ಸೀರಿಯಲ್​?

ಅಮೃತಧಾರೆ ಸೀರಿಯಲ್ ರೋಚಕ ಹಂತ ತಲುಪಿದ್ದು, ಮಲ್ಲಿ ಡಿವೋರ್ಸ್ ಪೇಪರ್ ಮೂಲಕ ಜೈದೇವ್‌ಗೆ ಶಾಕ್ ನೀಡಿದ್ದಾಳೆ. ಇನ್ನೊಂದೆಡೆ, ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್‌ನ ಆರೈಕೆ ಮಾಡುತ್ತಿರುವ ಭೂಮಿಕಾಳನ್ನು ನೋಡಿ, ಇವರಿಬ್ಬರು ಒಂದಾಗುವ ಸೂಚನೆ ಸಿಕ್ಕಿದೆ. ಸೀರಿಯಲ್ ಮುಕ್ತಾಯ ಆಗ್ತಿದೆಯಾ?

Read Full Story

11:45 AM (IST) Nov 12

ಪರಪ್ಪನ ಅಗ್ರಹಾರ ಜೈಲಲ್ಲಿ ಶಂಕಿತ ಉಗ್ರರಿಗೆ ಮೊಬೈಲ್‌ ಕೇಸ್‌ ಎನ್‌ಐಎಗೆ ವಹಿಸಿ - ಆರ್‌.ಅಶೋಕ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು. ಈ ಬಗ್ಗೆ ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ ಎಂದು ಆರ್‌.ಅಶೋಕ್ ಆಗ್ರಹಿಸಿದ್ದಾರೆ.

Read Full Story

11:14 AM (IST) Nov 12

ಮೊಬೈಲ್‌ ವಿವಾದ - ಪರಪ್ಪನ ಅಗ್ರಹಾರ ಜೈಲಧೀಕ್ಷಕರಾಗಿ ಅಂಶು ಕುಮಾರ್‌ ಅಧಿಕಾರ ಸ್ವೀಕಾರ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಪ್ರಕರಣ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರನ್ನು ಸರ್ಕಾರ ನೇಮಿಸಿತ್ತು.

Read Full Story

11:06 AM (IST) Nov 12

ನ.17ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ - ಹಾಸನಾಂಬೆ ಉತ್ಸವ ಮಾದರಿಯಲ್ಲಿ ಅಲಂಕಾರ

ಹಾಸನಾಂಬೆ ದೇವಾಲಯ ಉತ್ಸವ ಮಾದರಿಯಲ್ಲಿ ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯ ಅಲಂಕಾರ ಮಾಡುತ್ತಿದ್ದು, ವಿಜೃಂಭಣೆಯಿಂದ ನ.17ರಿಂದ 21ರವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ.

Read Full Story

11:01 AM (IST) Nov 12

ಮತ್ತೆ ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್ ವಿಧಿಸಲು ಮುಂದಾದ ರಾಜ್ಯ ಸರ್ಕಾರ, ಕಾರ್ಮಿಕರ ಕಲ್ಯಾಣಕ್ಕೆ ಹಣ ಬಳಕೆ!

ಕರ್ನಾಟಕದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಥೆನಾಲ್‌ ಮೇಲೆ 1 ರೂ. ಸೆಸ್‌ ವಿಧಿಸಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

Read Full Story

10:46 AM (IST) Nov 12

ಸೊಸೆಗೆ ಲೈಂಗಿಕ ಕಿರುಕುಳ ಕೊಟ್ಟ ತಂದೆಯ ಕೊಲೆ ಮಾಡಿದ ಮಗ - ಅಸಲಿಗೆ ನಡೆದಿದ್ದೇನು?

ತಾಯಿ ಮತ್ತು ಹೆಂಡತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮಾಲವಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಶಿವಲಿಂಗಪ್ಪ(60) ಕೊಲೆಯಾದವ.

Read Full Story

10:25 AM (IST) Nov 12

ರಾಜಧಾನಿ ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ; ಮಾತು ಬಾರದ, ಕಾಲಿಲ್ಲದ ವಿಶೇಷ ಚೇತನ ಯುವತಿಯ ಅತ್ಯಾಚಾರಕ್ಕೆ ಯತ್ನ!

ಬೆಂಗಳೂರಿನ ಆಡುಗೋಡಿಯಲ್ಲಿ, ವಿಶೇಷ ಚೇತನ ಯುವತಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ವಿಘ್ನೇಶ್ ಎಂಬ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾಯಿಯಿಂದ ಕೃತ್ಯ ಬಯಲಾಗಿದ್ದು, ಸ್ಥಳೀಯರು ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Read Full Story

More Trending News