ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಅವರ ಆಪ್ತ ಶಾಸಕರು ಬ್ಯಾಟಿಂಗ್ ಮುಂದುವರಿಸಿದ್ದಾರೆ. ಜನವರಿ 6ರಂದು ಡಿ.ಕೆ.ಶಿವಕುಮಾರ್ಗೆ ಸಿಎಂ ಪಟ್ಟಾಭಿಷೇಕವಾಗುವ ವಿಶ್ವಾಸವಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರೆ, ಡಿಕೆಶಿ ಸದ್ಯದಲ್ಲೇ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಭವಿಷ್ಯ ನುಡಿದಿದ್ದಾರೆ. ಇನ್ನೊಂದೆಡೆ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ, ಡಿಕೆಶಿಯವರು ನಮ್ಮ ಆರಾಧ್ಯದೈವ ಎಂಬುದರಲ್ಲಿ ಎರಡು ಮಾತಿಲ್ಲ. ಜನವರಿ 6 ಅಥವಾ 9ಕ್ಕೆ ಅವರು ಪ್ರಮಾಣವಚನ ಸ್ವೀಕರಿಸಿದರೆ, ಸಂಭ್ರಮ ಪಡುವುದರಲ್ಲಿ ನಾನೇ ಮೊದಲಿಗ ಎಂದಿದ್ದಾರೆ.

02:53 PM (IST) Dec 14
ವಿಧವೆ ತಾಯಿ ಅಥವಾ ಒಂಟಿಯಾಗಿ ಮಹಿಳೆಯೊಬ್ಬಳು ಮಕ್ಕಳನ್ನು ಅದರಲ್ಲೂ ಹೆಣ್ಣು ಮಗುವನ್ನು ಸಾಕುವುದು ಸುಲಭದ ಕೆಲಸವಲ್ಲ. ಹೆಣ್ಣೊಬ್ಬಳು ಒಂಟಿಯಾಗಿದ್ದಾಳೆ ಎಂದರೆ ಸಹಾಯದ ನೆಪದಲ್ಲಿ ಹತ್ತಿರ ಬರಲು ಬಯಸುವವರು ಸಾವಿರಾರು ಜನ ಹೀಗಿರುವಾಗ ವಿಧವೆ ತಾಯೊಬ್ಬಳು ಮಗಳ ರಕ್ಷಣೆಗಾಗಿ ವೇಷವನ್ನೇ ಬದಲಿಸಿ ಬದುಕಿದ್ದಾಳೆ.
02:39 PM (IST) Dec 14
Bigg Boss Kannada Season 12 Elimination: ಈ ವಾರ ಡಬಲ್ ಎಲಿಮಿನೇಶನ್ ಇದೆ. ಈ ವಾರ ಒಬ್ಬರಲ್ಲ, ಇಬ್ಬರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಡಬಲ್ ಎಲಿಮಿನೇಶನ್ ಆಗಿದೆ ಎನ್ನಲಾಗಿದೆ.
02:17 PM (IST) Dec 14
ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಸಾಲೀಮಠ ಕೂಡ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ತಿಳಿಸಿದ್ದರು. ಈಗ ಇವರ ಖುಷಿ ಡಬಲ್ ಆಗಿದೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಶುಭಾಶಯವನ್ನು ತಿಳಿಸಿದ್ದಾರೆ. ಹಾಗಾದರೆ ಏನದು?
01:51 PM (IST) Dec 14
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಹೊಸ ಹಂಪಾಪುರ ಗ್ರಾಮದಲ್ಲಿ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಪ್ರಿಯಾಂಕ ತೀವ್ರ ಹೊಟ್ಟೆನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು.
01:51 PM (IST) Dec 14
2025ನೇ ವರ್ಷದಲ್ಲಿ ಬೆಂಗಳೂರು ಹಲವು ಗಂಭೀರ ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ, ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಸಚಿವರ ಹನಿಟ್ರ್ಯಾಪ್ ಯತ್ನದಂತಹ ಘಟನೆಗಳು ರಾಜ್ಯವನ್ನೇ ಬೆಚ್ಚಿಬೀಳಿಸಿ, ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದವು.
01:21 PM (IST) Dec 14
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ, ಗಂಡನ ಕಿರುಕುಳದಿಂದ ತವರು ಮನೆಗೆ ತೆರಳಿದ್ದ ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿಯ ಮೇಲೆ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಡಿಸೆಂಬರ್ 10 ರಂದು ನಡೆದ ಈ ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ.
01:04 PM (IST) Dec 14
ಬಿಗ್ ಬಾಸ್ ಕನ್ನಡ ಸೀಸನ್ 11ರ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿರುವ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ಮದುವೆಯ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮದುವೆಯ ಬಗ್ಗೆ ಸ್ಪಷ್ಟನೆ ನೀಡದ ಈ ಜೋಡಿ, ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.
12:57 PM (IST) Dec 14
ನಿಮ್ಮ ಮನಸ್ಸು ಪಾರ್ಟಿ, ಮೋಜು ಮತ್ತು ಹಬ್ಬದ ವೈಬ್ ಬಯಸಿದರೆ ಗೋವಾ ಆಯ್ಕೆ ಮಾಡಿ. ಒಂದು ವೇಳೆ ಶಾಂತಿ, ನೆಮ್ಮದಿ ಮತ್ತು ನಿಧಾನಗತಿಯ ಜೀವನ ಬೇಕೆಂದರೆ ಗೋಕರ್ಣ ನಿಮಗೆ ಪರ್ಫೆಕ್ಟ್. ಡಿಸೆಂಬರ್ನಲ್ಲಿ ನಿಮ್ಮ ಮೂಡ್ ಮತ್ತು ಟ್ರಾವೆಲ್ ಸ್ಟೈಲ್ಗೆ ಹೊಂದುವ ಸ್ಥಳವೇ ಸರಿಯಾದ ಆಯ್ಕೆ.
12:44 PM (IST) Dec 14
12:38 PM (IST) Dec 14
ಯುಟ್ಯೂಬ್ನಲ್ಲಿ ಮೀನಿನ ವಿಡಿಯೋಗಳಿಂದ ಖ್ಯಾತಿ ಗಳಿಸಿ ಬಿಗ್ಬಾಸ್ ಮನೆ ಪ್ರವೇಶಿಸಿರುವ ರಕ್ಷಿತಾ ಶೆಟ್ಟಿ, ಇದೀಗ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಮನೆಯಲ್ಲಿ ಎಲ್ಲರೂ ಗೆಲುವಿನ ಬಗ್ಗೆ ಚಿಂತಿಸುತ್ತಿದ್ದರೆ, ರಕ್ಷಿತಾ ಮಾತ್ರ ತಮಗೆ ಬೇರೆಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
12:28 PM (IST) Dec 14
ಚಿಕ್ಕಮಗಳೂರಿನಲ್ಲಿ, 10 ವರ್ಷಗಳಿಂದ ಪ್ರೀತಿಸಿ ಮೋಸ ಮಾಡಿದ ಯುವಕನ ಮದುವೆಯನ್ನು ಯುವತಿಯೊಬ್ಬಳು ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿ ನಿಲ್ಲಿಸಿದ್ದಾಳೆ. ಆಕೆಯ ಹೈಡ್ರಾಮಾದಿಂದಾಗಿ ಮದುವೆ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಕುಟುಂಬಸ್ಥರು ಮಂಟಪವನ್ನು ಖಾಲಿ ಮಾಡಿದ್ದಾರೆ.
12:23 PM (IST) Dec 14
ಭಾರತದಲ್ಲಿ ಡಿಸೆಂಬರ್ 12 ರಂದು ಓಝೆಂಪಿಕ್ (Ozempic) ನಂತಹ ತೂಕ ಇಳಿಸುವ ಔಷಧಿಗಳು ಬೊಜ್ಜು ಕಡಿಮೆ ಮಾಡಲು ಹೊಸ ಭರವಸೆಯನ್ನು ಮೂಡಿಸಿವೆ. ಓಝೆಂಪಿಕ್ ಎಂದರೇನು, ಅದರ ಡೋಸೇಜ್ ಮತ್ತು ಬೆಲೆ, ಹಾಗೂ 2026 ರಲ್ಲಿ ಭಾರತದಲ್ಲಿ ಲಭ್ಯವಿರುವ ಇತರ ತೂಕ ಇಳಿಸುವ ಔಷಧಿಗಳ ಬಗ್ಗೆ ತಿಳಿಯಿರಿ.
11:53 AM (IST) Dec 14
ಮದುವೆ ಜೀವನದಲ್ಲಿ ಜಗಳಗಳಿಂದ ದೂರವಾದ ದಂಪತಿ ಮತ್ತೆ ಒಂದಾಗಲು ಇದೊಂದು ಸುಲಭ ಆಧ್ಯಾತ್ಮಿಕ ಪರಿಹಾರ. ಮಂಗಳವಾರದಂದು ಮಾಡುವ ಈ ಪರಿಹಾರವು ಇಬ್ಬರ ನಡುವೆ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
11:50 AM (IST) Dec 14
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವೀಕ್ಷಕರ ಮನಸ್ಸು ಗೆದ್ದಿರುವ ರಕ್ಷಿತಾ ಶೆಟ್ಟಿ ಅವರ ತಂದೆ-ತಾಯಿ ಮುಂಬೈನಲ್ಲಿದ್ದರೆ, ಅಜ್ಜಿ ಉಡುಪಿಯಲ್ಲಿ ಇರುತ್ತಾರೆ. ರಕ್ಷಿತಾ ಶೆಟ್ಟಿ ಅವರ ಆಟದ ಬಗ್ಗೆ ಅಜ್ಜಿ ಅವನಿಯಾನ ಎನ್ನುವ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
11:16 AM (IST) Dec 14
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಇಂದು ಎಲಿಮಿನೇಶನ್ ನಡೆಯಬೇಕು. ಆದರೆ ಇಲ್ಲೊಂದು ಟ್ವಿಸ್ಟ್ ಕಾದಿದೆ. ಈ ಬಾರಿ Expect The Unexpected ಎಂಬ ಥೀಮ್ ಇದ್ದು, ಯಾವಾಗ ಏನೂ ಬೇಕಿದ್ರೂ ಆಗಬಹುದು. ಹಾಗಾದರೆ ಈ ವಾರ ಏನಾಗಬಹುದು?
11:09 AM (IST) Dec 14
ರಾಧಿಕಾ ಆಪ್ಟೆ ಇತ್ತೀಚೆಗೆ ಸಿನಿಮಾಗಳಲ್ಲಿನ ಹಿಂಸೆಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಅವರ ಕಾಮೆಂಟ್ಗಳು ವೈರಲ್ ಆಗುತ್ತಿವೆ. ಆದರೆ, ನೆಟಿಜನ್ಗಳು ರಾಧಿಕಾ ಅವರನ್ನೇ ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ.
10:48 AM (IST) Dec 14
ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಅವರ ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳು ಜನಿಸಿದ್ದಾರೆ. ಗರ್ಲ್ಫ್ರೆಂಡ್ಗೆ ಇಬ್ಬರು ಗಂಡು ಮಕ್ಕಳಾದ ಮೇಲೆ ನಿಶ್ಚಿತಾರ್ಥ ಮಾಡಿಕೊಳ್ಳಲು ರೆಡಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
10:38 AM (IST) Dec 14
ಹಲವು ಸಮಸ್ಯೆಗಳನ್ನು ಮೀರಿ ಬಾಲಯ್ಯರ ಬ್ಲಾಸ್ಟಿಂಗ್ ಸಿನಿಮಾ ಅಖಂಡ 2 ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹಾಗಾದ್ರೆ ಈ ಚಿತ್ರದ OTT ರಿಲೀಸ್ ಯಾವಾಗ? ಎಲ್ಲಿ?
10:18 AM (IST) Dec 14
ಟಿವಿ ಸುದ್ದಿ ಮಾಧ್ಯಮದಲ್ಲಿನ ಅತ್ಯುತ್ತಮ ಸಾಧನೆಗಾಗಿ ನೀಡಲಾಗುವ 2024ರ ಪ್ರತಿಷ್ಠಿತ ಎನ್ಬಾ ಪ್ರಶಸ್ತಿ ಘೋಷಣೆಯಾಗಿದ್ದು, ‘ಏಷ್ಯಾನೆಟ್ ಸುವರ್ಣ ನ್ಯೂಸ್’ 8 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
10:01 AM (IST) Dec 14
ಮಕ್ಕಳನ್ನು ದೊಡ್ಡ ದೊಡ್ಡ ಹುದ್ದೆಗೆ ಮುಟ್ಟಿಸುವ ಆಸೆಯೊಂದಿಗೆ ಇಂಗ್ಲಿಷ್ ಕಾನ್ವೆಂಟುಗಳಿಗೆ ಫೀಜು ಕಟ್ಟುವಷ್ಟು ಶಕ್ತಿ ಇತ್ತು. ಆ ಕುಟುಂಬದ ಹೆಣ್ಣುಮಕ್ಕಳು ಮುಖಕ್ಕೆ ಪೌಡರ್, ಲಿಪ್ಸ್ಟಿಕ್, ಕ್ರೀಮು ಎಂದೆಲ್ಲಾ ಹಣ ಖರ್ಚು ಮಾಡುತ್ತಿದ್ದರು.
09:49 AM (IST) Dec 14
ಖಾನಾಪುರದ ಮಾಜಿ ಶಾಸಕಿ ಹಾಗೂ ಗೋವಾದ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್ ಅವರು ತತ್ಕ್ಷಣ ವೈದ್ಯಕೀಯ ನೆರವು ನೀಡುವ ಮೂಲಕ ಅಮೆರಿಕದ ಯುವತಿಯೊಬ್ಬಳ ಪ್ರಾಣ ಉಳಿಸಿದ ಮಾನವೀಯ ಘಟನೆ ನಡೆದಿದೆ.
08:46 AM (IST) Dec 14
ಮತ ಪತ್ರಗಳನ್ನು ತಿದ್ದಿದ ಆರೋಪದ ಮೇಲೆ ಆರೋಪ ಪಟ್ಟಿಯಲ್ಲಿ ತಮ್ಮ ಹಾಗೂ ಪುತ್ರ ಹರ್ಷಾನಂದ ಗುತ್ತೇದಾರ್ ಹೆಸರು ಸೇರ್ಪಡೆ ಮಾಡಿರುವ ಎಸ್.ಐ.ಟಿ ಕ್ರಮ ರಾಜಕೀಯ ಪ್ರೇರಿತ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹೇಳಿದ್ದಾರೆ.
08:42 AM (IST) Dec 14
BBK 12: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಅತಿಥಿಯಾಗಿ ಬಂದಿದ್ದ ಸೀಸನ್ 11 ಸ್ಪರ್ಧಿ ರಜತ್, ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದರು. ಹೊರಗಡೆ ಗಿಲ್ಲಿ ಇಷ್ಟ ಆಗುತ್ತಿದ್ದ, ಈಗ ಇರಿಟೇಟ್ ಅನಿಸಿದ ಎಂದು ಅವರು ಹೇಳಿದ್ದರು. ವೈಲ್ಡ್ಕಾರ್ಡ್ ಸ್ಪರ್ಧಿ ಎಂದು ಘೋಷಣೆಯಾದ ಬಳಿಕ ರಜತ್ ಬದಲಾದರು.
08:20 AM (IST) Dec 14
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂರಜ್ ಹಾಗೂ ರಾಶಿಕಾ ಶೆಟ್ಟಿ ನಡುವೆ ದೊಡ್ಡ ಜಗಳವೇ ಆಗಿದೆ. ಇನ್ನು ಮುಖ ನೋಡಲ್ಲ, ಮಾತಾಡಲ್ಲ ಎಂದು ಹೇಳಿದ್ದ ರಾಶಿಕಾ ಶೆಟ್ಟಿ ಅವರು ಮತ್ತೆ ಸೂರಜ್ ಜೊತೆ ಆರಾಮಾಗಿ ಮಾತನಾಡಿದ್ದಾರೆ.
07:50 AM (IST) Dec 14
Actor Darshan Thoogudeepa News: ನಟ ದರ್ಶನ್ ತೂಗುದೀಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅಂದಹಾಗೆ ಇವರ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಈ ಕುರಿತಂತೆ ವಿಜಯಲಕ್ಷ್ಮೀ ಅವರು ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದು ಮಾತನಾಡಿದ್ದಾರೆ.