MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಲವ್​ ಅಜ್ಜಿಯ ಮಾಸ್ಟರ್​ ಪ್ಲ್ಯಾನ್​ನಿಂದ ರೋಚಕ ಟ್ವಿಸ್ಟ್​​: Amruthadhaare Serial ಯಾವಾಗ ಮುಗಿಯತ್ತೆ?

ಲವ್​ ಅಜ್ಜಿಯ ಮಾಸ್ಟರ್​ ಪ್ಲ್ಯಾನ್​ನಿಂದ ರೋಚಕ ಟ್ವಿಸ್ಟ್​​: Amruthadhaare Serial ಯಾವಾಗ ಮುಗಿಯತ್ತೆ?

'ಅಮೃತಧಾರೆ' ಧಾರಾವಾಹಿಯಲ್ಲಿ ಲವ್ ಅಜ್ಜಿಯ ಮರುಪ್ರವೇಶವಾಗಿದ್ದು, ದೂರವಾಗಿರುವ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಸಾಯುವ ನಾಟಕವಾಡಿದ್ದಾಳೆ. ಅಜ್ಜಿಯ ಕೊನೆಯಾಸೆಯಂತೆ ಇಬ್ಬರೂ ಆಶ್ರಮಕ್ಕೆ ಬರಲಿದ್ದು, ಈ ಪ್ಲ್ಯಾನ್ ಯಶಸ್ವಿಯಾಗುವುದೇ ಎಂದು ಕಾದುನೋಡಬೇಕಿದೆ.

2 Min read
Suchethana D
Published : Dec 14 2025, 04:57 PM IST
Share this Photo Gallery
  • FB
  • TW
  • Linkdin
  • Whatsapp
18
ಲವ್​ ಅಜ್ಜಿ ಎಂಟ್ರಿ
Image Credit : Instagram

ಲವ್​ ಅಜ್ಜಿ ಎಂಟ್ರಿ

ಅಮೃತಧಾರೆ ಸೀರಿಯಲ್​ (Amruthadhaare)ನಲ್ಲಿ ಲವ್​ ಅಜ್ಜಿಯ ಎಂಟ್ರಿ ಆಗಿದೆ. ಹಾವು -ಮುಂಗುಸಿಯಂತಿದ್ದ ಗೌತಮ್​ ಮತ್ತು ಭೂಮಿಕಾ ನಡುವೆ ಪ್ರೀತಿಯನ್ನು ಚಿಗುರಿಸಿದ್ದ ಇದೇ ಲವ್​ ಗುರು ಅಜ್ಜಿ, ಇದೀಗ ಮತ್ತೆ ಇಬ್ಬರನ್ನೂ ಒಂದು ಮಾಡಲು ಮಾಸ್ಟರ್​ ಪ್ಲ್ಯಾನ್​ ಹಾಕಿದ್ದಾಳೆ.

28
ದೂರ ದೂರ...
Image Credit : zee5

ದೂರ ದೂರ...

ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್​ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್​ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್​ ಜೊತೆ ಬರಲು ರೆಡಿನೇ ಇಲ್ಲ. ಗೌತಮ್​ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ. ಈಗ ಆ ಭಯ ದೂರವಾಗಿದೆ.

Related Articles

Related image1
Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಟ್ಯಾಟೂ ಆರ್ಟಿಸ್ಟ್​ ಮನೋಜ್​ ಕುಮಾರ್​
Related image2
ಏನಿಲ್ಲ, ಏನಿಲ್ಲ... ಎನ್ನುತ್ತಲೇ ಹೀಗೆ ಮಾಡಿದ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್​​ ಶಾಸ್ತ್ರಿ ಜೋಡಿ
38
ಆಸ್ತಿ ಕಬಳಿಕೆ
Image Credit : Instagram

ಆಸ್ತಿ ಕಬಳಿಕೆ

ಅದೇ ಇನ್ನೊಂದೆಡೆ, ಅಜ್ಜಿಯ ಎಲ್ಲಾ ಆಸ್ತಿಗಳನ್ನು ಕಬಳಿಸಿ ಜೈದೇವ್​ ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾನೆ. ಅಜ್ಜಿಯ ಕಷಾಯದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಹೆಬ್ಬೆರಳು ಅಚ್ಚು ಹಾಕಿಸಿಕೊಂಡು ಆಸ್ತಿ ಲಪಟಾಯಿಸಿದ್ದಾನೆ.

48
ಆನಂದ್​ಗೆ ವಿಷ್ಯ
Image Credit : Instagram

ಆನಂದ್​ಗೆ ವಿಷ್ಯ

ಈ ವಿಷ್ಯ ಮಾವ ಲಕ್ಷ್ಮೀಕಾಂತನಿಂದ ಆನಂದ್​ಗೆ ಗೊತ್ತಾಗಿದೆ. ಅಜ್ಜಿಯನ್ನು ಹುಡುಕಿ ಭಾಗ್ಯಮ್ಮ ಮತ್ತು ಆನಂದ್​ ವೃದ್ಧಾಶ್ರಮಕ್ಕೆ ಹೋಗಿದ್ದಾರೆ. ಅಜ್ಜಿ ಅಂದ್ರೆ ಸುಮ್ಮನೇ ಅಲ್ಲ. ಈ ಮೊದಲೂ ಇವರಿಬ್ಬರನ್ನು ಒಂದು ಮಾಡಿದ್ದು ಇದೇ ಅಜ್ಜಿ. ಈಗಲೂ ಒಂದು ಮಾಡುವ ಪಣ ತೊಟ್ಟಿದ್ದಾಳೆ.

58
ಸಾಯುವ ನಾಟಕ
Image Credit : Instagram

ಸಾಯುವ ನಾಟಕ

ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್​ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್​ಗೆ ಹೇಳಿದ್ದಾಳೆ. ಆ ಪ್ಲ್ಯಾನ್​​ನಂತೆ ಭಾಗ್ಯಮ್ಮ ಭೂಮಿಕಾ ಮನೆಗೆ ಬಂದು ಅಜ್ಜಿ ಈಗಲೋ ಆಗಲೋ ಎನ್ನುತ್ತಿದ್ದಾರೆ. ಬೇಗ ಗೌತಮ್​ನನ್ನು ಕರೆದುಕೊಂಡು ಬಾ ಎಂದಿದ್ದಾಳೆ.

68
ಗೌತಮ್​ಗೆ ವಿಷ್ಯ
Image Credit : Instagram

ಗೌತಮ್​ಗೆ ವಿಷ್ಯ

ಅದೇ ಇನ್ನೊಂದೆಡೆ, ಆನಂದ್​ ಗೌತಮ್​ಗೆ ಕಾಲ್​ ಮಾಡಿ ವಿಷಯ ತಿಳಿಸಿದ್ದಾನೆ. ಅಜ್ಜಿಯ ಕೊನೆಯ ಆಸೆ ಈಡೇರಿಸಬೇಕು ಎಂದರೆ ಅತ್ತಿಗೆಯನ್ನು ಕರೆದುಕೊಂಡು ಆಶ್ರಮಕ್ಕೆ ಬಾ ಎಂದಿದ್ದಾನೆ. ಮೊದಲಿಗೆ ಇದನ್ನು ಗೌತಮ್​ ನಂಬದಿದ್ದರೂ ಕೊನೆಗೆ ನಂಬಿದ್ದಾನೆ.

78
ಇಬ್ಬರೂ ಬರಲೇಬೇಕು
Image Credit : Instagram

ಇಬ್ಬರೂ ಬರಲೇಬೇಕು

ಇದೀಗ ಗೌತಮ್​ ಮತ್ತು ಭೂಮಿಕಾ ಅಜ್ಜಿಯನ್ನು ನೋಡಲು ಬರಲೇಬೇಕು. ನಾಟಕದಲ್ಲಿ ಎಕ್ಸ್​ಪರ್ಟ್​ ಅಜ್ಜಿ ಇಬ್ಬರನ್ನೂ ಒಂದು ಮಾಡೋದಂತೂ ಗ್ಯಾರೆಂಟಿ. ಹೀಗಾದರೆ ಅಲ್ಲಿಗೆ ದೊಡ್ಡ ಸ್ಟೋರಿ ಮುಗಿದಂತೆ.

88
ಜೈದೇವ್​ಗೆ ಬುದ್ಧಿ ಕಲಿಸೋದು
Image Credit : zee5

ಜೈದೇವ್​ಗೆ ಬುದ್ಧಿ ಕಲಿಸೋದು

ಇನ್ನೇನಿದ್ದರೂ ಜೈದೇವ ಮತ್ತು ಶಕುಂತಲಾಗೆ ಬುದ್ಧಿ ಕಲಿಸೋದು ಮಾತ್ರ ಬಾಕಿ ಇರೋದು. ಅದಕ್ಕೂ ಈ ಅಜ್ಜಿ ಬಳಿ ಪ್ಲ್ಯಾನ್​​ ಇದ್ದೇ ಇದೆ. ಎಲ್ಲರೂ ಒಂದಾಗಿ ಅದನ್ನೂ ಮಾಡಿದರೆ ಅಲ್ಲಿಗೆ ಸೀರಿಯಲ್​ ಅತಿ ಶೀಘ್ರದಲ್ಲಿ ಮುಗಿಯುವ ಸೂಚನೆ ಕಾಣಿಸುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಸಂಬಂಧಗಳು
ಮದುವೆ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?
Recommended image2
Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಟ್ಯಾಟೂ ಆರ್ಟಿಸ್ಟ್​ ಮನೋಜ್​ ಕುಮಾರ್​
Recommended image3
BBK 12: ಕಿಚ್ಚ ಸುದೀಪ್‌ ಮುಂದೆ ರಜತ್‌ ಬೆಂಡೆತ್ತಿದ ಅಶ್ವಿನಿ ಗೌಡ; ವೀಕ್ಷಕರಿಂದ ಭಾರೀ ಮೆಚ್ಚುಗೆ
Related Stories
Recommended image1
Bigg Boss ಸ್ಕ್ರಿಪ್ಟೆಡ್ಡಾ? ದೊಡ್ಮನೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಟ್ಯಾಟೂ ಆರ್ಟಿಸ್ಟ್​ ಮನೋಜ್​ ಕುಮಾರ್​
Recommended image2
ಏನಿಲ್ಲ, ಏನಿಲ್ಲ... ಎನ್ನುತ್ತಲೇ ಹೀಗೆ ಮಾಡಿದ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್​​ ಶಾಸ್ತ್ರಿ ಜೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved