- Home
- Entertainment
- TV Talk
- BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗಾಗಲೇ 77 ದಿನಗಳು ಕಳೆದಿವೆ. ಯಾರು ಫಿನಾಲೆ ತಲುಪುತ್ತಾರೆ? ಯಾರು ವಿಜೇತರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ವೀಕ್ಷಕರ ಮತಗಳು ಅಥವಾ ಅಭಿಮಾನಿ ಪ್ರಕಾರ ಯಾರು ಫಿನಾಲೆಗೆ ಹೋಗುತ್ತಾರೆ? ಯಾರು ಗೆಲ್ಲುತ್ತಾರೆ?

ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ನೆಗೆಟಿವ್ ವಿಚಾರಗಳಿಂದ ಅಥವಾ ನೆಗೆಟಿವ್ ಪ್ರತಿಕ್ರಿಯೆ ಪಡೆದು ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಏನೇ ವಿಚಾರಗಳು ಬಂದರೂ ಕೂಡ ಅದಕ್ಕೆ ಸ್ಟ್ಯಾಂಡ್ ತಗೊಳ್ತಾರೆ, ಧ್ವನಿ ಎತ್ತುತ್ತಾರೆ. ಇವರಿಂದ ಇನ್ನೊಬ್ಬರು ಹೀರೋ ಆಗಿದ್ದೇ ಹೆಚ್ಚು. ಹೀಗಾಗಿ ಅವರು ಫಿನಾಲೆಯಲ್ಲಿ ಇರೋದು ಪಕ್ಕಾ ಎನ್ನಬಹುದು. ಆದರೆ ಟ್ರೋಫಿ ಹೊಡೆಯುವ ಸಾಧ್ಯತೆ ಕಡಿಮೆ ಎನ್ನಬಹುದು. ಎರಡನೇ ರನ್ನರ್ ಅಪ್ ಆದರೂ ಆಶ್ಚರ್ಯವಿಲ್ಲ.
ಕಾವ್ಯ ಶೈವ
ಗಿಲ್ಲಿ ನಟನ ಜೊತೆ ಹೆಚ್ಚು ಕಾಣಿಸಿಕೊಂಡ ಕಾವ್ಯ ಶೈವ ಅವರಿಗೆ ಅಭಿಮಾನಿ ವರ್ಗವಿದೆ. ಟಾಸ್ಕ್ನಲ್ಲಿ ಅಷ್ಟು ಆಡಿಲ್ಲ, ಅಡುಗೆಯನ್ನು ಮಾಡಿಲ್ಲ. ಆದರೆ ಎಲ್ಲೆಲ್ಲಿ ಸ್ಟ್ಯಾಂಡ್ ತಗೋಬೇಕು ಅವರು ತಗೊಂಡು ಮಾತನಾಡಿದ್ದುಂಟು. ಅಷ್ಟೇ ಅಲ್ಲದೆ ತಪ್ಪು ಎಂದಾಗ ಅವರು ಗಿಲ್ಲಿ ನಟನನ್ನು ಕೂಡ ವಿರೋಧಿಸಿದ್ದರು. ಇವರು ಫಿನಾಲೆಯಲ್ಲಿ ಇರುವ ಸಾಧ್ಯತೆ ಹೆಚ್ಚಿದೆ.
ಧ್ರುವಂತ್
ಸದ್ಯ ಎಲಿಮಿನೇಟ್ ಎಂದು ಹೇಳಿದರೂ ಕೂಡ ಧ್ರುವಂತ್ ಅವರು ಸೀಕ್ರೇಟ್ ರೂಮ್ಗೆ ಹೋಗಿದ್ದಾರೆ. ಅವರು ಮನೆಗೆ ಮತ್ತೆ ಮರಳುತ್ತಾರೆ. ಇವರು ಟ್ರೋಲ್ ಆಗಿದ್ದೇ ಜಾಸ್ತಿ. ಹಾಗೆ ಆಟದ ವಿಚಾರದಲ್ಲಿ ಸ್ವಲ್ಪವೂ ಬೇಧ ಭಾವ ಮಾಡದೆ ಆಟ ಆಡಿದ್ದರು, ಮನೆ ಕೆಲಸ ಮಾಡಿದ್ದರು. ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್ ಅವರನ್ನು ಎದುರು ಹಾಕಿಕೊಂಡು ಮಾತನಾಡಿದ್ದೇ ಜಾಸ್ತಿ. ಇವರು ಫಿನಾಲೆಯಲ್ಲಿ ಇರುತ್ತಾರೆ, ಟ್ರೋಫಿ ಗೆಲ್ಲೋದಿಲ್ಲ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ರಕ್ಷಿತಾ ಶೆಟ್ಟಿ
ಅರ್ಧಂಬರ್ಧ ಕನ್ನಡ ಮಾತನಾಡುತ್ತ, ಒಮ್ಮೊಮ್ಮೆ ಮುಗ್ಧತೆ, ಇನ್ನೊಮ್ಮೆ ಪ್ರೌಢಿಮೆ ಮೂಲಕ ಗಮನಸೆಳೆಯುವ ರಕ್ಷಿತಾ ಶೆಟ್ಟಿ ಈಗ ಎಲಿಮಿನೇಟ್ ಆಗಿದ್ದಾರೆ ಎಂಬ ಪ್ರೋಮೋ ಬಂದರೂ ಕೂಡ ಅವರು ಸೀಕ್ರೇಟ್ ರೂಮ್ಗೆ ಹೋಗೋ ಸಾಧ್ಯತೆ ಹೆಚ್ಚು. ಇವರು ಫಿನಾಲೆಯಲ್ಲಿ ಇರುತ್ತಾರೆ. ಇದಕ್ಕೂ ಮಿಗಿಲಾಗಿ ಟಾಪ್ 2ರಲ್ಲಿ ಇರುವ ಸಾಧ್ಯತೆ ಹೆಚ್ಚು.
ಗಿಲ್ಲಿ ನಟ
ಗಿಲ್ಲಿ ನಟ ಅವರು ಬಹುತೇಕರ ಪಾಲಿಗೆ ವಿನ್ನರ್ ಆಗಿದ್ದಾರೆ. ಸಮಯಕ್ಕೆ ತಕ್ಕಂತೆ ಕಾಮಿಡಿ ಮಾಡೋದು, ಸ್ಟ್ಯಾಂಡ್ ತಗೋಬೇಕು ಎಂದಾಗ ಸ್ಟ್ಯಾಂಡ್ ತಗೊಳೋದು ಮಾಡುತ್ತಾರೆ. ಅದರಂತೆ ಅನೇಕ ಬಾರಿ ಅವರು ವಿಷಯವನ್ನಿಟ್ಟುಕೊಂಡು, ಸತ್ಯವನ್ನೇ ಮಾತನಾಡುತ್ತಾರೆ, ಅದು ಕಾಮಿಡಿ ಎಂದು ಎಲ್ಲರೂ ಭಾವಿಸುತ್ತಾರೆ. ಬೇರೆಯವರ ಬಗ್ಗೆ ಪರ್ಸನಲ್ ಆಗಿ ಮಾತಾಡಿ ತೇಜೋವಧೆ ಮಾಡುತ್ತಾರೆ ಎಂದು ದೂರಿದೆ. ಗಿಲ್ಲಿ ನಟ ಮನೆಕೆಲಸ ಮಾಡಲ್ಲ ಎನ್ನುತ್ತಾರೆ. ಎಲ್ಲವನ್ನು ಅಳೆದು ತೂಗಿ ಹಾಕಿ ನೋಡಿದರೆ ಇವರದ್ದು ಒನ್ ಮ್ಯಾನ್ ಶೋ ಎನ್ನಬಹುದು.
ಉಳಿದವರ ಕಥೆ ಏನು?
ವೈಲ್ಡ್ಕಾರ್ಡ್ ಸ್ಪರ್ಧಿಯಾಗಿರುವ ರಜತ್ ಅವರು ಫಿನಾಲೆಗೆ ಎಂಟ್ರಿ ಕೊಟ್ಟರೂ ಆಶ್ಚರ್ಯವಿಲ್ಲ. ಅವರು ಸ್ಪರ್ಧಿಯೇ? ಅತಿಥಿಯೇ ಎನ್ನುವ ಗೊಂದಲ ಇನ್ನೂ ಇದೆ.
ಧನುಷ್ ಗೌಡ ಅವರು ಇನ್ನು ಎರಡು-ಮೂರು ವಾರಗಳಲ್ಲಿ ಹೊರಗಡೆ ಬರುವ ಸಾಧ್ಯತೆ ಇದೆ
ಟಾಸ್ಕ್ ಕೂಡ ಚೆನ್ನಾಗಿ ಆಡದ, ಅಡುಗೆ ಮಾಡದ, ಅಷ್ಟಾಗಿ ಕಾಣಿಸದ ಸ್ಪಂದನಾ ಸೋಮಣ್ಣ ಅದೃಷ್ಟದಿಂದಲೇ ಅಲ್ಲಿದ್ದಾರೆ ಎನ್ನುವ ಅಭಿಪ್ರಾಯ ಇದೆ. ಇವರು ಆದಷ್ಟು ಬೇಗ ಹೊರಗಡೆ ಬರೋ ಸಾಧ್ಯತೆ ಜಾಸ್ತಿ ಇದೆ.
ರಘು ಕೂಡ ಕೆಲವೇ ವಾರಗಳಲ್ಲಿ ಹೊರಬರುತ್ತಾರೆ. ಆಗಾಗ ಮಾತನಾಡುತ್ತ, ಟಾಸ್ಕ್ ಆಡುವ ರಘು ಅವರು ಬಹುತೇಕ ಸೈಲೆಂಟ್ ಆಗಿರೋದು ಜಾಸ್ತಿ ಎನ್ನಬಹುದು.
ಸೂರಜ್ ಸಿಂಗ್ ಹಾಗೂ ರಾಶಿಕಾ ಶೆಟ್ಟಿ ಮಾತ್ರ ಯಾವಾಗಲೂ ಒಟ್ಟಿಗಿರುತ್ತಾರೆ. ಅದನ್ನು ಬಿಟ್ಟರೆ ಟಿವಿಯಲ್ಲಿ ಕಾಣಿಸಿಕೊಳ್ಳುವಂತಹ ಕಂಟೆಂಟ್ ಇವರು ಕೊಡೋದು ಕಡಿಮೆ ಎನ್ನಬಹುದು. ಹೀಗಾಗಿ ಇವರು ಆದಷ್ಟು ಬೇಗ ಹೊರಗಡೆ ಬರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

