LIVE NOW
Published : May 22, 2026, 07:36 AM ISTUpdated : May 22, 2026, 11:11 AM IST

India News Live: ಡೋಪಿಂಗ್‌ಗಿನ್ನು 5 ವರ್ಷ ಜೈಲು, ₹2 ಲಕ್ಷ ದಂಡ - ಕಾಯ್ದೆ ತಿದ್ದುಪಡಿ?

ಸಾರಾಂಶ

ನವದೆಹಲಿ (ಮೇ.22): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನು ಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ. ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದೇಶದ ಜೆನ್‌ಝೀಗಳು (ಯುವಕರು) ಇದರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:11 AM (IST) May 22

ಡೋಪಿಂಗ್‌ಗಿನ್ನು 5 ವರ್ಷ ಜೈಲು, ₹2 ಲಕ್ಷ ದಂಡ - ಕಾಯ್ದೆ ತಿದ್ದುಪಡಿ?

ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ತಿದ್ದುಪಡಿಯ ಪ್ರಕಾರ, ನಿಷೇಧಿತ ಮದ್ದು ಸೇವಿಸಿದ ಅಥ್ಲೀಟ್‌ಗಳು, ಪೂರೈಕೆದಾರರು ಮತ್ತು ಕೋಚ್‌ಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
Read Full Story

10:52 AM (IST) May 22

ಶೀತಲ್‌ ದೇವಿ ಕೋಚ್‌ ಕುಲ್ದೀಪ್‌ಗೆ ಪೋಕ್ಸೋ ಕೇಸಲ್ಲಿ 5 ವರ್ಷ ಜೈಲು!

ರಾಷ್ಟ್ರೀಯ ಪ್ಯಾರಾ ಆರ್ಚರಿ ಕೋಚ್‌ ಕುಲ್ದೀಪ್‌ ವೆದ್ವಾನ್‌ ಅವರಿಗೆ ಪೋಕ್ಸೋ ಪ್ರಕರಣದಲ್ಲಿ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ಸೋನಿಪತ್‌ನ ಸಾಯ್‌ ಕೇಂದ್ರದಲ್ಲಿ ಕಿರಿಯ ಅಥ್ಲೀಟ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಹರ್ಯಾಣದ ನ್ಯಾಯಾಲಯ ಈ ತೀರ್ಪು ನೀಡಿದೆ. ಇವರು ಶೀತಲ್‌ ದೇವಿ ಮತ್ತು ಪಾಯಲ್‌ ನಾಗ್‌ ಅವರಂತಹ ಖ್ಯಾತ ಪ್ಯಾರಾ ಆರ್ಚರಿ ಪಟುಗಳಿಗೆ ತರಬೇತಿ ನೀಡಿದ್ದರು.
Read Full Story

10:48 AM (IST) May 22

Kangana Marriage - ಕಂಗನಾ ಕೊರಳಲ್ಲಿ ಮಾಂಗಲ್ಯ ಕಂಡು ಬೆಚ್ಚಿಬಿದ್ದ ಜಗತ್ತು! ಯಾರಿಗೂ ಹೇಳದೇ ಮದುವೆ ಆಗ್ಬಿಟ್ರಾ ಈ ನಟಿ?

ರಾಜಕೀಯಕ್ಕೆ ಬಂದ ಮೇಲೆ ಕಂಗನಾ ಅವರ ಹೆಸರು ಹ್ಯಾಂಡ್ಸಮ್ ಪಾಲಿಟಿಶಿಯನ್ ಚಿರಾಗ್ ಪಾಸ್ವಾನ್ ಜೊತೆ ಥಳುಕು ಹಾಕಿಕೊಂಡಿತ್ತು. ಸಂಸತ್ತಿನ ಆವರಣದಲ್ಲಿ ಇವರಿಬ್ಬರು ಕೈ-ಕೈ ಮಿಲಾಯಿಸಿ ನಕ್ಕ ವಿಡಿಯೋಗಳು ವೈರಲ್ ಆಗಿ "ಹೊಸ ಜೋಡಿ ರೆಡಿಯಾಯ್ತು" ಎನ್ನಲಾಗಿತ್ತು. ಆದರೆ ಅದಕ್ಕೆ ಸಾಕ್ಷಿ ಸಿಕ್ಕಿರಲಿಲ್ಲ.

Read Full Story

10:47 AM (IST) May 22

ಸುವೇಂದು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಿಗ್ ಚೇಂಜ್! ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳದಲ್ಲಿ ಗೋವಧೆಗೆ ಹೈಕೋರ್ಟ್ ಬ್ರೇಕ್

ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರು ವಧೆ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದೆ. ಗೋವಧೆಯು ಈದ್ ಹಬ್ಬದ ಅವಿಭಾಜ್ಯ ಅಂಗವಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶ ನೀಡಿದೆ.

Read Full Story

10:33 AM (IST) May 22

IPL 2026 - ಇಂದು ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ಗೆದ್ದರೇ 4 ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಾಣ

ಹೈದರಾಬಾದ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್‌ನಲ್ಲಿ ಆರ್‌ಸಿಬಿ ಗೆದ್ದರೇ ನಾಲ್ಕು ಅಪರೂಪದ ದಾಖಲೆಗೆ ಪಾತ್ರವಾಗಲಿದೆ. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

Read Full Story

10:00 AM (IST) May 22

'ಸಿಬಿಐ ಬರದಿದ್ದರೆ ನನ್ನ ಎನ್‌ಕೌಂಟರ್ ಆಗುತ್ತಿತ್ತು! ಉತ್ತರಪ್ರದೇಶ ಪೊಲೀಸರ ವಿರುದ್ಧ ರಾಜ್ ಸಿಂಗ್ ಶಾಕಿಂಗ್ ಹೇಳಿಕೆ

ಪಶ್ಚಿಮ ಬಂಗಾಳದ ಹತ್ಯಾ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಜ್ ಕುಮಾರ್ ಸಿಂಗ್ ಎಂಬ ವ್ಯಕ್ತಿಯನ್ನು ತಪ್ಪಾಗಿ ಬಂಧಿಸಲಾಯಿತು. ಪೊಲೀಸರಿಂದ ಎನ್‌ಕೌಂಟರ್ ಬೆದರಿಕೆ ಮತ್ತು ಚಿತ್ರಹಿಂಸೆ ಅನುಭವಿಸಿದ ನಂತರ, ಸಿಬಿಐ ತನಿಖೆಯಿಂದ ಅವರು ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾದರು.
Read Full Story

09:28 AM (IST) May 22

ಜೂ.ಎನ್‌ಟಿಆರ್‌ ಹೆಂಡ್ತಿ, ತಾಯಿ ಎಲ್ಲರಿಗೂ ನನ್ನ ಮೇಲೆ ಸಿಟ್ಟುಬಂದಿತ್ತು - ಪ್ರಶಾಂತ್‌ ನೀಲ್

'ಡ್ರ್ಯಾಗನ್‌' ಚಿತ್ರಕ್ಕಾಗಿ ಜೂ.ಎನ್‌ಟಿಆರ್‌ 16 ಕೆಜಿ ತೂಕ ಇಳಿಸಿಕೊಂಡಿದ್ದು, ಅವರ ಹಠಕ್ಕೆ ನಿರ್ದೇಶಕರೇ ಬೆರಗಾಗಿದ್ದರು. ಮಹಾಭಾರತದ ಶಕುನಿಯ ದೃಷ್ಟಿಕೋನದಿಂದ ಪ್ರೇರಿತರಾಗಿ ಕಥೆಯ ತಿರುಳನ್ನೇ ಬದಲಿಸಿದ್ದು, ಇದೊಂದು ಹಿಂದೆಂದೂ ಕೇಳಿರದ ದೇಶಭಕ್ತಿಯ ಕಥೆಯಾಗಿದೆ ಎಂದು ನಿರ್ದೇಶಕರು ಹಂಚಿಕೊಂಡಿದ್ದಾರೆ.
Read Full Story

09:21 AM (IST) May 22

ಮುಂದಿನ ಸೀಸನ್ IPL ಆಡ್ತಾರಾ ಧೋನಿ? ಎಲ್ಲಾ ಸಸ್ಪೆನ್ಸ್‌ಗೆ ತೆರೆ ಎಳೆದ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್!

19ನೇ ಸೀಸನ್‌ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದಿದ್ದು, ಎಂ.ಎಸ್. ಧೋನಿ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮುಂದಿನ ಸೀಸನ್‌ನಲ್ಲಿ ಧೋನಿ ಆಡುತ್ತಾರೆಯೇ ಎಂಬ ಬಗ್ಗೆ ನಾಯಕ ಋತುರಾಜ್ ಗಾಯಕ್ವಾಡ್ ಅಸ್ಪಷ್ಟ ಸುಳಿವು ನೀಡಿದ್ದು, ತಂಡದ ಕಳಪೆ ಪ್ರದರ್ಶನಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.
Read Full Story

08:59 AM (IST) May 22

ಪಶ್ಚಿಮ ಬಂಗಾಳದ ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನರಹಿತ ಮದರಸಾಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಶಾಲಾ-ಕಾಲೇಜುಗಳ ನಂತರ ಇದೀಗ ಮದರಸಾಗಳಿಗೂ ಈ ನಿಯಮ ವಿಸ್ತರಿಸಿದೆ.

Read Full Story

08:41 AM (IST) May 22

ಗೋವಧೆ ಈದ್‌ ಆಚರಣೆ ಅಥವಾ ಇಸ್ಲಾಂನ ಭಾಗವಲ್ಲ - ಕಲ್ಕತ್ತಾ ಹೈಕೋರ್ಟ್‌ ಆದೇಶ

ಬಕ್ರೀದ್ ಹಬ್ಬದಲ್ಲಿ ಗೋವುಗಳ ಬಲಿ ನೀಡುವುದು ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸ್ಪಷ್ಟಪಡಿಸಿದೆ. ಪಶ್ಚಿಮ ಬಂಗಾಳ ಸರ್ಕಾರದ ಪ್ರಾಣಿ ಹತ್ಯೆ ನಿಯಂತ್ರಣ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯ, ಹತ್ಯೆಗೆ ಯೋಗ್ಯತೆಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ.
Read Full Story

08:34 AM (IST) May 22

IPL 2026 - ಆರ್‌ಸಿಬಿಗಿಂದು ಸನ್‌ರೈಸರ್ಸ್ ಚಾಲೆಂಜ್! ನಂ.1 ಸ್ಥಾನಕ್ಕಾಗಿ ಬಿಗ್ ಫೈಟ್

ಈಗಾಗಲೇ ಪ್ಲೇ-ಆಫ್‌ ಪ್ರವೇಶಿಸಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಗ್ರ-2 ಸ್ಥಾನಕ್ಕಾಗಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದು, ಸೋತರೆ ಸನ್‌ರೈಸರ್ಸ್‌ ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ.
Read Full Story

08:09 AM (IST) May 22

IPL 2026 - ನಿನ್ನೆ ನಡೆದ ಸಿಎಸ್‌ಕೆ-ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಗುಜರಾತ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 89 ರನ್‌ಗಳ ಹೀನಾಯ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಗುಜರಾತ್ ಪರ ಸಾಯಿ ಸುದರ್ಶನ್, ಗಿಲ್, ಬಟ್ಲರ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಸಿರಾಜ್ ಮತ್ತು ರಬಾಡ ಮಾರಕ ಬೌಲಿಂಗ್ ದಾಳಿ ನಡೆಸಿದರು.
Read Full Story

08:06 AM (IST) May 22

2034ರವರೆಗೆ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಲ್ಲ - ಸಮೀಕ್ಷಾ ತಜ್ಞ | 70ರ ದಶಕದ ಕಾಂಗ್ರೆಸ್‌ನ ವರ್ಚಸ್ಸು ಈಗ ಬಿಜೆಪಿಗೆ!

ಚುನಾವಣಾ ಸಮೀಕ್ಷಾ ತಜ್ಞ ಪ್ರದೀಪ್ ಗುಪ್ತಾ ಅವರ ಪ್ರಕಾರ, 2014ರಲ್ಲಿ ಆರಂಭವಾದ ಬಿಜೆಪಿಯ ರಾಜಕೀಯ ಪ್ರಾಬಲ್ಯ ಕನಿಷ್ಠ 2034ರವರೆಗೂ ಮುಂದುವರಿಯಲಿದೆ. ಬಿಜೆಪಿ ಸರ್ಕಾರದ ಸಾಧನೆ ಉತ್ತಮವಾಗಿರುವವರೆಗೂ ಅದರ ಸ್ಥಾನ ಭದ್ರ. ಪ್ರತಿಪಕ್ಷಗಳು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕೆಂದು ವಿಶ್ಲೇಷಿಸಿದ್ದಾರೆ.

Read Full Story

07:57 AM (IST) May 22

ಇರಾನ್‌ ಯುದ್ಧ - ಟ್ರಂಪ್‌-ನೆತನ್ಯಾಹು ನಡುವೆ ಭಾರೀ ವಾಕ್ಸಮರ

ಇರಾನ್‌ ಮೇಲೆ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಮತ್ತು ಇಸ್ರೇಲ್‌ ಪ್ರಧಾನಿ ನೆತನ್ಯಾಹು ನಡುವೆ ಭಿನ್ನಮತ ಉಂಟಾಗಿದೆ. ಯುದ್ಧಕ್ಕೆ ನೆತನ್ಯಾಹು ಪಟ್ಟು ಹಿಡಿದರೆ, ಟ್ರಂಪ್ ಮಾತುಕತೆಗೆ ಒಲವು ತೋರಿದ್ದಾರೆ.

Read Full Story

07:39 AM (IST) May 22

Cockroach Janata Party ಗೆ ವಿಪಕ್ಷ ಬೆಂಬಲ; Gen Z ಹೋರಾಟಕ್ಕೆ ಮಹುವಾ, ಅಖಿಲೇಶ್, ಆಜಾದ್‌, ಕನಿಮೋಳಿ, ಮುಫ್ತಿ ಸಹಮತ

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆಯಿಂದ ಪ್ರೇರಿತರಾಗಿ ಜೆನ್‌ಝೀ ಯುವಕರು 'ಕಾಕ್ರೋಚ್‌ ಜನತಾ ಪಾರ್ಟಿ' ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಈ ರಾಜಕೀಯ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಮಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರು ಮತ್ತು ಸೆಲೆಬ್ರಿಟಿಗಳು ಬೆಂಬಲ.

 

Read Full Story

07:38 AM (IST) May 22

Kerala MLA Oath Ceremony: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ !

ಕೇರಳ ವಿಧಾನಸಭೆಯ ಪ್ರಮಾಣ ವಚನ ಸಮಾರಂಭದಲ್ಲಿ, ಕಾಸರಗೋಡಿನ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಇದೇ ವೇಳೆ, ದೇವಿಕುಲಂ ಶಾಸಕರು ತಮಿಳಿನಲ್ಲಿ ಶಪಥ ಸ್ವೀಕರಿಸಿದ್ದು, ಈ ಘಟನೆಯು ರಾಜ್ಯದ ಭಾಷಾ ವೈವಿಧ್ಯತೆಯನ್ನು ಪ್ರತಿಬಿಂಬಿಸಿತು.

 

Read Full Story

More Trending News