LIVE NOW
Published : Aug 15, 2026, 07:45 AM ISTUpdated : Aug 15, 2026, 10:09 AM IST

National News Live: ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಕೆಂಪುಕೋಟೆ ಭಾಷಣ ಮಾಡಿದ ಪ್ರಧಾನಿ ಮೋದಿ

ಸಾರಾಂಶ

ನವದೆಹಲಿ (ಆ.15): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80ನೇ ವರ್ಷದ ದಿನಾಚರಣೆಯನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಸಲ ಧ್ವಜಾರೋಹಣ ಮಾಡಿದ್ದಾರೆ. ಅದರೊಂದಿಗೆ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ಗಾಯನ ಮಾಡಲಾಗುತ್ತದೆ. ಸ್ವಚ್ಛತಾ ಕಾರ್ಮಿಕರು ಸೇರಿ 5 ಸಾವಿರ ಮಂದಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಮೋದಿ ಜೆನ್‌ಝೀ ಹೋರಾಟದ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡುತ್ತಾರೆಯೇ ಎನ್ನುವ ಕುತೂಹಲವೂ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡಲಾಗುತ್ತಿದ್ದು, ಬೆಂಗಳೂರಿನ ವಿಧಾನಸೌಧದ ಎದುರು ಇದೇ ಮೊದಲ ಬಾರಿಗೆ ಫ್ರೀಡಮ್‌ ಹಬ್ಬದ ಆಚರಣೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:09 AM (IST) Aug 15

ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಕೆಂಪುಕೋಟೆ ಭಾಷಣ ಮಾಡಿದ ಪ್ರಧಾನಿ ಮೋದಿ

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ 78 ನಿಮಿಷಗಳ ಕಾಲ ಭಾಷಣ ಮಾಡಿದರು. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿದ್ದು, 2025ರ 103 ನಿಮಿಷಗಳ ಸುದೀರ್ಘ ಭಾಷಣಕ್ಕೆ ವ್ಯತಿರಿಕ್ತವಾಗಿದೆ.

Read Full Story

09:54 AM (IST) Aug 15

ಬಸ್‌ನಲ್ಲೂ ವಂದೇ ಭಾರತ್ ವೈಭೋಗ - ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಆಲಪ್ಪುಳ-ಬೆಂಗಳೂರು ಮಾರ್ಗದಲ್ಲಿ 'ವಂದೇ ಭಾರತ್' ಮಾದರಿಯ ಹೊಸ 'ಎಕ್ಸಿಕ್ಯೂಟಿವ್ ಕ್ಲಾಸ್' ಬಸ್ ಸೇವೆಯನ್ನು ಆರಂಭಿಸಿದೆ. ಈ ಐಷಾರಾಮಿ ಬಸ್‌ನಲ್ಲಿ ಶೌಚಾಲಯ, ಪ್ಯಾಂಟ್ರಿ, ಮತ್ತು ವೈಯಕ್ತಿಕ ಮನರಂಜನಾ ಪರದೆಗಳಂತಹ ವಿಶ್ವದರ್ಜೆಯ ಸೌಲಭ್ಯಗಳಿವೆ.

Read Full Story

09:54 AM (IST) Aug 15

Independence day 2026 - ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿದ್ದಷ್ಟೇ, ನಿಜವಾದ ಸ್ವಾತಂತ್ರ್ಯವಲ್ಲ - ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ವಾತಂತ್ರ್ಯ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ನಿಜವಾದ ಸ್ವಾತಂತ್ರ್ಯವೆಂದರೆ ಸಂವಿಧಾನಬದ್ಧ ಸಮಾನತೆ, ನ್ಯಾಯ, ಘನತೆ ಎಂದು ಪ್ರತಿಪಾದಿಸಿದ ಅವರು ಇಂದು ಸಾಂವಿಧಾನಿಕ ಮೌಲ್ಯಗಳಿಗೆ ಸವಾಲು ಎದುರಾಗಿದೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

09:45 AM (IST) Aug 15

ಗಾಲೆ ಟೆಸ್ಟ್‌ - ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಲಂಕಾ ಪಡೆಗೆ ಹೊಸ ಅಸ್ತ್ರ ಪಾದಾರ್ಪಣೆ

ಗಾಲೆಯಲ್ಲಿ ಆರಂಭವಾದ ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದ ಯುವ ಸ್ಪಿನ್ನರ್ ಕೇಶಾರ ನುವಾಂತ ಲಂಕಾ ಪರ ಪಾದಾರ್ಪಣೆ ಮಾಡಿದ್ದು, ಸರ್ಫರಾಜ್ ಖಾನ್‌ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.
Read Full Story

09:36 AM (IST) Aug 15

ಕೆಂಪುಕೋಟೆಯಿಂದಲೇ ದೇಶದ ದಿಮಾಗಿ ನಕ್ಸಲರಿಗೆ ವಾರ್ನಿಂಗ್‌ ನೀಡಿದ ನರೇಂದ್ರ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಭಾರತವು ಸಶಸ್ತ್ರ ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ ಎಂದು ಘೋಷಿಸಿದರು. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ 'ದಿಮಾಗಿ ನಕ್ಸಲರು' ಎಂಬ ಹೊಸ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Read Full Story

09:21 AM (IST) Aug 15

BCCI ಮಾಸ್ಟರ್ ಪ್ಲಾನ್ - ಅಜಿತ್ ಅಗರ್ಕರ್‌, ಕೋಚ್‌ ಗೌತಮ್ ಗಂಭೀರ್‌ಗಿಂತ ಉನ್ನತ ಹುದ್ದೆ ವಿವಿಎಸ್‌ ಲಕ್ಷ್ಮಣ್ ಹೆಗಲಿಗೆ?

ಬಿಸಿಸಿಐ 'ಕ್ರಿಕೆಟ್‌ ನಿರ್ದೇಶಕ' ಎಂಬ ಹೊಸ ಹುದ್ದೆಯನ್ನು ಸೃಷ್ಟಿಸುವ ಸಾಧ್ಯತೆಯಿದ್ದು, ಈ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕಗೊಳ್ಳುವ ನಿರೀಕ್ಷೆಯಿದೆ. ಈ ಹುದ್ದೆಯು ಕೋಚ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥರಿಗಿಂತ ಉನ್ನತವಾಗಿದ್ದು, ಭಾರತೀಯ ಕ್ರಿಕೆಟ್‌ನ ಸಮಗ್ರ ಕಾರ್ಯಾಚರಣೆಯ ಜವಾಬ್ದಾರಿಯನ್ನು ಲಕ್ಷ್ಮಣ್ ಹೊರಲಿದ್ದಾರೆ.
Read Full Story

09:18 AM (IST) Aug 15

ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಮೈತುಂಬಾ ತ್ರಿವರ್ಣ ಬಳಿದುಕೊಂಡು ಸಂಭ್ರಮಿಸಿದ ಪ್ರವಾಸಿಗ! ವೈರಲ್

ಸ್ವಾತಂತ್ರ್ಯ ದಿನದಂದು ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನಲ್ಲಿ ಅಹಮದಾಬಾದ್‌ನ ಪ್ರವಾಸಿ ಅರುಣ್ ಹರ್ಯಾನಿ ಮೈತುಂಬಾ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು ಗಮನ ಸೆಳೆದಿದ್ದಾರೆ. 2022ರಿಂದ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗ ಈ ಬಾರಿ ಬದಲಾವಣೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Read Full Story

08:49 AM (IST) Aug 15

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಶಕ್ತಿಯ ಸಪ್ತಧಾರೆ ವಿಷನ್‌..

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಪ್ರಕಟಿಸಿದ್ದಾರೆ.

Read Full Story

08:42 AM (IST) Aug 15

ಐತಿಹಾಸಿಕ 600ನೇ ಟೆಸ್ಟ್ ಸಂಭ್ರಮದಲ್ಲಿ ಟೀಂ ಇಂಡಿಯಾ; ಗಾಲೆಯಲ್ಲಿಂದು ಭಾರತ vs ಶ್ರೀಲಂಕಾ ಮೊದಲ ಟೆಸ್ಟ್ ಅಗ್ನಿ ಪರೀಕ್ಷೆ

ಶನಿವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯು ಭಾರತದ ಪಾಲಿಗೆ 600ನೇ ಐತಿಹಾಸಿಕ ಪಂದ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಮಹತ್ವದ್ದಾಗಿರುವ ಈ ಸರಣಿಯಲ್ಲಿ, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಲಂಕಾ ತಂಡವನ್ನು ಎದುರಿಸಲು ಶುಭ್‌ಮನ್‌ ಗಿಲ್‌ ಪಡೆ ಸಜ್ಜಾಗಿದೆ.
Read Full Story

08:03 AM (IST) Aug 15

Independence Day 2026 - ಇಂದು ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ - ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ತಮ್ಮ ಭಾಷಣದಲ್ಲಿ, 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರವನ್ನು ಒತ್ತಿಹೇಳಿದ ಅವರು, ದೇಶದ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದರು.

Read Full Story

More Trending News