ನವದೆಹಲಿ (ಆ.15): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80ನೇ ವರ್ಷದ ದಿನಾಚರಣೆಯನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಸಲ ಧ್ವಜಾರೋಹಣ ಮಾಡಿದ್ದಾರೆ. ಅದರೊಂದಿಗೆ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ಗಾಯನ ಮಾಡಲಾಗುತ್ತದೆ. ಸ್ವಚ್ಛತಾ ಕಾರ್ಮಿಕರು ಸೇರಿ 5 ಸಾವಿರ ಮಂದಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಮೋದಿ ಜೆನ್ಝೀ ಹೋರಾಟದ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡುತ್ತಾರೆಯೇ ಎನ್ನುವ ಕುತೂಹಲವೂ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡಲಾಗುತ್ತಿದ್ದು, ಬೆಂಗಳೂರಿನ ವಿಧಾನಸೌಧದ ಎದುರು ಇದೇ ಮೊದಲ ಬಾರಿಗೆ ಫ್ರೀಡಮ್ ಹಬ್ಬದ ಆಚರಣೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:31 PM (IST) Aug 15
ರಾಯ್ಪುರದಲ್ಲಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತನ ಜೊತೆಗಿನ ಪ್ರೇಮ ವಿವಾದದ ಜಗಳದ ನಂತರ, 34 ವರ್ಷದ ಪರಂಪ್ರೀತ್ ಸಿಂಗ್ ಎಂಬ ಯುವಕನ ಮೇಲೆ ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇಬ್ಬರನ್ನು ತಡೆಯಲು ಪರಂಪ್ರೀತ್ ಚಲಿಸುತ್ತಿದ್ದ ಕಾರಿನ ಛಾವಣಿ ಮೇಲೇರಿದ್ದರು, ಆದರೆ ಅವರು ಕೆಳಗೆ ಬಿದ್ದಾಗ ಆರೋಪಿಗಳು ಅವರ ಮೇಲೆಯೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ.
10:55 PM (IST) Aug 15
ಹಿಮ ಕರಡಿ ತನ್ನ ಪಾಡಿಗೆ ಗಾಢ ನಿದ್ದೆಯಲ್ಲಿತ್ತು. ನಿದ್ದೆಯಲ್ಲಿದ್ದ ಹಿಮ ಕರಡಿಯನ್ನು ಉದ್ದೇಶಪೂರ್ವಕವಾಗಿ ಹಡಗಿನ ಹಾರ್ನ್ ಹಾಕಿ ಸಿಬ್ಬಂದಿ ಎಬ್ಬಿಸಿದ್ದ. ಆತಂಕದಿಂದಲೇ ಎದ್ದ ಹಿಮ ಕರಡಿ ನೀಡಿದ ಶಾಪ ಕ್ಯಾಪ್ಟನ್ಗೆ ತಟ್ಟಿದೆ.
10:45 PM (IST) Aug 15
ಸೂಪರ್ಸ್ಟಾರ್ ಕೃಷ್ಣ ಅವರ ಪುತ್ರನಾಗಿ ಚಿತ್ರರಂಗಕ್ಕೆ ಬಂದ ಮಹೇಶ್ ಬಾಬು, ತನ್ನ ತಂದೆಯಿಂದ ಒಂದು ವಿಶೇಷ ಅಭ್ಯಾಸವನ್ನು ಬಳುವಳಿಯಾಗಿ ಪಡೆದಿದ್ದಾರೆ. ಆ ಅಭ್ಯಾಸವೇ ಅವರ ವೃತ್ತಿಜೀವನವನ್ನು ಉತ್ತುಂಗಕ್ಕೇರಿಸಿತೇ? ಏನಿದು ಸ್ವಾರಸ್ಯಕರ ವಿಷಯ?
10:12 PM (IST) Aug 15
Mallika Sherawat: ಹಿಂದಿ ಸಿನಿಮಾರಂಗದಲ್ಲಿ ನಟ-ನಟಿಯರು ಹೆಸರು ಬದಲಿಸಿಕೊಳ್ಳುವುದು ಹೊಸದೇನಲ್ಲ. ಇದೇ ಹಾದಿಯಲ್ಲಿ ಬಂದವರು ನಟಿ ಮಲ್ಲಿಕಾ ಶೆರಾವತ್. ಆ ಹೆಸರು ಬದಲಾಗಿದ್ದೇ ಒಂದು ದೊಡ್ಡ ಕಥೆ.
09:56 PM (IST) Aug 15
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡದೇ ಇದ್ದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (POK) ಜನರು ಭಾರತ ಸೇರಲು ಹೋರಾಡುತ್ತಿದ್ದರು ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ತರಲು ಸರ್ಕಾರ ಬದ್ಧವಾಗಿದೆ ಎಂದರು.
08:46 PM (IST) Aug 15
ಕಾಲಿವುಡ್ನ ಬಹುಜನಪ್ರಿಯ ನಟ ಅಜಿತ್ ಕುಮಾರ್ ಅವರು 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕಾರ್ ರೇಸಿಂಗ್ನಲ್ಲಿ ಭಾಗವಹಿಸಲು ಉತ್ತಮ ಫಿಟ್ನೆಸ್ ಅಗತ್ಯವಿತ್ತು.
08:45 PM (IST) Aug 15
08:20 PM (IST) Aug 15
ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 27 ರಷ್ಟಿರುವ ಜೆನ್ ಜಿ (Gen Z) ಜನಾಂಗವು ದೇಶದ ಒಟ್ಟು ಬಳಕೆಯಲ್ಲಿ ಶೇಕಡಾ 43 ರಷ್ಟು ಪಾಲನ್ನು ಹೊಂದುವ ಮೂಲಕ ಇಂದಿನ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಸಂಪೂರ್ಣವಾಗಿ ಡಿಜಿಟಲ್ ಜಗತ್ತಿಗೆ ಒಗ್ಗಿಕೊಂಡಿರುವ ಈ ಯುವ ಪೀಳಿಗೆಯು ಬ್ರ್ಯಾಂಡ್ ನಿಷ್ಠೆಗಿಂತ ಹೆಚ್ಚಾಗಿ ಆನ್ಲೈನ್ ಟ್ರೆಂಡ್ಗಳು ಹಾಗೂ ನಂಬಿಕೆಗೆ ಹೆಚ್ಚಿನ ಆದ್ಯತೆ ನೀಡಿ ಮಾರುಕಟ್ಟೆಯ ದಿಕ್ಕನ್ನು ಬದಲಾಯಿಸುತ್ತಿದೆ.
08:19 PM (IST) Aug 15
07:08 PM (IST) Aug 15
ನ್ಯೂಫೌಂಡ್ಲ್ಯಾಂಡ್ಗೆ ಪರಿಚಯಿಸಲಾದ ಕೆಲವೇ ಮೂಸ್ಗಳು, ನೈಸರ್ಗಿಕ ಶತ್ರುಗಳ ಅನುಪಸ್ಥಿತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದು ದ್ವೀಪದ ಅರಣ್ಯಗಳಿಗೆ ಕಂಟಕವಾದವು. ಈ ಪರಿಸರ ಅಸಮತೋಲನವನ್ನು ನಿಯಂತ್ರಿಸಲು ಮತ್ತು ಕಾಡುಗಳನ್ನು ರಕ್ಷಿಸಲು, ಇಂದು ಬೇಟೆಯನ್ನು ಒಂದು ಪ್ರಮುಖ ನಿರ್ವಹಣಾ ಸಾಧನವಾಗಿ ಬಳಸಲಾಗುತ್ತಿದೆ. ಪ್ರಸ್ತುತ, ಅರಣ್ಯ ರಕ್ಷಿಸಲು ಬೇಟೆ ಮೂಲಕ ಅವುಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ.
07:06 PM (IST) Aug 15
2015ರಲ್ಲಿ ತ್ರಿಶಾ ತಾವು ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ರಿವೀಲ್ ಮಾಡಿದ್ದರು. ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಆ ಬಳಿಕ ಈ ಬಗ್ಗೆ ಮಾತನಾಡಿದ್ದ ತ್ರಿಶಾ, ಅಸಲಿ ಕಾರಣವನ್ನು ರಿವೀಲ್ ಮಾಡಿದ್ದರು.
07:06 PM (IST) Aug 15
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನದಾಟದಲ್ಲಿ ಭಾರತದ ಬ್ಯಾಟರ್ ಕೆ ಎಲ್ ರಾಹುಲ್ ಅಜೇಯ 77 ರನ್ ಗಳಿಸಿದ್ದಾಗ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಗಾಯಗೊಂಡು ಹೊರನಡೆದಿದ್ದಾರೆ. ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ಅಜೇಯ 131 ರನ್ ಗಳಿಸಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಟೆಸ್ಟ್ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಇತಿಹಾಸ ಬರೆದಿದ್ದಾರೆ.
06:29 PM (IST) Aug 15
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಸಮವಸ್ತ್ರ ಧರಿಸಿರುವ ಪುಟಾಣಿ ಬಾಲಕಿಯ ಅತ್ಯಂತ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
06:08 PM (IST) Aug 15
ಪಾಲೊ ಆಲ್ಟೊ ನೆಟ್ವರ್ಕ್ ಸಿಇಒ ನಿಕೇಶ್ ಅರೋರಾ ಅವರ ಪ್ರಕಾರ, ಎಐ ತಂತ್ರಜ್ಞಾನದಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಕಾರ್ಪೊರೇಟ್ ಉದ್ಯೋಗಗಳಲ್ಲಿ ಭಾರೀ ಬದಲಾವಣೆಯಾಗಲಿದೆ. ಕಾಲಕ್ಕೆ ತಕ್ಕಂತೆ ಉದ್ಯೋಗಿಗಳು ಎಐ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ.
06:03 PM (IST) Aug 15
05:06 PM (IST) Aug 15
ಖ್ಯಾತ ನಟಿಯೊಬ್ಬರು ವಯಸ್ಸಾದಂತೆ ಸಿಗುವ ಪಾತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿಯರ ವಯಸ್ಸು 30 ದಾಟುತ್ತಿದ್ದಂತೆ ಅವರನ್ನು ಅಜ್ಜಿ ಪಾತ್ರಗಳಿಗೆ ಸೀಮಿತಗೊಳಿಸಲಾಗುತ್ತದೆ ಮತ್ತು ಬಾಲಿವುಡ್ ಒಂದು ನಕಲಿ ಉದ್ಯಮ ಎಂದು ಅವರು ಟೀಕಿಸಿದ್ದಾರೆ.
05:02 PM (IST) Aug 15
04:53 PM (IST) Aug 15
ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಅವರ ಮನೆಗೆ ದಿಢೀರನೆ ಪೊಲೀಸರು ಆಗಮಿಸಿದ್ದರು. ಇದು ಯಾವುದೇ ಕಾನೂನು ಸಮಸ್ಯೆಯಾಗಿರದೆ ಕೇವಲ ವೀಸಾ ಮತ್ತು ಪಾಸ್ಪೋರ್ಟ್ಗೆ ಸಂಬಂಧಿಸಿದ ಸಾಮಾನ್ಯ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯಾಗಿತ್ತು ಎಂದು ತಿಳಿದುಬಂದಿದೆ.
04:23 PM (IST) Aug 15
2020ರ ಆಗಸ್ಟ್ 15 ರಂದು ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಒಟ್ಟಿಗೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ತಮ್ಮ ಜೆರ್ಸಿ ಸಂಖ್ಯೆ 7 ಮತ್ತು 3 ಸೇರಿ 73 ಆಗುವುದರಿಂದ, ಭಾರತದ 73ನೇ ಸ್ವಾತಂತ್ರ್ಯ ದಿನದಂದೇ ವಿದಾಯ ಹೇಳಲು ನಿರ್ಧರಿಸಿದ್ದೆವು ಎಂದು ರೈನಾ ಈ ನಿರ್ಧಾರದ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
04:12 PM (IST) Aug 15
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾರತೀಯ ಸೇನೆಯ ಕಮಾಂಡೋ ಡಾಗ್ ಟೈಸನ್ಗೆ ಗೌರವ ಪದಕ ನೀಡಲಾಗಿದೆ. ಕಾಶ್ಮೀರದಲ್ಲಿ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡು ತಾಗಿದರೂ ಭಾರತೀಯ ಸೇನೆಗೆ ಮಹತ್ವದ ಸುಳಿವು ನೀಡಿದ ಟೈಸನ್ಗೆ ಸೇನಾ ಸನ್ಮಾನ ಘೋಷಿಸಲಾಗಿದೆ.
03:56 PM (IST) Aug 15
ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್'ನಲ್ಲಿ ಭಾಗವಹಿಸಿದ್ದ ಯಶ್, ಅಲ್ಲಿ ಕೇಳಲಾದ ಪ್ರತಿಯೊಂದು ಗುಗ್ಲಿ ಎಸೆತಕ್ಕೂ ಸಿಕ್ಸರ್ ಬಾರಿಸಿದ್ದಾರೆ. ರಜತ್ ಶರ್ಮಾರ ‘ರಾವಣ’ನ ಪ್ರಶ್ನೆಗೆ ಯಶ್ ಉತ್ತರ ಇದು..!
03:22 PM (IST) Aug 15
03:21 PM (IST) Aug 15
ಸ್ವಾತಂತ್ರ್ಯ ದಿನಾಚರಣೆಯಂದು ವಂದೇ ಮಾತರಂ ಗಾಯನವನ್ನು ಸೋನಿಯಾ ಗಾಂಧಿ ತಡೆದಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಪಕ್ಷದ ಅಧ್ಯಕ್ಷರಿಗೆ ಕುರ್ಚಿ ತರಲು ಸೂಚಿಸಿದ್ದನ್ನೇ ತಪ್ಪಾಗಿ ಬಿಂಬಿಸಲಾಗಿದೆ ಎಂದು ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
03:17 PM (IST) Aug 15
ಸ್ಮಾರ್ಟ್ಫೋನ್ಗಳು 'ಕೆಪಾಸಿಟಿವ್ ಟಚ್ಸ್ಕ್ರೀನ್' ತಂತ್ರಜ್ಞಾನ ಬಳಸುತ್ತವೆ, ಇದು ಸೂಕ್ಷ್ಮ ವಿದ್ಯುತ್ ಕ್ಷೇತ್ರವನ್ನು ಹೊಂದಿರುವ ಪಾರದರ್ಶಕ ಎಲೆಕ್ಟ್ರೋಡ್ಗಳ ಮೂಲಕ ಬೆರಳಿನ ಸ್ಪರ್ಶವನ್ನು ಗುರುತಿಸುತ್ತದೆ. ಮಾನವ ದೇಹವು ವಿದ್ಯುತ್ ವಾಹಕ ಗುಣ ಹೊಂದಿರುವುದರಿಂದ, ನಾವು ಸ್ಕ್ರೀನ್ ಸ್ಪರ್ಶಿಸಿದಾಗ ಉಂಟಾಗುವ ವಿದ್ಯುತ್ ಬದಲಾವಣೆಗಳನ್ನು ಗ್ರಹಿಸಿ ಫೋನ್ನ ಆಪರೇಟಿಂಗ್ ಸಿಸ್ಟಮ್ ತಕ್ಷಣವೇ ಪ್ರತಿಕ್ರಿಯಿಸುತ್ತದೆ.
02:25 PM (IST) Aug 15
02:07 PM (IST) Aug 15
ಇದು ನೈಜ ಘಟನೆ ಆಧಾರಿತ ವೆಬ್ ಸಿರೀಸ್ ಆಗಿದ್ದು, ಪತಿಯನ್ನು ಕೊ*ಲೆ ಮಾಡಿದ ಮಹಿಳೆಯರ ಪ್ರಕರಣಗಳನ್ನು ಇದು ಒಳಗೊಂಡಿದೆ. 9.7ರ IMDb ರೇಟಿಂಗ್ ಪಡೆದಿರುವ ಈ ಸರಣಿಯನ್ನು ಅಜಿತೇಶ್ ಶರ್ಮಾ ನಿರ್ದೇಶಿಸಿದ್ದಾರೆ.
01:33 PM (IST) Aug 15
12:45 PM (IST) Aug 15
Goat Farming: ಮೇಕೆ ಸಾಕಾಣಿಕೆಯು ಹಾಲು ಮತ್ತು ಮಾಂಸದಿಂದ ಉತ್ತಮ ಆದಾಯ ತರುವ ಲಾಭದಾಯಕ ಉದ್ಯಮವಾಗಿದೆ. ಯಶಸ್ವಿ ಸಾಕಾಣಿಕೆಗೆ ಜಮುನಾಪರಿ, ಬಾರ್ಬರಿ, ಬೀಟಲ್, ಮತ್ತು ಓಸ್ಮಾನಬಾದಿಯಂತಹ ವಿವಿಧ ತಳಿಗಳ ಬಗ್ಗೆ ತಿಳಿದುಕೊಂಡು, ನಿಮ್ಮ ಪ್ರದೇಶ ಮತ್ತು ಉದ್ದೇಶಕ್ಕೆ ಸರಿಹೊಂದುವ ತಳಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ.
12:27 PM (IST) Aug 15
'ಗಿಲ್ಲಿ' ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ 'ಲಿಯೋ'ವರೆಗೆ ಇವರಿಬ್ಬರ ಸ್ನೇಹ ಮತ್ತು ಸಿನಿಮಾ ಪಯಣ ಅದ್ಭುತವಾಗಿದೆ. ವಿಜಯ್ ಮತ್ತು ತ್ರಿಶಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ ಸಿಕ್ಕಾಪಟ್ಟೆ ವೈರಲ್ ಅಗ್ತಿದ್ದಾರೆ. ಇಲ್ಲಿದೆ ಹೊಸ ಸ್ಟೋರಿ ನೋಡಿ..
12:16 PM (IST) Aug 15
11:35 AM (IST) Aug 15
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು, ಅಲ್ಪಸಂಖ್ಯಾತ ಯುವಕರು ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಜೋಡಿಸುವಷ್ಟು ಕೌಶಲ್ಯ ಹೊಂದಿದ್ದರೂ, ಓದಿದ್ದನ್ನು ನೆನಪಿಟ್ಟುಕೊಳ್ಳಲು ಹೆಣಗಾಡುತ್ತಾರೆ ಎಂದು ಹೇಳಿದ್ದಾರೆ.
11:05 AM (IST) Aug 15
ಒಂದೆಡೆ ಹುಮಾ ಖುರೇಷಿ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ ಅವರಂತಹ ತಾರೆಯರು ನೀಟ್ ಪ್ರತಿಭಟನೆಗೆ ಬಹಿರಂಗ ಬೆಂಬಲ ಸೂಚಿಸುತ್ತಿದ್ದರೆ, ಸೋನು ನಿಗಮ್ ಮಾತ್ರ ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಈ ವಿವಾದದ ಬಗ್ಗೆ ಸೋನು ನಿಗಮ್ ಹೇಳಿದ್ದು ಇದು.. ನೋಡಿ..
10:33 AM (IST) Aug 15
ಬೆಂಗಳೂರಿನ ಕೋಣನಕುಂಟೆಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ 1.37 ಎಕರೆ ಸರ್ಕಾರಿ ಸ್ವತ್ತನ್ನು ಕಾನೂನುಬಾಹಿರವಾಗಿ ಏಳು ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಟ್ಟಿರುವ ಬಗ್ಗೆ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
10:09 AM (IST) Aug 15
80ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ 78 ನಿಮಿಷಗಳ ಕಾಲ ಭಾಷಣ ಮಾಡಿದರು. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿದ್ದು, 2025ರ 103 ನಿಮಿಷಗಳ ಸುದೀರ್ಘ ಭಾಷಣಕ್ಕೆ ವ್ಯತಿರಿಕ್ತವಾಗಿದೆ.
09:54 AM (IST) Aug 15
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಆಲಪ್ಪುಳ-ಬೆಂಗಳೂರು ಮಾರ್ಗದಲ್ಲಿ 'ವಂದೇ ಭಾರತ್' ಮಾದರಿಯ ಹೊಸ 'ಎಕ್ಸಿಕ್ಯೂಟಿವ್ ಕ್ಲಾಸ್' ಬಸ್ ಸೇವೆಯನ್ನು ಆರಂಭಿಸಿದೆ. ಈ ಐಷಾರಾಮಿ ಬಸ್ನಲ್ಲಿ ಶೌಚಾಲಯ, ಪ್ಯಾಂಟ್ರಿ, ಮತ್ತು ವೈಯಕ್ತಿಕ ಮನರಂಜನಾ ಪರದೆಗಳಂತಹ ವಿಶ್ವದರ್ಜೆಯ ಸೌಲಭ್ಯಗಳಿವೆ.
09:54 AM (IST) Aug 15
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ವಾತಂತ್ರ್ಯ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ನಿಜವಾದ ಸ್ವಾತಂತ್ರ್ಯವೆಂದರೆ ಸಂವಿಧಾನಬದ್ಧ ಸಮಾನತೆ, ನ್ಯಾಯ, ಘನತೆ ಎಂದು ಪ್ರತಿಪಾದಿಸಿದ ಅವರು ಇಂದು ಸಾಂವಿಧಾನಿಕ ಮೌಲ್ಯಗಳಿಗೆ ಸವಾಲು ಎದುರಾಗಿದೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
09:45 AM (IST) Aug 15
09:36 AM (IST) Aug 15
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಭಾರತವು ಸಶಸ್ತ್ರ ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ ಎಂದು ಘೋಷಿಸಿದರು. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ 'ದಿಮಾಗಿ ನಕ್ಸಲರು' ಎಂಬ ಹೊಸ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
09:21 AM (IST) Aug 15
09:18 AM (IST) Aug 15
ಸ್ವಾತಂತ್ರ್ಯ ದಿನದಂದು ಶ್ರೀನಗರದ ಐತಿಹಾಸಿಕ ಲಾಲ್ ಚೌಕ್ನಲ್ಲಿ ಅಹಮದಾಬಾದ್ನ ಪ್ರವಾಸಿ ಅರುಣ್ ಹರ್ಯಾನಿ ಮೈತುಂಬಾ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು ಗಮನ ಸೆಳೆದಿದ್ದಾರೆ. 2022ರಿಂದ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗ ಈ ಬಾರಿ ಬದಲಾವಣೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.