LIVE NOW
Published : Jun 29, 2026, 05:23 AM ISTUpdated : Jun 29, 2026, 11:14 PM IST

India Latest News Live: ಸರಳಾ ಭಟ್ ಅಪಹರಣ, ಅತ್ಯಾ**, ಕೊಲೆ ಕೇಸ್, 36 ವರ್ಷ ಬಳಿಕ ಉಗ್ರ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್‌ಶೀಟ್

ಸಾರಾಂಶ

ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರಾಗಿರುವ 8 ಆರೋಪಿಗಳ ಮನೆಗಳ ಮೇಲೆ ಭಾನುವಾರ ಏಕಕಾಲದಲ್ಲಿ ಪೊಲೀಸರು ದಾಳಿ ನಡೆಸಿ, ಚಿನ್ನ, ಹಣ ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಮ್ಯಾಜಿಸ್ಟ್ರೇಟ್‌ಗಳ ಜತೆಗೂಡಿ ಪೊಲೀಸ್ ತಂಡಗಳು ಲವಕುಶ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮಶಂಕರ ಯಾದವ್ ಸೇರಿದಂತೆ ಎಲ್ಲಾ 8 ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿವೆ. ಅಯೋಧ್ಯೆ ಕೋರ್ಟ್‌ ಇವರನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ 2 ದಿನಗಳ ಬಳಿಕ ಈ ದಾಳಿ ನಡೆದಿದೆ.

ಏನೇನು ವಶ?:

ಶೋಧದ ವೇಳೆ ಪೊಲೀಸರು ಆರೋಪಿ ಮನೀಶ್ ಯಾದವ್ ನಿವಾಸದಿಂದ ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಬ್ಯಾಂಕ್ ಸಂಬಂಧಿತ ವಿವರಗಳು ಸೇರಿದಂತೆ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಮನೆಯಿಂದ ಹಣ, ಆಭರಣ ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಆರೋಪಿಯ ಮನೆಯಿಂದಲೂ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಎಲ್ಲಾ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಾಸಿಕ್ಯೂಷನ್ ಪ್ರಕಾರ, ತನಿಖಾಧಿಕಾರಿಗಳು ಇಲ್ಲಿಯವರೆಗೆ 79.85 ಲಕ್ಷ ರು.ಗಳನ್ನು ವಶಪಡಿಸಿಕೊಂಡಿದ್ದಾರೆ.

11:14 PM (IST) Jun 29

ಸರಳಾ ಭಟ್ ಅಪಹರಣ, ಅತ್ಯಾ**, ಕೊಲೆ ಕೇಸ್, 36 ವರ್ಷ ಬಳಿಕ ಉಗ್ರ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್‌ಶೀಟ್

ಕಾಶ್ಮೀರಿ ಪಂಡಿತ್ ಸರಳಾ ಭಟ್ ಪ್ರಕರಣ 36 ವರ್ಷ ಬಳಿಕ ಸದ್ದು ಮಾಡುತ್ತಿದೆ. ಕಾಶ್ಮೀರ ಕಣಿವೆಯಿಂದ ಪಂಡಿತರ ಓಡಿಸಲು ಉಗ್ರರು ನಡೆಸಿದ ನರಮೇಧಗಳಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸರಳಾ ಭಟ್ ದಾರುಣವಾಗಿ ಅಂತ್ಯವಾಗಿದ್ದಳು. ಏನಿದು ಪ್ರಕರಣ, ಈಗಿನ ಬೆಳವಣಿಗೆ ಏನು?

Read Full Story

09:14 PM (IST) Jun 29

Salman Khan - 51 ವರ್ಷಗಳ ಬಳಿಕ ಮನೆ ಖಾಲಿ ಮಾಡ್ತಾರಂತೆ ಸಲ್ಮಾನ್ ಖಾನ್? - ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ!

Salman Khan: ಕಳೆದ 51 ವರ್ಷಗಳಿಂದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ, ಶೀಘ್ರದಲ್ಲೇ ಹೊಸ ಸಮುದ್ರಕ್ಕೆ ಮುಖ ಮಾಡಿರುವ ಬಂಗಲೆಗೆ ಶಿಫ್ಟ್ ಆಗಬಹುದು. ಈ ನಿರ್ಧಾರದ ಹಿಂದಿನ ಕಾರಣ ಏನು ಅನ್ನೋದು ವರದಿಗಳಿಂದ ತಿಳಿದುಬಂದಿದೆ.

Read Full Story

08:40 PM (IST) Jun 29

ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಕೇಂದ್ರದ ತೀವ್ರ ಎಚ್ಚರಿಕೆ, ನೇಪಾಳದಲ್ಲಿ 52 ಭಾರತೀಯರು ತ್ರಿಶಂಕು ಸ್ಥಿತಿ!

ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯವು ತುರ್ತು ಎಚ್ಚರಿಕೆ ನೀಡಿದೆ. ಅನಧಿಕೃತ ಪ್ರವಾಸ ಆಯೋಜಕರ ವಂಚನೆಗೆ ಒಳಗಾಗಿ, ಸೂಕ್ತ ದಾಖಲೆಗಳಿಲ್ಲದೆ ನೇಪಾಳದಲ್ಲಿ ಸಿಲುಕಿರುವ 52 ಯಾತ್ರಿಕರ ಸಂಕಷ್ಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾತ್ರಿಕರು ಅಧಿಕೃತ ಮಾರ್ಗಗಳನ್ನೇ ಬಳಸುವಂತೆ ಮತ್ತು ಪ್ರಯಾಣದ ಮೊದಲು ಎಲ್ಲಾ ದಾಖಲೆಗಳನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯವು ಸೂಚಿಸಿದೆ.
Read Full Story

08:30 PM (IST) Jun 29

Jr NTR-ತ್ರಿವಿಕ್ರಮ್ ಕಾಂಬೋದಲ್ಲಿ ಸೆನ್ಸೇಷನಲ್ ಸಿನಿಮಾ - ಮೈ ಜುಮ್ಮೆನ್ನಿಸೋ ಪೋಸ್ಟರ್‌ನಲ್ಲೇನಿದೆ?

'Aravinda Sametha' ಚಿತ್ರದ ಬಳಿಕ ಜೂ.ಎನ್‌ಟಿಆರ್‌ ಮತ್ತು ತ್ರಿವಿಕ್ರಮ್ ಜೋಡಿ ಮತ್ತೆ ಒಂದಾಗುತ್ತಿದೆ. ಈ ಸೆನ್ಸೇಷನಲ್ ಪ್ರಾಜೆಕ್ಟ್‌ನ ಘೋಷಣೆಯಾಗಿದ್ದು, ಬಿಡುಗಡೆಯಾದ ಪೋಸ್ಟರ್ ಸಖತ್ ಕುತೂಹಲ ಮೂಡಿಸಿದೆ.

Read Full Story

08:24 PM (IST) Jun 29

ಕೇಂದ್ರದಿಂದ ಮಹತ್ವದ ನಿರ್ಧಾರ ಘೋಷಣೆ, ಜುಲೈ 1 ರಿಂದ ಪೆಟ್ರೋಲ್, ಡೀಸೆಲ್ ಮೇಲಿನ ನಿರ್ಬಂಧ ತೆರವು

ಕೇಂದ್ರ ಸರ್ಕಾರ ಇರಾನ್ ಯುದ್ಧದ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೆಲ ನಿರ್ಬಂಧ ವಿಧಿಸಿತ್ತು. ಇದೀಗ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿರುವ ಕಾರಣ ಜುಲೈ 1 ರಿಂದಲೇ ಇಂಧನ ಮೇಲಿನ ನಿರ್ಬಂಧ ತೆರೆವುಗೊಳಿಸಿದೆ.

 

Read Full Story

08:07 PM (IST) Jun 29

Ravi Teja - 'ಇರುಮುಡಿ ಕಟ್ಟು' ಎನ್ನುತ್ತಾ ಅಯ್ಯಪ್ಪ ಭಕ್ತರಿಗೆ ವಿಶೇಷ ಸರ್ಪ್ರೈಸ್ ಕೊಟ್ಟ ರವಿತೇಜ - ಏನದು?

Ravi Teja ಮತ್ತು ಪ್ರಿಯಾ ಭವಾನಿ ಶಂಕರ್ ಅಭಿನಯದ 'ಇರುಮುಡಿ' ಸಿನಿಮಾದ ಮೊದಲ ಹಾಡು 'ಇರುಮುಡಿ ಕಟ್ಟು' ಬಿಡುಗಡೆಯಾಗಿದೆ. ಅಯ್ಯಪ್ಪ ಸ್ವಾಮಿಯ ಭಕ್ತಿಭಾವ ಸಾರುವ ಈ ಗೀತೆಯಲ್ಲಿ ರವಿತೇಜ ದೈವಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

07:36 PM (IST) Jun 29

Salman Khan Secret Plan - 2027ರ 'ಈದ್'ಗೆ ಸುಲ್ತಾನ್ ಸಲ್ಮಾನ್ ಸೀಕ್ರೆಟ್ ಪ್ಲಾನ್; 'ಧುರಂಧರ್' ಟೀಮ್‌ ಜೊತೆಗೆ ಸಲ್ಲೂ ಮಾಡಲಿರೋದೇನು?

ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಯಾವತ್ತೂ ಅವಿನಾಭಾವ ಸಂಬಂಧವಿದೆ. ಈ ಹೊಸ ಸಿನಿಮಾ ಕೂಡ 2027ರ ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರತಂಡವು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ.

Read Full Story

07:27 PM (IST) Jun 29

Varanasi Epic War Scene - 3500 ಜನರೊಂದಿಗೆ ರಾಜಮೌಳಿ ಯುದ್ಧ! ಭಾರತೀಯ ಸಿನಿಮಾದಲ್ಲೇ ಅತಿದೊಡ್ಡ ದೃಶ್ಯ?

Rajamouli ಅವರ ಮುಂದಿನ ಬ್ರಹ್ಮಾಂಡ ಸಿನಿಮಾ 'ವಾರಣಾಸಿ' ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ಹೊರಬೀಳುತ್ತಿದೆ. ಇದೀಗ ಚಿತ್ರದ ಯುದ್ಧದ ದೃಶ್ಯವೊಂದಕ್ಕೆ 3500 ಸಹ ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.

Read Full Story

07:12 PM (IST) Jun 29

19 ತಿಂಗಳ ಕಂದನ ಕಣ್ಣು ಕಸಿದ ವೈದ್ಯರು - ಮೂಗಿನ ಡ್ರಾಪ್ಸ್​ ಕಣ್ಣಿಗೆ ಹಾಕಿ ನಿರ್ಲಕ್ಷ್ಯ - ಮಗು ಶಾಶ್ವತ ಕುರುಡು

ಮಧ್ಯಪ್ರದೇಶದಲ್ಲಿ ವೈದ್ಯರೊಬ್ಬರ ನಿರ್ಲಕ್ಷ್ಯದಿಂದ 19 ತಿಂಗಳ ಮಗುವೊಂದು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದೆ. ಕೆಮ್ಮು, ನೆಗಡಿಗೆಂದು ಆಸ್ಪತ್ರೆಗೆ ದಾಖಲಾದ ಮಗುವಿನ ಕಣ್ಣಿಗೆ, ಮೂಗಿಗೆ ಹಾಕಬೇಕಿದ್ದ ಡ್ರಾಪ್ಸ್ ಹಾಕಿದ್ದೇ ಈ ದುರಂತಕ್ಕೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
Read Full Story

06:13 PM (IST) Jun 29

Mithun Sridevi - ಗಂಡ-ಹೆಂಡತಿಯಂತೆ ಇದ್ದರು ಮಿಥುನ್-ಶ್ರೀದೇವಿ - ಇಡೀ ಇಂಡಸ್ಟ್ರಿಗೆ ಗೊತ್ತಿತ್ತು ಆ ಸತ್ಯ!

Mithun Sridevi ಸಂಬಂಧದ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಇಬ್ಬರೂ ಮೂರು ತಿಂಗಳು ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸಿಸಿದ್ದರು ಎಂಬ ಹೇಳಿಕೆ ಇದೀಗ ಬಾಲಿವುಡ್‌ನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

Read Full Story

06:12 PM (IST) Jun 29

ಕಂಟಿನ್ಯೂ..ಕಂಟಿನ್ಯೂ..ಕಾಕ್ರೋಚ್ ಜನತಾ ಪಾರ್ಟಿ ದೀಪ್ಕೆಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್ ಟ್ರೋಲ್

ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ಧರಣಿ ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್, ಸಿಜಪಿ ಸಂಸ್ಥಾಪಕನಿಗೆ ಧೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ಟ್ರೋಲ್‌ಗೆ ಗುರಿಯಾಗಿದೆ.

Read Full Story

06:00 PM (IST) Jun 29

ಮನೆ ಕೆಲಸ ಎಲ್ಲಾ ಮಾಡಿದ್ರೂ ಪತ್ನಿ ಕಿರುಕುಳ, ಥಳಿತ - ಶಾಕಿಂಗ್​ ವಿಡಿಯೋ ಮಾಡಿ ಜೀವ ಕಳೆದುಕೊಂಡ ಉದ್ಯಮಿ

ಹರಿಯಾಣದ ಫರಿದಾಬಾದ್‌ನಲ್ಲಿ 28 ವರ್ಷದ ಬಟ್ಟೆ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ, ತಮ್ಮ ಪತ್ನಿ ಮತ್ತು ಅತ್ತೆಯ ಕಡೆಯವರಿಂದ ತೀವ್ರ ಮಾನಸಿಕ ಹಿಂಸೆ ಅನುಭವಿಸಿರುವುದಾಗಿ ಆರೋಪಿಸಿದ್ದಾರೆ. ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

05:51 PM (IST) Jun 29

ಭಾರತ vs ಇಂಗ್ಲೆಂಡ್ ನಡುವಿನ ಸರಣಿ ಯಾವಾಗ ಆರಂಭ? ತಂಡಗಳು ಹೇಗಿವೆ? ಎಲ್ಲಿ, ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಐರ್ಲೆಂಡ್ ಎದುರು ಟಿ20 ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಈ ಪ್ರವಾಸದಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದ್ದು, ಏಷ್ಯನ್ ಗೇಮ್ಸ್‌ಗೂ ಮುನ್ನ ತಂಡದ ಬಲಾಬಲ ಪರೀಕ್ಷಿಸಲು ಹಾಗೂ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಗಮನವಿದೆ.
Read Full Story

05:34 PM (IST) Jun 29

ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್‌ ಗವಾಸ್ಕರ್‌

Sunil Gavaskar on Vaibhav Suryavanshi:15 ವರ್ಷದ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ ಮುಂಬರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದಲೇ ಆಡುವ ಟೀಂಗೆ (Playing XI) ಸೇರಿಸಿಕೊಳ್ಳಬೇಕು ಮಾಜಿ ಕ್ರಿಕೆಟರ್ ಸುನಿಲ್ ಗಾವಸ್ಕರ್ ಅವರು ಹೇಳಿದ್ದಾರೆ.

Read Full Story

05:18 PM (IST) Jun 29

ಆಸೀಸ್ ಎದುರಿನ ಸೋಲಿನ ಹೊರತಾಗಿಯೂ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ಜಗತ್ತಿನ ಮೊದಲ ಮಹಿಳಾ ಕ್ರಿಕೆಟರ್

ಲಾರ್ಡ್ಸ್‌: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಭಾರತದ ಅನುಭವಿ ಬೌಲಿಂಗ್ ಆಲ್ರೌಂಡರ್ ದೀಪ್ತಿ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ದೀಪ್ತಿ ಶರ್ಮಾ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

Read Full Story

04:54 PM (IST) Jun 29

Actor Suriya Hombale Films movie - ತಮಿಳು ನಟ ಸೂರ್ಯ- ಹೊಂಬಾಳೆ ಫಿಲ್ಮ್ಸ್ ಸಿನಿಮಾ!‌ ನಾಯಕಿ ಯಾರು?

Tamil Actor Suriya And TJ Gnanavel Movie: ತಮಿಳು ನಟ ಸೂರ್ಯ ಹಾಗೂ ಹೊಂಬಾಳೆ ಫಿಲ್ಮ್ಸ್‌ ಸೇರಿ ಹೊಸ ಸಿನಿಮಾ ಮಾಡಲಿದೆ. ಇದಕ್ಕೆ ನಿರ್ದೇಶಕರು ಯಾರು? ನಾಯಕಿ ಯಾರು ಎಂದು ಕೂಡ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

04:39 PM (IST) Jun 29

ರಾಮ ಮಂದಿರ ದೇಣಿಗೆ ಕಳ್ಳತನ - ವಕೀಲರ ನಿರ್ಧಾರಕ್ಕೆ ಸಿಕ್ಕಿ ಬಿದ್ದೋರು ಕಕ್ಕಾಬಿಕ್ಕಿ- ಇವ್ರನ್ನೆ ರಾಮನೇ ಕಾಪಾಡ್ಬೇಕು

ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಫೈಜಾಬಾದ್ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ. ಈ ನಿರ್ಧಾರವನ್ನು ಉಲ್ಲಂಘಿಸಿದರೆ ಐದು ಲಕ್ಷ ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
Read Full Story

04:14 PM (IST) Jun 29

Saif Ali Khan Shocking Statement - ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ - 'ಅಪ್ಪಾ, ನೀವು ಸಾಯುತ್ತೀರಾ?' ಎಂದಿದ್ದ ಮಗ, ಈಗ ಶಾಕಿಂಗ್ ಹೇಳಿಕೆ ಕೊಟ್ಟ ನಟ!

ಹಲವು ದಿನಗಳ ಚಿಕಿತ್ಸೆಯ ನಂತರ ಸೈಫ್ ಚೇತರಿಸಿಕೊಂಡರು. ಆದರೆ ಆ ದಾಳಿಕೋರನನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಸೈಫ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. "ಆತ ನನ್ನನ್ನು ಕೊಲ್ಲಲು ಬಂದಿದ್ದನ್ನು ನೆನಪಿಸಿಕೊಂಡಾಗ ಕ್ಷಮಿಸಲು ಸಾಧ್ಯವೇ ಇರಲಿಲ್ಲ. 

Read Full Story

03:58 PM (IST) Jun 29

14ನೇ ವಯಸ್ಸಲ್ಲೇ AI ಸ್ಟಾರ್ಟ್​ಅಪ್​ - ದುಬೈ ಬುರ್ಜ್ ಖಲೀಫಾದಲ್ಲಿ ಕಚೇರಿ-ಭಾರತದ ಬಾಲಕನ ರೋಚಕ ಸ್ಟೋರಿ

14 ವರ್ಷದ ಜೈನಮ್ ಜೈನ್, ಮ್ಯಾಂಗೋ ಎಂಜಿನ್ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸ್ಥಾಪಕ. ಪುಣೆಯಲ್ಲಿ ಜನಿಸಿ ದುಬೈಗೆ ತೆರಳಿದ ಈ ಬಾಲಕ, ತನ್ನ ಛಲ ಮತ್ತು ಬುದ್ಧಿವಂತಿಕೆಯಿಂದ ವಿಶ್ವಪ್ರಸಿದ್ಧ ಬುರ್ಜ್ ಖಲೀಫಾದಲ್ಲಿ ಕಚೇರಿಯನ್ನು ಹೊಂದುವ ಮೂಲಕ ಯುವ ಉದ್ಯಮಿಯಾಗಿ ಹೊರಹೊಮ್ಮಿದ್ದಾನೆ. ಯಾವುದೇ ಔಪಚಾರಿಕ AI ಕೋರ್ಸ್​ ತೆಗೆದುಕೊಳ್ಳದೇ ಈತ ಈ ಸಾಧನೆ ಮಾಡಿರುವುದು ವಿಶೇಷ.
Read Full Story

02:23 PM (IST) Jun 29

ಸೇಡು ತೀರಿಸಿಕೊಳ್ಳಲು ದನದ ಇಂಜೆಕ್ಷನ್‌ ಚುಚ್ಚಿ 7 ವರ್ಷದ ಬಾಲಕನ ಕೊಂದ 8ನೇ ಕ್ಲಾಸ್‌ ಹುಡುಗ!

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ, 14 ವರ್ಷದ ಬಾಲಕನೊಬ್ಬ ಸೇಡು ತೀರಿಸಿಕೊಳ್ಳಲು 7 ವರ್ಷದ ಮಗುವಿಗೆ ಜಾನುವಾರುಗಳಿಗೆ ಬಳಸುವ ಆಕ್ಸಿಟೋಸಿನ್ ಇಂಜೆಕ್ಷನ್ ಚುಚ್ಚಿ ಕೊಂದಿದ್ದಾನೆ. ದೌರ್ಜನ್ಯ ಯತ್ನವನ್ನು ತಡೆದಿದ್ದಕ್ಕೆ ಹಗೆತನ ಸಾಧಿಸಿ ಈ ಕೃತ್ಯ ಎಸಗಿದ್ದಾನೆ.

Read Full Story

02:13 PM (IST) Jun 29

Suriya Viral News - ತಮಿಳುನಾಡು ರಾಜಕೀಯಕ್ಕೆ ನಟ ಸೂರ್ಯ.. ಅಗರಂ ಫೌಂಡೇಶನ್‌ ಸಭೆಯಲ್ಲಿ ಸಿಕ್ಕೇ ಬಿಡ್ತು ಸಾಕ್ಷಿ!

ಸೂರ್ಯ ಕೂಡ ಅವರ ಜೊತೆಗೂಡುತ್ತಾರಾ ಅಥವಾ ಸ್ವತಂತ್ರವಾಗಿ ಹೊಸ ಹಾದಿ ತುಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಸೂರ್ಯ ರಾಜಕೀಯಕ್ಕೆ ಬರುವುದು ಅಧಿಕೃತವಾದರೆ, ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಸ್ಟಾರ್‌ಗಳ ನಡುವೆಯೇ ದೊಡ್ಡ ಪೈಪೋಟಿ ಏರ್ಪಡಲಿದೆ.

Read Full Story

01:44 PM (IST) Jun 29

ಐರ್ಲೆಂಡ್ ಎದುರು ಭಾರತ ಟಿ20 ಸರಣಿ ವೈಟ್‌ವಾಷ್ ಮುಖಭಂಗ; ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್ ವೈರಲ್

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧ ಭಾರತ ಟಿ20 ಸರಣಿ ಸೋತಿದೆ. ಈ ಸೋಲಿನ ಮರುದಿನವೇ, 2024ರ ಟಿ20 ವಿಶ್ವಕಪ್ ಗೆಲುವನ್ನು ಸ್ಮರಿಸಿಕೊಂಡು ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
Read Full Story

01:11 PM (IST) Jun 29

Vijay Joseph Trisha Krishnan Viral News - ತ್ರಿಶಾ ಡಿಸಿಎಂ ಆಗ್ತಾರಾ? ಮಾಜಿ ಸಚಿವರ ಸೆನ್ಸೇಷನಲ್ ಹೇಳಿಕೆ ಭಾರೀ ವೈರಲ್; ನಟಿ ಫ್ಯಾನ್ಸ್‌ಗೆ ಸಖತ್ ಖುಷಿ!

ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ!

Read Full Story

12:51 PM (IST) Jun 29

ಹಳಿಗಿಳಿದ ದೇಶದ ಮೊದಲ ಪರಿಸರಸ್ನೇಹಿ ಹಸಿರು ಹೈಡ್ರೋಜನ್ ರೈಲು, ಗಂಟೆಗೆ 120 ಕಿ.ಮೀ ವೇಗದಲ್ಲಿ ಅಬ್ಬರಿಸಿದ ಟ್ರೈನ್!

ಭಾರತೀಯ ರೈಲ್ವೆಯು ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ದೇಶದ ಮೊಟ್ಟಮೊದಲ ಹಸಿರು ಹೈಡ್ರೋಜನ್ ಆಧಾರಿತ ರೈಲಿನ ಯಶಸ್ವಿ ಪ್ರಾಯೋಗಿಕ ಸಂಚಾರವನ್ನು ನಡೆಸಿದೆ. ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾದ ಈ ಪರಿಸರ ಸ್ನೇಹಿ ರೈಲು, ಇಂಗಾಲದ ಡೈಆಕ್ಸೈಡ್ ಬದಲಿಗೆ ಕೇವಲ ನೀರು ಮತ್ತು ಹಬೆಯನ್ನು ಹೊರಸೂಸುವ ಮೂಲಕ ಶುದ್ಧ ಇಂಧನ ಸಾರಿಗೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
Read Full Story

12:25 PM (IST) Jun 29

ನಟನ ಜೊತೆಗಿನ ನಟಿಯ 1 - 32 ನಿಮಿಷದ ಎಂಎಂಎಸ್ ಲೀಕ್; ಸ್ಟಾರ್ ಕುಟುಂಬದ ಕುಡಿಯ ವಿಡಿಯೋ

2005ರಲ್ಲಿ ನಟಿಯ ಎಂಎಂಎಸ್ ಲೀಕ್ ಆಗಿ ಅವರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ವಿವಾದದಿಂದಾಗಿ ಸಿನಿಮಾಗಳಲ್ಲಿ ಅವಕಾಶ ಕಳೆದುಕೊಂಡ ರಿಯಾ, ನಂತರ ಡಿಜಿಟಲ್ ವೇದಿಕೆಗಳ ಮೂಲಕ ಮತ್ತೆ ಮುನ್ನೆಲೆಗೆ ಬಂದರು.

Read Full Story

12:24 PM (IST) Jun 29

OTT Release This Week - ಒಟಿಟಿಗೆ ಬಂದ ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಹಾರರ್ ಲವ್ ಸ್ಟೋರಿ! ಎಲ್ಲಿ ನೋಡಬಹುದು?

New Movies on OTT: ಈ ವಾರ ಓಟಿಟಿ ಪ್ರಿಯರಿಗೆ ಭರಪೂರ ಮನರಂಜನೆ ಕಾದಿದೆ. ಸಂದೀಪ್ ಕಿಶನ್ ಕಾಮಿಡಿ ವೆಬ್ ಸೀರೀಸ್ 'ಸೂಪರ್ ಸುಬ್ಬು' ನಿಂದ ಹಿಡಿದು, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ 'ಅಬ್ಸೆಶನ್' ಹಾರರ್ ಸಿನಿಮಾ ತನಕ, ಹಲವು ಹೊಸ ಸಿನಿಮಾಗಳು, ಸೀರೀಸ್‌ಗಳು ಸ್ಟ್ರೀಮಿಂಗ್‌ಗೆ ಸಿದ್ಧವಾಗಿವೆ.

Read Full Story

12:20 PM (IST) Jun 29

ಕಿಸ್​ ಕೊಡುತ್ತಲೇ ಹೋಟೆಲ್​ ರೂಮೊಳಗೆ ಹೋದಳು - ಬರುವಾಗ ಸೂಟ್​ಕೇಸ್​​ ಜೊತೆ ಒಬ್ಬಳೇ ಬಂದಳು- ಆಗಿದ್ದೇನು

ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಪುರುಷನಿಗೆ ಮುತ್ತು ಕೊಟ್ಟು ಕೋಣೆಯೊಳಗೆ ಹೋಗುತ್ತಾಳೆ. ಆದರೆ, ವಾಪಸ್ ಬರುವಾಗ ಆತನನ್ನು ಪ್ರಜ್ಞೆ ತಪ್ಪಿಸಿ, ಅವನ ವಸ್ತುಗಳನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಪರಾರಿಯಾಗುತ್ತಾಳೆ. ಅರ್ಜೆಂಟೀನಾದಲ್ಲಿ ನಡೆದ ಈ ಘಟನೆ, ಡೇಟಿಂಗ್ ಆ್ಯಪ್ ವಂಚನೆಯ ಜಾಲವನ್ನು ಬಯಲಿಗೆಳೆದಿದೆ.
Read Full Story

11:52 AM (IST) Jun 29

ಐರ್ಲೆಂಡ್ ಎದುರು ಟಿ20 ಸರಣಿ ಸೋಲುತ್ತಿದ್ದಂತೆಯೇ ಹೆಡ್‌ ಕೋಚ್ ಗೌತಮ್ ಗಂಭೀರ್‌ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ ಐಸ್‌ಲ್ಯಾಂಡ್!

ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಈ ಹೀನಾಯ ಸೋಲಿನ ಬಳಿಕ, ಕೋಚ್ ಗೌತಮ್ ಗಂಭೀರ್ ಅವರನ್ನು ಐಸ್‌ಲ್ಯಾಂಡ್ ಕ್ರಿಕೆಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದೆ.
Read Full Story

11:36 AM (IST) Jun 29

ರಾಷ್ಟ್ರಪತಿಯ ಹ್ಯಾಂಡ್​ಸಮ್​ ಅಂಗರಕ್ಷಕನಿಗೆ ಯುವತಿಯರ ಕಾಟ! ಬಾಡಿಗಾರ್ಡ್​ಗೇ ಬೇಕಿದೆ ಬಾಡಿಗಾರ್ಡ್​

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗರಕ್ಷಕ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ತಮ್ಮ ಅಂದದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಯುವತಿಯರು ಇವರನ್ನು ನೋಡಲು ಮುಗಿಬೀಳುತ್ತಿದ್ದು, ಈ ಅಂಗರಕ್ಷಕನಿಗೇ ಅಂಗರಕ್ಷಕ ಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
Read Full Story

10:49 AM (IST) Jun 29

ಐರ್ಲೆಂಡ್ ಎದುರು ಹೀನಾಯ ಸೋಲಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಕೇವಲ ಒಂದು ರನ್‌ನಿಂದ ರೋಚಕ ಸೋಲು ಅನುಭವಿಸಿತು. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಸರಣಿ ಅಷ್ಟೇನೂ ಚೆನ್ನಾಗಿರಲಿಲ್ಲ ಎಂದು ಒಪ್ಪಿಕೊಂಡು, ಎದುರಾಳಿ ತಂಡದ ಆಟವನ್ನು ಶ್ಲಾಘಿಸಿದರು. ತಿಲಕ್ ವರ್ಮಾ ಅವರ ಅರ್ಧಶತಕದ ಹೊರತಾಗಿಯೂ ಭಾರತಕ್ಕೆ ಗೆಲುವು ದಕ್ಕಲಿಲ್ಲ.
Read Full Story

10:48 AM (IST) Jun 29

ಫುಟ್ಬಾಲ್​ ಪಂದ್ಯದಲ್ಲಿ ನಿಗೂಢ ಬ್ಯೂಟಿ​ - ಕೆಲವೇ ಕ್ಷಣಗಳ ವೈರಲ್ ವಿಡಿಯೋಗೆ ವಿಶ್ವಾದ್ಯಂತ ಇನ್ನಿಲ್ಲದ ಡಿಮಾಂಡ್​- ಯಾರೀಕೆ

ಇರಾಕ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಯುವತಿಯೊಬ್ಬಳು ತನ್ನ ಸಹಜ ಸೌಂದರ್ಯ ಮತ್ತು ಮುಗುಳ್ನಗುವಿನಿಂದ ರಾತ್ರೋರಾತ್ರಿ ವೈರಲ್ ಆಗಿದ್ದಾಳೆ. ಈಕೆಯ ಕೆಲವೇ ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಈಕೆ ಯಾರೆಂದು ತಿಳಿಯಲು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ.
Read Full Story

10:45 AM (IST) Jun 29

ಬಡವರ ತಟ್ಟೆಗೆ ಅಕ್ಕಿ ಬಿಸಿ - ಒಂದೇ ತಿಂಗಳಲ್ಲಿ 3 ಬಾರಿ ಬೆಲೆ ಏರಿಕೆ; ಕೆಜಿ ಅಕ್ಕಿಗೆ ಒಟ್ಟು ₹18 ಹೆಚ್ಚಳ, ಕಂಗಾಲಾದ ಗ್ರಾಹಕ!

ಬೆಂಗಳೂರಿನಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಅಕ್ಕಿ ದರ ಕೆಜಿಗೆ ₹18ರಷ್ಟು ಹೆಚ್ಚಳವಾಗಿ ಜನಸಾಮಾನ್ಯರಿಗೆ ಆಘಾತ ನೀಡಿದೆ. ಕೇಂದ್ರದ ರಫ್ತು ನೀತಿ, ಸಾಗಣೆ ವೆಚ್ಚ ಏರಿಕೆ ಹಾಗೂ ಪೂರೈಕೆ ವ್ಯತ್ಯಾಸ ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಇದು ಮಧ್ಯಮ ವರ್ಗದ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ.
Read Full Story

10:19 AM (IST) Jun 29

ಮದ್ಯ ಮಾರಾಟದಲ್ಲಿ ಯೋಗಿ ಸರ್ಕಾರ ಹೊಸ ದಾಖಲೆ; ಕರ್ನಾಟಕ, ಮಹಾರಾಷ್ಟ್ರವನ್ನು ಹಿಂದಿಕ್ಕಿ ಯುಪಿ ನಂ.1!

ದೇಶದಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಗಳ ಅಬಕಾರಿ ಸುಂಕ ಸಂಗ್ರಹಣೆಯು ಎರಡು ತಿಂಗಳಲ್ಲಿ ಶೇ. 82ರಷ್ಟು ಹೆಚ್ಚಾಗಿದೆ. ಒಟ್ಟು ಆದಾಯದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣವು ಅತಿ ಹೆಚ್ಚು ಬೆಳವಣಿಗೆ ದರವನ್ನು ದಾಖಲಿಸಿದೆ. 

Read Full Story

09:41 AM (IST) Jun 29

ರೇಡಿಯೋ ಇಲ್ಲ, ಬಾಹ್ಯಾಕಾಶದ ಉಪಗ್ರಹವೇ ದಾರಿ; ‘ಗಗನ್’ ತಂತ್ರಜ್ಞಾನ ಬಳಸಿ ಇಂಡಿಗೊ ವಿಮಾನದ ಐತಿಹಾಸಿಕ ಲ್ಯಾಂಡಿಂಗ್!

ಇಂಡಿಗೊ ವಿಮಾನವು ಇಸ್ರೋದ 'ಗಗನ್' ತಂತ್ರಜ್ಞಾನ ಬಳಸಿ ಉದಯಪುರದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಸ್ವದೇಶಿ ಉಪಗ್ರಹ ಆಧಾರಿತ ವ್ಯವಸ್ಥೆಯು GPS ಸಿಗ್ನಲ್‌ಗಳನ್ನು ಸರಿಪಡಿಸಿ, ಯಾವುದೇ ನೆಲದ ಉಪಕರಣಗಳಿಲ್ಲದೆ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ದಾರಿ ಮಾಡಿಕೊಡುತ್ತದೆ.

Read Full Story

09:36 AM (IST) Jun 29

ನಿಜವಾಯ್ತು ಘಾನಾ ಮಂತ್ರವಾದಿ ಭವಿಷ್ಯ - ಕೊನೆಗೂ ಗೋಲು ಹೊಡೆದ ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಕೇನ್‌!

ಇಂಗ್ಲೆಂಡ್ ಪರ ಹ್ಯಾರಿ ಕೇನ್ ದಾಖಲೆಯ ಗೋಲು ಬಾರಿಸಿದರೆ, ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಸತತ ಮೂರನೇ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲದ ಉರುಗ್ವೆ ತಂಡಕ್ಕೆ ಆ ದೇಶದ ಫುಟ್ಬಾಲ್ ಸಂಸ್ಥೆ ವಿಶೇಷ ವಿಮಾನವನ್ನು ರದ್ದುಗೊಳಿಸಿ ವಿಶಿಷ್ಟ ಶಿಕ್ಷೆ ನೀಡಿದೆ.
Read Full Story

09:21 AM (IST) Jun 29

ಹರ್ಮನ್‌ಪ್ರೀತ್ ಕೌರ್ ಮತ್ತೆ ಕ್ಯಾಪ್ಟನ್ ಆಗಿ ಮುಂದುವರೆಯುತ್ತಾರಾ? ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಹೆಡ್ ಕೋಚ್..!

ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡದ 2026ರ ಐಸಿಸಿ ಟಿ20 ವಿಶ್ವಕಪ್ ಸೆಮೀಸ್‌ಗೇರುವ ಕನಸು ಆಸೀಸ್ ಎದುರು ಸೋಲುವುದರೊಂದಿಗೆ ನುಚ್ಚುನೂರಾಗಿದೆ. ಇದರ ಬೆನ್ನಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಹಾಗೂ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಕೋಚ್ ಮೌನ ಮುರಿದಿದ್ದಾರೆ.

 

Read Full Story

09:17 AM (IST) Jun 29

Salman Khan-Aishwarya Rai Secret - ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!

ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದೇನು ಮಾಡಿದ್ದರು ಎಂಬ ಸೀಕ್ರೆಟ್ ಇಲ್ಲಿ ರಿವೀಲ್ ಆಗಿದೆ. ಈ ಸಂಗತಿಯನ್ನು ಸಹನಟಿ ಸಾದಿಯಾ ಹೇಳಿದ್ದಾರೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾ

Read Full Story

09:03 AM (IST) Jun 29

Actress Krishi Thapanda - ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ

kannada actress krishi thapanda: ನಟಿ, ಬಿಗ್‌ ಬಾಸ್‌ ಸ್ಪರ್ಧಿ ಕೃಷಿ ತಾಪಂಡ ಅವರ ಮನೆಯಲ್ಲಿ ಗೆಳೆಯ ವೈಶಾಖ್ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈಗ ಕೃಷಿ ತಾಪಂಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಕೃಷಿ ಈಗ ಏನು ಹೇಳ್ತಿದ್ದಾರೆ?

 

Read Full Story

08:42 AM (IST) Jun 29

ಫಿಫಾ ವಿಶ್ವಕಪ್ ನಾಕೌಟ್‌ ಸೆಣಸಾಟಕ್ಕೆ ವೇದಿಕೆ ಸಿದ್ಧ! ನಾಕೌಟ್‌ನಲ್ಲಿ ಪಂದ್ಯ ಡ್ರಾ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

ಫಿಫಾ ಫುಟ್ಬಾಲ್‌ ವಿಶ್ವಕಪ್‌ ಈಗ ಅಂತಿಮ-32ರ ನಾಕೌಟ್‌ ಹಂತವನ್ನು ತಲುಪಿದೆ. ಈ ಮಾಡು ಇಲ್ಲವೇ ಮಡಿ ಸುತ್ತಿನಲ್ಲಿ ಗೆದ್ದ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರೆ, ಸೋತ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಈ ಹಂತದ ಪಂದ್ಯಗಳು, ಎದುರಾಳಿಗಳು ಮತ್ತು ಡ್ರಾ ನಿಯಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Read Full Story

08:26 AM (IST) Jun 29

FIFA World Cup 2026 ಡೆಂಬೆಲೆ ಹ್ಯಾಟ್ರಿಕ್‌ - ನಾರ್ವೆ ವಿರುದ್ಧ ಗೆದ್ದ ಫ್ರಾನ್ಸ್‌ ನಾಕೌಟ್ ಪ್ರವೇಶ

ಓಸ್ಮಾನ್‌ ಡೆಂಬೆಲೆ ಅವರ ಹ್ಯಾಟ್ರಿಕ್‌ ನೆರವಿನಿಂದ ಫ್ರಾನ್ಸ್‌ ತಂಡ ವಿಶ್ವಕಪ್‌ನಲ್ಲಿ ಅಜೇಯವಾಗಿ ನಾಕೌಟ್‌ ಹಂತ ಪ್ರವೇಶಿಸಿದೆ. ಸ್ಪೇನ್ ಮತ್ತು ಬೆಲ್ಜಿಯಂ ಕೂಡಾ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರೆ, ಒಂದೂ ಪಂದ್ಯ ಗೆಲ್ಲದ ಕೇಪ್‌ ವರ್ಡೆ ತಂಡ ನಾಕೌಟ್‌ ಪ್ರವೇಶಿಸಿ ಅಚ್ಚರಿ ಮೂಡಿಸಿದೆ.
Read Full Story

More Trending News