LIVE NOW
Published : Jul 28, 2026, 07:08 AM ISTUpdated : Jul 28, 2026, 11:07 PM IST

India Latest News Live: ಈ ಹಾರರ್ ಸಿನಿಮಾನ ಒಮ್ಮೆ ನೀವು ನೋಡಿದ್ರೆ ಮುಗೀತು ಕಥೆ.. ರಾತ್ರಿ ಕಣ್ಣು ಬಿಡೋಕೂ ಹಿಂದೆ-ಮುಂದೆ ನೋಡ್ತೀರಾ!

ಸಾರಾಂಶ

ನವದೆಹಲಿ: ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್‌ ಅವರ ಹೇಳಿಕೆಯಿಂದಾಗಿ ಹುಟ್ಟಿಕೊಂಡಿದ್ದ ‘ಜಿರಳೆ ಪಾರ್ಟಿ’ ಜೆನ್‌-ಝಿಗಳನ್ನು ಒಗ್ಗೂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನೇ ಕೆಳಗೆ ಇಳಿಸಿದೆ. ಇದರ ಬೆನ್ನಲ್ಲೇ, ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಪೆಟ್ರೋಲ್‌ಗೆ ಶೇ.20ರಷ್ಟು ಎಥನಾಲ್‌ ಮಿಶ್ರಣ ಮಾಡುವ ಕ್ರಮದ ವಿರುದ್ಧ ‘ಇ20 ಜನತಾ ಪಾರ್ಟಿ’ ಎಂಬ ಇನ್‌ಸ್ಟಾಗ್ರಾಂ ಪೇಜ್‌ ಶುರು ಮಾಡಲಾಗಿದೆ ಹಾಗೂ ಇ20 ಪ್ರತಿಪಾದಕ ಕೇಂದ್ರ ಸಚಿವ ನಿತಿನ್‌ ಗಡ್ಕರಿ ರಾಜೀನಾಮೆಗೆ ಆಗ್ರಹಿಸಲಾಗಿದೆ.

ಈ ಪಕ್ಷವ ಖಾತೆಯನ್ನು ಇನ್‌ಸ್ಟಾಗ್ರಾಂನಲ್ಲಿ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸೋಮವಾರ ಮಧ್ಯಾಹ್ನದವರೆಗೆ 2.18 ಲಕ್ಷ ಹಿಂಬಾಲಕರು ಫಾಲೋ ಮಾಡಿದ್ದಾರೆ.

ಯಾವುದೇ ಮಿಶ್ರಣವಿಲ್ಲದ ಶೇ.100ರಷ್ಟು ಶುದ್ಧ ಪೆಟ್ರೋಲ್‌ ಲಭ್ಯವಾಗುವಂತೆ ಮಾಡಬೇಕು ಹಾಗೂ ಅದರ ಬೆಲೆಯನ್ನು ತಗ್ಗಿಸಬೇಕು. ಜತೆಗೆ ಇ20 ಪೆಟ್ರೋಲ್‌ ಪರಿಚಯಿಸಿದ್ದಕ್ಕಾಗಿ ಭಾರೀ ಆಕ್ರೋಶ ಎದುರಿಸುತ್ತಿರುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ರಾಜೀನಾಮೆ ನೀಡಬೇಕು ಎಂಬುದು ಇ20 ಜನತಾ ಪಕ್ಷದ ಆಗ್ರಹವಾಗಿದೆ.

ಆದರೆ ಸರ್ಕಾರ ಮಾತ್ರ ಈ ಎರಡೂ ಪ್ರಸ್ತಾಪಗಳು ನಮ್ಮ ಮುಂದಿಲ್ಲ. ಇದರ ಜಾರಿ ಸಾಧ್ಯವಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದೆ.

11:07 PM (IST) Jul 28

ಈ ಹಾರರ್ ಸಿನಿಮಾನ ಒಮ್ಮೆ ನೀವು ನೋಡಿದ್ರೆ ಮುಗೀತು ಕಥೆ.. ರಾತ್ರಿ ಕಣ್ಣು ಬಿಡೋಕೂ ಹಿಂದೆ-ಮುಂದೆ ನೋಡ್ತೀರಾ!

ಆ ಕಾಲದಲ್ಲಿ ಹಾರರ್ ಸಿನೆಮಾಗಳಲ್ಲಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. ‘ಶೂಟಿಂಗ್ ಬಹುತೇಕ ತಡರಾತ್ರಿಯಲ್ಲೇ ನಡೆಯುತ್ತಿತ್ತು. ದಟ್ಟವಾದ ಮಂಜು ಮತ್ತು ಸ್ಮಶಾನದಂತಹ ನಿಶ್ಯಬ್ದದ ನಡುವೆ ರಾತ್ರಿಯಿಡೀ ಕಿರುಚಾಡುತ್ತಾ, ದೆವ್ವಗಳಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳಲ್ಲಿ ಅಭಿನಯಿಸುವುದು ನಿಜಕ್ಕೂ ಮೈ ಜುಂ ಎನ್ನುವ ಅನುಭವ’ ಎಂದಿದ್ದಾರೆ ನಟಿ ಪ್ರೀತಿ ಸಪ್ರು.

Read Full Story

10:44 PM (IST) Jul 28

ತಂದೆ ನಿಧನರಾದ ಲಂಡನ್ ಆಸ್ಪತ್ರೆಯಲ್ಲೇ ಮಗನ ಕೊನೆಯುಸಿರು - ಹಿರಿಯ ನಟ ದೇವಾನಂದ್‌ ಪುತ್ರ ಸುನೀಲ್ ಆನಂದ್ ವಿಧಿವಶ!

ಹಿರಿಯ ನಟ ದೇವ್ ಆನಂದ್ ಅವರ ಪುತ್ರ, ನಟ-ನಿರ್ಮಾಪಕ ಸುನೀಲ್ ಆನಂದ್ (70) ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಿತ್ರ ಕಾಕತಾಳೀಯವೆಂದರೆ, ವರ್ಷಗಳ ಹಿಂದೆ ಅವರ ತಂದೆ ದೇವ್ ಆನಂದ್ ನಿಧನರಾದ ಅದೇ ಆಸ್ಪತ್ರೆಯಲ್ಲಿ ಸುನೀಲ್ ಆನಂದ್ ಕೂಡ ಕೊನೆಯುಸಿರೆಳೆದಿದ್ದಾರೆ.
Read Full Story

10:24 PM (IST) Jul 28

ಎಫ್‌ಐಆರ್‌ ಕುರಿತಾದ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಒಪ್ಪಲ್ಲ ಎಂದ ಸಿಜೆಪಿ!

ವಿದ್ಯಾರ್ಥಿ ಪ್ರತಿಭಟನೆ ವೇಳೆ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸದಿದ್ದರೆ ಮತ್ತೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಎಚ್ಚರಿಸಿದೆ.

Read Full Story

09:53 PM (IST) Jul 28

ಬೆಂಗಳೂರು ಸೇರಿ ಮೆಟ್ರೋ ಸಿಟಿಗಳನ್ನು ಹಿಂದಿಕ್ಕಿದ ಸಣ್ಣ ಪಟ್ಟಣಗಳು - ಹೆಚ್ಚು ವೇತನ ನೀಡುವುದರಲ್ಲಿ ಈ ನಗರವೇ ಟಾಪ್!

ಟೀಮ್‌ಲೀಸ್‌ನ ಹೊಸ ವರದಿಯ ಪ್ರಕಾರ, ಭಾರತದ ಮೆಟ್ರೋ ಮತ್ತು ಸಣ್ಣ ನಗರಗಳ ನಡುವಿನ ಸಂಬಳದ ಅಂತರ ಕಡಿಮೆಯಾಗುತ್ತಿದೆ. ಉತ್ಪಾದನೆ ಮತ್ತು ಕೈಗಾರಿಕಾ ಹೂಡಿಕೆಗಳಿಂದಾಗಿ ಅಹಮದಾಬಾದ್‌ನಂತಹ ಟೈಯರ್-2 ನಗರಗಳು ಬೆಂಗಳೂರು, ಮುಂಬೈಯಂತಹ ಮಹಾನಗರಗಳಿಗಿಂತ ಹೆಚ್ಚಿನ ವೇತನ ಹೆಚ್ಚಳವನ್ನು ಕಾಣುತ್ತಿವೆ. ಐಟಿ ವಲಯವು ಸಂಬಳ ಬೆಳವಣಿಗೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.
Read Full Story

09:15 PM (IST) Jul 28

ಭಾರತದಲ್ಲಿ ಅನಾವರಣವಾದ Toyota Hilux, ಮತ್ತಷ್ಟು ಸೈಲಿಷ್‌ ಹಾಗೂ ಸ್ಮಾರ್ಟ್‌ ಆದ ಜನಪ್ರಿಯ ಪಿಕಪ್‌

ಟೊಯೋಟಾ ಸಂಸ್ಥೆಯು ತನ್ನ ಜನಪ್ರಿಯ ಪಿಕಪ್ ಟ್ರಕ್ 'ಹೈಲಕ್ಸ್'ನ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಇದರ ಆರಂಭಿಕ ಬೆಲೆ ₹31.99 ಲಕ್ಷ. ಈ ಹೊಸ ಮಾದರಿಯು ಆಕರ್ಷಕ ಬಾಹ್ಯ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಫೀಚರ್‌ಗಳನ್ನು ಹೊಂದಿದೆ.

Read Full Story

08:50 PM (IST) Jul 28

CJP ಮುಂದಿನ ಟಾಸ್ಕ್​ ರಾಹುಲ್​ ಗಾಂಧಿ ಮದ್ವೆ - ಖುದ್ದು ಅಕ್ಕ ಪ್ರಿಯಾಂಕಾ ಜಿರಳೆಗಳಿಗೆ ಹೀಗೊಂದು ಮನವಿ

ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್, ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಕಾರ್ಮಿಕರ ಹಕ್ಕುಗಳು ಮತ್ತು ಸಂವಿಧಾನದ ಬಗ್ಗೆ ಚರ್ಚಿಸಿದರು. ಈ ಭೇಟಿಯ ಹಿಂದೆ, ರಾಹುಲ್ ಗಾಂಧಿಯವರ ಮದುವೆಗೆ ಅವರನ್ನು ಒಪ್ಪಿಸುವಂತೆ ಪ್ರಿಯಾಂಕಾ ಗಾಂಧಿ ತಮಾಷೆಯಾಗಿ ಇರ್ಫಾನ್‌ಗೆ ಹೇಳಿದ್ದ ಸ್ವಾರಸ್ಯಕರ ಘಟನೆಯೂ ಇದೆ. ನಂತರ ರಾಹುಲ್ ಗಾಂಧಿ ಇರ್ಫಾನ್ ಅವರ ಮನೆಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು.
Read Full Story

08:34 PM (IST) Jul 28

'ನನ್ನ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ..' ಮೀಸಲಾತಿ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ನಟಿ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ವೈರಲ್ ಆಗಿದ್ದ ವಿವಾದಾತ್ಮಕ ಹೇಳಿಕೆಯು ಸಂಪೂರ್ಣ ನಕಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮಗೆ ಆಘಾತವಾಗಿದೆ ಎಂದು ಹೇಳಿರುವ ಅವರು, ಇಂತಹ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Read Full Story

07:52 PM (IST) Jul 28

ಜಿರಳೆಗಳಿಗೆ 35 ದಿನ ಊಟ ಹಾಕಿದೆ, ಈಗ ನಿಜ ಬಣ್ಣ ಗೊತ್ತಾಯ್ತು - ಬಿಕ್ಕಿ ಬಿಕ್ಕಿ ಅತ್ತ ಮೊಹಮ್ಮದ್ ಜುನೈದ್

ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಪಕ್ಷದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಆಹಾರ ನೀಡಿದ್ದ ಮೊಹಮ್ಮದ್ ಜುನೈದ್, ಇದೀಗ ಕಣ್ಣೀರು ಹಾಕಿದ್ದಾರೆ. ಪ್ರತಿಭಟನೆ ಯಶಸ್ವಿಯಾದ ಬಳಿಕ ನಾಯಕರು ಸ್ಟಾರ್ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದು, ತಮಗೆ ಸಹಾಯ ಮಾಡಿದ ಜುನೈದ್‌ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Read Full Story

07:48 PM (IST) Jul 28

ಯೂರಿಯಾ ಆಮದು ತಗ್ಗಿಸಲು ಕೃಷಿಯಲ್ಲಿ ನೇರ 'ಅಮೋನಿಯಾ' ಬಳಕೆಗೆ ಭಾರತ ಗ್ರೀನ್ ಸಿಗ್ನಲ್!

ಯೂರಿಯಾ ಆಮದು ಅವಲಂಬನೆ ತಗ್ಗಿಸಲು, ಕೇಂದ್ರ ಸರ್ಕಾರವು ಕೃಷಿಯಲ್ಲಿ ನೇರವಾಗಿ 'ಅನ್‌ಹೈಡ್ರಸ್ ಅಮೋನಿಯಾ' ಬಳಕೆಗೆ ಅನುಮತಿ ನೀಡಿದೆ. ಶೇ. 82ರಷ್ಟು ಸಾರಜನಕ ಹೊಂದಿರುವ ಈ ಪರ್ಯಾಯವು ಕ್ರಾಂತಿಕಾರಕವಾಗಿದ್ದರೂ, ಇದರ ಸುರಕ್ಷಿತ ಬಳಕೆ ಮತ್ತು ವಿತರಣೆಗೆ ಬೇಕಾದ ಮೂಲಸೌಕರ್ಯ ನಿರ್ಮಾಣವು ದೊಡ್ಡ ಸವಾಲಾಗಿದೆ.

Read Full Story

07:07 PM (IST) Jul 28

ಬೆಂಗಳೂರಿನ ಬಾನಂಗಳದಲ್ಲಿ ಅಪರೂಪದ ಅತಿಥಿಯ ಆಗಮನ! 1873ರಲ್ಲಿ ಪತ್ತೆಯಾಗಿದ್ದ ಧೂಮಕೇತು ಭೂಮಿಗೆ ಅತ್ಯಂತ ಸಮೀಪ!

'10P/ಟೆಂಪಲ್ 2' ಧೂಮಕೇತುವು ಐದೂವರೆ ವರ್ಷಗಳ ನಂತರ ಬೆಂಗಳೂರಿನ ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಆಗಸ್ಟ್ ಆರಂಭದವರೆಗೆ ವೀಕ್ಷಿಸಬಹುದಾದ ಈ ಆಕಾಶಕಾಯವು, ಆಗಸ್ಟ್ 2 ಮತ್ತು 3 ರಂದು ಅತ್ಯಂತ ಪ್ರಕಾಶಮಾನವಾಗಿ ಗೋಚರಿಸಲಿದೆ. ಇದನ್ನು ಬೈನಾಕ್ಯುಲರ್‌ ಅಥವಾ ಸಣ್ಣ ದೂರದರ್ಶಕದ ಮೂಲಕ ಸ್ಪಷ್ಟವಾಗಿ ನೋಡಬಹುದು.
Read Full Story

06:16 PM (IST) Jul 28

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ನಾಲ್ಕು ಪಟ್ಟು ಏರಿಕೆ

ಭಾರತದಲ್ಲಿ ₹100 ಕೋಟಿಗೂ ಹೆಚ್ಚು ಆದಾಯ ಘೋಷಿಸುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, 2025-26ರ ಮೌಲ್ಯಮಾಪನ ವರ್ಷದಲ್ಲಿ 576ಕ್ಕೆ ತಲುಪಿದೆ ಎಂದು ಆದಾಯ ತೆರಿಗೆ ರಿಟರ್ನ್ಸ್ ಡೇಟಾ ಬಹಿರಂಗಪಡಿಸಿದೆ.

Read Full Story

06:02 PM (IST) Jul 28

ಟೆಕ್ ಜಗತ್ತಿನಲ್ಲಿ ಎಐ ಭರಾಟೆ - ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟ ಕಂಪನಿಗಳಿಗೆ ಲಾಭದ ಲೆಕ್ಕಾಚಾರವೇ ಗೊತ್ತಿಲ್ಲ! ವರದಿ

ಎಕನಾಮಿಸ್ಟ್ ಎಂಟರ್‌ಪ್ರೈಸ್ ಮತ್ತು ಎಚ್‌ಸಿಎಲ್‌ ಟೆಕ್‌ ಜಂಟಿ ವರದಿಯ ಪ್ರಕಾರ, ಟೆಲಿಕಾಂ, ಮಾಧ್ಯಮ, ಮತ್ತು ತಂತ್ರಜ್ಞಾನ ವಲಯದ ಹೆಚ್ಚಿನ ಕಂಪನಿಗಳು ಎಐ ಲಾಭ ತರುತ್ತದೆಂದು ನಂಬಿದರೂ, ಅದರ ನಿಖರ ಲಾಭವನ್ನು ಅಳೆಯಲು ವಿಫಲವಾಗಿವೆ. ಉದ್ಯೋಗಿಗಳಲ್ಲಿ ಕೌಶಲ್ಯದ ಕೊರತೆ ಮತ್ತು ಎಐ ಬಳಕೆಯ ಮೇಲೆ ನಿಯಂತ್ರಣದ ಅಭಾವವು ಈ ವಲಯಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ.
Read Full Story

05:41 PM (IST) Jul 28

ಏಷ್ಯಾದ ಅತಿ ಕ್ರೂರ ಭಯಾನಕ ರಹಸ್ಯವಿರುವ ಮ್ಯಾನ್ಮಾರ್‌ನ ಈ ಜಾಗ, ಚೀನಾದ ಬೆಂಬಲ ಮಾನವರ ಮಾರಣ ಹೋಮ!

ಮ್ಯಾನ್ಮಾರ್-ಥಾಯ್ ಗಡಿಯಲ್ಲಿರುವ 'ಕೆಕೆ ಪಾರ್ಕ್' ಎಂಬುದು ಉದ್ಯೋಗದ ಆಮಿಷವೊಡ್ಡಿ ಜನರನ್ನು ಅಪಹರಿಸಿ, ಆನ್‌ಲೈನ್ ವಂಚನೆಗೆ ಬಲವಂತಪಡಿಸುವ ಕ್ರೂರ ಕೇಂದ್ರವಾಗಿದೆ. ಈ ಕೃತ್ಯವನ್ನು ನಿರಾಕರಿಸಿದವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತದೆ, ಮತ್ತು ಈ ಬೃಹತ್ ಅಂತರರಾಷ್ಟ್ರೀಯ ಅಪರಾಧ ಜಾಲದ ಹಿಂದೆ ಚೀನೀ ಮಾಫಿಯಾದ ಕೈವಾಡವಿರುವುದು ತನಿಖೆಯಿಂದ ಬಯಲಾಗಿದೆ.
Read Full Story

04:50 PM (IST) Jul 28

ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ - ಮುಗಿಯಿತಾ ಈ ಮೂವರು ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು?

ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು, ಸರ್ಫರಾಜ್ ಖಾನ್, ಮೊಹಮ್ಮದ್ ಶಮಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕಡೆಗಣಿಸಲಾಗಿದೆ, ಇದು ಅವರ ಟೆಸ್ಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

04:33 PM (IST) Jul 28

ತಿಂಗಳಿಗೆ 5 ಲಕ್ಷ ಸಂಪಾದನೆ 70 ಲಕ್ಷ ಮೌಲ್ಯದ ಚಿನ್ನ ಆದ್ರೂ ಶ್ರೀಮಂತರಲ್ಲ! ಟೆಕ್ಕಿಯನ್ನು ಕಾಡುತ್ತಿದೆ ಆ ಒಂದು ಭಯ!

ತಿಂಗಳಿಗೆ 5 ಲಕ್ಷ ರೂಪಾಯಿ ಸಂಪಾದಿಸುವ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, AI ತಂತ್ರಜ್ಞಾನದಿಂದಾಗಿ ಭವಿಷ್ಯದ ಉದ್ಯೋಗದ ಬಗ್ಗೆ ಆತಂಕಗೊಂಡಿದ್ದಾರೆ. ಉದ್ಯೋಗ ಅಸುರಕ್ಷಿತವಾಗುವ ಮುನ್ನವೇ, ತಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಚಿನ್ನ ಮತ್ತು ಷೇರುಗಳಂತಹ ಕಠಿಣ ಸ್ವತ್ತುಗಳಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದ್ದಾರೆ.
Read Full Story

04:05 PM (IST) Jul 28

ಪ್ರೊಟೀನ್ ಶೇಕ್ ಕುಡಿದ್ರೆ ಬುದ್ಧಿಹೀನ ಆಗ್ತಾರೆ - ಫಿಟ್ನೆಸ್ ಪ್ರಿಯರಿಗೆ ಆಘಾತ ತಂದ ಕಂಗನಾ ಹೇಳಿಕೆ

ನಟಿ ಕಂಗನಾ ರಣಾವತ್ ಅವರ ಪ್ರಕಾರ ಹೆಚ್ಚು ಪ್ರೊಟೀನ್ ಸೇವನೆಯಿಂದ ಬುದ್ಧಿಶಕ್ತಿ ಕುಂದುತ್ತದೆ. ಆದರೆ, ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರೊಟೀನ್ ಮೆದುಳಿಗೆ ಅವಶ್ಯಕ. ಕಾರ್ಬೋಹೈಡ್ರೇಟ್ ಮತ್ತು ನೀರಿನ ಕೊರತೆಯಿಂದ ತಾತ್ಕಾಲಿಕವಾಗಿ ಮೆದುಳು ಮಂದವಾಗಬಹುದೇ ಹೊರತು, ಐಕ್ಯೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಸಮತೋಲಿತ ಆಹಾರ ಸೇವಿಸುವುದು ಮುಖ್ಯವಾಗಿದೆ.

Read Full Story

03:57 PM (IST) Jul 28

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನೂತನ ಸಿಇಒ ಆಗಿ ನಂದಿತಾ ಸಿನ್ಹಾ ನೇಮಕ - ಮಿಂತ್ರಾ ಮಾಜಿ ಮುಖ್ಯಸ್ಥೆಗೆ ಮಹತ್ವದ ಜವಾಬ್ದಾರಿ

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನಂದಿತಾ ಸಿನ್ಹಾ ಅವರನ್ನು ನೇಮಕ ಮಾಡಿದೆ. ಈ ಹಿಂದೆ ಮಿಂತ್ರಾ ಸಿಇಒ ಆಗಿ ಯಶಸ್ವಿಯಾಗಿದ್ದ ನಂದಿತಾ, ಫ್ಲಿಪ್‌ಕಾರ್ಟ್ ಮತ್ತು HUL ನಂತಹ ಕಂಪನಿಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಇನ್‌ಸ್ಟಾಮಾರ್ಟ್ ಹೊಸ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ.
Read Full Story

03:29 PM (IST) Jul 28

ಟೆಕ್ಸಾಸ್ ವಿವಿ ವಿರುದ್ಧ ಭಾರತೀಯ ವಿದ್ಯಾರ್ಥಿ ವೈಭವ್ ದುಗ್ಗಲ್ ಪೋಷಕರ ಕಾನೂನು ಸಮರ - 30 ಮಿಲಿಯನ್ ಡಾಲರ್ ಬೇಡಿಕೆ

ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ವೈಭವ್ ದುಗ್ಗಲ್ ಅವರ ಪೋಷಕರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ದೋಷಪೂರಿತ ತನಿಖಾ ಪ್ರಕ್ರಿಯೆ ಮತ್ತು ಮಾನಸಿಕ ಬೆಂಬಲದ ಕೊರತೆಯೇ ಮಗನ ಸಾವಿಗೆ ಕಾರಣವೆಂದು ಆರೋಪಿಸಿ, ಕುಟುಂಬವು $30 ಮಿಲಿಯನ್ ಪರಿಹಾರ ಮತ್ತು ನೀತಿ ಸುಧಾರಣೆಗೆ ಆಗ್ರಹಿಸಿದೆ.
Read Full Story

03:20 PM (IST) Jul 28

'3-4 ಆಟಗಾರರನ್ನು ಟೀಂ ಇಂಡಿಯಾ ಕ್ಯಾಪ್ಟನ್ ಬಚ್ಚಿಡೋಕಾಗಲ್ಲ' - ಸುನಿಲ್ ಗವಾಸ್ಕರ್ ಹೀಗಂದಿದ್ದೇಕೆ?

ಮಾಜಿ ನಾಯಕ ಸುನಿಲ್ ಗವಾಸ್ಕರ್, ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೀಲ್ಡಿಂಗ್‌ನಲ್ಲಿ ಹೊರೆಯಾಗುವ ಆಟಗಾರರನ್ನು ತಂಡದಿಂದ ಹೊರಗಿಡಬೇಕು ಎಂದು ಆಗ್ರಹಿಸಿರುವ ಅವರು, ಬ್ಯಾಟರ್‌ಗಳು ಕೂಡ ತಮ್ಮ ಇಮೇಜ್‌ಗಾಗಿ ಆಡದೆ 'ಸ್ಮಾರ್ಟ್ ಕ್ರಿಕೆಟ್' ಆಡಬೇಕೆಂದು ಸಲಹೆ ನೀಡಿದ್ದಾರೆ.
Read Full Story

02:59 PM (IST) Jul 28

ಮೈಗೆ ಎಣ್ಣೆ ಹಚ್ಚಿಕೊಂಡಂತೆ ದೊಡ್ಡ ಗಂಡಾಂತರದಿಂದ ಪಾರಾದ ಎಸ್‌ಎಸ್‌ ರಾಜಮೌಳಿ.. 'ವಾರಣಾಸಿ' ಕೊನೆಗೂ ಬಚಾವಾಯ್ತು!

ರಾಜಮೌಳಿ ಸಿನಿಮಾಗೆ 'ವಾರಣಾಸಿ' ಟೈಟಲ್​ಆಗಿ ತೆಲುಗು ಫಿಲ್ಮ್ ನಗರಿಯ ಕಾಂಪೌಂಡ್‌ನಲ್ಲಿ ವಾರ್ ಶುರುವಾಗಿತ್ತು. ನಿಜ ಹೇಳ್ಬೇಕಂದ್ರೆ, 2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಆಗ ಶುರುವಾಯ್ತು ವಾರ್!

Read Full Story

02:41 PM (IST) Jul 28

Bank Holiday - ಆಗಸ್ಟ್‌ ನಲ್ಲಿ ಬ್ಯಾಂಕ್‌ಗಳಿಗೆ 14 ದಿನ ರಜೆ; ಇಲ್ಲಿದೆ ರಜಾಪಟ್ಟಿ

ಆಗಸ್ಟ್ ತಿಂಗಳಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸಾಪ್ತಾಹಿಕ ರಜೆಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಆದಾಗ್ಯೂ, ಗ್ರಾಹಕರು ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂನಂತಹ ಡಿಜಿಟಲ್ ಸೇವೆಗಳನ್ನು ರಜಾದಿನಗಳಲ್ಲಿಯೂ ಬಳಸಿಕೊಳ್ಳಬಹುದು.
Read Full Story

02:35 PM (IST) Jul 28

ಮಾನವನಿಗೆ 2 ಕಣ್ಣು ಹುಟ್ಟಿದ್ದು ಹೇಗೆ? 600 ಮಿಲಿಯನ್ ವರ್ಷಗಳ ಹಿಂದಿನ ರಹಸ್ಯ ಭೇದಿಸಿದ ಸಂಶೋಧಕರು!

ಹೊಸ ಅಧ್ಯಯನದ ಪ್ರಕಾರ, ಮಾನವರ ಆರಂಭಿಕ ಪೂರ್ವಜರು ತಲೆಯ ಮಧ್ಯದಲ್ಲಿ ಒಂದೇ ಕಣ್ಣನ್ನು ಹೊಂದಿದ್ದರು. ಕಾಲಕ್ರಮೇಣ, ಈ ಒಂಟಿ ಕಣ್ಣು ಎರಡು ಕಣ್ಣುಗಳಾಗಿ ವಿಕಸನಗೊಂಡಿದ್ದು, ಅದರ ಮೂಲ ಅವಶೇಷವು ಇಂದಿಗೂ ನಮ್ಮ ಮೆದುಳಿನಲ್ಲಿ ಪೀನಲ್ ಗ್ರಂಥಿಯ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದು ಸಂಶೋಧನೆ ತಿಳಿಸಿದೆ.
Read Full Story

02:30 PM (IST) Jul 28

ಗೌತಮ್ ಗಂಭೀರ್ ಯುಗಾಂತ್ಯಕ್ಕೆ ವೇದಿಕೆ ಸಜ್ಜು? ಹಂಗಾಮಿ ಕೋಚ್ ವಿವಿಎಸ್‌ ಲಕ್ಷ್ಮಣ್ ಕೊಂಡಾಡಿದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್

ಹರಾರೆ: ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲೇ ಹಂಗಾಮಿ ಕೋಚ್ ಲಕ್ಷ್ಮಣ್‌ಗೆ ಧನ್ಯವಾದ ಹೇಳುವ ಮೂಲಕ ಟೀಂ ಇಂಡಿಯಾ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್, ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಟಾಂಗ್ ಕೊಟ್ರಾ? ಇಲ್ಲಿದೆ ಅಪ್‌ಡೇಟ್ಸ್‌

Read Full Story

02:23 PM (IST) Jul 28

Moon Recession - ದೂರ ಆಗುತ್ತಿರೋದ್ಯಾಕೆ ಪ್ರೀತಿಯ ಚಂದಮಾಮಾ? ದೂರವಾಗಿದೆಷ್ಟು ಚಂದ್ರ?

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನು ಪ್ರತಿವರ್ಷ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ. ಚಂದ್ರನು ಭೂಮಿಯಿಂದ ಎಷ್ಟು ದೂರವಾಗಿದ್ದಾನೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಚಂದ್ರನ ಕುರಿತ ವಿಶೇಷ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

Read Full Story

02:13 PM (IST) Jul 28

ಬಿಡದಿಯಲ್ಲಿ 'ದೆಹಲಿ ಮಾದರಿ' GEN Z ಹೋರಾಟ? ಭೂಮಿ ಉಳಿಸಲು ರೈತ ಮಕ್ಕಳು ಮಾಸ್ಟರ್ ಪ್ಲಾನ್

ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಈಗ ಯುವ ಶಕ್ತಿ ಸೇರ್ಪಡೆಯಾಗಿದೆ. "ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ" ಎಂಬ ಘೋಷವಾಕ್ಯದೊಂದಿಗೆ ರೈತ ಮಕ್ಕಳು ಹೋರಾಟದ ಕಣಕ್ಕಿಳಿಯುತ್ತಿದ್ದು, ಇದು ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
Read Full Story

12:58 PM (IST) Jul 28

India Vs Pakistan - ಮಾಂಸಾಹಾರ ಸೇವನೆಯಲ್ಲಿ ಯಾರು ನಂಬರ್ ಒನ್? ದಿನದ ಬಳಕೆ ಎಷ್ಟು?

ಭಾರತ ಮತ್ತು ಪಾಕಿಸ್ತಾನದ ಮಾಂಸಾಹಾರ ಸೇವನೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಭಾರತದಲ್ಲಿ ಮಾಂಸ ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಲೇಖನವು ಎರಡೂ ದೇಶಗಳ ಮಾಂಸ ಬಳಕೆಯ ಪ್ರಮಾಣ ಮತ್ತು ಸಂಬಂಧಿತ ಅಂಕಿಅಂಶಗಳನ್ನು ವಿವರಿಸುತ್ತದೆ.

Read Full Story

12:56 PM (IST) Jul 28

'ಒಂದೆರಡು ಮ್ಯಾಚ್....' - ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಖಡಕ್ ವಾರ್ನಿಂಗ್ ಕೊಟ್ಟ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ. ಸರಣಿಯ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಬೇಕು, ಲಯ ಕಂಡುಕೊಳ್ಳಲು ಒಂದೆರಡು ಪಂದ್ಯಗಳನ್ನು ವ್ಯರ್ಥ ಮಾಡುವಂತಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
Read Full Story

12:42 PM (IST) Jul 28

ಟೀಂ ಇಂಡಿಯಾ ಮಾಜಿ ಅ19 ವಿಶ್ವಕಪ್ ಹೀರೋಗೆ ಜಾಮೀನು ನಿರಾಕರಿಸಿದ ಕೋರ್ಟ್, ಜೈಲಿನಲ್ಲೇ ಕ್ರಿಕೆಟಿಗ

ಟೀಂ ಇಂಡಿಯಾ ಮಾಜಿ ಅಂಡರ್ 19 ವಿಶ್ವಕಪ್ ಹೀರೋ ಜೈಲಿನಲ್ಲೇ ಬಂಧಿಯಾಗಿದ್ದಾರೆ. ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಶ್ರೀಲಂಕಾ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ಭಾರತದ ಮಾಜಿ ಹೀರೋಗೆ ಸಂಕಷ್ಟ ತೀವ್ರಗೊಂಡಿದೆ.

Read Full Story

12:40 PM (IST) Jul 28

3 ವರ್ಷಗಳ ಬಳಿಕ ಮನೆಗೆ ಬಂದ ಪುತ್ರಿ.. ಮಗಳ ಸರ್ಪ್ರೈಸ್‌ಗೆ ಅಮ್ಮ ಕಕ್ಕಾಬಿಕ್ಕಿ..! VIDEO

ಸುಮಾರು ಮೂರು ವರ್ಷಗಳ ಕಾಲ ಕುಟುಂಬದಿಂದ ದೂರವಿದ್ದ ಮೈತ್ರಿ ಎಂಬ ಯುವತಿ, ಯಾರಿಗೂ ತಿಳಿಸದೆ ಅನಿರೀಕ್ಷಿತವಾಗಿ ಮನೆಗೆ ಮರಳಿದ್ದಾಳೆ. ತನ್ನ ಮಗಳನ್ನು ಕಂಡ ತಾಯಿ, ತಂದೆ ಮತ್ತು ಸಹೋದರಿ ಸೇರಿದಂತೆ ಇಡೀ ಕುಟುಂಬದ ಭಾವುಕ ಪುನರ್ಮಿಲನದ ಕ್ಷಣಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.
Read Full Story

12:02 PM (IST) Jul 28

ಅಪ್ಪ ಹಾಸಿಗೆ ಮೇಲೆ ಮಲಗಿದ್ದರು, ಕೈಯಲ್ಲೊಂದು ಚೀಟಿ ಇತ್ತು; ಆ ಕಾಗದದ ಚೂರು ಸಾರಂಶ್‌ ಬದುಕನ್ನೇ ಬದಲಿಸಿತು!

33 ವರ್ಷದ ಆಫ್‌ ಸ್ಪಿನ್ನರ್ ಸಾರಂಶ್ ಜೈನ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸಾಧನೆಯ ಹಿಂದೆ ಅವರ ಹತ್ತು ವರ್ಷಗಳ ಪರಿಶ್ರಮ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಿದ ತಂದೆಯ ತ್ಯಾಗದ ಸ್ಪೂರ್ತಿದಾಯಕ ಕಥೆಯಿದೆ. ತಂದೆ ಬರೆದುಕೊಟ್ಟ ಒಂದು ಚೀಟಿಯೇ ಅವರ ಕ್ರಿಕೆಟ್ ಬದುಕಿನ ದಿಕ್ಸೂಚಿಯಾಗಿತ್ತು.
Read Full Story

11:50 AM (IST) Jul 28

ಕಾಕ್ರೋಚ್ ಜನತೆಯ ರಾಜೀನಾಮೆ ಪಾರ್ಟಿಗೆ ಸೋನಂ ವಾಂಗ್ಚುಕ್ ಅಸಮಾಧಾನ, ಸಿಜಿಪಿಗೆ ಮಹತ್ವದ ಸೂಚನೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಪ್ರತಿಭಟನಾ ನಿರತ ಕಾಕ್ರೋಚ್ ಜನತಾ ಪಾರ್ಟಿ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಮಾಡಿದ ಅದ್ಧೂರಿ ಪಾರ್ಟಿ ವಿವಾದಕ್ಕೆ ಕಾರಣಾಗಿದೆ. ಇದರ ಬೆನ್ನಲ್ಲೇ ಉಪವಾಸ ಸತ್ಯಾಗ್ರಹ ಮಾಡಿದ ಸೋನಂ ವಾಂಗ್ಚುಕ್ ಈ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ್ದಾರೆ.

Read Full Story

11:40 AM (IST) Jul 28

ಲಂಕಾ ಎದುರಿನ ಟೆಸ್ಟ್‌ ಸರಣಿ - ಮೂವರು ಕನ್ನಡಿಗರಿಗೆ ಜಾಕ್‌ಪಾಟ್, ಈ ಮೂವರಿಗೂ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್!

ಮುಂಬೈ: ಮುಂಬರುವ ಆಗಸ್ಟ್‌ ತಿಂಗಳಿನಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಈ ಮಹತ್ವದ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಇದರಲ್ಲಿ ಮೂವರು ಕನ್ನಡಿಗರಿಗೆ ಜಾಕ್‌ಪಾಟ್ ಹೊಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story

11:40 AM (IST) Jul 28

ಬರೋಬ್ಬರಿ 9 ವರ್ಷ ಕಿರಿಯ ಸ್ಟಾರ್ ಕ್ರಿಕೆಟರ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ವೈರಲ್‌ ವಿಡಿಯೋ ಅಸಲಿಯತ್ತೇನು?

"ಒಂದೇ ಕೆಫೆಗೆ ಯಾಕೆ ಹೋದರು? ಇಬ್ಬರೂ ಸೀಕ್ರೆಟ್ ಆಗಿ ಮೀಟ್ ಮಾಡಿದ್ದಾರಾ?" ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಿಂದೆ ಮೃಣಾಲ್ ಹೆಸರು ತಮಿಳು ನಟ ಧನುಷ್ ಜೊತೆಯೂ ಕೇಳಿಬಂದಿತ್ತು. ಆದರೆ ಈಗ ಜೈಸ್ವಾಲ್! ಏನಿದು ಹೊಸ ಲವ್ ಸ್ಟೋರಿ

Read Full Story

11:21 AM (IST) Jul 28

ಟೀಂ ಇಂಡಿಯಾಗೆ ಬಂತು ಅಸ್ತ್ರ.. ಲಂಕಾ ಸೀರಿಸ್‌ಗೆ ಆಯ್ಕೆ ಆದ ಸಾರಂಶ್ ಜೈನ್ ಯಾರು?

ಮಧ್ಯಪ್ರದೇಶದ ಆಲ್-ರೌಂಡರ್ ಸಾರಂಶ್ ಜೈನ್, ಟೀಂ ಇಂಡಿಯಾ ಟೆಸ್ಟ್‌ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸಿರೀಸ್‌ನಲ್ಲಿ ತಂಡದ ಭಾಗವಾಗಲಿದ್ದಾರೆ. ಯಾರು ಈ ಸಾರಂಶ್ ಜೈನ್? ಇವರ ಕ್ರಿಕೆಟ್ ಜರ್ನಿ ಹೇಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story

11:16 AM (IST) Jul 28

ಮಿಲಿಯನ್ ವೀವ್ಸ್ ಪಡೆದ ಪ್ರಧಾನಿ ಸೆಲ್ಫಿ ವಿಡಿಯೋ ಡಿಲೀಟ್, ವಿವಾದ ಬಳಿಕ ಫೇಸ್‌ಬುಕ್ ಹೇಳಿದ್ದೇನು?

ನೀಟ್ ಪ್ರತಿಭಟನೆ ಬಳಿಕ ತೆಗೆದುಕೊಂಡ ಕ್ರಮಗಳ ಕುರಿತು ಪ್ರಧಾನಿ ಮೋದಿ ಜೆನ್‌ಝಿ ಉದ್ದೇಶಿಸಿ ಸೆಲ್ಫಿ ವಿಡಿಯೋ ಮಾಡಿದ್ದರು. ಇದು ಮಿಲಿಯನ್ ವೀವ್ಸ್ ಪಡೆದಿತ್ತು, ಆದರೆ ದಿಢೀರ್ ಫೇಸ್‌ಬುಕ್ ಈ ವಿಡಿಯೋ ಡಿಲೀಟ್ ಮಾಡಿ ಇದೀಗ ಸ್ಪಷ್ಟನೆ ನೀಡಿದೆ.

Read Full Story

10:55 AM (IST) Jul 28

ಈ ಸೈಕಲ್ ಹುಡುಕಿಕೊಟ್ಟರೆ 5 ಲಕ್ಷ ರೂಪಾಯಿ ಬಹುಮಾನ; ಉದ್ಯಮಿ ಬಾಬಿ ಚೆಮ್ಮಣ್ಣೂರ್ ಘೋಷಣೆ

ತಿರುವನಂತಪುರದಲ್ಲಿ ಕಳ್ಳತನವಾದ 70 ವರ್ಷ ಹಳೆಯ ಸೈಕಲ್‌ಗೆ ಉದ್ಯಮಿ ಬಾಬಿ ಚೆಮ್ಮಣ್ಣೂರ್ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ತಂದೆಯ ನೆನಪಿನ ಈ ಸೈಕಲ್ ಹಿಂದಿರುಗಿಸುವ ಕಳ್ಳನಿಗೆ ಗೌಪ್ಯತೆ ಹಾಗೂ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ.

Read Full Story

10:51 AM (IST) Jul 28

ಜಡೇಜಾ ಕಂಬ್ಯಾಕ್.. ಲಂಕಾ ಟೆಸ್ಟ್ ಸಿರೀಸ್‌ನಲ್ಲಿ ಮತ್ತೊಂದು ಅಚ್ಚರಿಯ 'ಅನ್‌ಕ್ಯಾಪ್ಡ್' ಆಯ್ಕೆ

ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಗಾಯದಿಂದ ಚೇತರಿಸಿಕೊಂಡಿರುವ ಆಲ್-ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದು, ಮಧ್ಯಪ್ರದೇಶದ ಯುವ ಆಟಗಾರ ಸಾರಂಶ್ ಜೈನ್ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Read Full Story

10:49 AM (IST) Jul 28

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೆ 3 ಪದಕ; ವೇಟ್‌ಲಿಫ್ಟಿಂಗ್‌ನಲ್ಲಿ 2 ಬೆಳ್ಳಿ, 1 ಕಂಚು

ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾರತವು ತನ್ನ ಪದಕ ಬೇಟೆಯನ್ನು ಮುಂದುವರಿಸಿದ್ದು, 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಈ ಮೂಲಕ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
Read Full Story

10:44 AM (IST) Jul 28

NEET Controversy - ನೀಟ್ ಗದ್ದಲ - ಸಂಸತ್‌ನಲ್ಲಿ ಸರ್ಕಾರದ ವಿರುದ್ಧ ಹೊಸ ಪ್ಲಾನ್‌ಗೆ 'ಇಂಡಿಯಾ' ಒಕ್ಕೂಟ ಸಜ್ಜು!

ನೀಟ್ ಪೇಪರ್ ಲೀಕ್ ವಿವಾದ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಹಿನ್ನೆಲೆ ಸಂಸತ್ ಕಲಾಪದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು 'ಇಂಡಿಯಾ' ಒಕ್ಕೂಟದ ನಾಯಕರು ಸಭೆ ಸೇರಲಿದ್ದಾರೆ. ಪರೀಕ್ಷಾ ಅಕ್ರಮ ತಡೆ ಕಾಯ್ದೆ ಜಾರಿ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದಿದೆ.

Read Full Story

10:21 AM (IST) Jul 28

ಶ್ರೀಲಂಕಾ ಟೆಸ್ಟ್ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ; KL ರಾಹುಲ್‌ಗೆ ವಿಶೇಷ ಜವಾಬ್ದಾರಿ

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು, ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ನಾಯಕತ್ವ ನೀಡಲಾಗಿದೆ. ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕರಾಗಿದ್ದು, ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಭಾರತಕ್ಕೆ ನಿರ್ಣಾಯಕವಾಗಿದೆ.
Read Full Story

More Trending News