MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟೀಂ ಇಂಡಿಯಾ ಮಾಜಿ ಅ19 ವಿಶ್ವಕಪ್ ಹೀರೋಗೆ ಜಾಮೀನು ನಿರಾಕರಿಸಿದ ಕೋರ್ಟ್, ಜೈಲಿನಲ್ಲೇ ಕ್ರಿಕೆಟಿಗ

ಟೀಂ ಇಂಡಿಯಾ ಮಾಜಿ ಅ19 ವಿಶ್ವಕಪ್ ಹೀರೋಗೆ ಜಾಮೀನು ನಿರಾಕರಿಸಿದ ಕೋರ್ಟ್, ಜೈಲಿನಲ್ಲೇ ಕ್ರಿಕೆಟಿಗ

ಟೀಂ ಇಂಡಿಯಾ ಮಾಜಿ ಅಂಡರ್ 19 ವಿಶ್ವಕಪ್ ಹೀರೋ ಜೈಲಿನಲ್ಲೇ ಬಂಧಿಯಾಗಿದ್ದಾರೆ. ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಶ್ರೀಲಂಕಾ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ಭಾರತದ ಮಾಜಿ ಹೀರೋಗೆ ಸಂಕಷ್ಟ ತೀವ್ರಗೊಂಡಿದೆ.

2 Min read
Author : Chethan Kumar
Published : Jul 28 2026, 12:42 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತದ ಮಾಜಿ ಹೀರೋಗೆ ಜಾಮೀನು ನಿರಾಕರಣೆ
Image Credit : X

ಭಾರತದ ಮಾಜಿ ಹೀರೋಗೆ ಜಾಮೀನು ನಿರಾಕರಣೆ

ಭಾರತದ ಅಂಡರ್ 19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕ್ರಿಕೆಟಿಗ ಮನ್ಜೋತ್ ಕಾಲ್ರ ಸಮಸ್ಯೆಗಳು ತೀವ್ರಗೊಂಡಿದೆ. ಭಾರತದ ಅಂಡರ್ 19 ಮೂಲಕ ಗಮನಸೆಳೆದಿದ್ದ ಮನ್ಜೋತ್ ಶೀಘ್ರದಲ್ಲೇ ಟೀಂ ಇಂಡಿಯಾಗೂ ಲಗ್ಗೆ ಇಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೆಲ ಮಾತುಗಳು, ನಿರ್ಧಾರಗಳು ಮನ್ಜೋತ್ ಕಾಲ್ರಾಗೆ ಮುಳುವಾಗಿತ್ತು. ಬಳಿಕ ಮನ್ಜೋತ್ ಕಾಲ್ರ ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಅರೆಸ್ಟ್ ಆಗಿದ್ದಾರೆ. ಇದೀಗ ಜಾಮೀನು ಕೂಡ ನಿರಾಕರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶ್ರೀಲಂಕಾ ಕೋರ್ಟ್‌ನಿಂದ ಜಾಮೀನು ನಿರಾಕರಣೆ
Image Credit : X

ಶ್ರೀಲಂಕಾ ಕೋರ್ಟ್‌ನಿಂದ ಜಾಮೀನು ನಿರಾಕರಣೆ

ಶ್ರೀಲಂಕಾ ಲೀಗ್ ಟೂರ್ನಿಯಲ್ಲಿ ಜಾಫ್ನಾ ಕಿಂಗ್ಸ್ ತಂಡದ ಸಹ ಮಾಲೀಕನಾಗಿರುವ ಮನ್ಜೋತ್ ಕಾಲ್ರಾ ಟೂರ್ನಿ ಆರಂಭಕ್ಕೂ ಮುನ್ನ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಶ್ರೀಲಂಕಾ ಪೊಲೀಸರು ಅರೆಸ್ಟ್ ಮಾಡಿದ್ದರು. ಕಳೆದ 15 ದಿನಗಳಿಂದ ಜೈಲಿನಲ್ಲಿರುವ ಮನ್ಜೋತ್ ಕಾಲ್ರಾಗೆ ಶ್ರೀಲಂಕಾ ಕೋರ್ಟ್ ಜಾಮೀನು ನಿರಾಕರಿಸಿದೆ. ಇದೀಗ ಜುಲೈ 31ವರೆಗೂ ಮನ್ಜೋತ್ ಕಾಲ್ರಾ ಜೈಲಿನಲ್ಲೇ ಕಳೆಯಬೇಕಿದೆ.

Related Articles

Related image1
ಲಂಕಾ ಎದುರಿನ ಟೆಸ್ಟ್‌ ಸರಣಿ: ಮೂವರು ಕನ್ನಡಿಗರಿಗೆ ಜಾಕ್‌ಪಾಟ್, ಈ ಮೂವರಿಗೂ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್!
Related image2
ಟೀಂ ಇಂಡಿಯಾಗೆ ಬಂತು ಅಸ್ತ್ರ.. ಲಂಕಾ ಸೀರಿಸ್‌ಗೆ ಆಯ್ಕೆ ಆದ ಸಾರಂಶ್ ಜೈನ್ ಯಾರು?
35
ಅನಾರೋಗ್ಯ ಕಾರಣ ಜಾಮೀನು ಕೇಳಿದ ವಕೀರಲು
Image Credit : Getty

ಅನಾರೋಗ್ಯ ಕಾರಣ ಜಾಮೀನು ಕೇಳಿದ ವಕೀರಲು

ಮನ್ಜೋತ್ ಕಾಲ್ರಾ ಪರ ವಕೀಲರು ಅನಾರೋಗ್ಯ ಕಾರಣ ಮುಂದಿಟ್ಟು ಜಾಮೀನು ಕೇಳಿದ್ದಾರೆ. ಆದರೆ ಶ್ರೀಲಂಕಾ ಕೋರ್ಟ್ ಅರ್ಜಿ ತಿರಸ್ಕರಿಸಿದೆ. ಇದು ಗಂಭೀರ ಪ್ರಕರಣವಾಗಿದೆ. ಶ್ರೀಲಂಕಾ ಕ್ರಿಕೆಟ್ ಇದೇ ರೀತಿಯ ಫಿಕ್ಸಿಂಗ್ ಕಾರಣದಿಂದ ಅಧಪತನವಾಗಿದೆ. ಹೀಗಾಗಿ ಕ್ರೀಡೆಯ ಕಾನೂನು ಉಲ್ಲಂಘನೆ ಗಂಭೀರ ಪ್ರಕರಣ ಎಂದು ಕೋರ್ಟ್ ಹೇಳಿದೆ. ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಜೈಲು ಅಧೀಕ್ಷರಿಗೆ ಸೂಚನೆ ನೀಡಿದೆ.

45
ಸಂಕಷ್ಟದಲ್ಲಿ ಜಾಫ್ನಾ ಕಿಂಗ್ಸ್ ತಂಡ
Image Credit : Getty

ಸಂಕಷ್ಟದಲ್ಲಿ ಜಾಫ್ನಾ ಕಿಂಗ್ಸ್ ತಂಡ

ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇರುವುದು 5 ತಂಡಗಳು ಮಾತ್ರ. ಈ ಪೈಕಿ ಜಾಫ್ನಾ ಕಿಂಗ್ಸ್ ತಂಡದ ಸಹ ಮಾಲೀಕನಾಗಿರುವ ಮನ್ಜೋತ್ ಕಾಲ್ರಾ ಜೈಲು ಸೇರಿರುವ ಕಾರಣ ಇದೀಗ ಆಟಗಾರರಿಗೆ ಆತಂಕ ಎದುರಾಗಿದೆ. ತಮ್ಮ ಸಂಭಾವನೆ, ಟೂರ್ನಿ ಖರ್ಚು ವೆಚ್ಚಗಳ ಕುರಿತು ಆತಂಕ ಹೆಚ್ಚಾಗಿದೆ.ಲೀಗ್‌ನಲ್ಲಿ ತಂಡ ಉಳಿದುಕೊಳ್ಳುವ ಸಾಧ್ಯತೆ ಕುರಿತು ತೀವ್ರ ಚರ್ಚೆಯಾಗುತ್ತಿದೆ.

55
ಹೊಟೆಲ್‌ನಿಂದ ಕಾಲ್ರಾ ಅರೆಸ್ಟ್
Image Credit : Getty

ಹೊಟೆಲ್‌ನಿಂದ ಕಾಲ್ರಾ ಅರೆಸ್ಟ್

ಜುಲೈ 17 ರಿಂದ ಆರಂಭಗೊಂಡಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಆಗಸ್ಟ್ 8ಕ್ಕೆ ನಡೆಯಲಿದೆ. ಒಟ್ಟು 24 ಪಂದ್ಯಗಳ ಟೂರ್ನಿ ಇದೀಗ ರೋಚಕ ಘಟ್ಟ ತಲುಪಿದೆಯ. ಟೂರ್ನಿ ಆರಂಭಕ್ಕೆ ಕೆಲವೇ ದಿನ ಮೊದಲು ಕೊಲೊಂಬೊ ಹೋಟೆಲ್‌ ರೂಂನಲ್ಲಿ ಮನ್ಜೋತ್ ಕಾಲ್ರಾನನ್ನು ಶ್ರೀಲಂಕಾ ಪೊಲೀಸರು ಅರೆಸ್ಟ್ ಮಾಡಲಾಗಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಟೀಮ್ ಇಂಡಿಯಾ
ಕ್ರಿಕೆಟ್
ಭಾರತ ಸುದ್ದಿ
ನ್ಯಾಯಾಲಯ

Latest Videos
Recommended Stories
Recommended image1
ಅಪ್ಪ ಹಾಸಿಗೆ ಮೇಲೆ ಮಲಗಿದ್ದರು, ಕೈಯಲ್ಲೊಂದು ಚೀಟಿ ಇತ್ತು; ಆ ಕಾಗದದ ಚೂರು ಸಾರಂಶ್‌ ಬದುಕನ್ನೇ ಬದಲಿಸಿತು!
Recommended image2
ಲಂಕಾ ಎದುರಿನ ಟೆಸ್ಟ್‌ ಸರಣಿ: ಮೂವರು ಕನ್ನಡಿಗರಿಗೆ ಜಾಕ್‌ಪಾಟ್, ಈ ಮೂವರಿಗೂ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್!
Recommended image3
ಟೀಂ ಇಂಡಿಯಾಗೆ ಬಂತು ಅಸ್ತ್ರ.. ಲಂಕಾ ಸೀರಿಸ್‌ಗೆ ಆಯ್ಕೆ ಆದ ಸಾರಂಶ್ ಜೈನ್ ಯಾರು?
Related Stories
Recommended image1
ಲಂಕಾ ಎದುರಿನ ಟೆಸ್ಟ್‌ ಸರಣಿ: ಮೂವರು ಕನ್ನಡಿಗರಿಗೆ ಜಾಕ್‌ಪಾಟ್, ಈ ಮೂವರಿಗೂ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್!
Recommended image2
ಟೀಂ ಇಂಡಿಯಾಗೆ ಬಂತು ಅಸ್ತ್ರ.. ಲಂಕಾ ಸೀರಿಸ್‌ಗೆ ಆಯ್ಕೆ ಆದ ಸಾರಂಶ್ ಜೈನ್ ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved