Published : Nov 21, 2025, 06:49 AM ISTUpdated : Nov 21, 2025, 10:31 PM IST

India Latest News Live: ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ

ಸಾರಾಂಶ

ನವದೆಹಲಿ: ಭಾರತ-ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಸುಳ್ಳು ಹೇಳುತ್ತಿರುವ ನಡುವೆಯೇ, ಏ.22ರಂದು ನಡೆದ ಪಹಲ್ಲಾ೦ ದಾಳಿ ಭಾರತದೊಳಗಿನ ಬಂಡಾಯದಿಂದ ನಡೆದದ್ದು ಮತ್ತು ಬಳಿಕ ಉಭಯ ದೇಶಗಳ ನಡುವೆ ಯುದ್ಧದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು ಎಂದು ಅಮೆರಿಕ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ಬೆನ್ನಲ್ಲೇ ವರದಿ ಕುರಿತು ಕಳವಳ ವ್ಯಕ್ತಪಡಿಸಿ ರುವ ಕಾಂಗ್ರೆಸ್, ಇದು ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆ ವೈಫಲ್ಯ ಎಂದು ಕಿಡಿಕಾರಿದೆ. ಅಮೆರಿಕ-ಚೀನಾ ಆರ್ಥಿಕ, ಭದ್ರತಾ ಪರಿಶೀಲನಾ ಆಯೋಗದಿಂದ ಸಂಸತ್ತಿಗೆ ವಾರ್ಷಿಕ ವರದಿ ಸಲ್ಲಿಕೆಯಾಗಿದೆ. ಪಹಲ್ಲಾಂನಲ್ಲಿ ಆಗಿದ್ದು ಬಂಡಾಯ ದಾಳಿ ಅದಕ್ಕೆ ಭಾರತ ಪ್ರತಿಕ್ರಿಯಿಸಿದ್ದರಿಂದ ಪಾಕಿಸ್ತಾನದ ಜೊತೆಗೆ ಯುದ್ಧ, ಈ ಯುದ್ಧದಲ್ಲಿ ಚೀನಾದ ಪಾತ್ರ ಜಾಗತಿಕವಾಗಿ ಗಮನ ಸೆಳೆದಿದೆ. ಚೀನಾದ ಅಸ್ತ್ರ ಗಳನ್ನು ಪಾಕಿಸ್ತಾನ ಬಳಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

10:31 PM (IST) Nov 21

ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ

ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ, ವೃತ್ತಿಪರತೆ, ತಾಳ್ಮೆಗೆ ಹೆಸರುವಾಸಿಯಾಗಿರುವ ಯುವ ಪೈಲೆಟ್ ದುರಂತದಲ್ಲಿ ಅಂತ್ಯಕಂಡಿದ್ದಾರೆ.

Read Full Story

09:40 PM (IST) Nov 21

ಸೂರ್ಯವಂಶಿಗೆ ಬ್ಯಾಟಿಂಗ್ ಇಲ್ಲ, ಸೂಪರ್ ಓವರ್‌ನಲ್ಲಿ ರನ್‌ಗಳಿಸದೇ ಹೊರಬಿದ್ದ ಭಾರತ ವಿರುದ್ಧ ಭಾರಿ ಟೀಕೆ

ಸೂರ್ಯವಂಶಿಗೆ ಬ್ಯಾಟಿಂಗ್ ಇಲ್ಲ, ಸೂಪರ್ ಓವರ್‌ನಲ್ಲಿ ರನ್‌ಗಳಿಸದೇ ಹೊರಬಿದ್ದ ಭಾರತ ವಿರುದ್ಧ ಭಾರಿ ಟೀಕೆ ಎದುರಾಗಿದೆ. ಉತ್ತಮ ಸ್ಟ್ರೈಕ್ ರೇಟ್ ಇರುವ ಸೂರ್ಯವಂಶಿಗೆ ಬ್ಯಾಟಿಂಗ್ ಕೊಡಲಿಲ್ಲ, ಇತರರು ಒಂದು ರನ್ ಕೂಡ ಮಾಡಲಿಲ್ಲ, ಮ್ಯಾನೇಜ್ಮೆಂಟ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Read Full Story

09:39 PM (IST) Nov 21

ಸಂಸ್ಕೃತ "ಸತ್ತ ಭಾಷೆ" ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಹೊಸ ವಿವಾದ! ಬಿಜೆಪಿ ಕೆಂಡಾಮಂಡಲ

ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್, ಸಂಸ್ಕೃತವನ್ನು 'ಸತ್ತ ಭಾಷೆ' ಎಂದು ಕರೆದು, ಭಾಷಾ ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಸ್ಕೃತಕ್ಕೆ ₹2,400 ಕೋಟಿ ನೀಡಲಾಗಿದ್ದು, ತಮಿಳಿಗೆ ಕೇವಲ ₹150 ಕೋಟಿ ನೀಡಲಾಗಿದೆ ಎಂದು ಆರೋಪಿಸಿದರು.

Read Full Story

08:27 PM (IST) Nov 21

100 ಕೋಟಿ ರೂಪಾಯಿ ಅನುದಾನ, ಗೌತಮ್ ಅದಾನಿ ಹಾಡಿ ಹೊಗಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

100 ಕೋಟಿ ರೂಪಾಯಿ ಅನುದಾನ, ಗೌತಮ್ ಅದಾನಿ ಹಾಡಿ ಹೊಗಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ, ಗೌತಮ್ ಅಧಾನಿ ನಿರ್ಧಾರ ಘೋಷಿಸುತ್ತಿದ್ದಂತೆ ಧಾನೀಶ್ ಕನೇರಿಯಾ ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಪಾಕ್ ಮಾಜಿ ಕ್ರಿಕೆಟಿಗ ಅದಾನಿಗೆ ಮೆಚ್ಚುಗೆ ಸೂಚಿಸಿದ್ದೇಕೆ?

Read Full Story

08:03 PM (IST) Nov 21

ಮುಟ್ಟಲು ಬಿಡು ಸಾಕು, ಹೀರೋ ಮಾಡುವೆ - Bigg Boss ಸ್ಪರ್ಧಿಯ ಕಾಸ್ಟಿಂಗ್​ ಕೌಚ್​ನ​ ಬೆಚ್ಚಿಬೀಳೋ ಸ್ಟೋರಿ!

ಮೀಟೂ ಅಭಿಯಾನವು ನಟಿಯರಷ್ಟೇ ಅಲ್ಲ, ನಟರ ಮೇಲೂ ಆದ ಲೈಂ*ಗಿಕ ದೌರ್ಜನ್ಯವನ್ನು ಬೆಳಕಿಗೆ ತಂದಿದೆ. ಹಿಂದಿ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತಾ, ಎದುರಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಟನಾಗಲು 'ರಾಜಿ' ಮಾಡಿಕೊಳ್ಳಲು ಕೇಳಿ, ಅದಕ್ಕೆ ಒಪ್ಪದಿದ್ದಾಗ ಆಗಿದ್ದೇನು? 

Read Full Story

07:36 PM (IST) Nov 21

ತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೈಟ್ ಸಾವು, ಕೆಲೆವೇ ಸೆಕೆಂಡ್‌ಗಳಲ್ಲಿ ನಡೆಯಿತು ದುರಂತ

ತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೈಟ್ ಸಾವು, ಕೆಲೆವೇ ಸೆಕೆಂಡ್‌ಗಳಲ್ಲಿ ನಡೆಯಿತು ದುರಂತ, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿಶ್ವದ ಅತ್ಯುತ್ತಮ ಯುದ್ಧ ವಿಮಾನ ಪೈಕಿ ತೇಜಸ್ ಕೂಡ ಸ್ಥಾನ ಪಡೆದಿದೆ. ಆದರೂ ದುರಂತ ಹೇಗಾಯ್ತು

Read Full Story

07:11 PM (IST) Nov 21

13 ವರ್ಷದ ಬಳಿಕ ವಿಮಾನ ಮಾರಿದ ಏರ್‌ ಇಂಡಿಯಾ, ಪ್ಲೇನ್‌ಗೆ ತಾನೇ ಮಾಲೀಕ ಅನ್ನೋದು ಕೂಡ ಗೊತ್ತಿರಲಿಲ್ಲ!

ಏರ್‌ ಇಂಡಿಯಾ ತನ್ನ ಬಳಿ ಇದ್ದ ಬೋಯಿಂಗ್ 737 ವಿಮಾನವನ್ನು 13 ವರ್ಷಗಳ ಬಳಿಕ ಮಾರಾಟ ಮಾಡಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಈ ವಿಮಾನದ ಮಾಲೀಕತ್ವದ ಬಗ್ಗೆ ಏರ್‌ ಇಂಡಿಯಾಗೆ ಇತ್ತೀಚಿನವರೆಗೂ ತಿಳಿದಿರಲಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. 

Read Full Story

06:48 PM (IST) Nov 21

ನಿಮ್ಮ ಗುಟ್ಟು ರಟ್ಟಾಗಬಾರದು ಅಂತಂದ್ರೆ ಮೊದ್ಲು ಸ್ಮಾರ್ಟ್​ಫೋನ್​ನಲ್ಲಿ ಈ ಸೆಟ್ಟಿಂಗ್ಸ್ ಕೂಡಲೇ ಆಫ್​ ಮಾಡಿ!

ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಸಂಭಾಷಣೆಗಳನ್ನು ಆಲಿಸಿ, ವೈಯಕ್ತಿಕ ಜಾಹೀರಾತುಗಳನ್ನು ತೋರಿಸುತ್ತದೆ. ಇದು ಖಾಸಗಿ ಮಾಹಿತಿಗೆ ಅಪಾಯವನ್ನುಂಟುಮಾಡಬಹುದು. ಈ ಲೇಖನದಲ್ಲಿ, ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ಜಾಹೀರಾತುಗಳನ್ನು ನಿಲ್ಲಿಸಲು ಬೇಕಾದ ಪ್ರಮುಖ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸುವ ವಿಧಾನ ಇಲ್ಲಿದೆ.

Read Full Story

06:32 PM (IST) Nov 21

ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?

ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?, ಗ್ರೂಪ್ ಚಾಟ್‌ನಿಂದ ವೈಯುಕ್ತಿಕ ಚಾಟ್‍ಗೆ ಯಾವುದೇ ಅಡ್ಡಿಯಾಗಲ್ಲ. ವ್ಯಾಟ್ಸಾಪ್‌ನಲ್ಲಿರುವ ಗ್ರೂಪ್‌ನಂತೆ ಚಾಟ್‌ಜಿಪಿಟಿ ಕೂಡ ಹೊಸ ಫೀಚರ್ ನೀಡುತ್ತಿದೆ.

Read Full Story

06:19 PM (IST) Nov 21

Photos - ದುಬೈನಲ್ಲಿ ತೇಜಸ್‌ ಯುದ್ಧವಿಮಾನ ಪತನಗೊಂಡ ದುರಂತ ಚಿತ್ರಗಳು..

ದುಬೈ ಏರ್‌ಶೋ 2025 ರಲ್ಲಿ ಭಾರತದ ಎಚ್‌ಎಎಲ್‌ ನಿರ್ಮಿತ ತೇಜಸ್ ಯುದ್ಧವಿಮಾನ ಪತನಗೊಂಡು ಪೈಲಟ್ ದುರ್ಮರಣಕ್ಕೀಡಾಗಿದ್ದಾರೆ. ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದ್ದು, ಇದು ತೇಜಸ್ ವಿಮಾನದ ಎರಡನೇ ಅಪಘಾತವಾಗಿದೆ. ಘಟನೆಯ ಕುರಿತು ಭಾರತೀಯ ಸಶಸ್ತ್ರ ಪಡೆಗಳು ತನಿಖೆಗೆ ಆದೇಶಿಸಿವೆ.
Read Full Story

06:03 PM (IST) Nov 21

ಅಂಬಾನಿಗಿಂತಲೂ ಅದ್ಧೂರಿ ಮದುವೆ! ಭಾರತಕ್ಕೆ ಟ್ರಂಪ್ ಕುಟುಂಬ​ - ಯಾರೀ ಕುಬೇರ- ಇಲ್ಲಿವೆ ಫೋಟೋಗಳು

ಅಮೆರಿಕದ ಫಾರ್ಮಾ ಕಿಂಗ್ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಅವರ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಜೂನಿಯರ್, ಹಾಲಿವುಡ್ ಮತ್ತು ಬಾಲಿವುಡ್ ತಾರೆಯರು ಸೇರಿದಂತೆ ವಿಶ್ವದ ಗಣ್ಯರು ಈ ಐಷಾರಾಮಿ ವಿವಾಹ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
Read Full Story

05:35 PM (IST) Nov 21

ನಾನು ಕಪ್ಪು ಮಗುವಿನ ಬಣ್ಣ ಹೇಗೆ ಕೆಂಪು - ಅನುಮಾನದಿಂದ ಬಾಣಂತಿ ಕತೆ ಮುಗಿಸಿದ ಪತಿ

husband kills wife: ಬಿಹಾರದ ಕಾತಿಹಾರ್ ಜಿಲ್ಲೆಯಲ್ಲಿ, ತಾನು ಕಪ್ಪಗಿದ್ದು ಮಗು ಕೆಂಪಾಗಿ ಜನಿಸಿದ್ದಕ್ಕೆ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನೆರೆಹೊರೆಯವರ ಅಪಹಾಸ್ಯದಿಂದ ಮನನೊಂದು ಪತಿ ಈ ಕೃತ್ಯವೆಸಗಿದ್ದಾನೆ.

Read Full Story

05:30 PM (IST) Nov 21

Dehli Bomb Blast - ಅಲ್ ಫಲಾಹ್ ವಿವಿ ಅಧ್ಯಕ್ಷನಿಗೆ ಒಕ್ಕರಿಸಿತು ಗ್ರಹಚಾರ! ನಾಲ್ಕು ಅಂತಸ್ತಿನ ಮನೆಗೆ ಬಂತು ಕುತ್ತು

ಶಂಕಿತ ಉಗ್ರರ ತಾಣವಾಗಿದ್ದ ಮಧ್ಯಪ್ರದೇಶದ ಅಲ್ ಫಲಾಹ್ ವಿವಿ ಅಧ್ಯಕ್ಷ ಮೊಹಮ್ಮದ್ ಜವಾದ್ ಸಿದ್ದಿಕಿ ಅವರ ನಾಲ್ಕಂತಸ್ತಿನ ಮನೆಗೆ ಮಹೌ ಕಂಟೋನ್ಮೆಂಟ್ ಮಂಡಳಿ ನೆಲಸಮ ನೋಟಿಸ್ ನೀಡಿದೆ. ಅಕ್ರಮ ನಿರ್ಮಾಣದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದೇ ವೇಳೆ ವಂಚನೆ ಪ್ರಕರಣದಲ್ಲಿ  ಸಹೋದರನನ್ನೂ ಬಂಧಿಸಲಾಗಿದೆ.

Read Full Story

05:23 PM (IST) Nov 21

ದುಬೈ ಏರ್‌ಶೋಗೆ ತೆರಳಿದ್ದ ತೇಜಸ್‌ ಯುದ್ಧವಿಮಾನ ಇಂಧನ ಲೀಕ್‌ ಸುದ್ದಿ ನಿರಾಕರಿಸಿದ್ದ ಕೇಂದ್ರ ಸರ್ಕಾರ, ಅದರ ಬೆನ್ನಲ್ಲೇ ದುರ್ಘಟನೆ

Tejas Mk1 Aircraft: ಪ್ರೆಸ್‌ ಇನ್ಫಾರ್ಮೇಷನ್‌ ಬ್ಯೂರೋದ ಸತ್ಯ-ಪರಿಶೀಲನಾ ಘಟಕದ ಪ್ರಕಾರ, ಯಾವುದೇ ಹಂತದಲ್ಲೂ ಫೈಟರ್ ಜೆಟ್‌ನಿಂದ ತೈಲ ಸೋರಿಕೆಯಾಗಿಲ್ಲ ಎಂದು ತಿಳಿಸಿತ್ತು. ಆದರೆ, ಈ ಸ್ಪಷ್ಟನೆಯ ಬೆನ್ನಲ್ಲೇ ವಿಮಾನ ಪತನಗೊಂಡು ಪೈಲಟ್ ಸಾವನ್ನಪ್ಪಿದ್ದಾರೆ.

Read Full Story

05:13 PM (IST) Nov 21

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಕೇಂದ್ರ ಸರ್ಕಾರವು 29 ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುತ್ತಿದೆ. ಈ ಸುಧಾರಣೆಗಳು ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಮತ್ತು ಸುರಕ್ಷತೆಯನ್ನು ಬಲಪಡಿಸುವ ಗುರಿ ಹೊಂದಿದ್ದು, ಗಿಗ್ ಕೆಲಸಗಾರರನ್ನು ಮೊದಲ ಬಾರಿಗೆ ಕಾನೂನಿನ ವ್ಯಾಪ್ತಿಗೆ ತರಲಿದೆ.

Read Full Story

04:56 PM (IST) Nov 21

ರ‍್ಯಾಪಿಡೋ ಚಾಲಕನ ತಿಂಗಳ ಆದಾಯ 1 ಲಕ್ಷ ರೂ, ಇದು ಹೇಗೆ ಸಾಧ್ಯ? ಇಲ್ಲಿದೆ ಸ್ಪೂರ್ತಿಯ ಘಟನೆ

ರ‍್ಯಾಪಿಡೋ ಚಾಲಕನ ತಿಂಗಳ ಆದಾಯ 1 ಲಕ್ಷ ರೂ, ಇದು ಹೇಗೆ ಸಾಧ್ಯ? ಇಲ್ಲಿದೆ ಸ್ಪೂರ್ತಿಯ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ. ರ‍್ಯಾಪಿಡೋ ಚಾಲಕನ ಆದಾಯ, ಆತನ ಜೀವನ ನಿರ್ವಹಣೆ, ಖುಷಿ ಖುಷಿಯಾಗಿ ಬದುಕು ಸಾಗಿಸುವ ದಾರಿ ಇದೀಗ ಹಲವರಿಗೆ ಸ್ಪೂರ್ತಿಯಾಗಿದೆ.

Read Full Story

04:26 PM (IST) Nov 21

ವಿವಾಹೇತರ ಸಂಬಂಧ ಗಂಡನಿಗೆ ತಿಳಿದ ನಂತರ ರೇ*ಪ್ ಕೇಸ್‌ - ಕೋರ್ಟ್ ಕಟಕಟೆ ಏರಿದ ಅಜ್ಜ ಅಜ್ಜಿ ಲವ್ ಸ್ಟೋರಿ

ಅಜ್ಜ ಅಜ್ಜಿಯ ಲವ್ ಸ್ಟೋರಿಯೊಂದು ಕೋರ್ಟ್ ಮೆಟ್ಟಿಲೇರಿದೆ. ಅಜ್ಜ ಅಜ್ಜಿಯ ಪ್ರೇಮ ಪ್ರಕರಣದ ವಿಚಾರ ಅಜ್ಜಿಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಅಜ್ಜಿಯ ಪ್ರೇಮಿಯ ವಿರುದ್ಧ ಅತ್ಯಾ*ಚಾರದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈಗ ಕೋರ್ಟ್ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.

Read Full Story

04:21 PM (IST) Nov 21

ಎರಡನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್; ಮಾರಕ ವೇಗಿ ಎರಡನೇ ಮ್ಯಾಚ್‌ನಿಂದಲೂ ಔಟ್!

ಭಾರತ ವಿರುದ್ಧದ ಎರಡನೇ ಟೆಸ್ಟ್‌ಗೂ ಮುನ್ನ, ಸ್ಟಾರ್ ವೇಗಿ ಕಗಿಸೊ ರಬಾಡ ಗಾಯದ ಕಾರಣದಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Read Full Story

04:14 PM (IST) Nov 21

ಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್‌ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ ಡ್ಯಾನ್ಸ್

ಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್‌ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ ಡ್ಯಾನ್ಸ್ , ಕರ್ತವ್ಯದಲ್ಲೇ ವಕಾರ್ ಸಿದ್ದಿಕಿ ಗೆಳತಿ ಜೊತೆ ಡ್ಯಾನ್ಸ್ ಆಡುತ್ತಾ, ಬಾಲಿವುಡ್ ರೇಂಜ್‌ಗೆ ಸಮಯ ಕಳೆಯುತ್ತಿದ್ದಾನೆ. ಈತನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

Read Full Story

04:12 PM (IST) Nov 21

Breaking - ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಪತನ, ಪೈಲಟ್‌ ಸಾವಿನ ಶಂಕೆ?

ಯುದ್ಧವಿಮಾನದಿಂದ ಪೈಲಟ್‌ ಹೊರಬಂದಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ವಾಯುಪಡೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.

 

Read Full Story

03:49 PM (IST) Nov 21

ಸ್ಮೃತಿ ಮಂಧನಾಗೆ ಕ್ರಿಕೆಟ್ ಫೀಲ್ಡಲ್ಲೇ ಮಂಡಿಯೂರಿ ಲವ್ ಪ್ರಪೋಸ್ ಮಾಡಿದ ಪಲಾಶ್ ರಸಿಕತೆಗೆ ಮನಸೋತ ನೆಟ್ಟಿಗರು!

ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಖಚಿತವಾಗಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನ ಪಿಚ್‌ನಲ್ಲಿ ಪಲಾಶ್ ಮಂಡಿಯೂರಿ ಸ್ಮೃತಿಗೆ ಪ್ರೇಮ ನಿವೇದನೆ ಮಾಡಿದ್ದು, ಈ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ. 

Read Full Story

03:29 PM (IST) Nov 21

ರೆಸ್ಟೋರೆಂಟ್‌ ಜೊತೆ ಗ್ರಾಹಕರ ಫೋನ್‌ ನಂಬರ್‌ ಹಂಚಿಕೊಳ್ಳಲು ನಿರ್ಧರಿಸಿದ ಜೊಮಾಟೊ!

ಫುಡ್ ಡೆಲಿವರಿ ದೈತ್ಯ ಜೊಮಾಟೊ, ತನ್ನ ಗ್ರಾಹಕರ ಡೇಟಾವನ್ನು ರೆಸ್ಟೋರೆಂಟ್‌ಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವು ಡೇಟಾ ಸುರಕ್ಷತೆ ಮತ್ತು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ರಾಜಕಾರಣಿಗಳು ಮತ್ತು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Read Full Story

03:04 PM (IST) Nov 21

ತಂದೆ ಜೊತೆಗಿರಲು ಬಂದ ಇಬ್ಬರು ಮಕ್ಕಳು, ಪತ್ನಿಯನ್ನೇ ಹತ್ಯೆಗೈದ ಅರಣ್ಯಾಧಿಕಾರಿ, ಕಾರಣ ಕುಚ್ ಕುಚ್

ತಂದೆ ಜೊತೆಗಿರಲು ಬಂದ ಇಬ್ಬರು ಮಕ್ಕಳು, ಪತ್ನಿಯನ್ನೇ ಹತ್ಯೆಗೈದ ಅರಣ್ಯಾಧಿಕಾರಿ, ಕಾರಣ ಕುಚ್ ಕುಚ್ , ಟ್ರಾನ್ಸ್‌ಫರ್ ಆಗಿರುವ ಪತಿಯೊಂದಿಗೆ ಕಳಯಲು ಬಂದ ಪತ್ನಿ ಮಕ್ಕಳು ಬಾರದ ಲೋಕಕ್ಕೆ ಕಳುಹಿಸಲಾಗಿದೆ. ಇದರ ಹಿಂದೆ ಪತಿಯ ಕುತಂತ್ರ ಊಹಿಸಲು ಅಸಾಧ್ಯ.

Read Full Story

02:13 PM (IST) Nov 21

ಐಪಿಎಲ್ ಮಿನಿ ಹರಾಜಿನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಟ್ಟಿವೆ ಎಲ್ಲಾ ಫ್ರಾಂಚೈಸಿಗಳು! ಇವರಿಗೆಲ್ಲಾ ಈ ಸಲ ಜಾಕ್‌ಪಾಟ್

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಮುಂಬರುವ ಡಿಸೆಂಬರ್ 16ರಂದು ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ 10 ಆಟಗಾರರಿಗೆ ಜಾಕ್‌ಪಾಟ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ.

 

Read Full Story

01:10 PM (IST) Nov 21

ಕೆಫೆಯಲ್ಲಿ ದಾಂಧಲೆ ಮಾಡಿ ದಾದಾಗಿರಿ - ತಾಲಿಬಾನ್ ಸ್ಟೈಲ್ ಶಿಕ್ಷೆ ನೀಡಿದ ಪೊಲೀಸರು

ಭೋಪಾಲ್‌ನಲ್ಲಿ ಮ್ಯಾಜಿಕ್ ಸ್ಪಾಟ್ ಕೆಫೆಗೆ ನುಗ್ಗಿ ದಾಂಧಲೆ ನಡೆಸಿದ ದುರುಳರಿಗೆ ಮಧ್ಯಪ್ರದೇಶದ ಪೊಲೀಸರು ತಾಲಿಬಾನ್ ಸ್ಟೈಲಲ್ಲಿ ಶಿಕ್ಷೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರು ಆರೋಪಿಗಳ ಶರ್ಟ್ ಬಿಚ್ಚಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

Read Full Story

12:43 PM (IST) Nov 21

ಎರಡನೇ ಟೆಸ್ಟ್‌ನಿಂದ ಶುಭ್‌ಮನ್ ಗಿಲ್ ಅಧಿಕೃತವಾಗಿ ಔಟ್; ಹೊಸ ನಾಯಕನ ಘೋಷಣೆ!

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಿಂದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಹೊರಗುಳಿದಿದ್ದಾರೆ. ಗಿಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದು, ಅವರ ಸ್ಥಾನಕ್ಕೆ ದೇವದತ್ ಪಡಿಕ್ಕಲ್ ಅಥವಾ ಸಾಯಿ ಸುದರ್ಶನ್ ಆಯ್ಕೆಯಾಗುವ ಸಾಧ್ಯತೆಯಿದೆ.
Read Full Story

11:37 AM (IST) Nov 21

ಅವಮಾನಕ್ಕೊಳಗಾದ ವೇದಿಕೆಯಲ್ಲೇ ಸನ್ಮಾನ - ಮಿಸ್ ಮೆಕ್ಸಿಕೋಗೆ 2025ರ ಮಿಸ್‌ ಯುನಿವರ್ಸ್ ಪಟ್ಟ

ಸಂಘಟಕರೊಬ್ಬರಿಂದ ಡಮ್ಮಿ' ಎಂದು ಅವಮಾನಕ್ಕೊಳಗಾಗಿದ್ದ ಮೆಕ್ಸಿಕೋದ ಫಾತಿಮಾ ಬಾಷ್, ಅದೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವಮಾನಕ್ಕೊಳಗಾದ ಸ್ಥಳದಲ್ಲೇ ಅವರಿಗೆ ಸನ್ಮಾನವಾಗಿದೆ.

Read Full Story

11:36 AM (IST) Nov 21

ಗುವಾಹಟಿ ಟೆಸ್ಟ್ - ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ?

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತಿರುವ ಭಾರತ, ಸರಣಿ ಉಳಿಸಿಕೊಳ್ಳಲು ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ನಾಯಕ ಶುಭಮನ್ ಗಿಲ್ ಗಾಯಗೊಂಡಿರುವ ಕಾರಣ, ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ.

Read Full Story

09:37 AM (IST) Nov 21

ಗುವಾಹಟಿ ಟೆಸ್ಟ್ - ಟೀಂ ಇಂಡಿಯಾಕ್ಕೆ ಎದುರಾದ ಅನಿರೀಕ್ಷಿತ ಸವಾಲು! ವಿರಾಮದ ಸಮಯದಲ್ಲೇ ಅದಲು-ಬದಲು!

ಗುವಾಹಟಿಯಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯವು ಹೊಸ ವೇಳಾಪಟ್ಟಿಯನ್ನು ಹೊಂದಿದೆ. ಇಲ್ಲಿನ ಶೀಘ್ರ ಸೂರ್ಯೋದಯ ಮತ್ತು ಸೂರ್ಯಾಸ್ತದಿಂದಾಗಿ, ಪಂದ್ಯವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ.

Read Full Story

09:25 AM (IST) Nov 21

ಖುಷಿಖುಷಿಯಾಗಿ ಮದುವೆಯ ಎಲ್ಲಾ ಸಂಪ್ರದಾಯ ಪಾಲಿಸಿದ ವಧು ರಾತ್ರೋರಾತ್ರಿ ಎಸ್ಕೇಪ್

ಉತ್ತರ ಪ್ರದೇಶದಲ್ಲಿ, ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮುಗಿಸಿದ ವಧುವೊಬ್ಬಳು ವರನೊಂದಿಗೆ ವೇದಿಕೆಯಲ್ಲೇ ಸೊಗಸಾಗಿ ಡಾನ್ಸ್ ಮಾಡಿ ಇದಾದ ನಂತರ ಮದುವೆ ಮನೆಯವರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾಗಲೇ ರಾತ್ರೋರಾತ್ರಿ ಎಸ್ಕೇಪ್ ಆದಂತಹ ಸಿನಿಮೀಯ ಶೈಲಿಯ ಘಟನೆ ನಡೆದಿದೆ.

Read Full Story

09:23 AM (IST) Nov 21

ಆ್ಯಶಸ್ ಕದನ - ಸ್ಟಾರ್ಕ್ ಮಾರಕ ದಾಳಿಗೆ ಇಂಗ್ಲೆಂಡ್ ತಬ್ಬಿಬ್ಬು!

ಪರ್ತ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ ಆರಂಭಿಕ ಆಘಾತವಾಗಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಮೂರು ವಿಕೆಟ್‌ಗಳನ್ನು ಕಬಳಿಸಿ ಪ್ರವಾಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
Read Full Story

07:09 AM (IST) Nov 21

ಮಗುವಿನ ಗಾಯಕ್ಕೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್

Doctor uses Fevikwik on child: ಮೀರತ್‌ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಗುವಿನ ತಲೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಚ್ಚಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆಗೆ ಸಬಂಧಿಸಿದಂತೆ ದೂರು ದಾಖಲಾಗಿದ್ದು, ಇಲ್ಲಿದೆ ಡಿಟೇಲ್ ಸ್ಟೋರಿ…

Read Full Story

More Trending News