ನವದೆಹಲಿ/ಅಹಮದಾಬಾದ್: ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ 29 ಕೋಟಿ ರು.ಮೌಲ್ಯದ 22 ಕೆಜಿಯಷ್ಟು ಚಿನ್ನವನ್ನು ಕಳೆದ 2 ದಿನದಲ್ಲಿ ದೇಶದ 3 ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಶೌಚಾಲಯವೊಂದರ ಸ್ಪೀಕರ್ನಲ್ಲಿದ್ದ 4.26 ಕೋಟಿ ರು. ಮೊತ್ತದ ಅಂದಾಜು 3 ಕೆಜಿ ಚಿನ್ನವನ್ನು ಅಹಮದಾಬಾದ್ನಲ್ಲಿ ಸುಂಕ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅತ್ತ ಕೋಲ್ಕತಾ ಮತ್ತು ತ್ರಿಪುರಾದ ಅಗರ್ತಲಾದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, 25 ಕೋಟಿ ರು. ಬೆಲೆಯ 17 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆದು, 10 ಜನರನ್ನು ಬಂಧಿಸಿದ್ದಾರೆ. ಥಾಯ್ಲೆಂಡ್ನಿಂದ ಕೋಲ್ಕತಾ ಏರ್ಪೋರ್ಟ್ ಮೂಲಕ 11.6 ಕೆ.ಜಿ.(17 ಕೋಟಿ ರು.) ಚಿನ್ನವನ್ನು ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ 7 ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ. ಅತ್ತ ಅದೇ ದಿನ ಅಗರ್ತಲಾದಲ್ಲಿ ಬಾಂಗ್ಲಾ ಗಡಿ ಮೂಲಕ ಸಾಗಿಸಲಾಗುತ್ತಿದ್ದ 8 ಕೋಟಿ ರು. ಮೌಲ್ಯದ 5.1 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
11:58 AM (IST) Jun 14
ಬಾಲಿವುಡ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಥವಾ ಆಲಿಯಾ ಭಟ್. ಇವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ನಿಜ. ಆದರೆ, ಭಾರತದ ಅತ್ಯಂತ ಶ್ರೀಮಂತ ನಟಿ ಅವರಲ್ಲ, ಇವರು..!
11:55 AM (IST) Jun 14
11:08 AM (IST) Jun 14
10:29 AM (IST) Jun 14
How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್ ಕದಿಯಲು ಹೋಗಿ, ಪಾಸ್ಬುಕ್ ಪ್ರಿಂಟರ್ ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್ ಟವರ್ ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು.
10:24 AM (IST) Jun 14
09:58 AM (IST) Jun 14
09:56 AM (IST) Jun 14
09:07 AM (IST) Jun 14
07:40 AM (IST) Jun 14
ಅಕ್ರಮ ವಲಸೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಸ್ಸಾಂ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಹೊಸ ಆಧಾರ್ ಕಾರ್ಡ್ ವಿತರಣೆಯನ್ನು ನಿರ್ಬಂಧಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಈ ನಿರ್ಧಾರದ ಪ್ರಕಾರ, ಇನ್ನು ಮುಂದೆ ಸರ್ಕಾರದ ವಿಶೇಷ ಅನುಮತಿ ಪಡೆದ ನಂತರವೇ ಆಧಾರ್ ನೀಡಲಾಗುತ್ತದೆ.
07:17 AM (IST) Jun 14
ಸ್ಟ್ಯಾಂಡ್-ಅಪ್ ಕಾಮಿಡಿ ಶೋ(Stand-up comedy show)ನಲ್ಲಿ ಪುರುಷ ಶವಗಳ(Male corpses) ಕುರಿತು ಅಸಭ್ಯವಾಗಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್ ಪವಾರ್(Sejal pawar)ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ. ಈ ವಿವಾದ ಭಾರಿ ಆಕ್ರೋಶಕ್ಕೆ ಕಾರಣವಾದ ನಂತರ, ಮುಂಬೈನ ಕೆಇಎಂ ಆಸ್ಪತ್ರೆ ಈ ಕ್ರಮ ಕೈಗೊಂಡಿದೆ.