LIVE NOW
Published : Jun 14, 2026, 06:50 AM ISTUpdated : Jun 14, 2026, 11:58 AM IST

India Latest News Live: ಶಾಕಿಂಗ್.. 15 ವರ್ಷದಿಂದ ಸಿನಿಮಾನೇ ಮಾಡಿಲ್ಲ; ಆದ್ರೂ ಈಕೆ ಭಾರತದ ಅತ್ಯಂತ ಶ್ರೀಮಂತ ನಟಿ; ಸೀಕ್ರೆಟ್ ಇದು!

ಸಾರಾಂಶ

ನವದೆಹಲಿ/ಅಹಮದಾಬಾದ್‌: ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ 29 ಕೋಟಿ ರು.ಮೌಲ್ಯದ 22 ಕೆಜಿಯಷ್ಟು ಚಿನ್ನವನ್ನು ಕಳೆದ 2 ದಿನದಲ್ಲಿ ದೇಶದ 3 ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಶೌಚಾಲಯವೊಂದರ ಸ್ಪೀಕರ್‌ನಲ್ಲಿದ್ದ 4.26 ಕೋಟಿ ರು. ಮೊತ್ತದ ಅಂದಾಜು 3 ಕೆಜಿ ಚಿನ್ನವನ್ನು ಅಹಮದಾಬಾದ್‌ನಲ್ಲಿ ಸುಂಕ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅತ್ತ ಕೋಲ್ಕತಾ ಮತ್ತು ತ್ರಿಪುರಾದ ಅಗರ್ತಲಾದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, 25 ಕೋಟಿ ರು. ಬೆಲೆಯ 17 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆದು, 10 ಜನರನ್ನು ಬಂಧಿಸಿದ್ದಾರೆ. ಥಾಯ್ಲೆಂಡ್‌ನಿಂದ ಕೋಲ್ಕತಾ ಏರ್ಪೋರ್ಟ್‌ ಮೂಲಕ 11.6 ಕೆ.ಜಿ.(17 ಕೋಟಿ ರು.) ಚಿನ್ನವನ್ನು ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ 7 ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ. ಅತ್ತ ಅದೇ ದಿನ ಅಗರ್ತಲಾದಲ್ಲಿ ಬಾಂಗ್ಲಾ ಗಡಿ ಮೂಲಕ ಸಾಗಿಸಲಾಗುತ್ತಿದ್ದ 8 ಕೋಟಿ ರು. ಮೌಲ್ಯದ 5.1 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

11:58 AM (IST) Jun 14

ಶಾಕಿಂಗ್.. 15 ವರ್ಷದಿಂದ ಸಿನಿಮಾನೇ ಮಾಡಿಲ್ಲ; ಆದ್ರೂ ಈಕೆ ಭಾರತದ ಅತ್ಯಂತ ಶ್ರೀಮಂತ ನಟಿ; ಸೀಕ್ರೆಟ್ ಇದು!

ಬಾಲಿವುಡ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಥವಾ ಆಲಿಯಾ ಭಟ್. ಇವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ನಿಜ. ಆದರೆ, ಭಾರತದ ಅತ್ಯಂತ ಶ್ರೀಮಂತ ನಟಿ ಅವರಲ್ಲ, ಇವರು..!

Read Full Story

11:55 AM (IST) Jun 14

ತಿರುಮಲ ಬಾಗಿಲು ತೆರೆದಾಗ ಅರ್ಚಕರಿಗಿಂತ ಮೊದಲು ದರ್ಶನ ಪಡೆಯುವ 'ಆ' ವ್ಯಕ್ತಿ ಯಾರು?

ತಿರುಮಲ ತಿರುಪತಿ ದೇವಸ್ಥಾನದ ಬಾಗಿಲು ತೆರೆದ ನಂತರ ಗರ್ಭಗುಡಿ ಪ್ರವೇಶಿಸುವ ಮೊದಲ ವ್ಯಕ್ತಿ ಯಾರೆಂದು ನಿಮಗೆ ತಿಳಿದಿದೆಯೇ? ಅರ್ಚಕರಿಗಿಂತ ಮುಂಚೆಯೇ ಸ್ವಾಮಿಯ ದರ್ಶನ ಪಡೆಯುವ ಸೌಭಾಗ್ಯ ಆ ವ್ಯಕ್ತಿಗೆ ಸೇರಿದ್ದು. ಶತಮಾನಗಳಷ್ಟು ಹಳೆಯದಾದ ಈ ಅದ್ಭುತ ರಹಸ್ಯದ ಮಾಹಿತಿ ಇಲ್ಲಿದೆ.
Read Full Story

11:08 AM (IST) Jun 14

ಪೊಲೀಸ್ ಪರೀಕ್ಷೆ ಬರೆಯಲು ಹೊರಟ ಅಭ್ಯರ್ಥಿಗಳಿಂದ ರೈಲಿನ ಮೇಲೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು

ಬಿಹಾರ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ಅಭ್ಯರ್ಥಿಗಳು ಪ್ರಯಾಣ ವ್ಯವಸ್ಥೆ ಇಲ್ಲವೆಂದು ಪಾಟಲಿಪುತ್ರ ನಿಲ್ದಾಣದಲ್ಲಿ ಪ್ರತಿಭಟಿಸಿದರು. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಕಲ್ಲು ತೂರಾಟ, ರೈಲು ಹಾನಿ ಸಂಭವಿಸಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.
Read Full Story

10:29 AM (IST) Jun 14

Mobile Tower Stolen - ಮೊಬೈಲ್‌ ಅಲ್ರೀ.. 40 ಅಡಿ ಟವರ್‌ ಕದ್ದ ಕಳ್ಳರು! ಖಾಲಿ ಜಾಗ ನೋಡಿ ಎಲ್ರೂ ಕಂಗಾಲು!

How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್‌ ಕದಿಯಲು ಹೋಗಿ, ಪಾಸ್‌ಬುಕ್‌ ಪ್ರಿಂಟರ್‌ ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್‌ ಟವರ್‌ ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು.

 

Read Full Story

10:24 AM (IST) Jun 14

ಮಹಿಳಾ ಟಿ20 ವಿಶ್ವಕಪ್ - ಇಂದು ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್!

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದ್ದು, ದೊಡ್ಡ ಅಂತರದ ಜಯದೊಂದಿಗೆ ಶುಭಾರಂಭ ಮಾಡುವ ಗುರಿ ಹೊಂದಿದೆ.
Read Full Story

09:58 AM (IST) Jun 14

ಗರ್ಭಿಣಿ ತಾಯಿಗೆ ವಿಮಾನವೇರಲು ನಿರಾಕರಿಸಿದ್ದರಿಂದ ಅಮೆರಿಕದಲ್ಲೇ ಹುಟ್ಟಿದ್ದವ ಈಗ ವಿಶ್ವಕಪ್‌ನ ಸ್ಟಾರ್‌!

ನೈಜೀರಿಯನ್ ಮೂಲದ ಫೊಲಾರಿನ್‌ ಬಾಲೋಗನ್‌, 25 ವರ್ಷಗಳ ಹಿಂದೆ ಅವರ ಗರ್ಭಿಣಿ ತಾಯಿಗೆ ಅಮೆರಿಕದಿಂದ ಲಂಡನ್‌ಗೆ ತೆರಳುವ ವಿಮಾನವನ್ನು ನಿರಾಕರಿಸಿದ್ದರಿಂದ ಆಕಸ್ಮಿಕವಾಗಿ ಅಮೆರಿಕದಲ್ಲಿ ಜನಿಸಿದರು. ಲಂಡನ್‌ನಲ್ಲಿ ಬೆಳೆದು, ಫುಟ್ಬಾಲ್ ಪಳಗಿದ ಬಾಲೋಗನ್‌, ಇದೀಗ ವಿಶ್ವಕಪ್‌ನಲ್ಲಿ ಅಮೆರಿಕ ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತಿದ್ದಾರೆ.
Read Full Story

09:56 AM (IST) Jun 14

demographic changes - ಗಡಿ ಪ್ರದೇಶಗಳಿಗೆ ಭೇಟಿನೀಡಿ ಜನಸಂಖ್ಯಾ ಬದಲು ಪರಿಶೀಲಿಸಲು ಅಮಿತ್ ಶಾ ಮಹತ್ವದ ಆದೇಶ!

ಭಾರತದ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ವಿವರವಾದ ಅಧ್ಯಯನ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಗೆ ನಿರ್ದೇಶನ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶರ ನೇತೃತ್ವದ ಈ ಸಮಿತಿಯು, ಅಕ್ರಮ ವಲಸೆಯಂತಹ ಅಂಶಗಳ ಬಗ್ಗೆಯೂ ತನಿಖೆ ನಡೆಸಲಿದೆ.
Read Full Story

09:07 AM (IST) Jun 14

ಧರ್ಮಶಾಲಾದಲ್ಲಿ ರನ್ ಮಳೆಯಲ್ಲಿ ಭಾರತ ಜಯಭೇರಿ! ರೋಹಿತ್ ಅಪರೂಪದ ದಾಖಲೆ

ಮಳೆಬಾಧಿತ 25 ಓವರ್‌ಗಳ ಪಂದ್ಯದಲ್ಲಿ, ರಹ್ಮಾನುಲ್ಲಾ ಗುರ್ಬಾಜ್ ಅವರ ಶತಕದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ಭಾರತ 7 ವಿಕೆಟ್‌ಗಳಿಂದ ಮಣಿಸಿತು. ಶುಭ್‌ಮನ್‌ ಗಿಲ್ ಅವರ ಅಜೇಯ 84 ಮತ್ತು ಕೆ.ಎಲ್. ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
Read Full Story

07:40 AM (IST) Jun 14

ಅಕ್ರಮ ವಲಸೆ ತಡೆಗೆ ಅಸ್ಸಾಂ ಸಿಎಂ ಮಾಸ್ಟರ್ ಪ್ಲಾನ್ - 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ಸ್ಥಗಿತ!

ಅಕ್ರಮ ವಲಸೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಸ್ಸಾಂ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಹೊಸ ಆಧಾರ್ ಕಾರ್ಡ್ ವಿತರಣೆಯನ್ನು ನಿರ್ಬಂಧಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಈ ನಿರ್ಧಾರದ ಪ್ರಕಾರ, ಇನ್ನು ಮುಂದೆ ಸರ್ಕಾರದ ವಿಶೇಷ ಅನುಮತಿ ಪಡೆದ ನಂತರವೇ ಆಧಾರ್ ನೀಡಲಾಗುತ್ತದೆ.

Read Full Story

07:17 AM (IST) Jun 14

ಸ್ಟ್ಯಾಂಡ್‌ಅಪ್ ಕಾಮಿಡಿಯಲ್ಲಿ ಪುರುಷ ಶವಗಳ ಬಗ್ಗೆ ಅಸಭ್ಯ ಹೇಳಿಕೆ; ವೈದ್ಯೆ ಸೆಜಲ್ ಪವಾರ್‌ಗೆ ಕಡ್ಡಾಯ ರಜೆ ಶಾಕ್ (ವಿಡಿಯೋ)

ಸ್ಟ್ಯಾಂಡ್-ಅಪ್ ಕಾಮಿಡಿ ಶೋ(Stand-up comedy show)ನಲ್ಲಿ ಪುರುಷ ಶವಗಳ(Male corpses) ಕುರಿತು ಅಸಭ್ಯವಾಗಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್‌ ಪವಾರ್‌(Sejal pawar)ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ. ಈ ವಿವಾದ ಭಾರಿ ಆಕ್ರೋಶಕ್ಕೆ ಕಾರಣವಾದ ನಂತರ, ಮುಂಬೈನ ಕೆಇಎಂ ಆಸ್ಪತ್ರೆ ಈ ಕ್ರಮ ಕೈಗೊಂಡಿದೆ. 

Read Full Story

More Trending News