Chanakya Niti For Women: ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಮನೆಯ ಮುಖ್ಯ ಬಾಗಿಲು ಅಥವಾ ಕಿಟಕಿಯ ಬಳಿ ಹೆಚ್ಚು ಹೊತ್ತು ನಿಲ್ಲಬಾರದು. ಯಾಕೆ ಹೀಗೆ ಹೇಳಿದ್ದಾರೆ? ಇದರಿಂದ ಕುಟುಂಬಕ್ಕೆ ಯಾವ ರೀತಿ ಸಮಸ್ಯೆ ಆಗಬಹುದು? ಇಲ್ಲಿದೆ ಮಾಹಿತಿ.
ಭಾರತವನ್ನು ಒಂದೇ ಸೂರಿನಡಿ ತಂದು, ಸಮಾಜದಲ್ಲಿದ್ದ ಕೆಟ್ಟ ಪದ್ಧತಿಗಳನ್ನು ತೊಲಗಿಸಲು ಪ್ರಯತ್ನಿಸಿದ ಮಹಾನ್ ವಿದ್ವಾಂಸರಲ್ಲಿ ಆಚಾರ್ಯ ಚಾಣಕ್ಯರೂ ಒಬ್ಬರು. ಅವರು ಹೇಳಿದ ನೀತಿಗಳು ಇವತ್ತಿಗೂ ನಮಗೆ ಸರಿಯಾದ ದಾರಿ ತೋರಿಸುತ್ತಿವೆ. ಸುಖ ಸಂಸಾರಕ್ಕೆ ಬೇಕಾದ ಹಲವು ನೀತಿಗಳನ್ನು ಸಹ ಚಾಣಕ್ಯರು ಹೇಳಿದ್ದಾರೆ. ಅವುಗಳಲ್ಲಿ ಒಂದು, ಮಹಿಳೆಯರು ಮನೆಯ ಮುಖ್ಯ ಬಾಗಿಲು ಅಥವಾ ಕಿಟಕಿಯ ಬಳಿ ಹೆಚ್ಚು ಹೊತ್ತು ನಿಲ್ಲಬಾರದು ಎಂಬುದು. ಇದರ ಹಿಂದಿರುವ 4 ಮುಖ್ಯ ಕಾರಣಗಳೇನು ಎಂಬುದನ್ನು ಮುಂದೆ ನೋಡೋಣ.
ಕುಟುಂಬದ ಗೌರವಕ್ಕೆ ಧಕ್ಕೆ
ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಮನೆಯ ಮುಖ್ಯ ದ್ವಾರ ಅಥವಾ ಕಿಟಕಿಯ ಬಳಿ ಹೆಚ್ಚು ಹೊತ್ತು ನಿಂತುಕೊಳ್ಳುವುದು ಕುಟುಂಬದ ಗೌರವಕ್ಕೆ ತಕ್ಕುದಲ್ಲ. ಇದರಿಂದ ಮನೆತನದ ಮರ್ಯಾದೆ ಕಡಿಮೆಯಾಗಬಹುದು. ಇದೇ ಕಾರಣಕ್ಕೆ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಹಿಳೆಯರು ಬಾಗಿಲು ಅಥವಾ ಕಿಟಕಿಯ ಬಳಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.
ಅನಾವಶ್ಯಕ ಮಾತುಗಳಿಂದ ದೂರವಿರಲು
ಈ ನೀತಿಯ ಹಿಂದಿನ ಚಾಣಕ್ಯರ ಎರಡನೇ ಉದ್ದೇಶವೆಂದರೆ, ಒಬ್ಬ ಮಹಿಳೆ ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ನಿಂತರೆ, ಬೇರೆ ಮಹಿಳೆಯರು ಅಲ್ಲಿಗೆ ಬಂದು ಅನಾವಶ್ಯಕ ಮಾತುಕತೆ ಶುರು ಮಾಡುತ್ತಾರೆ. ಈ ಮಾತುಗಳಲ್ಲಿ ಬೇರೆಯವರ ಬಗ್ಗೆ ಚಾಡಿ ಹೇಳುವುದು ಅಥವಾ ಕೆಟ್ಟದಾಗಿ ಮಾತನಾಡುವುದು ಸೇರಿರುತ್ತದೆ. ಕೆಲವೊಮ್ಮೆ ಈ ಸಣ್ಣ ಮಾತುಗಳೇ ದೊಡ್ಡ ಜಗಳಕ್ಕೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಈ ನಿಯಮ ಪಾಲಿಸುವುದು ಉತ್ತಮ.
ಮನೆಯ ಗುಟ್ಟು ಕಾಪಾಡಿಕೊಳ್ಳಲು
ಮನೆಯ ಮುಖ್ಯ ಬಾಗಿಲು ಮತ್ತು ಕಿಟಕಿಗಳು, ಮನೆಯ ಒಳಗೆ ಮತ್ತು ಹೊರಗಿನ ಸಂಪರ್ಕ ಸೇತುವೆಯಿದ್ದಂತೆ. ಮಹಿಳೆಯರು ಇಲ್ಲಿ ನಿಂತು ಬೇರೆಯವರೊಂದಿಗೆ ಮಾತನಾಡುವಾಗ, ಮಾತಿನ ಭರದಲ್ಲಿ ಮನೆಯ ಖಾಸಗಿ ವಿಷಯಗಳು ಸಾರ್ವಜನಿಕವಾಗಬಹುದು. ಇದರಿಂದ ಕುಟುಂಬಕ್ಕೆ ಮುಜುಗರ ಉಂಟಾಗಬಹುದು. ಅದಕ್ಕಾಗಿಯೇ ಮಹಿಳೆಯರು ಬಾಗಿಲು ಮತ್ತು ಕಿಟಕಿಯ ಬಳಿ ಹೆಚ್ಚು ಹೊತ್ತು ನಿಲ್ಲಬಾರದು.
ನಡತೆಯ ಬಗ್ಗೆ ಅನುಮಾನ ಬರಬಹುದು
ಮಹಿಳೆಯರು ಪ್ರತಿದಿನ ಒಂದೇ ಜಾಗದಲ್ಲಿ ನಿಲ್ಲುವುದರಿಂದ ಅವರ ನಡತೆಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಚಾಣಕ್ಯರು ಆ ಕಾಲದಲ್ಲೇ ಈ ವಿಷಯವನ್ನು ಅರ್ಥಮಾಡಿಕೊಂಡಿದ್ದರು. ಅದಕ್ಕಾಗಿಯೇ ತಮ್ಮ ನೀತಿಗಳಲ್ಲಿ ಈ ಮಾತನ್ನು ಹೇಳಿದ್ದಾರೆ. ಚಾಣಕ್ಯರ ಈ ನೀತಿಗಳನ್ನು ಪಾಲಿಸುವುದು ಎಲ್ಲರಿಗೂ ಒಳ್ಳೆಯದು.
Disclaimer
ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ಈ ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ನಮ್ಮ ಉದ್ದೇಶವಷ್ಟೇ. ಬಳಕೆದಾರರು ಇದನ್ನು ಕೇವಲ ಮಾಹಿತಿಗಾಗಿ ಪರಿಗಣಿಸಬೇಕು.


