ಬಿಗ್​ಬಾಸ್​ ಸೀಸನ್​ 12ರ ವಿನ್ನರ್​ ಯಾರೇ ಆದರೂ ಮನೆಯಿಂದ ಹೊರಬಂದು ಸಂಭ್ರಮಿಸುವಂತಿಲ್ಲ. ಅಷ್ಟಕ್ಕೂ ಆಗಿದ್ದೇನು? ಪೊಲೀಸರು ಈ ಸೂಚನೆ ನೀಡಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್​ ವಿಷ್ಯ. 

ಇಂದು ಬಿಗ್​ಬಾಸ್​ ಸೀಸನ್​ 12 (Bigg Boss Season 12)ರ ಯಾವ ಸ್ಪರ್ಧಿ ಗೆಲುವು ಸಾಧಿಸುತ್ತಾರೆ ಎಂದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯುತ್ತದೆ. ಆದರೆ ಇದರ ನಡುವೆಯೇ ಶಾಕಿಂಗ್​ ವಿಷಯವೊಂದು ಹೊರಬಂದಿದೆ. ಅದೇನೆಂದರೆ, ಇಂದು ಯಾರೇ ವಿನ್​ ಆದರೂ ಅವರು ಬಿಗ್​ಬಾಸ್​​ ಮನೆಯಿಂದ ಹೊರಕ್ಕೆ ಬಂದು ಸಂಭ್ರಮ ಆಚರಿಸುವಂತಿಲ್ಲ. ಅವರು ಮನೆಯಲ್ಲಿಯೇ ಲಾಕ್​ ಆಗಿ ಇರುತ್ತಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದಾಗಲೇ ಗಿಲ್ಲಿ ನಟ ಈ ಬಾರಿಯ ವಿನ್ನರ್​ ಎಂದು ಜನರು ಹೇಳುತ್ತಲಿದ್ದರಾದರೂ, ವಿನ್ನರ್​ ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಆಗಿದ್ದೇನು?

ಆದರೆ ವಿನ್ನರ್​ ಯಾರೇ ಆದರೂ ಅವರು ಮಾತ್ರ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬರುವಂತಿಲ್ಲ. ಅದರಲ್ಲಿಯೂ ಗಿಲ್ಲಿ ನಟ ವಿನ್​ ಆದರಂತೂ ಹೌಸ್ ಅರೆಸ್ಟ್​ ಆಗಿಯೇ ಇರಬೇಕು ಎಂದು ರಾಮನಗರ ಎಸ್‌ಪಿ, ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಇದಾಗಲೇ ಬಿಗ್​ಬಾಸ್​ ಮನೆಯ ಹೊರಗೆ ಸಹಸ್ರಾರು ಮಂದಿ ಅಭಿಮಾನಿಗಳು ಅತಿರೇಕದಿಂದ ವರ್ತಿಸುತ್ತಿದ್ದಾರೆ. ಅದರಲ್ಲಿಯೂ ಗಿಲ್ಲಿ ನಟನೇ ವಿನ್​ ಆಗುವುದು ಎನ್ನುವ ಕಾರಣಕ್ಕೆ ಹುಚ್ಚಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿದೆ.

ಕೈ ಮೀರಿದ ಪರಿಸ್ಥಿತಿ

ಒಂದು ವೇಳೆ ಗಿಲ್ಲಿ ನಟ ವಿನ್​ ಆದರೆ ಪರಿಸ್ಥಿತಿ ಇನ್ನೂ ಕೈಮೀರಿ ಹೋಗುತ್ತದೆ. ಅದೇ ಬೇರೆ ಸ್ಪರ್ಧಿಗಳು ವಿನ್​ ಆದರೂ ಅದು ಇನ್ನೊಂದು ಹಂತದಲ್ಲಿ ಕೈಮೀರಿ ಹೋಗುತ್ತದೆ. ಯಾವುದಕ್ಕೂ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡುವುದು ಒಳ್ಳೆಯದು ಎನ್ನುವ ಕಾರಣಕ್ಕೆ ಗೆದ್ದ ಸ್ಪರ್ಧಿ ಇಂದು ಸಂಭ್ರಮ ಆಚರಿಸುವಂತಿಲ್ಲ. ನಾಳೆ ಬೆಳಿಗ್ಗೆಯವರೆಗೂ ಸುರಕ್ಷತೆಯ ದೃಷ್ಟಿಯಿಂದ ಬಿಗ್​ಬಾಸ್​ ಮನೆಯಲ್ಲಿಯೇ ಅರೆಸ್ಟ್​ ಆಗಿ ಇರಲಿದ್ದಾರೆ ಎನ್ನಲಾಗಿದೆ.

ನಾಳೆ ಬೆಳಿಗ್ಗೆ ಹೊರಕ್ಕೆ

ಇದಾಗಲೇ ಅಭಿಮಾನಿಗಳ ಅತಿರೇಕ ಪೊಲೀಸರಿಗೆ ತಲೆನೋವಾಗಿ ಹೋಗಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) 50ಕ್ಕೂ ಹೆಚ್ಚು ಪೊಲಿಸರನ್ನು ಬಿಗ್​ಬಾಸ್​ ಮನೆಯ ಹೊರಗೆ ನಿಯೋಜಿಸಿದೆ. ಇದರಿಂದ ನಾಳೆ ಬೆಳಿಗ್ಗೆಯವರೆಗೂ ವಿನ್​ ಆದವರನ್ನು ಹೊರಕ್ಕೆ ತರದೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯರಾತ್ರಿ ವಿನ್ನರ್ ಘೋಷಣೆಯಾಗಲಿದ್ದಾರೆ. ಆದ್ದರಿಂದ ನಾಳೆ ಬೆಳಿಗ್ಗೆಯವರೆಗೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಗೆದ್ದ ಅಭ್ಯರ್ಥಿಯನ್ನು ಹೊರಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ.