- Home
- Entertainment
- TV Talk
- Bhargavi LLb ರೋಚಕ ಸಂಚಿಕೆ: ಭಾರ್ಗವಿಗೆ ಸಹಾಯ ಮಾಡಲು ಬರ್ತಿದ್ದಾರೆ ಬಿಗ್ಬಾಸ್ ಬ್ಯೂಟಿ
Bhargavi LLb ರೋಚಕ ಸಂಚಿಕೆ: ಭಾರ್ಗವಿಗೆ ಸಹಾಯ ಮಾಡಲು ಬರ್ತಿದ್ದಾರೆ ಬಿಗ್ಬಾಸ್ ಬ್ಯೂಟಿ
ಅಪ್ಪನ ಚಿತೆಯ ಮುಂದೆ ವಕೀಲಿ ವೃತ್ತಿ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದ ಭಾರ್ಗವಿ, ಇದೀಗ ಕಾಳಿಯ ಅವತಾರ ತಾಳಿದ್ದಾಳೆ. ದುಷ್ಟರನ್ನು ಶಿಕ್ಷಿಸಿ, ಅಪ್ಪನ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೊರಟ ಆಕೆಗೆ Bigg Boss ಸ್ಪರ್ಧಿ, ಲೇಡಿ ಡಾನ್ ಒಬ್ಬರ ಸಾಥ್ ಸಿಕ್ಕಿದೆ. ಅವರು ಯಾರು?

ಚಿತೆಯ ಮುಂದೆ ಪ್ರಮಾಣ
ಕಲರ್ಸ್ ಕನ್ನಡದ ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ಸದ್ಯ ಭಾರ್ಗವಿ ತಾನು ವಕೀಲಿಕೆ ಪ್ರಾಕ್ಟೀಸ್ ಮಾಡುವುದಿಲ್ಲ. ಕೋರ್ಟ್ಗೆ ಹೋಗುವುದಿಲ್ಲ ಎಂದು ಅಪ್ಪನ ಚಿತೆಯ ಮುಂದೆ ಪ್ರಮಾಣ ಮಾಡಿದ್ದಾಳೆ. ಆಕೆನೇ ಹೀಗೆ ಪ್ರಮಾಣ ಮಾಡಿಬಿಟ್ಟರೆ ಸೀರಿಯಲ್ ಕಥೆ ಏನು ಎಂದುಕೊಂಡವರೇ ಹೆಚ್ಚು.
ಅಪ್ಪನ ಕಳೆದುಕೊಂಡ ದುಃಖ
ಆದರೆ, ಇದೀಗ ಭಾರ್ಗವಿ ದುಷ್ಟರನ್ನು ಸದೆಬಡಿಯಲು ಕಾಳಿಯ ಅವತಾರದಲ್ಲಿ ಬಂದಿದ್ದಾಳೆ. ವಕೀಲಿ ವೃತ್ತಿಯಲ್ಲಿ ಸತ್ಯದ ಪರ ಹೋಗಿ ಅಪ್ಪನನ್ನೂ ಕಳೆದುಕೊಳ್ಳುವ ಸ್ಥಿತಿ ಭಾರ್ಗವಿಗೆ ಬಂದಿದೆ. ಇದೀಗ ದುಷ್ಟರ ದಮನಕ್ಕೆ ಬೇರೆಯ ರೂಪದಲ್ಲಿ ಹೋಗಿದ್ದಾಳೆ.
ಕಾಳಿ ಅವತಾರ
ತನ್ನನ್ನು ತಾನು ಕಾಳಿ ಎಂದು ಹೇಳಿಕೊಂಡಿರೋ ಭಾರ್ಗವಿ ಮಾರುವೇಷದಲ್ಲಿ ಹೋಗಿ ದುಷ್ಟರನ್ನು ಶಿಕ್ಷಿಸುತ್ತಿದ್ದಾಳೆ. ಸಂಧ್ಯಾಳಿಗೆ ನ್ಯಾಯ ಕೊಡಿಸುವ ಕಾರ್ಯದ ಜೊತೆಗೆ ಯಾವ ಹೆಣ್ಣುಮಕ್ಕಳಿಗೂ ಅನ್ಯಾಯ ಆಗಬಾರದು ಹಾಗೂ ಅಪ್ಪನ ಸಾವಿಗೆ ಕಾರಣ ಆದವರನ್ನು ಬಿಡಬಾರದು ಎನ್ನುವುದನ್ನೇ ಮುಖ್ಯವಾಗಿರಿಸಿಕೊಂಡಿರೋ ಭಾರ್ಗವಿ, ಈ ರೂಪದಲ್ಲಿ ಬಂದಿದ್ದಾಳೆ.
ಲೇಡಿ ಡಾನ್
ಇವಳಿಗೆ ಈಗ ಲೇಡಿ ಡಾನ್ ಒಬ್ಬರು ಸಾಥ್ ಕೊಡುತ್ತಿದ್ದಾರೆ. ಕಲರ್ಸ್ ವಾಹಿನಿಯು ಈ ಬಗ್ಗೆ ಪ್ರೊಮೋ ಒಂದನ್ನು ಶೇರ್ ಮಾಡಿದೆ. ಭಾರ್ಗವಿಗೆ ಸಹಾಯ ಮಾಡಲು ಬರುತ್ತಿರುವವರು ಯಾರು ಎಂದು ಪ್ರಶ್ನಿಸಿದೆ.
ಬಿಗ್ಬಾಸ್ ಬ್ಯೂಟಿ
ಇದಾಗಲೇ ಔಟ್ಲೈನ್ ನೋಡಿಯೇ ಆಕೆ, ಬಿಗ್ಬಾಸ್ ಮಾಜಿ ಸ್ಪರ್ಧಿ, ಸತ್ಯ ಸೀರಿಯಲ್ ಲೇಡಿ ಡಾನ್ ಸತ್ಯ ಗೌತಮಿ ಜಾಧವ್ ಎನ್ನುವುದಾಗಿ ಕಮೆಂಟ್ಗಳಿಂದ ತುಂಬಿ ಹೋಗಿದೆ.
ಇನ್ನಷ್ಟು ರೋಚಕ
ಒಟ್ಟಿನಲ್ಲಿ ಈ ಸೀರಿಯಲ್ ಇನ್ನಷ್ಟು ರೋಚಕಗೊಳಿಸಲಾಗುತ್ತಿದೆ. ಇದರ ನಡುವೆಯೇ ಭಾರ್ಗವಿ ಪಾತ್ರಧಾರಿಯಾಗಿರುವ ರಾಧಾ ಭಗವತಿ ಹಾಗೂ ಅಮೃತಧಾರೆಯ ಜೈದೇವ್ ರಾಣವ್ ಅವರ ನಿಶ್ಚಿತಾರ್ಥವೂ ನಡೆದಿದ್ದು, ಇವರ ಮದುವೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

