Asianet Suvarna News Asianet Suvarna News

ವಾರಣಾಸಿಯಲ್ಲಿದೆ ಇಡೀ ದೇಶವೇ ಮೆಚ್ಚುವ ಅಖಂಡ ಭಾರತ್‌ ಮಾತಾ ಮಂದಿರ!

ಮಹಾತ್ಮಾ ಗಾಂಧೀಜಿಯಿಂದ ಅನಾವರಣಗೊಂಡಿದ್ದ ವಾರಣಾಸಿಯ ಭಾರತ್‌ ಮಾತಾ ಮಂದಿರದಲ್ಲಿ ಮಾರ್ಬಲ್‌ನಲ್ಲಿ ಕೆತ್ತಲಾಗಿರುವ ಅಖಂಡ ಭಾರತದ ಚಿತ್ರವೇ ಪ್ರಧಾನ ಆಕರ್ಷಣೆಯಾಗಿದೆ.

Undivided India displayed at Varanasi Bharat Mata Mandir What makes special of this temple san
Author
First Published Jul 20, 2023, 6:39 PM IST | Last Updated Jul 20, 2023, 6:39 PM IST

ನವದೆಹಲಿ (ಜು.20): ದೇಶದ ಸಂಸತ್‌ ಭವನದಲ್ಲಿ ಅಖಂಡ ಭಾರತದ ಚಿತ್ರದ ಗೋಡೆಚಿತ್ರ ಬಿಡಿಸಿದ್ದು, ದೇಶದಲ್ಲಿ ಕೆಲ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ, ನೆನಪಿರಲಿ ಭಾರತದಲ್ಲಿ ಅಖಂಡ ಭಾರತ ಮಾತೆಯ ಮಂದಿರವಿದೆ. ಇದನ್ನು ಸ್ವತಃ ಮಹಾತ್ಮ ಗಾಂಧೀಜಿಯೇ ಉದ್ಘಾಟನೆ ಮಾಡಿದ್ದರು. ಈ ದೇವಸ್ಥಾನ ಇರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ. ಸಾಮಾನ್ಯವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಈ ದೇವಸ್ಥಾನದ ಚಿತ್ರ ವೈರಲ್‌ ಆಗುತ್ತಲೇ ಇರುತ್ತದೆ. ಅದರೊಂದಿಗೆ ಭಾರತ ಮಾತಾ ಮಂದಿರದ ಕುರಿತಾದ ಕಥೆಗಳು ಶೇರ್‌ ಆಗುತ್ತಲೇ ಇರುತ್ತದೆ. ಹಾಗಿದ್ದರೆ, ಈ ಭಾರತ ಮಾತಾ ಮಂದಿರದ ವಿಶೇಷತೆ ಏನು?  ಉತ್ತರ ಭಾರತೀಯರ ಯಾತ್ರಾರ್ಥಿಗರ ಪಾಲಿಗೆ ನೆಚ್ಚಿನ ತಾಣವಾಗಿರುವ ವಾರಣಾಸಿಯಲ್ಲಿ ಹೊಸದಾಗಿ ನಿರ್ಮಾಣವಾದ ದೇವಸ್ಥಾನ ಇದಲ್ಲ. ಈ ಮಂದಿರದಲ್ಲಿ ಅಮೃತಶಿಲೆಯ ಮೇಲೆ ಅವಿಭಜಿತ ಭಾರತದ ನಕ್ಷೆಯನ್ನು ಚಿತ್ರಿಸಲಾಗಿದೆ. ಆ ಕಾರಣಕ್ಕಾಗಿ ಈ ದೇವಸ್ಥಾನವನ್ನು ವಿಶೇಷ ಎಂದು ಪರಿಗಣಿಸಲಾಗುತ್ತದೆ. ಅಖಂಡ ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ದೃಷ್ಟಿಕೋನಕ್ಕೂ ಅಥವಾ 2014 ರಲ್ಲಿ ಲೋಕಸಭೆ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣೆಗೂ ಅವಿಭಜಿತ ಭಾರತದ ನಕ್ಷೆಯು ಯಾವುದೇ ಸಂಬಂಧವನ್ನು ಇದು ಹೊಂದಿಲ್ಲ.

ಭಾರತ ಮಾತಾ ಮಂದಿರವು ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಆವರಣದಲ್ಲಿದೆ. ಮಹಾತ್ಮಾ ಗಾಂಧಿಯವರು ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರಿಂದ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಚಳವಳಿಯ ಉಸ್ತುವಾರಿ ವಹಿಸುತ್ತಿದ್ದ ಸಮಯದಲ್ಲಿ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಾಬು ಶಿವಪ್ರಸಾದ್ ಗುಪ್ತಾ ಅವರು ಈ ದೇವಾಲಯವನ್ನು ನಿರ್ಮಿಸಿದರು. ಗುಪ್ತಾ ಕುಟುಂಬ ಇಂದಿಗೂ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದೆ.

1918ರಲ್ಲಿ ಈ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭವಾದರೆ, 1942ರಲ್ಲಿ ಮುಕ್ತಾಯ ಕಂಡಿತ್ತು.ಮಹಾತ್ಮ ಗಾಂಧಿಯವರು 1936 ರ ಅಕ್ಟೋಬರ್ 25 ರಂದು ವಾರಣಾಸಿಯಲ್ಲಿ ಭಾರತ್ ಮಾತಾ ಮಂದಿರವನ್ನು ಉದ್ಘಾಟಿಸಿದರು. ಇಪ್ಪತ್ತನೇ ಶತಮಾನದ ಹಿಂದಿ ಕವಯಿತ್ರಿ ರಾಷ್ಟ್ರಕವಿ ಎಂದೂ ಗುರುತಿಸಲಾಗುವ ಮೈಥಿಲಿ ಶರಣ್ ಗುಪ್ತ್ ಅವರು  (ರಾಷ್ಟ್ರಕವಿ) ಈ ಮಂದಿರದ ಉದ್ಘಾಟನೆಯ ಸಮಯದಲ್ಲಿ ಕವನವನ್ನು ಬರೆದಿದ್ದರು. ಇದನ್ನು ಕಟ್ಟಡದ ಬೋರ್ಡ್‌ಗಳ ಮೇಲೆ ಬಿತ್ತರಿಸಲಾಗಿದೆ. ಭಾರತ್‌ ಮಾತಾ ಮಂದಿರವು ಅಖಂಡ ಭಾರತದ ನಕ್ಷಯನ್ನು ಬಿತ್ತರಿಸುತ್ತದೆ. ಇದರಲ್ಲಿ ಅಫ್ಘಾನಿಸ್ತಾನ,ಪಾಕಿಸ್ತಾನ ಬಲೂಚಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್‌ ಸೇರಿದಂತೆ ಶ್ರೀಲಂಕಾವನ್ನು ಭಾರತದ ಭಾಗ ಎಂದು ತೋರಿಸುತ್ತದೆ. ಇದನ್ನು ಮಕ್ರಾನಾ (ಈಗಿನ ಪಾಕಿಸ್ತಾನ) ನಗರದಿಂದ ತಂದ ಅಮೃತಶಿಲೆಯಲ್ಲಿ ಕೆತ್ತಲಾಗಿದೆ.

Bengaluru: ರಾಜ್ಯದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ, ನಡುರಸ್ತೆಯಲ್ಲೇ ಟ್ರಾಫಿಕ್‌ ಪೊಲೀಸ್ ಮೇಲೆ ಹಲ್ಲೆ!

ನಕ್ಷೆಯು 450 ಪರ್ವತ ಶ್ರೇಣಿಗಳು ಮತ್ತು ಶಿಖರಗಳು, ವಿಶಾಲವಾದ ಬಯಲು ಪ್ರದೇಶಗಳು, ಜಲಮೂಲಗಳು, ನದಿಗಳು, ಸಾಗರಗಳು ಮತ್ತು ಪ್ರಸ್ಥಭೂಮಿಗಳ ವಿವರವಾದ ವಿನ್ಯಾಸವನ್ನು ಹೊಂದಿದೆ. ನಕ್ಷೆಯು ಅದರ ಮೇಲೆ ಉಲ್ಲೇಖಿಸಲಾದ ಭೌಗೋಳಿಕ ಘಟಕಗಳ ಪ್ರಮಾಣ ಮತ್ತು ಆಳವನ್ನು ಸಹ ತೋರಿಸುತ್ತದೆ. ಭಾರತ್ ಮಾತಾ ಮಂದಿರದ ಒಳಗಿನ ನಕ್ಷೆಯಲ್ಲಿರುವ ಹಿಮಾಲಯದ ಹೆಗ್ಗುರುತುಗಳಾದ ಮೌಂಟ್‌ ಎವರೆಸ್ಟ್‌, ಕೆ2 ಶಿಖರಗಳನ್ನು ತೋರಿಸುವುದಲ್ಲದೆ, ಚೀನಾದ ಮಹಾಗೋಡೆಯನ್ನು ಚಿತ್ರಿಸಿದೆ. ಉಪ-ಖಂಡದ ಸುತ್ತಲಿನ ಸಾಗರಗಳಲ್ಲಿನ ಸಣ್ಣ ಪೆಕ್‌ಗಳು ಚಿಕ್ಕದಾದ ದ್ವೀಪಗಳನ್ನು ಸಹ ರೂಪಿಸುತ್ತವೆ, ಇದನ್ನು ಲೇಸರ್ ಟಾರ್ಚ್‌ನ ಸಹಾಯದಿಂದ ನೋಡಬಹುದಾಗಿದೆ. ನಕ್ಷೆಯಲ್ಲಿ ಚಿತ್ರಿಸಿದ ಜಲಮೂಲಗಳು ನೀರಿನಿಂದ ತುಂಬಿವೆ ಮತ್ತು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಭೂಪ್ರದೇಶಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ.

ಅರ್ಜೆಂಟ್‌ ಅಂದ್ಕೊಂಡು ವಂದೇ ಭಾರತ್‌ ಏರಿದ ವ್ಯಕ್ತಿಗೆ ಆಗಿದ್ದು 6 ಸಾವಿರ ರೂಪಾಯಿ ನಷ್ಟ!

ಭಾರತ ಮಾತಾ ಮಂದಿರವನ್ನು ದುರ್ಗಾ ಪ್ರಸಾದ್ ಖತ್ರಿ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ. ಇದು ದೇವಾಲಯದ ನಿರ್ಮಾಣದಲ್ಲಿ ತೊಡಗಿರುವ 30 ಕಾರ್ಮಿಕರು ಮತ್ತು 25 ಮೇಸ್ತ್ರಿಗಳ ಹೆಸರನ್ನು ಹೊಂದಿದೆ. ಕಟ್ಟಡದ ಒಂದು ಮೂಲೆಯಲ್ಲಿರುವ ಫಲಕದಲ್ಲಿ ಅವರ ಹೆಸರನ್ನು ನಮೂದಿಸಲಾಗಿದೆ.  ನಕ್ಷೆಯಲ್ಲಿನ ಒಂದು ಇಂಚಿನ ಪ್ರದೇಶವು ಭೂಮಿಯಲ್ಲಿ 6.40 ಮೈಲುಗಳು ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios