ವಿಶ್ವದ ಸುಂದರ ನಗರ ಬಿಟ್ಟು ಭಾರತಕ್ಕೆ ಬಂದು 'ಬದುಕು ಬದಲಿಸಿದ ದೇಶ'ಎಂದ ಡ್ಯಾನಿಶ್ ಯುವತಿ!

Synopsis
ಡೆನ್ಮಾರ್ಕ್ ಯುವತಿ ಆಸ್ಟ್ರಿಡ್ 10 ತಿಂಗಳು ಭಾರತದಲ್ಲಿ ಪ್ರವಾಸ ಮಾಡಿ, ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭಾರತದ ವೈವಿಧ್ಯಮಯ ಸಂಸ್ಕೃತಿ, ಪ್ರಕೃತಿ ಮತ್ತು ಜನರ ಆತಿಥ್ಯ ಅವರನ್ನು ಬೆರಗುಗೊಳಿಸಿದೆ. ಈ ಪ್ರವಾಸ ತಮ್ಮ ಜೀವನವನ್ನೇ ಬದಲಾಯಿಸಿದೆ ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಪ್ರವಾಸ ಬರುವವರ ಸಂಖ್ಯೆ ಸಾಕಷ್ಟಿದೆ. ಕಾರಣ ಭಾರತವು ಒಂದು ದೇಶ, ನೂರಾರು ಜಗತ್ತುಗಳನ್ನು ಒಳಗೊಂಡಿರುವ ದೇಶವಾಗಿದೆ. ಇಲ್ಲಿ ಪರಿಸರ, ಜನ-ಜೀವನ, ಸಂಸ್ಕೃತಿ, ಭಾಷೆ ಎಲ್ಲವೂ ವಿಭಿನ್ನವಾಗಿವೆ. ಇಷ್ಟೆಲ್ಲಾ ಇದ್ದರೂ ಕೆಲವು ಭಾರತೀಯರು ವಿದೇಶಕ್ಕೆ ಪ್ರವಾಸ ಹೋಗುತ್ತಾರೆ. ಆದರೆ, ಇಲ್ಲೊಬ್ಬ ಡೆನ್ಮಾರ್ಕ್ ಯುವತಿ ಭಾರತದ ಪ್ರವಾಸಕ್ಕೆ ಬಂದು 10 ತಿಂಗಳು ಇಲ್ಲೇ ವಾಸವಾಗಿದ್ದಾಳೆ. ಇದೀಗ ಭಾರತಕ್ಕೆ ಪ್ರವಾಸವನ್ನು ತನ್ನ ಜೀವನದ ಅತ್ಯಂತ ಸುಂದರ ಕ್ಷಣ. ಭಾರತ ತನ್ನ ಆತ್ಮದ ಕಣ್ಣುಗಳನ್ನು ತೆರೆಸಿದೆ ಎಂದು ಹೇಳಿಕೊಂಡಿದ್ದಾರೆ.
ಕೊಪನ್ಹೇಗನ್ನ ಸುಂದರ ನಗರದಲ್ಲಿ ಬದುಕುತ್ತಿದ್ದ ಆಸ್ಟ್ರಿಡ್ ಎಂಬ ಡೆನ್ಮಾರ್ಕ್ ಯುವತಿಗೆ ಎಲ್ಲವಿದ್ದರೂ ಬದುಕು ಶೂನ್ಯವಾಗಿ ಅನಿಸುತ್ತಿತ್ತು. ಕೆಲಸ, ಮನೆ, ಸ್ನೇಹಿತರು — ಎಲ್ಲವೂ ಇತ್ತು. ಆದರೂ, ಆ ಜೀವನದಲ್ಲಿ ಉತ್ಸಾಹವಿಲ್ಲದ ಪರಿಸ್ಥಿತಿಯಲ್ಲಿ, ಆಸ್ಟ್ರಿಡ್ ಹೊಸ ಬದಲಾವಣೆಯ ಹುಡುಕಾಟದಲ್ಲಿ ಭಾರತಕ್ಕೆ ಬಂದರು. ಮತ್ತು ಇದೊಂದು ಜೀವನವನ್ನೇ ಬದಲಾಯಿಸುವ ನಿರ್ಣಯವಾಯಿತು ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದೊಂದು ನನ್ನ ಜೀವನದ ಅತ್ಯುತ್ತಮ ನಿರ್ಣಯಗಳಲ್ಲಿ ಒಂದು: ಭಾರತದಲ್ಲಿ ಕಳೆದ 10 ತಿಂಗಳುಗಳು ಆಸ್ಟ್ರಿಡ್ನ ಜೀವನದ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಇಲ್ಲಿ ಅವರು ದೇಶದ ವೈವಿಧ್ಯತೆ, ಕಲೆ, ಸಂಸ್ಕೃತಿ, ಪ್ರಾಕೃತಿಕ ಸೌಂದರ್ಯ, ಮತ್ತು ಜನರ ಆತಿಥ್ಯದಲ್ಲಿ ಪ್ರೀತಿಯನ್ನು ಕಂಡಿದ್ದಾರೆ. ಭಾರತ ನನಗೆ ನನ್ನ ಆತ್ಮದ ಹೊಸ ದಿಕ್ಕನ್ನು ತೋರಿಸಿದೆ. ನನಗೆ ನನ್ನ ಕನಸುಗಳನ್ನು ಮತ್ತೆ ನೆನಪುಮಾಡಿಸಿದೆ ಮತ್ತು ನನ್ನ ಪ್ರಯಾಣದ ಮೇಲೆ ನಂಬಿಕೆ ಕೊಟ್ಟಿದೆ ಎಂದು ಆಸ್ಟ್ರಿಡ್ ಎಸ್ಮೆರಾಲ್ಡಾ ಎಂಬ ಯುವತಿ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: UPSC ಕೋಚಿಂಗ್ ಇಲ್ಲದೆ ಐಪಿಎಸ್ ಅಧಿಕಾರಿಯಾದ ಡ್ಯಾಶಿಂಗ್ ಲೇಡಿ ಅಂಶಿಕಾ ವರ್ಮಾ!
ಆಸ್ಟ್ರಿಡ್ ಎಸ್ಮೆರಾಲ್ಡಾ ಮುಂದಿನ ಒಂದು ತಿಂಗಳು ಭಾರತದಲ್ಲಿಯೇ ಉಳಿಯಲಿದ್ದು, ನಂತರ ಯುರೋಪ್ನಲ್ಲಿ ಬೇಸಿಗೆಯನ್ನು ನೆಮ್ಮದಿಯಿಂದ ಕಳೆಯಲು ವಾಪಸ್ ಹೋಗಲಿದ್ದಾರೆ. ಮುಂಗಾರು ಮುಗಿದ ಮೇಲೆ ಮತ್ತೆ ಭಾರತಕ್ಕೆ ಮರಳುವ ಯೋಚನೆ ಹೊಂದಿದ್ದಾರೆ. ಅವರು ಹಂಚಿಕೊಂಡಿರುವ ಮತ್ತೊಂದು ವಿಶೇಷ ಸಂಗತಿ ಏನೆಂದರೆ, ಮಹಿಳೆಯಾಗಿ ಭಾರತಕ್ಕೆ ಏಕೆ ಹೋಗಬಾರದು ಎಂದು ಹೇಳುವವರಿಗೆ, ತನ್ನ ಅನುಭವವನ್ನಾದರೂ ಶೇರ್ ಮಾಡಿ. ನನ್ನಂತೆಯೇ ಸುರಕ್ಷಿತವಾಗಿ ಭಾರತಕ್ಕೆ ಹೋಗಿ ಬರಬಹುದು ಎಂಬ ವಿಶ್ವಾಸವನ್ನೂ ಯುವತಿ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಹೊಸ ಅನುಭವಗಳು: ಭಾರತದಲ್ಲಿ ಆಸ್ಟ್ರಿಡ್ ಎಸ್ಮೆರಾಲ್ಡಾ ಯುವತಿ ವಿವಿಧ ಸ್ಥಳಗಳನ್ನು ಭೇಟಿಯಾಗಿ, ವಿವಿಧ ಸಂಸ್ಕೃತಿಗಳ ಅನುಭವಗಳನ್ನು ಪಡೆದುಕೊಂಡಿದ್ದಾರರ. ರಿಷಿಕೇಶ್ನ ಶಾಂತಿ, ಗೋವಾದ ಬೀಚ್ಗಳು ಮತ್ತು ಮುಂಬೈಯ ಉತ್ಸಾಹ ಅವರ ಪರಿವರ್ತನಾತ್ಮಕ ಪ್ರಯಾಣಕ್ಕೆ ಎಲ್ಲವೂ ಕೊಡುಗೆ ನೀಡಿವೆ. ಇವುಗಳು ಅವರ ಜೀವನದಲ್ಲಿ ಹೊಸ ಉತ್ಸಾಹವನ್ನು ತಂದಿವೆ. ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ, 'ಇಲ್ಲಿ ನಾನು ಜೀವಂತವಾಗಿದ್ದೇನೆ! ಭಾರತ ನನ್ನ ಕಣ್ಣುಗಳನ್ನು ಹೊಸ ರೀತಿಯಲ್ಲಿ ತೆರೆದಿದೆ. ನಾನು ಈ ದೇಶದ ವೈವಿಧ್ಯತೆ, ಸಂಸ್ಕೃತಿ ಮತ್ತು ಪ್ರಕೃತಿಗೆ ಪರವಶಳಾಗಿದ್ದೇನೆ' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮಿನಿ ಸ್ವಿಟ್ಜರ್ಲೆಂಡ್ ಪಹಲ್ಗಾಮ್ನ ಬೈಸರನ್ ಅನ್ನೇ ಉಗ್ರರು ಟಾರ್ಗೆಟ್ ಮಾಡಿದ್ಯಾಕೆ?
'ಭಾರತ ಪ್ರವಾಸ ನನ್ನ ಬದುಕನ್ನು ಬದಲಾಯಿಸಿತು. ನೀವು ಭಾರತಕ್ಕೆ ಹೋಗುವ ಯೋಚನೆಯಲ್ಲಿದ್ದರೆ –ಹೋಗಿ ಬನ್ನಿ! ಈ ನಾಡು ನಿಮ್ಮ ಹೃದಯವನ್ನೂ ಬದಲಾಯಿಸಬಹುದು' ಎಂದು ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ. ಆಸ್ಟ್ರಿಡ್ ಅವರ ಈ ಕಥೆ, ಜೀವನದಲ್ಲಿ ಹೊಸ ಅರ್ಥವನ್ನು ಹುಡುಕುವ ಎಲ್ಲರಿಗೂ ಪ್ರೇರಣೆಯಾಗಿದೆ.