11:25 PM (IST) Apr 13

Karnataka News Live 13th April: ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ, 500 ತಗೊಂಡು ಚಾ ಕುಡೀರಿ

ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವುದಾಗಿ ಗೆಳತಿ ಹೇಳಿದ್ದಾಳೆಂಬ ಕಾರಣಕ್ಕೆ, ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾನೆ. 500 ರೂಪಾಯಿ ನೋಟು ಇಟ್ಟು ಬರೆದ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story
11:06 PM (IST) Apr 13

Karnataka News Live 13th April: ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ!

Actor Vijay Raghavendra: ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಏನೇನೋ ವಿಚಾರಗಳು ಹರಿದಾಡುತ್ತಿರುತ್ತವೆ. ಲೈಕ್ಸ್‌, ಕಾಮೆಂಟ್ಸ್‌ಗೋಸ್ಕರ ಸತ್ಯಕ್ಕೆ ದೂರವಾದ ವಿಚಾರಗಳು ಪೋಸ್ಟ್‌ ಆಗುತ್ತಿರುತ್ತವೆ. ಈಗ ವಿಜಯ್‌ ರಾಘವೇಂದ್ರ ಎರಡನೇ ಮದುವೆ ವಿಚಾರದ ಬಗ್ಗೆ ಕೂಡ ಒಂದು ಪೋಸ್ಟ್‌ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?

Read Full Story
10:16 PM (IST) Apr 13

Karnataka News Live 13th April: ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ?

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಸೈಕೋ ಜಯಂತ್ ಮನೆ ಸೇರಿರುವ ಜಾನು ಸಂಪೂರ್ಣ ಬದಲಾಗಿದ್ದಾಳೆ. ಜಿರಳೆ ಸೇರಿಸಿದ ಹಾಲನ್ನು ಜಯಂತ್‌ಗೆ ಕುಡಿಸಿ, ಮನೆಯ ವಸ್ತುಗಳ ಸ್ಥಾನ ಬದಲಾಯಿಸಿ, ಇನ್ನು ಮುಂದೆ ತಾನು ಹೇಳಿದಂತೆ ಕೇಳಬೇಕು ಎಂದು ಎಚ್ಚರಿಕೆ ನೀಡುವ ಮೂಲಕ ಜಯಂತ್‌ಗೆ ತಿರುಗೇಟು ನೀಡುತ್ತಿದ್ದಾಳೆ.
Read Full Story
10:04 PM (IST) Apr 13

Karnataka News Live 13th April: 50 ವರ್ಷಕ್ಕಿಂತ ಮುಂಚೆ ಗಂಡ-ಹೆಂಡ್ತಿ ನಡುವೆ ದೈಹಿಕ ಸಂಬಂಧ ಕಡಿಮೆಯಾದ್ರೆ ಆಗೋ ಸಮಸ್ಯೆ ಒಂದಾ ಎರಡಾ?

Husband wife Relationship: ಗಂಡ-ಹೆಂಡತಿ ನಡುವೆ ಪ್ರೀತಿ ಕಡಿಮೆಯಾದರೆ, ಅದು ಒಟ್ಟಾರೆಯಾಗಿ ಅವರ ದಾಂಪತ್ಯದ ಮೇಲೂ ಪರಿಣಾಮ ಬೀರುತ್ತದೆ. ಒಂದು ವೇಳೆ ಅವರಿಬ್ಬರು ದೈಹಿಕವಾಗಿ ದೂರವಾದರೆ, ಅದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೆಲ್ಲಾ ಸಮಸ್ಯೆಗಳು ಬರಬಹುದು ಎಂಬುದು ನಿಮಗೆ ತಿಳಿದಿದೆಯೇ? 

Read Full Story
09:43 PM (IST) Apr 13

Karnataka News Live 13th April: ಮಂತ್ರಿ ಸ್ಥಾನಕ್ಕಾಗಿ ದೆಹಲಿ ಚಲೋ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ - ಸಂಸದ ಜಗದೀಶ ಶೆಟ್ಟರ್

ಹೈಕಮಾಂಡ್ ಮೇಲೆ ಒತ್ತಡ ಹಾಕಲು ದೆಹಲಿಗೆ ತೆರಳಬೇಕಿದ್ದ ಕಾಂಗ್ರೆಸ್ ಶಾಸಕರು ಮಂತ್ರಿ ಸ್ಥಾನಕ್ಕಾಗಿ ದೆಹಲಿ ಚಲೋ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

Read Full Story
08:39 PM (IST) Apr 13

Karnataka News Live 13th April: ಸರ್ಕಾರಿ ಶಾಲೆಗಳು ಅಮೃತ ಮಹೋತ್ಸವ ಆಚರಿಸಿಕೊಳ್ಳುವುದು ಸಂತಸದ ಸಂಗತಿ

ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಿಕೊಳ್ಳುವುದು ಸಂತಸದ ಸಂಗತಿ. ಸರ್ಕಾರಿ ಶಾಲೆಗಳು ಉಳಿದಾಗ ಮಾತ್ರ ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

Read Full Story
08:26 PM (IST) Apr 13

Karnataka News Live 13th April: ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಗಮನವಹಿಸಿ - ಅಧಿಕಾರಿಗಳಿಗೆ ವಿಜಯೇಂದ್ರ ಸೂಚನೆ

ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರು, ರೈತರು ವಿದ್ಯುತ್ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

Read Full Story
08:12 PM (IST) Apr 13

Karnataka News Live 13th April: ಸಹಕಾರ ಕ್ಷೇತ್ರ ರೈತರ ಬದುಕಿನ ಜೀವನಾಡಿಯಾಗಿದ್ದು, ಭ್ರಷ್ಟಾಚಾರಿಗಳು ನುಸುಳಬಾರದು - ಡಾ.ಕೆ.ಸುಧಾಕರ್

ಹೈನುಗಾರಿಕೆ ರೈತನ ಪ್ರಬಲ ಅಸ್ತ್ರವಾಗಿದೆ. ಕೃಷಿಯಿಂದಲೇ ಜೀವನ ಸಾಗಿಸುವ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

Read Full Story
07:57 PM (IST) Apr 13

Karnataka News Live 13th April: ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್​ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಎರಡು ಬೆಕ್ಕುಗಳ ಪ್ರೇಮ ಪ್ರಕರಣವು ಅವುಗಳ ಮಾಲೀಕರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಈ ಗಲಾಟೆಯು ಆ್ಯಸಿಡ್ ದಾಳಿಯ ಹಂತಕ್ಕೆ ತಲುಪಿ, ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ತಾಯಿ ಬೆಕ್ಕಿನಿಂದ ಮರಿಗಳನ್ನು ಬೇರ್ಪಡಿಸುವಲ್ಲಿ ಅಂತ್ಯಗೊಂಡಿದೆ.
Read Full Story
07:54 PM (IST) Apr 13

Karnataka News Live 13th April: ಸಿಇಟಿ ವಿಚಾರದಲ್ಲಿ ಮಹತ್ವದ ಅಪ್‌ಡೇಟ್, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಸೂಚನೆ

ಸಿಇಟಿ ವಿಚಾರದಲ್ಲಿ ಮಹತ್ವದ ಅಪ್‌ಡೇಟ್, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ. ಕೆಲ ವಿಚಾರಗಳಲ್ಲಿ ಗೊಂದಲ ಬೇಡ ಎಂದು ಪ್ರಾಧಿಕಾರ ಹೇಳಿದೆ. ವಿದ್ಯಾರ್ಥಿಗಳಿಗೆ ನೀಡಿದ ಸೂಚನೆ ಏನು?

Read Full Story
07:49 PM (IST) Apr 13

Karnataka News Live 13th April: ಗೊತ್ತಿಲ್ಲ ಅಲ್ವಾ ನಿಮ್ಗೆ? ಕನ್ನಡದ ಈ ಮೇರನಟರು 'ಸ್ತ್ರೀ' ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರ ನೋಡಿ!

ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟರು ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಕಥೆಗೆ ಪೂರಕವಾಗಿ ನಟಿಯರ ಬದಲು ನಟರೇ ನಟಿಸಬೇಕಾದ ಅನಿವಾರ್ಯತೆ ಎದುರಾದಾಗ, ನಿರ್ದೇಶಕರೇ ಅಂತಹ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆಗ ಆ ಚಿತ್ರದ ನಟರು ಸ್ಟಾರ್ ನಟರು, ಮೇರು ನಟರೇ ಆಗಿದ್ದರೂ ಸ್ತ್ರೀ ಪಾತ್ರ ಮಾಡಬೇಕಾಗುತ್ತದೆ.

Read Full Story
07:22 PM (IST) Apr 13

Karnataka News Live 13th April: ಹಾಸನ - ಪ್ರೀತಿಸಿದ ವಿವಾಹಿತೆ ಜೊತೆ ಓಡಿ ಹೋಗಿ ಕಾರಲ್ಲಿ ತಾಳಿ ಕಟ್ಟಿದ ಪ್ರಿಯಕರ! 8 ವರ್ಷದ ವಿವಾಹ ತ್ಯಜಿಸಿದ ಮಹಿಳೆ!

ಹಾಸನದಲ್ಲಿ ಎಂಟು ವರ್ಷಗಳ ವಿವಾಹಿತ ಮಹಿಳೆಯೊಬ್ಬಳು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಸಾಂತ್ವನ ಕೇಂದ್ರದಿಂದ ಬಂದ ಕೆಲವೇ ಸಮಯದಲ್ಲಿ ಆಕೆ ಪರಾರಿಯಾಗಿ, ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
Read Full Story
07:00 PM (IST) Apr 13

Karnataka News Live 13th April: ವಿದ್ಯಾರ್ಥಿಗಳ ಕನಸಿಗೆ ಫೀಸು ಕಂಟಕ, ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.7.5ರಷ್ಟು ಹೆಚ್ಚಳ!

ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಮತ್ತು ಆಡಳಿತ ಮಂಡಳಿ ಕೋಟಾದ ಸೀಟುಗಳ ಶುಲ್ಕವನ್ನು ಶೇ.7.5ರಷ್ಟು ಹೆಚ್ಚಿಸಲು ಸರ್ಕಾರ ಅನುಮೋದನೆ ನೀಡಿದೆ. 2026-27ನೇ ಸಾಲಿನಿಂದ ಜಾರಿಗೆ ಬರಲಿರುವ ಈ ನಿರ್ಧಾರದಿಂದ ಎಂಜಿನಿಯರಿಂಗ್ ಪ್ರವೇಶ ಮತ್ತಷ್ಟು ದುಬಾರಿಯಾಗಲಿದ್ದು, ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ. ಆದರೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
Read Full Story
06:50 PM (IST) Apr 13

Karnataka News Live 13th April: ಉಸ್ತುವಾರಿ ಸಚಿವರೆ ನಿಮ್ಮ ಮುಖವಾಡ ಕಳಚುತ್ತೇನೆ - ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

ಎಲ್ಲ ದಾಖಲೆಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕ ಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಎಚ್ಚರಿಕೆ ನೀಡಿದರು.

Read Full Story
06:34 PM (IST) Apr 13

Karnataka News Live 13th April: ವಿದೇಶಕ್ಕೆ ಹೋಗಿ ನೆಲೆಸಿರುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ನಟಿಯರಿವರು; ಯಾರು ಎಲ್ಲಿದ್ದಾರೆ ನೋಡಿ!

ಈ ನಟಿಯರಲ್ಲಿ ಅನೇಕರು ಈಗ ಸಿನಿಮಾಗಳಲ್ಲಿ ನಟನೆ ಮಾಡುತ್ತಿಲ್ಲ. ಈ ಮೊದಲು ಕನ್ನಡದ ಹಲವು ಸಿನಿಮಾಗಳಲ್ಲಿ ಈ ನಟಿಯರು ನಟಿಸಿದ್ದರು. ಆದರೆ, ತಮ್ಮತಮ್ಮ ಮದುವೆ ಬಳಿಕ ಈ ಎಲ್ಲಾ ನಟಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮತ್ತೆ ಭಾರತಕ್ಕೆ ವಾಪಸ್ ಕೂಡ ಆಗಿದ್ದಾರೆ. 

Read Full Story
06:29 PM (IST) Apr 13

Karnataka News Live 13th April: ಹರಿಹರ ಪೀಠದಲ್ಲಿ ಸಂಘರ್ಷ - ಉಚ್ಚಾಟನೆ ಬಳಿಕ ವಚನಾನಂದ ಸ್ವಾಮೀಜಿ ಮೊದಲ ರಿಯಾಕ್ಷನ್, ಮಠಕ್ಕೆ ರಾಜಕೀಯ ಮುಖಂಡರ ಭೇಟಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್, ಜಗದ್ಗುರು ವಚನಾನಂದ ಸ್ವಾಮೀಜಿಗಳನ್ನು ಪದಚ್ಯುತಿಗೊಳಿಸಿದೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ಸ್ವಾಮೀಜಿಗಳು ಆರೋಪಿಸಿದ್ದು, ಲೆಕ್ಕಪತ್ರ ಕೇಳಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ. ಈ ಘಟನೆಯಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story
06:21 PM (IST) Apr 13

Karnataka News Live 13th April: ಹೆಗಡೆ ಪುತ್ರನ ಪಾಸ್‌ಪೋರ್ಟ್‌ - ಬಡ ಮಕ್ಕಳ ಬಗ್ಗೆ ಕನಿಕರ ತೋರಿಸಿದ್ದಾರಾ? ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರ ಪುತ್ರನ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಡವರ ಮಕ್ಕಳನ್ನು ಗಲಾಟೆಗೆ ಪ್ರಚೋದಿಸಿ, ತಮ್ಮ ಮಕ್ಕಳನ್ನು ವಿದೇಶ ವ್ಯಾಸಂಗಕ್ಕೆ ಕಳುಹಿಸುವ ಬಿಜೆಪಿಯ ಇಬ್ಬಗೆ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ.
Read Full Story
05:57 PM (IST) Apr 13

Karnataka News Live 13th April: ಸೀಲಿಂಗ್ Vs ಟೇಬಲ್ ಫ್ಯಾನ್ - ವಿದ್ಯುತ್ ಬಿಲ್ ಉಳಿಸಲು ನಿಮ್ಮ ಮನೆಗೆ ಯಾವುದು ಬೆಸ್ಟ್?

ಸೀಲಿಂಗ್ ಫ್ಯಾನ್ ಮತ್ತು ಟೇಬಲ್ ಫ್ಯಾನ್‌ಗಳ ನಡುವಿನ ವ್ಯತ್ಯಾಸವೇನು? ಸೀಲಿಂಗ್ ಫ್ಯಾನ್ ಇಡೀ ಕೋಣೆಗೆ ಗಾಳಿ ನೀಡಿದರೆ, ಟೇಬಲ್ ಫ್ಯಾನ್ ಕಡಿಮೆ ವಿದ್ಯುತ್ ಬಳಸುತ್ತದೆ ಮತ್ತು ಇದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. 

Read Full Story
05:51 PM (IST) Apr 13

Karnataka News Live 13th April: ಬೆಂಗಳೂರು - ಸಿಗರೇಟ್ ಸೇದುತ್ತಿದ್ದ ಯುವತಿ ಮತ್ತು ಗೆಳೆಯರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಪುಂಡರ ಗುಂಪು!

ಬೆಂಗಳೂರಿನ ಕನಕನಗರದಲ್ಲಿ ಯುವತಿ ಸೇರಿದಂತೆ ಮೂವರ ಮೇಲೆ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಕ್ರೂರವಾಗಿ ಹಲ್ಲೆ ನಡೆಸಿದೆ. ನಶೆಯಲ್ಲಿದ್ದರೆನ್ನಲಾದ ಆರೋಪಿಗಳು ನಡೆಸಿದ ಈ ದೌರ್ಜನ್ಯದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ತನಿಖೆ ಕೈಗೊಂಡಿದ್ದಾರೆ.
Read Full Story
05:50 PM (IST) Apr 13

Karnataka News Live 13th April: ಭಾರತದ ನರ್ಸಿಂಗ್‌ಗೆ ಪ್ರಪಂಚದಾದ್ಯಂತ ಬೇಡಿಕೆ - ಸಚಿವ ದಿನೇಶ್‌ ಗುಂಡೂರಾವ್‌

ಭಾರತದ ನರ್ಸ್‌ಗಳಿಗೆ ಜಪಾನ್‌, ಯುರೋಪ್‌, ಮಧ್ಯಪ್ರಾಚ್ಯ ಸೇರಿ ಪ್ರಪಂಚದಾದ್ಯಂತ ಬೇಡಿಕೆಯಿದೆ. ವೃತ್ತಿಗೆ ಗೌರವವಿದೆ, ಗಾಜುಗಣ್ಣಿನ ಶಾಸಕ ಗಣೇಶ್‌ ಪ್ರಸಾದ್‌ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Read Full Story