11:39 PM (IST) Aug 21

Karnataka News Liveಯಶ್ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬೆಲೆ ಎಷ್ಟು? - ಯಾವ ನಗರದಲ್ಲಿ ಎಷ್ಟು ಹಣ?

Yash Toxic Ticket Price: ಸಿನಿಮಾ ಬಿಡುಗಡೆಗೆ ನಾಲ್ಕು ದಿನಗಳು ಇರುವಾಗಲೇ ಹೀಗೆ ಬಾಕ್ಸ್‌ ಅಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಯಶ್ ಅವರ ‘ಟಾಕ್ಸಿಕ್‌’ ಚಿತ್ರದ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ.

Read Full Story
10:51 PM (IST) Aug 21

Karnataka News Liveಕೆಂಪೇಗೌಡ ಬಸ್‌ ನಿಲ್ದಾಣವನ್ನು ಮೆಜೆಸ್ಟಿಕ್‌ ಎಂದು ಕರೆಯೋದೇಕೆ? ಇಲ್ಲಿದೆ ಈ ಹೆಸರಿನ ರೋಚಕ ಇತಿಹಾಸ!

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣವು 'ಮೆಜೆಸ್ಟಿಕ್' ಎಂದೇ ಜನಪ್ರಿಯವಾಗಿದೆ. ಹಿಂದೊಮ್ಮೆ ಇಲ್ಲಿನ 'ಮೆಜೆಸ್ಟಿಕ್ ಟಾಕೀಸ್' ಬಳಿ ಬಸ್ ಕಂಡಕ್ಟರ್‌ಗಳು ಕೂಗುತ್ತಿದ್ದ ಕೂಗೇ ಈ ಪ್ರದೇಶಕ್ಕೆ ಅಡ್ಡಹೆಸರಾಗಲು ಕಾರಣವಾಯಿತು.

Read Full Story
10:44 PM (IST) Aug 21

Karnataka News Liveಸಾಹುಕಾರ್ ಜಾನಕಿ ಜೊತೆಗಿನ ಆ ನೆನಪುಗಳು - ಜಯಮಾಲ, ಕೋಮಲ್ ಮಾತುಗಳಲ್ಲಿ ಹಿರಿಯ ನಟಿಯ ವ್ಯಕ್ತಿತ್ವ ಅನಾವರಣ

Sowcar Janaki Death: ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ನಿಧನರಾಗಿದ್ದಾರೆ.

Read Full Story
10:30 PM (IST) Aug 21

Karnataka News LiveCrop Insurance - ಬೆಳೆಯೇ ಇಲ್ಲದ ಜಮೀನಿಗೆ ವಿಮೆ ಹಣ - ₹38 ಕೋಟಿ ಫಸಲ್ ಭೀಮಾ ಹಗರಣಕ್ಕೆ ಸಿಐಡಿ ಎಂಟ್ರಿ!

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ₹38 ಕೋಟಿಗೂ ಅಧಿಕ ಮೊತ್ತದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಕ್ರಮದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ನಕಲಿ ದಾಖಲೆ ಸೃಷ್ಟಿಸಿ ವಿಮೆ ಹಣ ಪಡೆದ ಆರೋಪದ ಮೇಲೆ, ಅಧಿಕಾರಿಗಳು ಮುಧೋಳದಲ್ಲಿ ರೈತರನ್ನು ವಿಚಾರಣೆ ನಡೆಸುತ್ತಿದ್ದು, ಅಕ್ರಮದ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
Read Full Story
09:39 PM (IST) Aug 21

Karnataka News Live‘ಜೈಲಿಗೆ ಕಳಿಸ್ತೇನೆ’ - ದೇವಸ್ಥಾನ ಅನುದಾನ ದುರ್ಬಳಕೆ ಆರೋಪಕ್ಕೆ ಜನಾರ್ದನ ರೆಡ್ಡಿ ಖಡಕ್ ವಾರ್ನಿಂಗ್!

ಕಾಮಗಾರಿಗಳಿಗೆ ವೈಯಕ್ತಿಕವಾಗಿ ಸುಮಾರು ₹10 ಕೋಟಿ ಅನುದಾನ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ನೀಡಿರುವ ಅನುದಾನ ದುರ್ಬಳಕೆಯಾಗಲು ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

Read Full Story
09:26 PM (IST) Aug 21

Karnataka News LiveIndian Navy - ಸಮುದ್ರದ ಮಧ್ಯೆ 22 ಭಾರತೀಯರ ಜೀವಕ್ಕೆ ಕಂಟಕ! 2 ಹಡಗುಗಳನ್ನು ಕಡಲ್ಗಳ್ಳರಿಂದ ಹೈಜಾಕ್, ಮುಂದೇನಾಯ್ತು?

ಯೆಮೆನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರು ಎರಡು ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡಿದ್ದು, 22 ಭಾರತೀಯ ನಾವಿಕರನ್ನು ಅಪಹರಿಸಿದ್ದಾರೆ. ನೈರೋಬಿಯಲ್ಲಿರುವ ಭಾರತೀಯ ಹೈಕಮಿಷನ್, ಎಲ್ಲಾ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸಿದ್ದು, ಅವರ ಬಿಡುಗಡೆಗಾಗಿ ಸೊಮಾಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
Read Full Story
08:27 PM (IST) Aug 21

Karnataka News Liveವರಮಹಾಲಕ್ಷ್ಮಿ ಸಂಭ್ರಮ - ₹3 ಲಕ್ಷ ಮೌಲ್ಯದ ನೋಟುಗಳ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿ!

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯವನ್ನು ಸುಮಾರು ₹3 ಲಕ್ಷ ಮೌಲ್ಯದ ನೂತನ ನೋಟುಗಳು ಮತ್ತು ನಾಣ್ಯಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಈ 'ಧನಲಕ್ಷ್ಮಿ' ಸ್ವರೂಪದ ದೇವಿಯ ದರ್ಶನ ಪಡೆಯಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
Read Full Story
08:03 PM (IST) Aug 21

Karnataka News Liveಕರಾವಳಿ ಕರ್ನಾಟಕದ ಬಹುದಿನದ ಬೇಡಿಕೆ ನನಸು - ಕೇರಳ ವಶದಲ್ಲಿದ್ದ ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ!

ದಶಕಗಳ ಬೇಡಿಕೆಯಂತೆ, ಮಂಗಳೂರು ರೈಲ್ವೇ ಪ್ರದೇಶವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಿ ಕೇಂದ್ರ ರೈಲ್ವೇ ಮಂಡಳಿ ಆದೇಶಿಸಿದೆ. 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರದಿಂದ ಕರಾವಳಿ ಭಾಗದಲ್ಲಿ ರೈಲ್ವೇ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.

Read Full Story
07:38 PM (IST) Aug 21

Karnataka News Liveರಾಜ್‌ಕುಮಾರ್ ಜೊತೆ ನಾಯಕಿ, ಪುನೀತ್ ಜೊತೆ ಅಜ್ಜಿ - ಸಾಹುಕಾರ್ ಜಾನಕಿ ಸಿನಿ ಜರ್ನಿಯ ವಿಶೇಷತೆಯೇನು?

Sowcar Janaki Death: ದಕ್ಷಿಣ ಭಾರತದ ಚಿತ್ರರಂಗದ ಹಿರಿಯ ಹಾಗೂ ದಿಗ್ಗಜ ನಟಿಯರಲ್ಲಿ ಒಬ್ಬರಾದ ಸಾಹುಕಾರ್ ಜಾನಕಿ ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

Read Full Story
07:19 PM (IST) Aug 21

Karnataka News LiveChandra Grahan on Raksha Bandhan 2026 - ರಕ್ಷಾಬಂಧನಕ್ಕೆ ಚಂದ್ರಗ್ರಹಣದ ಭೀತಿ; ರಾಖಿ ಕಟ್ಟಲು ಶುಭ ಸಮಯ ಯಾವುದು? ಸೂತಕ ಕಾಲ ಎಷ್ಟೊತ್ತಿಗೆ ಶುರು? ಇಲ್ಲಿದೆ ವಿವರ!

ಆಗಸ್ಟ್ 28ರಂದು ರಕ್ಷಾಬಂಧನ ಆಚರಿಸಲಾಗುತ್ತಿದೆ. ವಿಶೇಷವೆಂದರೆ, ಇದೇ ದಿನ ವರ್ಷದ ಕೊನೆಯ ಚಂದ್ರಗ್ರಹಣವೂ ಸಂಭವಿಸುತ್ತಿದೆ. ಕುಂಭ ರಾಶಿ ಮತ್ತು ಶತಭಿಷ ನಕ್ಷತ್ರದಲ್ಲಿ ಸಂಭವಿಸುವ ಈ ಗ್ರಹಣವು ರಕ್ಷಾಬಂಧನದ ಆಚರಣೆ ಮೇಲೆ ಪರಿಣಾಮ ಬೀರಲಿದೆಯೇ, ರಾಖಿ ಕಟ್ಟಲು ಸೂಕ್ತ ಸಮಯ ಯಾವುದು ಎಂಬ ಗೊಂದಲ ಅನೇಕರಲ್ಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
06:53 PM (IST) Aug 21

Karnataka News Liveಹೀರೋ ಜೊತೆ ಬೆಡ್‌ರೂಮ್‌ನಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ನಟಿ ಮಾಧುರಿ ರಾಥೋಡ್‌ ಹಳೇ ಹೇಳಿಕೆ ವೈರಲ್‌!

ತೆಲಂಗಾಣದ ಫೋಕ್‌ ಡಾನ್ಸರ್‌ ಮಾಧುರಿ ರಾಥೋಡ್, ನಟ ಈಶ್ವರ್‌ ಸಾಯಿ ಜೊತೆಗಿನ ಅಕ್ರಮ ಸಂಬಂಧದ ವಿವಾದದಿಂದ ಸುದ್ದಿಯಲ್ಲಿದ್ದಾರೆ. ಟಿವಿ ನೋಡಿ ಡ್ಯಾನ್ಸ್ ಕಲಿತು ಸೋಶಿಯಲ್ ಮೀಡಿಯಾ ಸ್ಟಾರ್ ಆದ ಅವರ ಪಯಣ, ಯಶಸ್ಸು ಮತ್ತು ವಿವಾದದ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.
Read Full Story
06:38 PM (IST) Aug 21

Karnataka News Liveಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 1ರಿಂದ ಬದಲಾಗಲಿದೆ UDF ದರ!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, 2026ರಿಂದ ನಿರ್ಗಮಿಸುವ ಪ್ರಯಾಣಿಕರ ಶುಲ್ಕ ಕಡಿತಗೊಳ್ಳಲಿದೆ. ಆದರೆ, ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೂ ಬಳಕೆದಾರ ಅಭಿವೃದ್ಧಿ ಶುಲ್ಕ (UDF) ವಿಧಿಸಲು ನಿರ್ಧರಿಸಲಾಗಿದೆ.
Read Full Story
06:38 PM (IST) Aug 21

Karnataka News Live'ಟಾಕ್ಸಿಕ್‌' ಸಿನಿಮಾಗೆ ಟಿಕೆಟ್‌ ಬುಕ್‌ ಮಾಡ್ತಿದ್ದೀರಾ? ಹಾಗಿದ್ರೆ ಹುಶಾರ್.. ಈ ಒಂದು ವಿಚಾರ ನಿಮಗೆ ಗೊತ್ತಿರಲಿ!

'ಟಾಕ್ಸಿಕ್' ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳೆಲ್ಲಾ 'ಹೌಸ್‌ಫುಲ್' ಬೋರ್ಡ್ ನೇತುಹಾಕಿವೆ. ಆದ್ರೆ, 'ಟಾಕ್ಸಿಕ್‌' ಸಿನಿಮಾಗೆ ಟಿಕೆಟ್‌ ಬುಕ್‌ ಮಾಡುವವರೇ, ಹುಶಾರು.. ಈ ಒಂದು ವಿಚಾರ ನಿಮಗೆ ಗೊತ್ತಿರಲಿ!

Read Full Story
05:29 PM (IST) Aug 21

Karnataka News Live‘ಅಣ್ಣಯ್ಯ’ ಖ್ಯಾತಿಯ ಪರಶು ಈಗ ಹೀರೋ - ಹೊಸ ಸಿನಿಮಾ ಕಥೆ ಕೇಳಿದ್ರೆ ಥ್ರಿಲ್ ಆಗ್ತೀರಾ!

Wallposter Movie: ಚಿರಂಜೀವಿ ಅವರಿಗೆ ಕಿರುತೆರೆಯಲ್ಲಿ ‘ಅಣ್ಣಯ್ಯ’ ಧಾರಾವಾಹಿಯ ಪರಶು ಪಾತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ. ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
05:29 PM (IST) Aug 21

Karnataka News LiveBikes - ಬಿಗ್‌ ಆಫರ್‌; ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಒಮ್ಮೆ ನೋಡಿ! 65 ಕಿಮೀ ಮೈಲೇಜ್, ಬೆಲೆ ಮಾತ್ರ ₹65,642!

ದಿನೇ ದಿನೇ ಏರುತ್ತಿರುವ ಪೆಟ್ರೋಲ್ ದರಕ್ಕೆ ಪರಿಹಾರವಾಗಿ, ದೈನಂದಿನ ಪ್ರಯಾಣಕ್ಕೆ ಅತ್ಯುತ್ತಮ ಮೈಲೇಜ್, ಕೈಗೆಟುಕುವ ಬೆಲೆ ಮತ್ತು ಉತ್ತಮ ಕಾರ್ಯಕ್ಷಮತೆ ನೀಡುವ ಹೋಂಡಾ ಕಂಪನಿಯ ನಾಲ್ಕು ಜನಪ್ರಿಯ ಬೈಕ್‌ಗಳಾದ ಶೈನ್ 100, ಲಿವೊ, ಶೈನ್ 125, ಮತ್ತು SP 125 ಗಳ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
Read Full Story
05:15 PM (IST) Aug 21

Karnataka News Liveಸ್ವಂತ ಮನೆ ಬೆನ್ನಲ್ಲೇ ಹೊಸ ಕಾರಿನ ಒಡತಿಯಾದ 'ಗೆಳತಿ ಗಾಯತ್ರಿ' ನಟಿ ಕೃತಿಕಾ ರವೀಂದ್ರ - ಕಾರಿನ ವಿಶೇಷತೆಗಳೇನು?

'ಗೆಳತಿ ಗಾಯತ್ರಿ' ಧಾರಾವಾಹಿ ಖ್ಯಾತಿಯ ನಟಿ ಕೃತ್ತಿಕಾ ರವೀಂದ್ರ, 13 ವರ್ಷಗಳ ಪರಿಶ್ರಮದ ನಂತರ ತಮ್ಮ ಮೊದಲ ಹೊಸ ಕಾರನ್ನು ಖರೀದಿಸಿದ್ದಾರೆ. ಟಾಟಾ ನೆಕ್ಸಾನ್ ಒಡತಿಯಾದ ಅವರು, ಈ ಯಶಸ್ಸನ್ನು ತಮ್ಮ ತಾಯಿಯೊಂದಿಗೆ ಸಂಭ್ರಮಿಸಿ, ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Read Full Story
05:01 PM (IST) Aug 21

Karnataka News Liveಫ್ಯಾನ್ಸ್‌ಗಾಗಿ ಡಾಲಿ ಧನಂಜಯ್ 4 ಗಂಟೆ ಸ್ಪೆಷಲ್ ಟೈಮ್ - ಹುಟ್ಟುಹಬ್ಬದ ದಿನ ಎಲ್ಲಿರ್ತಾರೆ ಗೊತ್ತಾ?

ಡಾಲಿ ಧನಂಜಯ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 23ರಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟ, ಈ ಬಾರಿ ತಮ್ಮ ಅಭಿಮಾನಿಗಳ ಜೊತೆ ವಿಶೇಷವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಲು ನಿರ್ಧರಿಸಿದ್ದಾರೆ.

Read Full Story
04:45 PM (IST) Aug 21

Karnataka News LiveCricket - 12,472 ರನ್‌ಗಳ ದಾಖಲೆ! 15 ಬ್ಯಾಟ್ಸ್‌ಮನ್‌ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿಶ್ವದ ಏಕೈಕ ಓಪನಿಂಗ್ ಬ್ಯಾಟ್ಸಮನ್!

ಆ ಆರಂಭಿಕ ಬ್ಯಾಟ್ಸ್‌ಮನ್‌ 12,472 ಟೆಸ್ಟ್ ರನ್‌ಗಳ ದಾಖಲೆ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 15 ವಿವಿಧ ಆಟಗಾರರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿಶಿಷ್ಟ ದಾಖಲೆಯನ್ನು ಹೊಂದಿದ್ದು, ಇದು ಅವರ ಸ್ಥಿರತೆಯನ್ನು ತೋರಿಸುತ್ತದೆ. ಆ ಪ್ರತಿಭೆ ಯಾರು ಗೊತ್ತಾ?

Read Full Story
04:21 PM (IST) Aug 21

Karnataka News Live‘ಮೊದಲಿನ ಖುಷಿ ಸಿಗುತ್ತಿರಲಿಲ್ಲ’ - 20 ವರ್ಷಗಳ ಬಳಿಕ ರಂಗಭೂಮಿಗೆ ರಾಜೇಶ್ ನಟರಂಗ

ಅವತ್ಯಾಕೋ ಅಷ್ಟೊಂದು ತೃಪ್ತಿ, ನೆಮ್ಮದಿ ಸಿಗುತ್ತಿತ್ತು, ಇವತ್ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಹುಡುಕಾಟದ ಭಾಗವಾಗಿ ಮತ್ತೆ ರಂಗಭೂಮಿಗೆ ಮರಳುತ್ತಿದ್ದೇನೆ. - ಹೀಗೆ ಹೇಳಿದ್ದು ರಾಜೇಶ್ ನಟರಂಗ.

Read Full Story
04:08 PM (IST) Aug 21

Karnataka News Liveಯಶ್ ಮುಂದಿನ ಸಿನಿಮಾದಲ್ಲಿ ಈ ತಮಿಳು ನಿರ್ದೇಶಕ? ಕಥೆ ಕೇಳಿ ರಾಕಿಂಗ್ ಸ್ಟಾರ್ ಫಿದಾ!

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚರ್ಚೆ ಶುರುವಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಪಿ.ಎಸ್. ಮಿತ್ರನ್ ಅವರು ಯಶ್‌ಗೆ ಕಥೆಯೊಂದನ್ನು ಹೇಳಿದ್ದಾರೆ.

Read Full Story