09:50 PM (IST) Jun 08

Karnataka News Live 8 June 2026ಪ್ರಯಾಣಿಕರಿಗೆ ಶಾಕ್, ನಾಳೆಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ, ಶೇ.8ರ ವರೆಗೆ ಬೆಲೆ ಪರಿಷ್ಕರಣೆ

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ನಾಳೆಯಿಂದ ಖಾಸಗಿ ಬಸ್ ದರ ಏರಿಕೆಯಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ಖಾಸಗಿ ಬಸ್ ಆಪರೇಟರ್ಸ್ ಪ್ರಯಾಣ ದರ ಏರಿಕೆ ಮಾಡುತ್ತಿದ್ದಾರೆ.

Read Full Story
09:10 PM (IST) Jun 08

Karnataka News Live 8 June 2026ಬಳ್ಳಾರಿಯಲ್ಲಿ ಯುವಕನ ಭೀಕರ ಹ*ತ್ಯೆ - ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಯುವಕನನ್ನು ಹ*ತ್ಯೆಗೈದು ದುಷ್ಕರ್ಮಿಗಳು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಮೃತ ದೇಹವನ್ನು ಬರೋಬ್ಬರಿ 13 ಕಿಲೋಮೀಟರ್ ದೂರದವರೆಗೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

Read Full Story
07:36 PM (IST) Jun 08

Karnataka News Live 8 June 2026ಬೆಂಗಳೂರಿನ ದೇವನಹಳ್ಳಿಯಲ್ಲಿ ಎಮ್ವಿ ಗ್ರೂಪ್ ಮೆಗಾ ಪ್ಲಾನ್ - ಸೋಲಾರ್ ಗಿಗಾಫ್ಯಾಕ್ಟರಿಗಾಗಿ ₹5,500 ಕೋಟಿ ಭಾರಿ ಹೂಡಿಕೆ!

ಬೆಂಗಳೂರು ಮೂಲದ ಎಮ್ವಿ ಗ್ರೂಪ್, ದೇವನಹಳ್ಳಿಯಲ್ಲಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ 'ಗಿಗಾಫ್ಯಾಕ್ಟರಿ' ಸ್ಥಾಪಿಸುತ್ತಿದೆ. ಈ ಯೋಜನೆಯು ಕಂಪನಿಯ ಸೋಲಾರ್ ಮಾಡ್ಯೂಲ್ ಮತ್ತು ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲಿದೆ.

Read Full Story
07:14 PM (IST) Jun 08

Karnataka News Live 8 June 2026ಸಂಪ್‌ಗೆ ಬಿದ್ದು 18 ತಿಂಗಳ ಮಗು ಸಾವು - ಮೃತದೇಹವನ್ನು ಉಪ್ಪಿನಲ್ಲಿಟ್ಟು, ಕುರಾನ್‌ ಪಠಿಸಿ ಬದುಕಿಸಲು ಯತ್ನಿಸಿದ ಪೋಷಕರು!

ಬಾಗಲಕೋಟೆಯ ನವನಗರದಲ್ಲಿ 18 ತಿಂಗಳ ಹೆಣ್ಣು ಮಗುವೊಂದು ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದೆ. ಆದರೆ, ಮಗುವನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ, ಪೋಷಕರು ಆಕೆಯ ದೇಹವನ್ನು ಗಂಟೆಗಟ್ಟಲೆ ಉಪ್ಪಿನಲ್ಲಿ ಮುಳುಗಿಸಿಟ್ಟು ವಿಫಲ ಪ್ರಯತ್ನ ನಡೆಸಿದ ದಾರುಣ ಘಟನೆ ನಡೆದಿದೆ.
Read Full Story
06:41 PM (IST) Jun 08

Karnataka News Live 8 June 2026ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ, ಮಹತ್ವದ ಹೆಜ್ಜೆಗೆ ಸಕಾರಾತ್ಮಕ ಫಲಿತಾಂಶ!

ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC), ರೋಗಿಗಳೊಂದಿಗೆ ಉತ್ತಮ ಸಂವಹನ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಕಡ್ಡಾಯಗೊಳಿಸಿದೆ. ಕಳೆದ 10-15 ವರ್ಷಗಳಿಂದಲೇ ಜಾರಿಯಲ್ಲಿರುವ ಈ ನಿಯಮದ ಅಡಿಯಲ್ಲಿ, ಹೊರರಾಜ್ಯದ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದಲೇ ವ್ಯವಸ್ಥಿತ ಭಾಷಾ ತರಬೇತಿ ನೀಡಲಾಗುತ್ತಿದ್ದು, ಇದು ಅತ್ಯಂತ ಸಕಾರಾತ್ಮಕ ಫಲಿತಾಂಶ ನೀಡಿದೆ.
Read Full Story
06:24 PM (IST) Jun 08

Karnataka News Live 8 June 2026ಈ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆ - ಜಿಲ್ಲಾಧಿಕಾರಿ ಸ್ಪಷ್ಟನೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಮುಂದಿನ ಮೂರು ದಿನಗಳವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ..

Read Full Story
06:15 PM (IST) Jun 08

Karnataka News Live 8 June 2026ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ ಏನೂ ಬೇಡ, ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರೆಯುವೆ - ರಾಮಲಿಂಗಾರೆಡ್ಡಿ ಯೂ ಟರ್ನ್

ಈ ಹಿಂದೆ ಖಾತೆ ಹಂಚಿಕೆಯಿಂದ ಮುನಿಸಿಕೊಂಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ, ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ತಮಗೆ ನೀಡಲಾದ ಜಲಸಂಪನ್ಮೂಲ ಇಲಾಖೆಯಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದು, ಬೆಂಗಳೂರು ಉಸ್ತುವಾರಿ ಸೇರಿದಂತೆ ಬೇರೆ ಯಾವುದೇ ಖಾತೆಯೂ ಬೇಡವೆಂದು ಖಡಾಖಂಡಿತವಾಗಿ ಹೇಳಿದ್ದಾರೆ.

Read Full Story
05:58 PM (IST) Jun 08

Karnataka News Live 8 June 2026ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ - ಧಾರವಾಡದ ಯುವಕರ ಐತಿಹಾಸಿಕ ಸಾಧನೆ

ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.

Read Full Story
05:27 PM (IST) Jun 08

Karnataka News Live 8 June 2026ಡಿಕೆಶಿ ಎರಡು ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ - ಸಿಎಂ ಪರ ಆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Read Full Story
05:14 PM (IST) Jun 08

Karnataka News Live 8 June 2026ಮುಡಾ ಹಗರಣ - ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ನುಡಿ, ವಿಚಾರಣೆ ಜುಲೈಗೆ ಮುಂದೂಡಿಕೆ

ಮುಡಾ ಭೂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ ಮೂರನೇ ವಾರಕ್ಕೆ ಮುಂದೂಡಿದೆ. ವಿಚಾರಣೆಯನ್ನು ಮತ್ತಷ್ಟು ಮುಂದೂಡುವಂತೆ ಸಿದ್ದರಾಮಯ್ಯ ಪರ ವಕೀಲರು ಕೋರಿದಾಗ, ನ್ಯಾಯಪೀಠವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.
Read Full Story
04:44 PM (IST) Jun 08

Karnataka News Live 8 June 2026'ಸಂತೂರ್‌ ಸೋಪ್‌..' ಅಂದಿದ್ದಕ್ಕೆ ವರ್ತೂರ್‌ ಸಂತೋಷ್‌ ಕ್ಷಮೆ ಕೇಳಿದ ರಕ್ಷಿತಾ, ಆಕೆಯ ಮನಸ್ಸು ಬಂಗಾರ ಎಂದ ನೆಟ್ಟಿಗರು!

ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ, ವರ್ತೂರು ಸಂತೋಷ್ ಅವರ ಹಸುವಿನ ಸೀಮಂತ ಕಾರ್ಯಕ್ರಮದಲ್ಲಿ, ಈ ಹಿಂದೆ ಅವರನ್ನು 'ಸಂತೂರ್' ಎಂದು ಕರೆದಿದ್ದಕ್ಕೆ ವೇದಿಕೆಯಲ್ಲೇ ಕ್ಷಮೆಯಾಚಿಸಿದರು. ರಕ್ಷಿತಾ ಅವರ ಈ ಮುಗ್ದ ನಡೆ ಮತ್ತು ವಿನಯವಂತಿಕೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Read Full Story
04:40 PM (IST) Jun 08

Karnataka News Live 8 June 2026ನಾಲ್ಕು ಗೋಡೆಗಳೊಳಗೆ ದಂಪತಿಯ ಜಾತಿ ನಿಂದನೆ, ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸದು - ಹೈಕೋರ್ಟ್

ಮನೆಯ ನಾಲ್ಕು ಗೋಡೆಗಳ ಒಳಗೆ ಪತಿ-ಪತ್ನಿ ನಡುವೆ ನಡೆಯುವ ಜಾತಿ ನಿಂದನೆಯು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ಕೃತ್ಯವು ಸಾರ್ವಜನಿಕರ ದೃಷ್ಟಿಗೆ ಬೀಳುವ ಸ್ಥಳದಲ್ಲಿ ನಡೆದರೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Read Full Story
04:26 PM (IST) Jun 08

Karnataka News Live 8 June 2026ಕರ್ನಾಟಕದಲ್ಲಿ ಮುಂಗಾರು ಅಬ್ಬರ - ಕರಾವಳಿಗೆ ರೆಡ್ ಅಲರ್ಟ್, ಬೆಂಗಳೂರು ಸೇರಿ ಹಲವೆಡೆ 7 ದಿನ ಭಾರೀ ಮಳೆ ಎಚ್ಚರಿಕೆ!

ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
04:19 PM (IST) Jun 08

Karnataka News Live 8 June 2026ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ - ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೂ ಜಲಕಂಟಕ, ಆತ್ಮಲಿಂಗ ಸ್ಪರ್ಶ ದರ್ಶನ ಸ್ಥಗಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ, ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗುವ ಸಾಧ್ಯತೆಯಿಂದ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Read Full Story
04:07 PM (IST) Jun 08

Karnataka News Live 8 June 2026ವರದಕ್ಷಿಣೆ, ಟಾರ್ಚರ್, ಅನುಮಾನ - ಪವಿತ್ರಾ ಲೋಕೇಶ್ ಮೊದಲ ಮದುವೆಯ ರಹಸ್ಯ ಬಿಚ್ಚಿಟ್ಟ ತಾಯಿ!

ನಟಿ ಪವಿತ್ರಾ ಲೋಕೇಶ್ ಅವರ ತಾಯಿ ಪಾರ್ವತಿ ಲೋಕೇಶ್, ತಮ್ಮ ಮಗಳ ಮೊದಲ ಮದುವೆಯ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪವಿತ್ರಾಳ ಮೊದಲ ಮದುವೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ನಡೆದಿತ್ತು ಮತ್ತು ಅದು ಕೇವಲ ಎರಡು ತಿಂಗಳಲ್ಲೇ ಮುರಿದುಬಿದ್ದಿತ್ತು ಎಂದು ಅವರು ತಿಳಿಸಿದ್ದಾರೆ.

Read Full Story
03:58 PM (IST) Jun 08

Karnataka News Live 8 June 2026ಜೈಲಿನಿಂದ Darshan Thoogudeepa ರಿಲೀಸ್‌ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!

Actor Darshan Thoogudeepa: ನಟ ದರ್ಶನ್‌ ತೂಗುದೀಪ ಅವರು ಜೈಲಿನಲ್ಲಿದ್ದಾರೆ. ಈಗ ಕನಕಪುರದ ಕುರುಬರಹಳ್ಳಿಗೆ ಸಿಎಂ ಡಿಕೆ ಶಿವಕುಮಾರ್‌ ಭೇಟಿ ನೀಡಿದ್ದರು. ಆ ವೇಣೆ ದರ್ಶನ್‌ ಅಭಿಮಾನಿಗಳು ‘ಡಿ ಬಾಸ್’‌, ‘ಡಿ ಬಾಸ್’‌ ಎಂದು ಕೂಗಿ, ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
01:36 PM (IST) Jun 08

Karnataka News Live 8 June 2026ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚರ್ಚೆಯೇ ಆಗಿಲ್ಲ, ಸುಮಲತಾಗೆ ಮುಂದೆ ಒಳ್ಳೆಯ ಸ್ಥಾನಮಾನ - ವಿಜಯೇಂದ್ರ

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿ ಆಯ್ಕೆಯು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಸ್ಪರ್ಧೆ ಹಾಗೂ ಸುಮಲತಾ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

Read Full Story
01:18 PM (IST) Jun 08

Karnataka News Live 8 June 2026ನಾನು ಮೂರು ವಿಷಯಗಳಲ್ಲಿ ಸಿಕ್ಕಾಪಟ್ಟೆ ವೀಕ್; ಬಿಗ್‌ಬಾಸ್‌ಗೆ ಹೋಗಲ್ಲ ಎಂದ ಜಿಮ್ ಸೀನ

ಕನ್ನಡ ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಗಳ ಲಿಸ್ಟ್‌ನಲ್ಲಿ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ಸುಷ್ಮಿತ್ ಜೈನ್ ಹೆಸರು ಕೇಳಿಬಂದಿದೆ. ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಮೂರು ಕಾರಣಗಳಿಂದ ಶೋಗೆ ಹೋಗುವುದಿಲ್ಲ ಎಂದಿದ್ದಾರೆ. 

Read Full Story
01:13 PM (IST) Jun 08

Karnataka News Live 8 June 2026ಬೆಂಗಳೂರು ಯುವಕನಿಂದ ₹35 ಲಕ್ಷ ದೋಚಿದ ಮ್ಯಾಟ್ರಿಮೋನಿಯಲ್ ಮಾಯಾಂಗನೆ! ಸೈಬರ್ ಠಾಣೆಯಲ್ಲಿ ಲಕ್ಷ್ಮಿ ವಿರುದ್ದ ದೂರು

ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬನಿಗೆ ಹೂಡಿಕೆಯ ಆಮಿಷವೊಡ್ಡಿದ್ದಾಳೆ. ಆಕೆಯ ಮಾತನ್ನು ನಂಬಿ ಹಂತ ಹಂತವಾಗಿ ₹35 ಲಕ್ಷ ಹೂಡಿಕೆ ಮಾಡಿದ ಯುವಕ, ಇದೀಗ ಹಣ ಕಳೆದುಕೊಂಡು ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
Read Full Story
12:16 PM (IST) Jun 08

Karnataka News Live 8 June 2026ಅನೈತಿಕತೆಗೆ ಅಡ್ಡಿಯಾಗಿದ್ದ 5 ವರ್ಷದ ಮಗು ಕೊಂದ ತಾಯಿ -ಪ್ರಿಯಕರ, ಕೊಲೆಯಾದ ಬಳಿಕ ಬೆಂಗಳೂರು ದೇವಸ್ಥಾನಕ್ಕೆ ಭೇಟಿ!

ಸ್ವಚ್ಛಂದ ಜೀವನಕ್ಕೆ ಅಡ್ಡಿ ಎಂದು ಪ್ರಿಯಕರನೊಂದಿಗೆ ಸೇರಿ ಐದು ವರ್ಷದ ಮಗಳನ್ನು ತಾಯಿಯೇ ಹತ್ಯೆ ಮಾಡಿದ್ದಾಳೆ. ಮಗು ಮೃತಪಟ್ಟು 15 ದಿನಗಳಲ್ಲೇ, ಈ ಜೋಡಿ ಮಲ್ಲೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಂದೆಯ ದೂರಿನ ಮೇರೆಗೆ ಪ್ರಿಯಕರನನ್ನು ಬಂಧಿಸಲಾಗಿದೆ, ತಾಯಿ ಪರಾರಿಯಾಗಿದ್ದಾಳೆ.
Read Full Story