Kidney Health: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗೆ ಯಾವುದೇ ರೀತಿಯ ಹಾನಿಯಾದರೂ ಅದು ತಡವಾಗಿ ತಿಳಿಯುತ್ತದೆ. ಇದರಿಂದ ರೋಗವು ಗಂಭೀರ ಸ್ವರೂಪ ಪಡೆದು, ಹೆಚ್ಚಿನ ಜಟಿಲತೆಗೆ ಕಾರಣವಾಗಬಹುದು.
- Home
- News
- State
- Karnataka News Live: Kidney Health - ಈ ಅಭ್ಯಾಸಗಳು ನಿಮ್ಮ ಕಿಡ್ನಿಯನ್ನು ಹಾಳುಮಾಡಬಹುದು, ಎಚ್ಚರ!
Karnataka News Live: Kidney Health - ಈ ಅಭ್ಯಾಸಗಳು ನಿಮ್ಮ ಕಿಡ್ನಿಯನ್ನು ಹಾಳುಮಾಡಬಹುದು, ಎಚ್ಚರ!

ಮೈಸೂರು: ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯವಾಯಿತು? ಎಂದು ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಎಚ್.ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾನು ಕೂಡ ಶಿಕ್ಷಣ ಸಚಿವನಾಗಿದ್ದವನು. ಇಂಟರ್ನಲ್ ಮಾರ್ಕ್ಸ್ 20ಕ್ಕೆ 20 ಕೊಡುತ್ತಾರೆ. ಇನ್ನು ಉಳಿದ 80 ಮಾರ್ಕ್ಸ್ನಲ್ಲಿ 13 ನಂಬರ್ ತೆಗೆದರೆ ಪಾಸ್. ಈ ರೀತಿಯಾದರೆ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಹೋಗಬೇಕು? ಪಾಸಾದ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.
Karnataka News Live 26 April 2026Kidney Health - ಈ ಅಭ್ಯಾಸಗಳು ನಿಮ್ಮ ಕಿಡ್ನಿಯನ್ನು ಹಾಳುಮಾಡಬಹುದು, ಎಚ್ಚರ!
Karnataka News Live 26 April 2026ಎಂಎನ್ಸಿಗಳಿಗೆ ಸಿಗುತ್ತಿರುವ ಆದ್ಯತೆ ಎಂಎಸ್ಎಂಇಗಳಿಗೆ ಸಿಗ್ತಿಲ್ಲ - ಸಚಿವ ಸಂತೋಷ್ ಲಾಡ್
ಭಾರತದ ಆರ್ಥಿಕತೆ ಹಾಗೂ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಕೈಗಾರಿಕೆಗಳ (ಎಂಎಸ್ಎಂಇ) ಪಾತ್ರ ಅತ್ಯಂತ ನಿರ್ಣಾಯಕ. ಆದರೆ, ಅವುಗಳ ಸಮಸ್ಯೆಗಳನ್ನೇ ಹತ್ತಿಕ್ಕಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
Karnataka News Live 26 April 2026ಪರಿಹಾರ ನೀಡದಿದ್ದರೆ ವಿಮೆ ತುಂಬಬೇಡಿ ಎಂದು ನಾನೇ ಹೇಳುವೆ - ಗೃಹ ಸಚಿವ ಪರಮೇಶ್ವರ್
ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Karnataka News Live 26 April 2026ಸಂಕಷ್ಟದಿಂದ ಆಶಾಕಿರಣದತ್ತ, ಚಾಮರಾಜನಗರದ ಅಜ್ಜಿ ಕೈ ಹಿಡಿದ ಸಮಾಜ - ಮಕ್ಕಳಿಗೆ ಮನೆ-ಧನಸಹಾಯ ಭರವಸೆ
ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಅಜ್ಜಿಗೆ ಒಂದು ಮನೆ, ಅಗತ್ಯ ಧನಸಹಾಯ ಮಕ್ಕಳಿಗೆ ಆಧಾರ್ ಕಾರ್ಡ್ ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ಸಿಕ್ಕಿದ್ದು ಈ ಮಕ್ಕಳ ಭವಿಷದಲ್ಲಿ ಆಶಾಕಿರಣ ಮೂಡಿದೆ.
Karnataka News Live 26 April 2026ಕಾಂಗ್ರೆಸ್ ಬೆಂಬಲ ಕೊಡಲಿಲ್ಲ, ಮಹಿಳೆಯರಿಗೆ ಮೀಸಲು ದೊರೆಯಲಿಲ್ಲ - ಸಂಸದ ಯದುವೀರ್ ಒಡೆಯರ್
ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
Karnataka News Live 26 April 2026ಯುದ್ಧದ ನಡುವೆಯೂ ದೇಶದಲ್ಲಿ ಪೆಟ್ರೋಲ್ ಬಂಕ್ ಖಾಲಿಯಾಗಿಲ್ಲ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮಧ್ಯಪ್ರಾಚ್ಯ ಹಾಗೂ ಯುರೋಪ್ನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
Karnataka News Live 26 April 2026Health Tips - ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತಾಗುತ್ತಾ? ಈ 6 ಕಾರಣಗಳು ಇರಬಹುದು!
ಊಟ, ವ್ಯಾಯಾಮದಷ್ಟೇ ಒಳ್ಳೆ ನಿದ್ದೆ ಕೂಡ ಆರೋಗ್ಯಕ್ಕೆ ತುಂಬಾನೇ ಮುಖ್ಯ. ಇದು ನಮ್ಮ ಮೂಡ್ ಚೆನ್ನಾಗಿಡೋಕೆ ಸಹಾಯ ಮಾಡುತ್ತೆ. ಆದ್ರೆ, ಕೆಲವೊಮ್ಮೆ ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತು ಮಾತ್ರ ಕಡಿಮೆ ಆಗಲ್ಲ. ಯಾಕೆ ಹೀಗೆ?
Karnataka News Live 26 April 2026Liquor Price Hike - ಕರ್ನಾಟಕದಲ್ಲಿ ಮೇ 1 ರಿಂದ ಮದ್ಯದ ದರ ಏರಿಕೆ - ಯಾವ ಬ್ರ್ಯಾಂಡ್ಗೆ ಎಷ್ಟು?
Karnataka News Live 26 April 2026ವಿಷಕಾರಿ ಹಾವಿನಿಂದ 30 ಮಕ್ಕಳ ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ - ಬೀದಿನಾಯಿ ಕಾಳಿಗೆ ಗ್ರಾಮಸ್ಥರ ಭಾವುಕ ವಿದಾಯ
Karnataka News Live 26 April 2026ಬೆಂಗಳೂರು RCB ಮ್ಯಾಚ್; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್ ಬರುತ್ತೆ!
Anushka Sharma Watch Price: ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB vs GT ಪಂದ್ಯ ನಡೆಯಿತು. ಮದುವೆ ಬಳಿಕ ನಟನೆಯಿಂದ ದೂರ ಇರುವ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಬಂದೇ ಬರುತ್ತಾರೆ. ಈಗ ಇವರ ವಾಚ್ ಬೆಲೆ ಸಂಚಲನ ಮೂಡಿಸುತ್ತಿದೆ.
Karnataka News Live 26 April 2026ವಿಜಯ್ ಪಾಲಿಟಿಕ್ಸ್ ಬಗ್ಗೆ ಏನೂ ಗೊತ್ತಿಲ್ಲ - ಒಂದೇ ಮಾತಲ್ಲಿ ಉತ್ತರ ಕೊಟ್ಟ ಮೆಗಾಸ್ಟಾರ್ ಮಮ್ಮುಟ್ಟಿ
ಈ ಬಾರಿಯ ತಮಿಳುನಾಡು ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ಯಾಕಂದ್ರೆ, ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮತ್ತು ಕುತೂಹಲ ಮೂಡಿಸಿತ್ತು.
Karnataka News Live 26 April 2026ಯಗಚಿ ಹಳ್ಳಕ್ಕೆ ಸೇರುತ್ತಿದೆ ಕಲುಷಿತ ನೀರು - ಪತ್ರಕರ್ತನ ದೂರಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ
ಯಗಚಿ ಹಳ್ಳಕ್ಕೆ ಕೊಳಚೆ ನೀರು ಸೇರುತ್ತಿರುವ ಗಂಭೀರ ಸಮಸ್ಯೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಚಿಕ್ಕಮಗಳೂರಿನ ರಾಮೇಶ್ವರ ಬಡಾವಣೆಯಲ್ಲಿರುವ ಈ ಹಳ್ಳದ ನೀರು ನೇರವಾಗಿ ಯಗಚಿ ಡ್ಯಾಂ ಸೇರುತ್ತಿದೆ.
Karnataka News Live 26 April 2026Tiruvannamalai Temple - ಸೆಲೆಬ್ರಿಟಿಗಳ ಬದುಕು ಬದಲಿಸಿದ ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ; ವೈಜ್ಞಾನಿಕ ಕಾರಣ ಇದೆ!
Tiruvannamalai Arunachaleswarar: ಶಿವನ ಪಂಚಭೂತ ಕ್ಷೇತ್ರಗಳಲ್ಲಿ ಅಗ್ನಿ ಕ್ಷೇತ್ರವೇ ತಿರುವಣ್ಣಾಮಲೈ. ಇಲ್ಲಿ ಶಿವನೇ ಬೆಟ್ಟದ ರೂಪದಲ್ಲಿ ನೆಲೆಸಿದ್ದಾನೆ ಅನ್ನೋದು ನಂಬಿಕೆ. ಅದಕ್ಕೇ ಇಲ್ಲಿ ಗಿರಿವಲಂ ಬಂದ್ರೆ, ಸಾಕ್ಷಾತ್ ಶಿವನಿಗೆ ಪ್ರದಕ್ಷಿಣೆ ಹಾಕಿದಂತೆ. ಈ ಗಿರಿವಲಂನಿಂದ ಶಿವನ ಜೊತೆ ಸಿದ್ಧರ ಕೃಪೆಯೂ ಸಿಗುತ್ತೆ ಅಂತಾರೆ.
Karnataka News Live 26 April 2026ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್ಫ್ಲುಯೆನ್ಸರ್ ವಿರುದ್ಧ ಕೇಸ್
ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್ಫ್ಲುಯೆನ್ಸರ್ ವಿರುದ್ಧ ಕೇಸ್, ಉದ್ಯಮಿ ಜೊತೆಗಿನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಬೇಡಿಕೆ ಇಡಲಾಗಿದೆ. ಉದ್ಯಮಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಲಿಸಿದ್ದಾರೆ.
Karnataka News Live 26 April 2026ಉಪವಾಸ ಮಾಡಿದ್ರೆ ಆಧ್ಯಾತ್ಮಿಕವಾಗಿ, ವೈಜ್ಞಾನಿಕವಾಗಿ ಏನಾಗುತ್ತೆ? ಅನೇಕರಿಗೆ ಗೊತ್ತಿಲ್ಲದ ವಿಷಯವಿದು!
Fasting Advantage: ಉಪವಾಸ ಅಂದ ತಕ್ಷಣ ಹೊಟ್ಟೆಗೇನೂ ಹಾಕದೆ ಪೂಜೆ ಮಾಡೋದು ಅಂತಾ ಹೆಚ್ಚಿನವರು ಅಂದುಕೊಂಡಿದ್ದಾರೆ. ಹೀಗೆ ಉಪವಾಸ ಮಾಡೋದರಿಂದ ಸುಸ್ತಾಗುತ್ತೆ, ಆರೋಗ್ಯ ಹಾಳಾಗುತ್ತೆ ಅಂತಾನೂ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಆದ್ರೆ, ಈ ಆಚರಣೆ ಹಿಂದೆ ಅಡಗಿರುವ ವಿಜ್ಞಾನ ಮತ್ತು ಆರೋಗ್ಯದ ಲಾಭಗಳು ಮಾತ್ರ ಬಹಳ ಜನರಿಗೆ ಗೊತ್ತೇ ಇಲ್ಲ.
Karnataka News Live 26 April 2026ತಪ್ಪು ಅಂತ ಗೊತ್ತಿದ್ರೂ ಖಾಸಗಿ ವಿಡಿಯೋ ಯಾಕೆ ಮಾಡಿದ್ರು? ಹೇಗೆ ಲೀಕ್ ಆಯ್ತು? ಸತ್ಯ ಬಿಚ್ಚಿಟ್ಟ ಸೋನು ಗೌಡ
Karnataka News Live 26 April 2026ಬೆಳಗಾವಿಯಲ್ಲಿ ಗುಂಡಿನ ದಾಳಿ - ಹೈ ಪ್ರೊಫೈಲ್ ಕೇಸ್ ನಡೆಸುತ್ತಿದ್ದ ಪ್ರಭಾವಿ ವಕೀಲೆಯ ನಿವಾಸದ ಮೇಲೆ ಫೈರಿಂಗ್
ಜಿಲ್ಲೆಯ ಪ್ರಭಾವಿ ವಕೀಲರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ನಿನ್ನೆ ರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಅವರ ಮನೆಯ ಮೊದಲ ಮಹಡಿಯಲ್ಲಿ ಅವರ ಮಗಳು ಸಂಸ್ಕೃತಿ ಓದುವುದರಲ್ಲಿ ಮಗ್ನರಾಗಿದ್ದರು ಎಂದು ತಿಳಿದು ಬಂದಿದೆ.
Karnataka News Live 26 April 2026ಅಪ್ಪುಗೆ 'ಥ್ಯಾಂಕ್ಸ್' ಹೇಳಿದ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಶ್ಗೆ ಪುನೀತ್ ರಾಜ್ಕುಮಾರ್ ಮಾಡಿದ ಆ ಸಹಾಯ ಯಾವುದು?
'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಜೋಡಿಯಾಗಿ ನಟಿಸುವಾಗ ರಶ್ಮಿಕಾ ಅವರಿಗೆ ಸಿನಿಮಾ ರಂಗದ ಬಗ್ಗೆ ಇದ್ದ ದೃಷ್ಟಿಕೋನವೇ ಬದಲಾಯಿತಂತೆ. ವಿಡಿಯೋದಲ್ಲಿ ಮಾತನಾಡುತ್ತಾ ರಶ್ಮಿಕಾ, "ಪುನೀತ್ ಸರ್ ಜೊತೆ ಕೆಲಸ ಮಾಡಿದ ಮೇಲೆಯೇ ನನಗೆ ಅರ್ಥವಾಗಿದ್ದು..' ಇನ್ನೂ ಏನು ಹೇಳಿದ್ದಾರೆ ನೋಡಿ..
Karnataka News Live 26 April 2026Blood Cancer - ರಕ್ತದ ಕ್ಯಾನ್ಸರ್ನ ಈ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
Karnataka News Live 26 April 2026Ginger Garlic Paste - ತುಂಬ ದಿನದವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂರಕ್ಷಿಸಿ ಇಡೋದು ಹೇಗೆ?
Ginger Garlic Paste: ಅಡುಗೆಯಲ್ಲಿ ಪ್ರತಿದಿನ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕೇಬೇಕು. ಆದರೆ ಪ್ರತಿ ಬಾರಿಯೂ ಶುಂಠಿ ಸಿಪ್ಪೆ ತೆಗೆಯೋದು, ಬೆಳ್ಳುಳ್ಳಿ ಸುಲಿಯೋದು ದೊಡ್ಡ ಕೆಲಸ. ಹಾಗಾಗಿ ಹೆಚ್ಚಿನವರು ಪೇಸ್ಟ್ ಮಾಡಿಟ್ಟುಕೊಳ್ಳುತ್ತಾರೆ. ತಿಂಗಳುಗಟ್ಟಲೆ ತಾಜಾ ಆಗಿಡಲು ಹೀಗೆ ಮಾಡಿ.