ಈ ಬಾರಿಯ ತಮಿಳುನಾಡು ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ಯಾಕಂದ್ರೆ, ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮತ್ತು ಕುತೂಹಲ ಮೂಡಿಸಿತ್ತು.

ತಮ್ಮ ಹೊಸ ಸಿನಿಮಾ 'ಪೇಟ್ರಿಯಟ್' ಪ್ರಚಾರಕ್ಕಾಗಿ ತಮಿಳುನಾಡಿಗೆ ಬಂದಿದ್ದ ಮಮ್ಮುಟ್ಟಿ, ನಟ ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಮಿಳಿನಲ್ಲೇ 'ಒನ್ನುಮೆ ತೆರಿಯಾದು' (ಏನೂ ಗೊತ್ತಿಲ್ಲ) ಎಂದು ಒಂದೇ ಮಾತಿನಲ್ಲಿ ಉತ್ತರಿಸಿದ್ದಾರೆ. ಈ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ. ಕಳೆದ ಒಂದು ತಿಂಗಳಿಂದ ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಚುನಾವಣೆಯ ಕಾವು ಜೋರಾಗಿತ್ತು. ಈಗ ಎಲ್ಲರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಈ ಬಾರಿಯ ತಮಿಳುನಾಡು ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ಯಾಕಂದ್ರೆ, ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮತ್ತು ಕುತೂಹಲ ಮೂಡಿಸಿತ್ತು. ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷ ಈ ಬಾರಿ ಸಂಚಲನ ಸೃಷ್ಟಿಸುತ್ತಾ ಅಂತ ಎಲ್ಲರೂ ಎದುರು ನೋಡುತ್ತಿದ್ದಾರೆ. ಇದೇ ಹೊತ್ತಲ್ಲಿ, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಅವರಿಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಅವರು ಕೊಟ್ಟ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಏನೂ ಗೊತ್ತಿಲ್ಲ

"ವಿಜಯ್ ಅವರ ರಾಜಕೀಯವನ್ನು ನೀವು ಹೇಗೆ ನೋಡುತ್ತೀರಿ?" ಅಂತ ಪತ್ರಕರ್ತರು ಕೇಳಿದರು. ಇದಕ್ಕೆ ಮಮ್ಮುಟ್ಟಿ ತಮಿಳಿನಲ್ಲಿ "ಒನ್ನುಮೆ ತೆರಿಯಾದು" (ಅಂದರೆ, ಏನೂ ಗೊತ್ತಿಲ್ಲ) ಎಂದು ಒಂದೇ ಮಾತಿನಲ್ಲಿ ಉತ್ತರಿಸಿದರು. ತಮ್ಮ ಹೊಸ ಸಿನಿಮಾ 'ಪೇಟ್ರಿಯಟ್' ಪ್ರಚಾರಕ್ಕಾಗಿ ಮಮ್ಮುಟ್ಟಿ ತಮಿಳುನಾಡಿಗೆ ಬಂದಿದ್ದಾಗ ಈ ಘಟನೆ ನಡೆದಿದೆ.

ಇನ್ನು 'ಪೇಟ್ರಿಯಟ್' ಸಿನಿಮಾ ವಿಚಾರಕ್ಕೆ ಬಂದರೆ, ಬರೋಬ್ಬರಿ 18 ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ ಚಿತ್ರವಿದು. ಕುಂಚಾಕೋ ಬೋಬನ್ ನಾಯಕರಾಗಿದ್ದ 'ಅರಿಯಿಪ್ಪು' ಚಿತ್ರದ ನಂತರ ಮಹೇಶ್ ನಾರಾಯಣನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್, ಕುಂಚಾಕೋ ಬೋಬನ್, ನಯನತಾರಾ, ರೇವತಿ, ಗ್ರೇಸ್ ಆಂಟನಿ, ದರ್ಶನಾ ರಾಜೇಂದ್ರನ್, ರಾಜೀವ್ ಮೆನನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.