11:26 PM (IST) Dec 25

Karnataka news liveಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!

2026ರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಡಿಸಿಪಿ ಎಂ. ನಾರಾಯಣ್ ನೇತೃತ್ವದಲ್ಲಿ, ನೀಲಾದ್ರಿ ನಗರದ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ 'ರಾಣಿ ಚೆನ್ನಮ್ಮ' ಪಡೆಯನ್ನು ನಿಯೋಜಿಸಲಾಗಿದೆ. 

Read Full Story
11:00 PM (IST) Dec 25

Karnataka news liveಮಗನ ಬರ್ತ್‌ಡೇಗಾಗಿ ರಸ್ತೆ ಬಂದ್ ಮಾಡಿ ದರ್ಪ; 'ನಾನೊಬ್ಬ ಸೆಲೆಬ್ರಿಟಿ' ಎಂದ ಉದ್ಯಮಿಗೆ ಒದ್ದು ಜೈಲಿಗೆ ದಬ್ಬಿದ ಪೊಲೀಸರು!

ಸೂರತ್‌ನ ಉದ್ಯಮಿಯೊಬ್ಬ ಮಗನ ಹುಟ್ಟುಹಬ್ಬ ಆಚರಿಸಲು ಬ್ಯುಸಿ ರಸ್ತೆಯನ್ನೇ ತಡೆದಿದ್ದಾನೆ. ಪಟಾಕಿ ಸಿಡಿಸಿ, ಪ್ರಯಾಣಿಕರಿಗೆ ಬೆದರಿಕೆ ಹಾಕಿ ನಡೆಸಿದ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಾನೊಬ್ಬ ಸೆಲೆಬ್ರಿಟಿ ಎಂದು ಆತ ವಾದಿಸಿದ್ದ.
Read Full Story
10:59 PM (IST) Dec 25

Karnataka news liveಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು, ರಾಜ್ಯ ಸೇರದಂತೆ ದೇಶದಲ್ಲಿ ಇಂದು ಸರಣಿ ಅಪಘಾತಗಳು ನಡೆದಿದೆ. ಚಿತ್ರದುರ್ಗದ ಬಸ್ ದುರಂತ ಬಳಿಕ ಇದೀಗ ಲಾರಿ ಬೈಕ್ ಅಪಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Read Full Story
10:32 PM (IST) Dec 25

Karnataka news liveಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ, ಬಲೂನ್ ವ್ಯಾಪಾರಿ ಸಾವು, ಕೆಲ ಪ್ರವಾಸಿಗರ ಸ್ಥಿತಿ ಗಂಭೀರ

ಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ, ಬಲೂನ್ ವ್ಯಾಪಾರಿ ಸಾವು, ಕೆಲ ಪ್ರವಾಸಿಗರ ಸ್ಥಿತಿ ಗಂಭೀರ, ಬಲೂನ್ ಮಾರುತ್ತಿದ್ದ 40 ವರ್ಷದ ವ್ಯಕ್ತಿ ಸ್ಥಳದಲ್ಲ ಮೃತಪಟ್ಟಿದ್ದಾರೆ, ಬೆಂಗಳೂರಿನ ಲಕ್ಷ್ಮಿ, ರಾಣೆಬನ್ನೂರು ಮೂಲದ ಕೊಟ್ರೇಶ್ ಸೇರಿ ಹಲವು ಪ್ರವಾಸಿಗರ ಸ್ಥಿತಿ ಗಂಭೀರವಾಗಿದೆ.

Read Full Story
10:23 PM (IST) Dec 25

Karnataka news liveಕ್ರಿಸ್‌ಮಸ್ ಹಬ್ಬದ ದಿನವೇ ಭೀಕರ ಅಪಘಾತ - ಎತ್ತಿನ ಬಂಡಿಗೆ ಬೈಕ್ ಡಿಕ್ಕಿ, ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ!

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಕ್ರಿಸ್‌ಮಸ್ ದಿನದಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಬೈಕ್ ಎತ್ತಿನ ಬಂಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಸವಾರರಾದ ಶಿವಕುಮಾರ್ ಮತ್ತು ರವಿಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read Full Story
09:44 PM (IST) Dec 25

Karnataka news liveಮೈಸೂರು ಅರಮನೆ ಬಳಿ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ

ಮೈಸೂರು ಅರಮನೆ ಬಳಿ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ, ಅರಮನೆಯ ಜಯಮಾರ್ತಂಡ ದ್ವಾರ ಬಳಿ ಘಟನೆ ನಡೆದಿದೆ. ಗಾಯಾಳುಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಆರೋಗ್ಯ ಗಂಭೀರವಾಗಿದೆ.

Read Full Story
09:09 PM (IST) Dec 25

Karnataka news liveಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ, ಕಾರಣ ಬಿಚ್ಚಿದ್ದ ದೆಹಲಿ ಯುವತಿ

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ, ಕಾರಣ ಬಿಚ್ಚಿದ್ದ ದೆಹಲಿ ಯುವತಿ, ದೆಹಲಿಗಿಂತ ಬೆಂಗಳೂರು ರಾಷ್ಟ್ರ ರಾಜಧಾನಿಯಾಗಲು ಹೆಚ್ಚು ಅರ್ಹ ಎಂದಿದ್ದಾರೆ. ತಲೆತಗ್ಗಿಸುವುದಕ್ಕಿಂತ ಬೆಂಗಳೂರು ರಾಜಧಾನಿಯಾಗಲಿ ಎಂದಿದ್ದಾರೆ.

Read Full Story
08:48 PM (IST) Dec 25

Karnataka news liveಬೆಂಕಿ ಅವಘಡ ವೈಟಿಪಿಎಸ್‌ನ ಎರಡೂ ಘಟಕ ಬಂದ್, ಆರ್‌ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್‌ ಮೇಲೆ ಹೆಚ್ಚಿನ ಒತ್ತಡ!

 ವೈಟಿಪಿಎಸ್‌ ಎರಡೂ ಘಟಕಗಳು ಅಗ್ನಿ ದುರಂತ ಮತ್ತು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿವೆ. ಇದರಿಂದಾಗಿ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್‌) ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದು, ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಹಿನ್ನಡೆಯಾಗಿದೆ.

Read Full Story
08:26 PM (IST) Dec 25

Karnataka news liveನೋವಿನ ಕೂಗು ಕೇಳಲಿಲ್ಲ, ಕೆನಡಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ 8 ಗಂಟೆ ನರಳಾಡಿ ಹೃದಯಾಘಾತದಿಂದ ಭಾರತೀಯನ ಸಾವು!

ಕೆನಡಾದ ಎಡ್ಮಂಟನ್‌ನಲ್ಲಿ, ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದ 44 ವರ್ಷದ ಭಾರತೀಯ ಮೂಲದ ಪ್ರಶಾಂತ್ ಶ್ರೀಕುಮಾರ್ ಎಂಬುವವರು, ಆಸ್ಪತ್ರೆಯಲ್ಲಿ ಸುಮಾರು 8ಗಂಟೆಗಳ ಕಾಲ ಚಿಕಿತ್ಸೆಗಾಗಿ ಕಾದ ನಂತರ ಮೃತಪಟ್ಟಿದ್ದಾರೆ. ನೋವಿನ ಬಗ್ಗೆ ದೂರು ನೀಡಿದರೂ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಆರೋಪವಿದೆ.

Read Full Story
08:14 PM (IST) Dec 25

Karnataka news liveಅಧಿಕಾರ ಶಾಶ್ವತವಲ್ಲ - ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?

ಚಿಕ್ಕೋಡಿಯಲ್ಲಿ, ಸಿಎಂ ಬದಲಾವಣೆ ಚರ್ಚೆಯ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದರು. ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿರುವುದರಿಂದ ತಾನು ಮಾತನಾಡುವುದಿಲ್ಲ ಎಂದರು. ಅಧಿಕಾರ ಶಾಶ್ವತವಲ್ಲ, ನಾವೆಲ್ಲರೂ ಮೊದಲು ಪಕ್ಷದ ಸಾಮಾನ್ಯ ಕಾರ್ಯಕರ್ತರು ಎಂದು ಎಂದರು.

Read Full Story
08:11 PM (IST) Dec 25

Karnataka news liveಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ

ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ, ದತ್ತಪೀಠದಿಂದ ಮರಳುವಾಗ ಈ ಘಟನೆ ನಡೆದಿದೆ. ಪುತ್ತೂರಿನಿಂದ ಜೀಪ್ ಮೂಲಕ ಆಗಮಿಸಿದ್ದ ಪ್ರವಾಸಿಗರ ಜೀಪ್ ಪಲ್ಟಿಯಾಗಿ ಅವಘಡ ನಡೆದಿದೆ.

Read Full Story
07:55 PM (IST) Dec 25

Karnataka news liveಚೀನಾದ ಒಂದು ಮಗು ನೀತಿ ರೂವಾರಿ ಪೆಂಗ್ ಪೆಯುನ್ ನಿಧನ, ಆಕೆ ನರಕಕ್ಕೇ ಹೋಗಲಿ ಎಂದು ಜನರ ಹಿಡಿಶಾಪ!

ಚೀನಾದ ವಿವಾದಿತ 'ಒಂದು ಮಗು ನೀತಿ'ಯ ರೂವಾರಿಯಾಗಿದ್ದ ಪೆಂಗ್ ಪೆಯುನ್ (95) ನಿಧನರಾಗಿದ್ದಾರೆ. ಅವರ ಸಾವಿಗೆ ಸರ್ಕಾರ ಸಂತಾಪ ಸೂಚಿಸಿದರೂ, ಈ ನೀತಿಯಿಂದಾದ ಬಲವಂತದ ಗರ್ಭಪಾತ ಮತ್ತು ಇಂದಿನ ಜನಸಂಖ್ಯಾ ಬಿಕ್ಕಟ್ಟಿನಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Read Full Story
07:47 PM (IST) Dec 25

Karnataka news liveಚಿಕ್ಕಮಗಳೂರು - ಸ್ವಂತ ಕಾರಿಗೆ 'ಪೊಲೀಸ್' ಬೋರ್ಡ್ ಹಾಕಿ ಪ್ರವಾಸ; ಐಡಿ ಕಾರ್ಡ್ ತೋರಿಸಿದ್ರೂ ಪೊಲೀಸಪ್ಪಗೆ ದಂಡ ಹಾಕಿದ ಲೇಡಿ ಸಿಂಗಂ!

ಸ್ವಂತ ಕಾರಿಗೆ 'ಪೊಲೀಸ್' ಬೋರ್ಡ್ ಹಾಕಿಕೊಂಡು ಪ್ರವಾಸ ಹೊರಟಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಚಿಕ್ಕಮಗಳೂರಿನ ಬಣಕಲ್ ಪಿಎಸೈ ರೇಣುಕಾ ದಂಡ ವಿಧಿಸಿದ್ದಾರೆ. ಸಹೋದ್ಯೋಗಿ ಎಂಬ ಮುಲಾಜಿಲ್ಲದೆ ದಂಡ ವಿಧಿಸಿ, ಬೋರ್ಡ್ ತೆರವುಗೊಳಿಸಿದ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Read Full Story
07:18 PM (IST) Dec 25

Karnataka news liveಹೊಸ ವರ್ಷಾಚರಣೆ ಸಮೀಪ ಹಿನ್ನೆಲೆ, ಬೆಂಗಳೂರಲ್ಲಿ ಕಟ್ಟುನಿಟ್ಟಿನ ನಿಗಾ, ಹಿರಿಯ ಪೊಲೀಸ್ ಅಧಿಕಾರಿಗಳ ಬೈಕ್ ರೈಡ್!

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಕೋರಮಂಗಲದಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು,ತಾತ್ಕಾಲಿಕ ಕಂಟ್ರೋಲ್ ರೂಂ ಮತ್ತು ಸಿಸಿಟಿವಿ ನಿಗಾದ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

Read Full Story
06:31 PM (IST) Dec 25

Karnataka news liveBhatkal - ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದ ಗುರು ಸುಧೀಂದ್ರ ಕಾಲೇಜಿನ ಹುಡುಗಿ, ರಸ್ತೆಯಲ್ಲೇ ಸುಟ್ಟುಹೋದ ರಶ್ಮಿ!

ಭಟ್ಕಳ ಮೂಲದ, ಬೆಂಗಳೂರಿನ ಡೆಲಾಯ್ಟ್‌ ಕಂಪನಿ ಉದ್ಯೋಗಿ ರಶ್ಮಿ ಮಹಾಲೆ, ಗೆಳತಿಯರೊಂದಿಗೆ ಗೋಕರ್ಣಕ್ಕೆ ಪ್ರವಾಸ ಹೊರಟಿದ್ದರು. ಆದರೆ, ಚಿತ್ರದುರ್ಗ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅವರು ಗುರುತು ಸಿಗದಷ್ಟು ಸುಟ್ಟು ಕರಕಲಾಗಿ ದುರಂತ ಸಾವನ್ನಪ್ಪಿದ್ದಾರೆ. 

Read Full Story
05:49 PM (IST) Dec 25

Karnataka news liveRapido Bike ಬುಕ್ ಮಾಡುವ ಮುನ್ನ ಎಚ್ಚರ! ರೈಡರ್ ಎಡವಟ್ಟಿಗೆ ಹಿಂಬದಿ ಕುಳಿತ ಗ್ರಾಹಕನ ಮಂಡಿ ಚಿಪ್ಪು ಪುಡಿ ಪುಡಿ!

ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಬುಕ್ ಮಾಡಿದ ಪ್ರಯಾಣಿಕರೊಬ್ಬರು, ಸವಾರನ ಬೇಜವಾಬ್ದಾರಿತನದಿಂದ ಅಪಘಾತಕ್ಕೀಡಾಗಿದ್ದಾರೆ. ರಾಂಗ್ ರೂಟ್‌ನಲ್ಲಿ ಚಲಿಸಿದ ಪರಿಣಾಮ ಎದುರಿನಿಂದ ಬಂದ ಬುಲೆಟ್‌ಗೆ ಡಿಕ್ಕಿಯಾಗಿ, ಪ್ರಯಾಣಿಕನ ಮಂಡಿ ಚಿಪ್ಪು ಪುಡಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story
05:29 PM (IST) Dec 25

Karnataka news liveದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?

ಬಿಗ್‌ಬಾಸ್‌ ಫ್ಯಾಮಿಲಿ ವೀಕ್‌ನಲ್ಲಿ ಕಾವ್ಯಾ ಅವರ ಕುಟುಂಬ ಮನೆಗೆ ಆಗಮಿಸಿದೆ. ಆದರೆ, ಅವರ ಸಹೋದರ ಕಾರ್ತಿಕ್‌ ನಾಮಿನೇಷನ್‌ ಬಗ್ಗೆ ಚರ್ಚಿಸಿ ಬಿಗ್‌ಬಾಸ್‌ನ ಮೂಲ ನಿಯಮವನ್ನು ಉಲ್ಲಂಘಿಸಿದ್ದರಿಂದ, ಬಿಗ್‌ಬಾಸ್‌ ತಕ್ಷಣವೇ ಅವರನ್ನು ಮನೆಯಿಂದ ಹೊರಹೋಗುವಂತೆ ಆದೇಶಿಸಿದ್ದಾರೆ.
Read Full Story
05:12 PM (IST) Dec 25

Karnataka news liveಕೆಲಸ ಮಾಡದಿದ್ರೆ ಜನರಿಂದ ಚಪ್ಪಲಿ ಹೊಡೆಸ್ತೇನೆ; ಮಾಗಡಿ ತಹಸೀಲ್ದಾರ್‌ಗೆ ಶಾಸಕ ಬಾಲಕೃಷ್ಣ ಹಿಗ್ಗಾಮುಗ್ಗ ತರಾಟೆ!

ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ರೈತರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದ ತಹಶಿಲ್ದಾರ್ ಶರತ್ ಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿ ಏಟು ತಿನ್ನಬೇಕಾಗುತ್ತದೆ ಎಂದು ಎಚ್ಚರಿಸಿದರು.

Read Full Story
05:11 PM (IST) Dec 25

Karnataka news liveದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ, ಮೂರು ತಂಡಗಳಾಗಿ ತನಿಖೆ ನಡೆಸಲಾಗುತ್ತಿದೆ. ಮೆಟಾ ಸಂಪರ್ಕಿಸಿ ಖಾತೆಗಳ ಸಂಪೂರ್ಣ ಮಾಹಿತಿ ಕೇಳಿರುವ ಪೊಲೀಸರು ಮಹತ್ವದ ಕಾರ್ಯಾಚರಣೆ ಆರಂಭಿಸಿದ್ದಾರೆ.

Read Full Story
04:35 PM (IST) Dec 25

Karnataka news liveಚಿತ್ರದುರ್ಗ ದುರಂತ - ಮದುವೆ ಫಿಕ್ಸ್ ಆಗಿದ್ದ ಜೀವದ ಗೆಳತಿಯರಿಬ್ಬರ ಕೊನೆಯ ಪ್ರಯಾಣ! ಓದಿದ್ದೂ ಜೊತೆಯಲ್ಲೇ ಜೀವ ಹೋಗಿದ್ದೂ ಒಟ್ಟಿಗೆ!

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ, ಮದುವೆಗೆ ಸಿದ್ಧರಾಗಿದ್ದ ಹಾಸನ ಮೂಲದ ಇಬ್ಬರು ಆಪ್ತ ಗೆಳತಿಯರಾದ ನವ್ಯ ಮತ್ತು ಮಾನಸ ಒಟ್ಟಿಗೆ ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬಗಳ ಕನಸುಗಳು ನುಚ್ಚುನೂರಾಗಿವೆ.
Read Full Story