ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ ನೀಡಿದ್ದಾರೆ. ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿರುವ ಆಡಿಯೋ ಕೋಲಾಹಲ ಸೃಷ್ಟಿಸಿದೆ.
- Home
- News
- State
- State News Live: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ
State News Live: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ

ಬೆಂಗಳೂರು (ಮಾ.16):ಇರಾನ್ ಯುದ್ಧದಿಂದ ಉಂಟಾಗಿದ್ದ ಎಲ್ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ಕೊಂಚ ತಹಬದಿಗೆ ಬರುವ ಲಕ್ಷಣಗಳು ಗೋಚರಿಸಿವೆ, ‘ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕಳೆದ ಮೂರು ದಿನದಲ್ಲಿ ತೈಲ ಕಂಪನಿಗಳ ಅನಿಲ ಸಿಲಿಂಡರ್ ಸರಬರಾಜಿನಲ್ಲಿ ಶೇ.20 ರಷ್ಟು ಸುಧಾರಣೆಯಾಗಿದೆ’ ಎಂದು ರಾಜ್ಯದ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಭಾನುವಾರ ಹೇಳಿದೆ. ಇದರಲ್ಲಿ ಹೆಚ್ಚು ಬಾಧಿತವಾಗಿದ್ದ ವಾಣಿಜ್ಯ ಎಲ್ಪಿಜಿ ಪೂರೈಕೆಯೂ ಸೇರಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
=
Karnataka News Live 16th March:ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ
Karnataka News Live 16th March:ಪತಿ, ಪೋಷಕರ ವಿರುದ್ಧ ಬಾಲ್ಯವಿವಾಹ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ, ಆಯೋಜಕರು, ಪುರೋಹಿತರ ವಿರುದ್ಧ ಕ್ರಮ
Karnataka News Live 16th March:ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ - ಬೆಂಗಳೂರು ಟು ಮಂಗಳೂರು ಟ್ರೈನ್ ಕೋಯಿಕ್ಕೋಡ್ವರೆಗೆ ವಿಸ್ತರಣೆ
Karnataka News Live 16th March:ಅತಿವೇಗದ ಚಾಲನೆ - ಮಾರಕ ರಸ್ತೆ ಅಪಘಾತದ ಹೈಕೋರ್ಟ್ ತೀರ್ಪು, ವ್ಯಕ್ತಿ ವಿರುದ್ಧದ ಕೇಸ್ ರದ್ದುಗೊಳಿಸಿದ್ಯಾಕೆ ಕೋರ್ಟ್?
Karnataka News Live 16th March:ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು, ರಾಜ್ಯದಲ್ಲಿ ಮಳೆಗೆ ಮೊದಲ ಬಲಿ
ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು, ರಾಜ್ಯದಲ್ಲಿ ಮಳೆಗೆ ಮೊದಲ ಬಲಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮಂಜುನಾಥ್ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಹಲೆವೆಡೆ ಆಲಿಕಲ್ಲು ಮಳೆಯಾಗಿದೆ.
Karnataka News Live 16th March:ಸಂಬಂಧ ಇಟ್ಟುಕೊಂಡಿರುವುದು ದ್ವಿವಿವಾಹವಾಗುವುದಿಲ್ಲ - 73 ವರ್ಷದ ವ್ಯಕ್ತಿಯ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಕೇವಲ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧದಲ್ಲಿರುವುದನ್ನು ದ್ವಿವಿವಾಹ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಎರಡನೇ ಮದುವೆ ನಡೆದ ಬಗ್ಗೆ ಸ್ಪಷ್ಟ ಸಾಕ್ಷ್ಯವಿಲ್ಲದ ಕಾರಣ, 73 ವರ್ಷದ ಪತಿಯ ವಿರುದ್ಧ ಪತ್ನಿ ದಾಖಲಿಸಿದ್ದ ದ್ವಿವಿವಾಹ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
Karnataka News Live 16th March:Bhagyalakshmi Making Video - ಸೀರೆಯುಟ್ಟು ಭಾಗ್ಯ ಫೈಟಿಂಗ್- ಮುಟ್ತಿದ್ದಂತೆಯೇ ಉರುಳಿ ಉರುಳಿ ಬಿದ್ದ ರೌಡಿಗಳು
Karnataka News Live 16th March:ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದೆ - ಎಚ್.ಡಿ.ಕುಮಾರಸ್ವಾಮಿ
ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದ್ದು, ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕದ ಅತ್ಯುತ್ತಮ ಸಹಕಾರ ಬ್ಯಾಂಕ್ ಆಗಿ ಹೆಸರು ಗಳಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದರು.
Karnataka News Live 16th March:Brahmagantu Serial ದೀಪಾ ರೋಲ್ ಚೇಂಜ್ ಆಗೋಯ್ತು! ಬೆಟ್ಟದ ಮೇಲಿನಿಂದ ಬಿದ್ದು ಸತ್ತಿದ್ದು ಅವಳಲ್ಲ, ಇವಳು
Karnataka News Live 16th March:ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೊಳಿಸಲಾದ ಕಾರ್ಯಕ್ರಮಗಳು ಶಾಶ್ವತ - ಸಚಿವ ಮಧು ಬಂಗಾರಪ್ಪ
ಸಮಾಜದಲ್ಲಿನ ಪ್ರತಿಯೊಬ್ಬರಿಗೂ ರೂಪಿಸಲಾದ ಕಾರ್ಯಕ್ರಮವನ್ನು ಭವಿಷ್ಯದಲ್ಲಿನ ಯಾವುದೇ ಸರ್ಕಾರ ತೆಗೆದುಹಾಕಲು ಸಾದ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Karnataka News Live 16th March:ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ - ಒಂಟಿ ವೃದ್ಧೆಯರ ಬದುಕಿಗೆ ಬೆಳಕು ತಂದ ಕಾನ್ಸ್ಟೇಬಲ್
ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ.
Karnataka News Live 16th March:ರಸ್ತೆಗಳು ಅಭಿವೃದ್ಧಿಯಾದರೆ ಹಳ್ಳಿಗಳ ಮೂಲ ಸಮಸ್ಯೆ ಬಗೆಹರಿದಂತೆ - ಸಚಿವ ಚಲುವರಾಯಸ್ವಾಮಿ
ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಯಾದರೆ ಹಳ್ಳಿಗಳಲ್ಲಿ ಮೂಲ ಸಮಸ್ಯೆಗಳಿಗೆ ಬಹುತೇಕ ಪರಿಹಾರ ಸಿಕ್ಕಂತಾಗುತ್ತದೆ. ಹೀಗಾಗಿ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
Karnataka News Live 16th March:ಪ್ರಜಾ ಸೌಧ ಸರ್ಕಾರದ ಪ್ರತಿಬಿಂಬ, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು - ಕೃಷ್ಣ ಭೈರೇಗೌಡ
ಆಶಯವನ್ನು ಪೂರೈಸಬೇಕು. ಪ್ರಜೆಗಳಿಗಾಗಿ ನಾವು ಎಂಬ ಭಾವನೆ ಅಧಿಕಾರಿ, ರಾಜಕಾರಣಿಗಳಲ್ಲಿ ಮೂಡಿದಾಗ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
Karnataka News Live 16th March:ಬೆಂಗಳೂರಿಂದ ವಿದೇಶಕ್ಕೆ ಶಿಫ್ಟ್ - ₹1.3 ಕೋಟಿ ವೇತನ, ಟೆಕ್ಕಿ ಜೀವನದಲ್ಲಿ ದೊಡ್ಡ ಬದಲಾವಣೆ, ಭಾರತಕ್ಕೆ ಮರಳೋದು ಡೌಟ್!
Karnataka News Live 16th March:ಬಂಗಾರದಂತಹ ಭೂಮಿ ಯಾರೂ ಮಾರಾಟ ಮಾಡಬೇಡಿ - ಸಚಿವ ಎಂ.ಬಿ.ಪಾಟೀಲ ರೈತರಿಗೆ ಮನವಿ
ಭೂಮಿ ಮಾರಾಟ ಮಾಡಿದರೆ ಮತ್ತೆ ಖರೀದಿಸಲು ಸಾಧ್ಯವಿಲ್ಲ. ಭೂಮಿ ಬಂಗಾರವಿದ್ದಂತೆ. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
Karnataka News Live 16th March:ವರ್ಷದೊಳಗೆ ಪ್ರತಿ ಹಳ್ಳಿಗೂ ಶಾಶ್ವತ ಕುಡಿಯುವ ನೀರು - ಸಚಿವ ಕೆ.ಎಚ್.ಮುನಿಯಪ್ಪ ಭರವಸೆ
ವಿಜಯಪುರ ಪಟ್ಟಣಗಳಿಗೆ ಮಾತ್ರವಲ್ಲದೆ, ಪ್ರತಿ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
Karnataka News Live 16th March:ಬಳ್ಳಾರಿ - ಮೇಲಾಧಿಕಾರಿ ಕಿರುಕುಳ ಆರೋಪ - ಕೃಷಿ ಇಲಾಖೆ ಗುತ್ತಿಗೆ ನೌಕರ ಸಾವಿಗೆ ಶರಣು
Sandur contract employee death: ಬಳ್ಳಾರಿಯ ಸಂಡೂರಿನಲ್ಲಿ ಕೃಷಿ ಇಲಾಖೆಯ ಗುತ್ತಿಗೆ ನೌಕರರೊಬ್ಬರು ಮೇಲಾಧಿಕಾರಿಯ ಮಾನಸಿಕ ಕಿರುಕುಳದಿಂದ ನೊಂದು ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದ ಡೆತ್ನೋಟ್ನಲ್ಲಿ ಅಧಿಕಾರಿ ಹೆಸರನ್ನು ಉಲ್ಲೇಖಿಸಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
Karnataka News Live 16th March:ಶಿರಸಿಯಲ್ಲಿ ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್ಸೆಟ್ ಪೈಪು ಹಿಡಿದು ಕೂತಿದ್ದ ಬಾಲೆ; ಕಾಪಾಡಿದ ರಿಯಲ್ ಹೀರೋ
Girl fell into well: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದಿದೆ. ಆ ಬಳಿಕ ಆ ಮಗುವನ್ನು ಮೇಲಕ್ಕೆತ್ತಿ ಬಚಾವ್ ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.
Karnataka News Live 16th March:ಬೆಂಗಳೂರಲ್ಲಿ ಐಟಿ ಜಾಬ್ ಪಡೆಯೋದು ಸುಲಭವಲ್ಲ - 15 ದಿನಗಳಲ್ಲಿ ಡೆವೆಲಪರ್ ಹುದ್ದೆಗಳಿಗೆ 34 ಸಾವಿರಕ್ಕೂ ಹೆಚ್ಚು ಅರ್ಜಿ!
ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ತಾಂತ್ರಿಕ ಉದ್ಯೋಗ ಮಾರುಕಟ್ಟೆಯು ತೀವ್ರ ಸ್ಪರ್ಧೆಯಿಂದ ಕೂಡಿದೆ. ಇತ್ತೀಚೆಗೆ MERN ಸ್ಟಾಕ್ ಮತ್ತು React ಡೆವಲಪರ್ ಹುದ್ದೆಗಳಿಗಾಗಿ ಕೇವಲ 15 ದಿನಗಳಲ್ಲಿ 34,742 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದು ನಗರದಲ್ಲಿ ಉದ್ಯೋಗ ಪಡೆಯುವ ಸವಾಲನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಅಂಕಿಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ .