09:42 PM (IST) Apr 16

Karnataka News Live 16 April 2026ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ - ಶಾಸಕ ಲಕ್ಷ್ಮಣ ಸವದಿ

ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

Read Full Story
08:51 PM (IST) Apr 16

Karnataka News Live 16 April 2026ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ - ಚಿಕಿತ್ಸೆ ಫಲಿಸದೆ ಸಾವು!

ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ.

Read Full Story
08:31 PM (IST) Apr 16

Karnataka News Live 16 April 2026ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ - ಸಿಎಂ ಸಿದ್ದರಾಮಯ್ಯ

ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Read Full Story
08:03 PM (IST) Apr 16

Karnataka News Live 16 April 2026ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು ಮತ್ತೆ ಆರಂಭ

ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ರೈಲುಗಳ ವಿಳಂಬದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಇತರ ರೈಲುಗಳ ಸಂಚಾರಕ್ಕೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದೆ.
Read Full Story
07:23 PM (IST) Apr 16

Karnataka News Live 16 April 2026ರಾಜ್ಯದ 12 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' - ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!

ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದ 12 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಅವಧಿಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Read Full Story
06:50 PM (IST) Apr 16

Karnataka News Live 16 April 2026ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ - 12 ಜಿಲ್ಲೆಗಳಿಗೆ 4 ದಿನ ಕಾಲ ಹೀಟ್‌ವೇವ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ!

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆಯು ಉತ್ತರ ಕರ್ನಾಟಕ ಸೇರಿದಂತೆ 12 ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಬಿಸಿಗಾಳಿಯ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಸೂಚಿಸಿದೆ.
Read Full Story
06:29 PM (IST) Apr 16

Karnataka News Live 16 April 2026ಎಚ್‌ಡಿಕೆ ಚನ್ನಪಟ್ಟಣದಿಂದ ಸ್ಪರ್ಧಿಸಬೇಕೆಂಬುದು ಜನರ ಅಭಿಲಾಷೆ - ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

Read Full Story
06:20 PM (IST) Apr 16

Karnataka News Live 16 April 2026ಭದ್ರಾ ಅರಣ್ಯದಲ್ಲಿ 'ಬೆಂಗಾಲ್ ಟೈಗರ್' ರಾಜ ಗಾಂಭೀರ್ಯದ ನಡಿಗೆ - ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಶಾರ್ದೂಲ

Bhadra Wildlife Sanctuary tiger sighting: ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

Read Full Story
06:15 PM (IST) Apr 16

Karnataka News Live 16 April 2026ಸಂಪುಟ ಪುನಾರಚನೆ ಹೈಕಮಾಂಡ್‌ ನಾಯಕರು ತೀರ್ಮಾನಿಸುತ್ತೆ - ಸಚಿವ ರಾಮಲಿಂಗಾರೆಡ್ಡಿ

ಸಂಪುಟ ಪುನಾರಚನೆಯಾಗಿ ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್‌ ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story
06:03 PM (IST) Apr 16

Karnataka News Live 16 April 2026ಅನಾಥ ಕಂದಮ್ಮಗಳಿಗೆ ಆಧಾರ್ ಕೂಡ ಸಿಗದೇ ಸಂಕಷ್ಟ - ಚಾಮರಾಜನಗರದಲ್ಲಿ ಕರುಣಾಜನಕ ಘಟನೆ

ಚಾಮರಾಜನಗರದ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು.

Read Full Story
06:00 PM (IST) Apr 16

Karnataka News Live 16 April 2026Curry Leaves - ಈ ರಹಸ್ಯ ಟಿಪ್ಸ್‌ ಫಾಲೋ ಮಾಡಿದ್ರೆ ಕರಿಬೇವಿನ ಸೊಪ್ಪು ಪೊದೆ ಥರ ವರ್ಷ ಪೂರ್ತಿ ಬೆಳೆಯುತ್ತೆ!

Curry Leaves Plant: ಕರಿಬೇವಿನ ಗಿಡ ಸೊಂಪಾಗಿ, ದಟ್ಟವಾಗಿ ಬೆಳೆಯಲು ಸಹಾಯ ಮಾಡುವ 5 ಪ್ರಮುಖ ರಹಸ್ಯ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ನೈಸರ್ಗಿಕ ಗೊಬ್ಬರಗಳು ಮತ್ತು ಸರಿಯಾದ ಆರೈಕೆಯ ವಿಧಾನಗಳು ಇಲ್ಲಿವೆ. 

Read Full Story
05:52 PM (IST) Apr 16

Karnataka News Live 16 April 2026ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ - ಮಾಳವಿಕಾ ಅವಿನಾಶ್

ಮುಂದಿನ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.

Read Full Story
05:52 PM (IST) Apr 16

Karnataka News Live 16 April 2026ಕಾರವಾರ - ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿದಿದೆ. ಘಟನೆಯ ನಂತರ ಚಾಲಕ ನಾಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Read Full Story
05:49 PM (IST) Apr 16

Karnataka News Live 16 April 2026ಯೋಗೇಶ ಗೌಡ ಹತ್ಯೆ - ಕುಲಕರ್ಣಿಗೆ ಪರಮಾಪ್ತನೇ ತಿರುಗಿ ಬಿದ್ದ! ಮಾತು ಬದಲಿಸಿ ಕಾಂಗ್ರೆಸ್ ಸೇರಿದ್ದ ಯೋಗೇಶ್ ಪತ್ನಿ!

ವರದಿ: ಶಿವಾನಂದ ಗೊಂಬಿ

ಬರೋಬ್ಬರಿ 10 ವರ್ಷಗಳ ಬಳಿಕಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯು ಸಿಬಿಐ ತನಿಖೆಯಿಂದಾಗಿ ತಾರ್ಕಿಕ ಅಂತ್ಯ ಕಂಡಿದೆ.

Read Full Story
05:37 PM (IST) Apr 16

Karnataka News Live 16 April 2026Night Shift - ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ? ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು!

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ, ಅವರು ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಅಥವಾ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

Read Full Story
05:36 PM (IST) Apr 16

Karnataka News Live 16 April 2026Personality Test - ನೀವು ಹೀಗೆಲ್ಲ ಕಾಲು ಮೇಲೆ ಕಾಲು ಹಾಕಿ ಕೂರ್ತೀರಾ? ನಿಮ್ಮ ವ್ಯಕ್ತಿತ್ವ ಬಯಲಾಗುತ್ತೆ!

Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
05:20 PM (IST) Apr 16

Karnataka News Live 16 April 2026Late Night Eating - ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ!

ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ನಿಮ್ಮ ಲಿವರ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದ 'ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್' ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Read Full Story
04:58 PM (IST) Apr 16

Karnataka News Live 16 April 2026ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್‌ ನಟನ ಮನೆ ಸಮಸ್ಯೆ ಬಗೆಹರಿತು!

Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.

Read Full Story
04:56 PM (IST) Apr 16

Karnataka News Live 16 April 2026ಬ್ಯಾಚುಲರ್ ಬಾಯ್ಸ್‌, ಹಾಸ್ಟೆಲ್ ಹುಡುಗ್ರು & ವರ್ಕಿಂಗ್ ವುಮೆನ್‌ಗೆ ಬೆಸ್ಟ್ ಈ ಹುಣುಸೇಹುಳಿ; ಆದ್ರೆ ಈ ಸೀಕ್ರೆಟ್ ಗೊತ್ತಿರ್ಲಿ!

ಅನೇಕರಿಗೆ ಹುಣಸೇಹಣ್ಣಿನಿಂದ ಕೇವಲ ಸಾಂಬಾರ್ ಮಾಡುವುದು ಮಾತ್ರ ತಿಳಿದಿದೆ. ಆದರೆ, ಅತ್ಯಂತ ಸರಳವಾಗಿ ಮತ್ತು ಬೇಗನೆ ಮಾಡಬಹುದಾದ 'ಹುಣಸೇಹುಳಿ' (ಒಂದು ರೀತಿಯ ರಸಂ ರೆಸಿಪಿ) ರುಚಿಯೇ ಬೇರೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಇದು ಅರ್ಜೆಂಟ್ ಅಡುಗೆ ಮಾತ್ರವಲ್ಲ, ವಾರಗಟ್ಟಲೆ ಉಪಯೋಗಿಸಬಹುದು.

Read Full Story
04:52 PM (IST) Apr 16

Karnataka News Live 16 April 2026ಹಾಸನ - ರಾಯರ ದರ್ಶನಕ್ಕೂ ಮುನ್ನವೇ ಮಸಣ ಸೇರಿದ 8 ಮಂದಿ ಸಂಬಂಧಿಕರು, ಸಾವನ್ನಪ್ಪಿದ ಒಂದೊಂದು ಕುಟುಂಬದ್ದು ಒಂದೊಂದು ಕಥೆ!

ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ರಾಯರ ದರ್ಶನಕ್ಕೆ ತೆರಳುತ್ತಿದ್ದ ಹಾಸನ ಮತ್ತು ಚಿಕ್ಕಮಗಳೂರು ಮೂಲದ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನ ಮತ್ತು ಟ್ಯಾಂಕರ್ ನಡುವಿನ ಈ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದು, ಈ ದುರ್ಘಟನೆ ಗ್ರಾಮಗಳಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.
Read Full Story