ಎಎಪಿ ಪಕ್ಷವು ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪ ನಾಯಕನ ಸ್ಥಾನದಿಂದ ತೆಗೆದುಹಾಕಿದ ನಂತರ, ಪಂಜಾಬ್ ಸರ್ಕಾರ ಅವರ ಭದ್ರತೆಯನ್ನು ಹಿಂಪಡೆದಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಚಡ್ಡಾಗೆ ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ. ಇಲ್ಲಿದೆ ಡಿಟೇಲ್ ಸ್ಟೋರಿ.
- Home
- News
- State
- Karnataka News Live: ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ - ಸಂಸದ ರಾಘವ್ ಚಡ್ಡಾಗೆ 'Z+' ಕೆಟಗರಿ ಭದ್ರತೆ ನೀಡಿದ ಕೇಂದ್ರ
Karnataka News Live: ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ - ಸಂಸದ ರಾಘವ್ ಚಡ್ಡಾಗೆ 'Z+' ಕೆಟಗರಿ ಭದ್ರತೆ ನೀಡಿದ ಕೇಂದ್ರ

ದಾವಣಗೆರೆ: ಕಾರು ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಪೊಲೀಸ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಚಿತ್ರದುರ್ಗ-ಜಗಳೂರು ತಾಲೂಕುಗಳ ಗಡಿ ಗ್ರಾಮ ಕಡಬನಕಟ್ಟೆ ಬಳಿ ಸಂಭವಿಸಿದೆ. ಪೊಲೀಸ್ ಇನ್ಸ್ಪೆಕ್ಟರ್ ರಘುನಾಥ ಮೃತರು. ಚಿತ್ರದುರ್ಗ ಜಿಲ್ಲೆ ಆಯಿಕಲ್ ಗ್ರಾಮದಲ್ಲಿದ್ದ ತಮ್ಮ ಪತ್ನಿ ತವರು ಮನಗೆ ಮೂರು ದಿನ ರಜೆ ಹಾಕಿ, ರಘುನಾಥ ಬಂದಿದ್ದರು. ಬುಧವಾರ ಮಧ್ಯಾಹ್ನ ಕಾರಿನಲ್ಲಿ ಹೊಸಪೇಟೆ ಕಡೆ ಹೊರಟಿದ್ದಾಗ ಚಿತ್ರದುರ್ಗ-ಜಗಳೂರು ಗಡಿ ಗ್ರಾಮವಾದ ಕಡಬನಕಟ್ಟೆ ಬಳಿ ರಸ್ತೆ ಬದಿಯ ಬೇವಿನ ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Karnataka News Live 16 April 2026ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ - ಸಂಸದ ರಾಘವ್ ಚಡ್ಡಾಗೆ 'Z+' ಕೆಟಗರಿ ಭದ್ರತೆ ನೀಡಿದ ಕೇಂದ್ರ
Karnataka News Live 16 April 2026Raichur - ಸಹಾಯಧನ ಬಿಡುಗಡೆಗೆ 15 ಸಾವಿರ ಲಂಚ ಪಡೆದಿದ್ದ PDOಗೆ ಏಳು ವರ್ಷ ಜೈಲು ಶಿಕ್ಷೆ
ದನದ ಶೆಡ್ ನಿರ್ಮಾಣದ ಸಹಾಯಧನ ಬಿಡುಗಡೆ ಮಾಡಲು ₹15,000 ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗೊರೇಬಾಳ ಗ್ರಾಪಂ ಪಿಡಿಒಗೆ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Karnataka News Live 16 April 2026Drop and Detect - ನೀವು ಕುಡಿಯುವ ನೀರು ಶುದ್ಧವೋ, ಕಲುಷಿತವೋ? ನಿಮ್ಮ ಸ್ಮಾರ್ಟ್ಫೋನ್ ಬಳಸಿ ಕೇವಲ 60 ಸೆಕೆಂಡುಗಳಲ್ಲಿ ತಿಳ್ಕೊಳ್ಳಿ!
ಸ್ಮಾರ್ಟ್ಫೋನ್ ಮತ್ತು ವಿಶೇಷ ಪರೀಕ್ಷಾ ಪಟ್ಟಿಯನ್ನು ಬಳಸಿ ಕೇವಲ ಒಂದು ನಿಮಿಷದಲ್ಲಿ ನೀರಿನ ಶುದ್ಧತೆಯನ್ನು ಪರೀಕ್ಷಿಸುವ ಹೊಸ ತಂತ್ರಜ್ಞಾನವನ್ನು ಈ ಲೇಖನ ವಿವರಿಸುತ್ತದೆ. 'ಡ್ರಾಪ್ ಅಂಡ್ ಡಿಟೆಕ್ಟ್' ಎಂಬ ಈ ವಿಧಾನವು, ನೀವು ಕುಡಿಯುವ ನೀರು ಕುಡಿಯಲು ಯೋಗ್ಯವೇ ಇಲ್ಲವೇ ಎಂದು ತ್ವರಿತವಾಗಿ ತಿಳಿಸುತ್ತದೆ.
Karnataka News Live 16 April 2026Amruthadhaare Serial - ರವಿಚಂದ್ರನ್ ಸಿನಿಮಾದಂತೆಯೇ ಮಾಡಿದ್ರು..ತಾಯಿಯನ್ನೇ ಹೊರಹಾಕಿದ ಮಗ ಜೆಡಿ ಅಲ್ಲ ಕೇಡಿ!
Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಒಂದು ಕಡೆ ಸಾಮ್ರಾಜ್ಯ ಕಟ್ಟಲು ರೆಡಿಯಾಗುತ್ತಿದ್ದರೆ, ಇನ್ನೊಂದು ಜಯದೇವ್ ದಿವಾನ್ ಅಟ್ಟಹಾಸ ಹೆಚ್ಚಾಗುತ್ತಿದೆ. ಈಗ ರವಿಚಂದ್ರನ್ ಅವರ ಸಿನಿಮಾ ಥರ ಚಿತ್ರಕಥೆ ಮೂಡಿ ಬರುತ್ತಿದೆ. ಏನದು?
Karnataka News Live 16 April 2026Dharwad - 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ
ಕರ್ಲವಾಡ ಗ್ರಾಮದಲ್ಲಿ 16 ವರ್ಷಗಳಿಂದ ಜಾತ್ರಾ ಮಹೋತ್ಸವದ ಕುರಿತು ಎರಡು ಗುಂಪುಗಳ ನಡುವೆ ಇದ್ದ ಭಿನ್ನಾಭಿಪ್ರಾಯವು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯ ಕಂಡಿದೆ. ಗ್ರಾಮದೇವತೆಗಳ ಜಾತ್ರಾ ಮಹೋತ್ಸವವನ್ನು ಎರಡೂ ಗುಂಪುಗಳು ಒಟ್ಟಾಗಿ ನಡೆಸಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಗಿದೆ.
Karnataka News Live 16 April 2026Bridge to Bengaluru ನಾಳೆ ದೆಹಲಿಯಲ್ಲಿ ಬ್ರಿಡ್ಜ್ ಟು ಬೆಂಗ್ಳೂರು ಸಮಾವೇಶ; ರಾಜ್ಯಕ್ಕೆ ಹರಿದುಬರಲಿದೆ ಸಾವಿರಾರು ಕೋಟಿ ಬಂಡವಾಳ!
ರಾಜ್ಯ ಸರ್ಕಾರವು ನವದೆಹಲಿಯಲ್ಲಿ 'ಬ್ರಿಡ್ಜ್ ಟು ಬೆಂಗಳೂರು' ಸಂವಾದ ಸಮಾವೇಶವನ್ನು ಆಯೋಜಿಸಿದ್ದು, ಇದರಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಎರಡನೇ ಆವೃತ್ತಿಯನ್ನು ಅನಾವರಣಗೊಳಿಸಲಿದೆ. ಬೆಂಗಳೂರು ಟೆಕ್ ಸಮಿಟ್ಗೆ ಪೂರ್ವಭಾವಿ ಕಾರ್ಯಕ್ರಮದಿಂದಾಗಿ, ರಾಜ್ಯಕ್ಕೆ ಜಾಗತಿಕ ಬಂಡವಾಳ ಹರಿದು ಬರಲಿದೆ
Karnataka News Live 16 April 2026ಮನೆಬಿಟ್ಟು ಓಡಿ ಹೋದ 21ರ ಹರೆಯದ ತರುಣ - ಅಮ್ಮನ ವಯಸ್ಸಿನ ಮಹಿಳೆ ಜೊತೆ ಮದುವೆ - ಆಘಾತದಲ್ಲಿ ಕುಟುಂಬ
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 40 ವರ್ಷದ ವಿಧವೆಗಾಗಿ 21ರ ಯುವಕನೊಬ್ಬ ಮನೆ ತೊರೆದಿದ್ದಾನೆ. ಈ ಅಸಾಂಪ್ರದಾಯಿಕ ಪ್ರೇಮ ಸಂಬಂಧ ಮತ್ತು 19 ವರ್ಷಗಳ ವಯಸ್ಸಿನ ಅಂತರವು ಯುವಕನ ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದ್ದು, ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Karnataka News Live 16 April 2026ರಾಮನಗರದ 7481 ಎಕರೆ ವಿಸ್ತೀರ್ಣದಲ್ಲಿ ಗ್ರೇಟರ್ ಬೆಂಗಳೂರಿಗೆ ಉಪನಗರ ಯೋಜನೆ - ಚರ್ಚೆ
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಮತ್ತು 11 ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಕುರಿತು ಚರ್ಚಿಸಲಾಗಿದೆ. ಇದರೊಂದಿಗೆ, ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
Karnataka News Live 16 April 2026Bagalkote - ನೇಣಿಗೆ ಶರಣಾದ 19 ವರ್ಷದ ಭೂಮಿಕಾ; ಡೋಂಗ್ರಿ ಜೊತೆಗಿನ ಹಿಜಾಬ್ ಫೋಟೋ ವೈರಲ್
19 ವರ್ಷದ ಭೂಮಿಕಾ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ. ಅನ್ಯಕೋಮಿನ ಯುವಕನ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಕರೆದಿವೆ. ಯುವತಿ ಹಿಜಾಬ್ ಧರಿಸಿದ ಫೋಟೋ ವೈರಲ್ ಆಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Karnataka News Live 16 April 2026ಅಮೆರಿಕದ ದಾಳಿ ಬೆದರಿಕೆL - ಫ್ಲೈಟ್ ಹತ್ತಿ ಬಂದಿದ್ದ ಇರಾನ್ ನಿಯೋಗ ಬಸ್ನಲ್ಲಿ ವಾಪಸ್!
ಪಾಕಿಸ್ತಾನದಲ್ಲಿ ಅಮೆರಿಕದೊಂದಿಗಿನ ಮಾತುಕತೆ ವಿಫಲವಾದ ನಂತರ, ಇರಾನ್ ನಿಯೋಗವು ಕ್ಷಿಪಣಿ ದಾಳಿಯ ಬೆದರಿಕೆಯಿಂದಾಗಿ ತಮ್ಮ ಪ್ರಯಾಣದ ಮಾರ್ಗವನ್ನು ಬದಲಿಸಿತು. ಟೆಹ್ರಾನ್ಗೆ ಸುರಕ್ಷಿತವಾಗಿ ಮರಳಲು ಅವರು ವಿಮಾನ, ರೈಲು ಮತ್ತು ಬಸ್ಗಳನ್ನು ಬಳಸಿದರು.
Karnataka News Live 16 April 2026HK Patil on Delimitation 2026 - ಜನಸಂಖ್ಯೆ ಆಧರಿಸಿ ಕ್ಷೇತ್ರ ವಿಂಗಡಿಸಿದರೆ ಅನ್ಯಾಯ -ಎಚ್ಕೆ ಪಾಟೀಲ್
Karnataka News Live 16 April 2026ರಾಯರ ದರ್ಶನಕ್ಕೆ ಹೊರಟವರ ವಾಹನ ಅಪಘಾತ; ಸ್ಥಳದಲ್ಲಿಯೇ 8 ಭಕ್ತರ ದುರ್ಮರಣ, 13 ಮಂದಿಗೆ ಗಾಯ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಮೂಲದ ಎಂಟು ಭಕ್ತರು ಮೃತಪಟ್ಟಿದ್ದಾರೆ. ರಾಯರ ದರ್ಶನಕ್ಕೆ ಬೊಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
Karnataka News Live 16 April 2026ವನ್ಯಜೀವಿ ಪ್ರೇಮಿಗಳಿಗೆ ಗುಡ್ ನ್ಯೂಸ್ - ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧದ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
Karnataka News Live 16 April 2026women's reservation bill 2026 - ಮಹಿಳಾ ಮೀಸಲು ಮಹಾ ಯತ್ನ, ಹೊಸಕಿ ಹಾಕಬೇಡಿ - ಬಿವೈ ವಿಜಯೇಂದ್ರ
ಪ್ರಧಾನಿ ಮೋದಿ ಸರ್ಕಾರದ 'ನಾರಿ ಶಕ್ತಿ ವಂದನಾ ಅಧಿನಿಯಮ' ಮಹಿಳೆಯರಿಗೆ ಐತಿಹಾಸಿಕ ಪ್ರಾತಿನಿಧ್ಯ ನೀಡುವ ಗುರಿ ಹೊಂದಿದೆ. ಇದರ ಶೀಘ್ರ ಜಾರಿಗೆ ಕ್ಷೇತ್ರ ಮರುವಿಂಗಡಣೆ ಅನಿವಾರ್ಯವಾಗಿದ್ದು, ಕೇಂದ್ರ ಸರ್ಕಾರವು ವಿಳಂಬ ತಪ್ಪಿಸಲು ತಿದ್ದುಪಡಿ ಮೂಲಕ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮುಂದಾಗಿದೆ.