11:40 PM (IST) Jun 15

Karnataka News Live 15 June 2025ಸೋನಿಯಾ ಗಾಂಧಿ ಆಸ್ಪತ್ರೆ ದಾಖಲು, ಈ ತಿಂಗಳಲ್ಲಿ 2ನೇ ಬಾರಿ ಆರೋಗ್ಯ ಏರುಪೇರು

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದೆ. ಇದೀಗ ದಿಢೀರ್ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story
11:09 PM (IST) Jun 15

Karnataka News Live 15 June 2025ನಾಸಾದಿಂದ ಮಂಗಳ ಗ್ರಹದ ಕ್ಲೀಯರ್ ಫೋಟೋ ಬಿಡುಗಡೆ,140 ಮಿಲಿಯನ್ ಮೈಲು ದೂರದ ಅದ್ಭುತ

ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಅತ್ಯಂತ ಕ್ಲಿಯರ್ ಇಮೇಜ್ ಸೆರೆ ಹಿಡಿದು ರವಾನಿಸಿದೆ. ಇದುವರೆಗೆ ತೆಗೆದಿರುವ ಚಿತ್ರಗಳ ಪೈಕಿ ಇದು ಅತ್ಯಂತ ಸ್ಪಷ್ಟತೆಯ ಚಿತ್ರವಾಗಿದೆ.ಬರೋಬ್ಬರಿ 140 ಮಿಲಿಯನ್ ಮೈಲು ದೂರದಲ್ಲಿರುವ ಮಂಗಳ ಗ್ರಹದ ಮೇಲಿನ ಫೋಟೋ ಅಚ್ಚರಿಗೆ ಕಾರಣವಾಗಿದೆ.

Read Full Story
10:11 PM (IST) Jun 15

Karnataka News Live 15 June 2025ಭಾರಿ ಮಳೆಯಿಂದ ನಾಳೆ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ

ಭಾರಿ ಮಳೆ ಕಾರಣದಿಂದ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ರಜೆ ನಾಲ್ಕೈದು ತಾಲೂಕುಗಳಿಗೆ ಸೀಮೀತವಾಗಿದೆ. ಯಾವ ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ?

Read Full Story
09:42 PM (IST) Jun 15

Karnataka News Live 15 June 2025ಫಿಫಾ ವಿಶ್ವಕಪ್‌ಗೆ ಅರ್ಹತೆ, ಉಜ್ಬೇಕಿಸ್ತಾನ್ ತಂಡಕ್ಕೆ ಹೊಚ್ಚ ಹೊಸ 40 ಕಾರು ಗಿಫ್ಟ್

ಉಜ್ಬೇಕಿಸ್ತಾನ್ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಈ ಸಂಭ್ರಾಚರಣೆ ಜೋರಾಗಿದೆ. ಇದರ ನಡುವೆ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ತಂಡದ ಪ್ರತಿಯೊಬ್ಬ ಆಟಗಾರರಿಗೆ ಇದೀಗ ಕಾರು ಉಡುಗೊರೆಯಾಗಿ ನೀಡಲಾಗಿದೆ.

Read Full Story
09:23 PM (IST) Jun 15

Karnataka News Live 15 June 202530 ವರ್ಷಗಳಿಂದ ಕಡೆಗಣಿಸಲ್ಪಟ್ಟಿದ್ದ ಚನ್ನಸಂದ್ರ ಕೆರೆಗೆ ಪುನರ್ಜನ್ಮ, ಈಗ ತ್ಯಾಜ್ಯ ಮುಕ್ತ

ಮೂರು ದಶಕಗಳ ಕಾಲ ಕಸದ ತಾಣವಾಗಿದ್ದ ಬೆಂಗಳೂರಿನ ಚನ್ನಸಂದ್ರ ಕೆರೆ, ಸಮುದಾಯ ಮತ್ತು ಸಿಎಸ್‌ಆರ್ ನೆರವಿನಿಂದ ಪುನರುಜ್ಜೀವನಗೊಂಡಿದೆ. ವನಮಹೋತ್ಸವದ ಸಂದರ್ಭದಲ್ಲಿ ಸ್ಥಳೀಯರ ನೇತೃತ್ವದಲ್ಲಿ ಆರಂಭವಾದ ಈ ಯೋಜನೆ, ಕೆರೆಯನ್ನು ಹೊಸ ರೂಪದಲ್ಲಿ ಮರುಸ್ಥಾಪಿಸಿದೆ.
Read Full Story
09:00 PM (IST) Jun 15

Karnataka News Live 15 June 2025ಕೊನೆಗೂ ಮುಕ್ತಿ, ಹೆಬ್ಬಾಳ ಮೇಲ್ಸೇತುವೆ ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ?

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿನ ದಟ್ಟಣೆಗೆ ಪರಿಹಾರವಾಗಿ ಹೊಸ ಮೇಲ್ಸೇತುವೆಯ ಮೊದಲ ಹಂತ ಆಗಸ್ಟ್‌ನಲ್ಲಿ ತೆರೆಯಲಿದೆ. ನಾಗವಾರದಿಂದ ಮೇಕ್ರಿ ವೃತ್ತದ ಕಡೆಗೆ ಸಾಗುವ ಈ ಮೇಲ್ಸೇತುವೆ, ಕೆಆರ್‌ಪುರ ಲೂಪ್‌ಗೆ ಸಂಪರ್ಕ ಕಲ್ಪಿಸಲಿದೆ.
Read Full Story
08:35 PM (IST) Jun 15

Karnataka News Live 15 June 2025ಲಾಲ್‌ಬಾಗ್‌ನಲ್ಲಿ ಫೋಟೋಶೂಟ್‌, ಚಿತ್ರೀಕರಣ, ರೀಲ್ಸ್ ಶೀಘ್ರದಲ್ಲೇ ನಿಷೇಧ!

ಲಾಲ್‌ಬಾಗ್‌ನಲ್ಲಿ ಮದುವೆ, ಫೋಟೋಶೂಟ್‌ಗಳು ಮತ್ತು ವಾಣಿಜ್ಯ ಚಿತ್ರೀಕರಣಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆ ಪರಿಗಣಿಸುತ್ತಿದೆ. ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Full Story
08:04 PM (IST) Jun 15

Karnataka News Live 15 June 2025ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಅರೆಸ್ಟ್

ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಕ್ರೂ ಅರೆಸ್ಟ್ ಆಗಿದ್ದಾರೆ. ಏಕಾಏಕಿ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ?

Read Full Story
07:51 PM (IST) Jun 15

Karnataka News Live 15 June 2025ಟ್ರಂಪ್ ವಾಪಸಾತಿಯ ಉದ್ವಿಗ್ನತೆಯ ನಡುವೆ G7 ಶೃಂಗಸಭೆ

ವಿಶ್ವ ನಾಯಕರು ಕೆನಡಾದಲ್ಲಿ ಸೇರುತ್ತಿರುವಾಗ, ರಾಜತಾಂತ್ರಿಕ ಅಸ್ಥಿರತೆ ಮತ್ತೆ ಕಾಣಿಸಿಕೊಳ್ಳುತ್ತಿದೆ, ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಮರುಪ್ರವೇಶದೊಂದಿಗೆ. ಮುಂದೆ ಏನಾಗುತ್ತದೆ ಎಂಬುದು ಜಾಗತಿಕ ಕಾರ್ಯಸೂಚಿಯನ್ನು ಮರುರೂಪಿಸುತ್ತದೆ.

Read Full Story
07:44 PM (IST) Jun 15

Karnataka News Live 15 June 20254 ನಟಿಯರು ತಿರಸ್ಕರಿಸಿದ್ದ 'ಲಗಾನ್' ಚಿತ್ರಕ್ಕೀಗ 24ನೇ ವರ್ಷ!

ಆಮಿರ್ ಖಾನ್ ಅವರ 'ಲಗಾನ್' 24 ವರ್ಷಗಳನ್ನು ಪೂರೈಸಿದೆ. ಅನೇಕ ನಾಯಕಿಯರು ಈ ಚಿತ್ರವನ್ನು ತಿರಸ್ಕರಿಸಿದ್ದರು, ಅವರು ಯಾರು ಮತ್ತು ಚಿತ್ರಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಕಥೆಗಳು ನಮಗೆ ತಿಳಿದಿವೆಯೇ? ನಾವು ನಿಮಗೆ ತಿಳಿಸುತ್ತೇವೆ.

Read Full Story
07:26 PM (IST) Jun 15

Karnataka News Live 15 June 2025ದುಬಾರಿ ಬೆಲೆಯ ಹೊಸ ಹೈಬ್ರಿಡ್ ಕಾರು ಖರೀದಿಸಿದ ಅನುಶ್ರಿ, ಈ ಕಾರಿನಲ್ಲಿದೆ ಹಲವು ವಿಶೇಷತೆ

ಆ್ಯಂಕರ್ ಅನುಶ್ರಿ ಹೊಸ ಕಾರು ಖರೀದಿಸಿದ್ದಾರೆ. ಈ ಬಾರಿ ಅನುಶ್ರೀ ಹೊಚ್ಚ ಹೊಸ ಹೈಬ್ರಿಡ್ ಕಾರು ಖರೀದಿಸಿದ್ದಾರೆ. ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಈ ಕಾರಿನ ಬೆಲೆ ಎಷ್ಟು?

Read Full Story
07:20 PM (IST) Jun 15

Karnataka News Live 15 June 2025ನಕಲಿ​ SMSನಿಂದ ಬೇಸತ್ತಿದ್ದೀರಾ? ಇನ್ನು ಪತ್ತೆ ಬಲು ಸುಲಭ- ಮೋಸ ಹೋಗೋ ಚಾನ್ಸೇ ಇಲ್ಲ....

ಎಸ್​ಎಂಎಸ್​ ಬಂದಾಗ ಅದು ನಕಲಿಯೋ, ಅಸಲಿಯೋ ಎಂದು ತಿಳಿಯದೇ ಬಂದಿರುವ ಲಿಂಕ್​ ಓಪನ್​ ಮಾಡಿ ಹಣ ಕಳೆದುಕೊಂಡವರು, ಮೋಸ ಹೋದವರು ಅನೇಕ ಮಂದಿ. ಆದರೆ ಇನ್ಮುಂದೆ ಮೋಸ ಹೋಗೋ ಚಾನ್ಸೇ ಇಲ್ಲ. ಅದು ಹೇಗೆ ನೋಡಿ.

Read Full Story
07:03 PM (IST) Jun 15

Karnataka News Live 15 June 2025ಮನೆಯವರೆಲ್ಲ ಅಜ್ಜಿ ತಿಥಿ ಕಾರ್ಯದಲ್ಲಿದ್ದಾಗ ಚಿನ್ನ ಕಳ್ಳತನ, ಬಂಗಾರವಿಲ್ಲದೆ ಮಗಳ ಮದುವೆ ಮುಂದೂಡಿಕೆ!

ಆನೇಕಲ್ ತಾಲೂಕಿನಲ್ಲಿ ಮನೆಯೊಂದರಲ್ಲಿ 240 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಮಗಳ ಮದುವೆಗೆಂದು ಸಂಗ್ರಹಿಸಿದ್ದ ಚಿನ್ನ ಕಳೆದುಕೊಂಡ ಕುಟುಂಬದವರು ಕಂಗಾಲಾಗಿದ್ದಾರೆ. ಚಿನ್ನದ ಕೊರತೆಯಿಂದ ಮದುವೆಯನ್ನು ಮುಂದೂಡಲಾಗಿದೆ.
Read Full Story
06:30 PM (IST) Jun 15

Karnataka News Live 15 June 2025ಇರಾನ್-ಇಸ್ರೇಲ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ, ಭಾರತಕ್ಕೆ ಹಣದುಬ್ಬರದ ಭೀತಿ!

ಇರಾನ್-ಇಸ್ರೇಲ್ ಸಂಘರ್ಷವು ತೈಲ ಬೆಲೆ ಏರಿಕೆ ಮತ್ತು ವ್ಯಾಪಾರ ಅಡಚಣೆಗಳ ಭೀತಿ ಹುಟ್ಟಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವ ಆತಂಕದಿಂದ ಭಾರತದ ಮೇಲೆ ಹಣದುಬ್ಬರದ ಒತ್ತಡ ಹೆಚ್ಚಾಗಬಹುದು. ಶನಿವಾರ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 6 ಡಾಲರ್‌ಗಿಂತಲೂ ಹೆಚ್ಚಾಗಿದೆ.

Read Full Story
06:05 PM (IST) Jun 15

Karnataka News Live 15 June 2025ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಲಾಭ ಸಿಗಲಿ - ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಹೊಸ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಮಧು ಬಂಗಾರಪ್ಪ, ರಾಜ್ಯದ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆಯ ಲಾಭ ಸಿಗಬೇಕೆಂದು ಹೇಳಿದರು. ಬೊಮ್ಮನಕಟ್ಟೆಗೆ ಸರ್ಕಾರಿ ನಗರ ಸಾರಿಗೆ ಸಂಚಾರದ ಬೇಡಿಕೆ ಈಡೇರಿದೆ.
Read Full Story
06:03 PM (IST) Jun 15

Karnataka News Live 15 June 2025ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ, ಸಾವು ಬದುಕಿನ ನಡುವೆ ಹೋರಾಟ

ಗಾಳಿ ಮಳೆಯಿಂದ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ಆರೋಗ್ಯ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರನ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story
05:28 PM (IST) Jun 15

Karnataka News Live 15 June 2025ಪೊಲೀಸ್ ಕಾನ್‌ಸ್ಟೆಬಲ್‌ ವಯೋಮಿತಿ ಹೆಚ್ಚಳ? ಗೃಹ ಸಚಿವರಿಂದ ಬಿಗ್ ಅಪ್ಡೇಟ್!

ಗೃಹ ಸಚಿವ ಡಾ. ಪರಮೇಶ್ವರ್ ಅವರು ಪೊಲೀಸ್ ಕಾನ್‌ಸ್ಟೆಬಲ್ ಅಭ್ಯರ್ಥಿಗಳ ವಯೋಮಿತಿಯನ್ನು 33 ವರ್ಷಕ್ಕೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಠಾಣೆಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಹಾಗೂ ಪ್ರಾರ್ಥನಾ ಮಂದಿರಗಳ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಲು ಸಲಹೆ ನೀಡಿದ್ದಾರೆ.
Read Full Story
05:25 PM (IST) Jun 15

Karnataka News Live 15 June 2025ದೆಹಲಿ ವಿಮಾನ ನಿಲ್ದಾಣದ ರನ್‌ವೇ 3 ತಿಂಗಳು ಬಂದ್, 200 ವಿಮಾನ ಹಾರಾಟ ರದ್ದು

ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ರನ್‌ವೇ ಬರೋಬ್ಬರಿ 3 ತಿಂಗಳು ಬಂದ್ ಆಗುತ್ತಿದೆ. ಇದರಿಂದ ಪ್ರತಿ ದಿನ 200 ವಿಮಾನ ಹಾರಾಟ ರದ್ದಾಗಲಿದೆ. ಇದೀಗ ದೆಹಲಿ ವಿಮಾನ ನಿಲ್ದಾಣದ ರನ್‌ವೇ ಬಂದ್ ಮಾಡಲು ಕಾರಣವೇನು?

Read Full Story
05:22 PM (IST) Jun 15

Karnataka News Live 15 June 2025ಪುಣೆಯಲ್ಲಿ ಭೀಕರ ಸೇತುವೆ ದುರಂತ - 6 ಪ್ರವಾಸಿಗರ ಸಾವು, ನದಿಯಲ್ಲಿ ಕೊಚ್ಚಿ ಹೋದವರಿಗಾಗಿ ಶೋಧ

ಪುಣೆಯ ಇಂದ್ರಯಾಣಿ ನದಿ ಸೇತುವೆ ಕುಸಿತದಿಂದ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಪಡೆಗಳು ಸ್ಥಳದಲ್ಲಿದ್ದು, ಹಲವರನ್ನು ರಕ್ಷಿಸಲಾಗಿದೆ. ಭಾರಿ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದ ಕಾರಣ ಈ ದುರಂತ ಸಂಭವಿಸಿದೆ.
Read Full Story
05:15 PM (IST) Jun 15

Karnataka News Live 15 June 2025JDS ಪಕ್ಷ ಸಂಘಟನೆಗೆ ನಿಖಿಲ್‌ 58 ದಿನಗಳ ರಾಜ್ಯ ಪ್ರವಾಸ - ಯಾವ್ಯಾವ ಕ್ಷೇತ್ರಗಳಿಗೆ ಭೇಟಿ?

ಜೆಡಿಎಸ್ ಪಕ್ಷದ ಸಂಘಟನೆಗಾಗಿ ನಿಖಿಲ್ ಕುಮಾರಸ್ವಾಮಿ 58 ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. 90 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಈ ಪ್ರವಾಸದ ನಂತರ ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟಾಭಿಷೇಕ ನೆರವೇರಿಸುವ ಸಾಧ್ಯತೆಯಿದೆ.
Read Full Story