11:00 PM (IST) Jul 12

Karnataka News Live 12th July:ರೈತರ ಏಜೆಂಟರಿಗೆ ಬೆಳೆ ವಿಮೆ ಹಣ ನೀಡಬೇಡಿ - ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ರೈತರು ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯ ವಿಮೆ ತುಂಬುವಾಗ ಏಜೆಂಟರು ಮಧ್ಯಸ್ಥಿಕೆ ವಹಿಸಿ ತಮಗೆ ಪರ್ಸೆಂಟೇಜ್‌ ನೀಡಬೇಕು ಎಂದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಹಣ ನೀಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

Read Full Story
10:12 PM (IST) Jul 12

Karnataka News Live 12th July:ಗುಹೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆ - ಪತ್ತೆ ಹಚ್ಚಿ ರಕ್ಷಿಸಿದ ಗೋಕರ್ಣ ಪೊಲೀಸರು

ಜಿಲ್ಲೆಯ ಗೋಕರ್ಣದ ಕಾಡಿನ ಮಧ್ಯ ಗುಡ್ಡದ ಗುಹೆಯಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದ 40 ವರ್ಷದ ರಷ್ಯಾದ ಮಹಿಳೆಯನ್ನು ಗಸ್ತು ತಿರುಗುತ್ತಿದ್ದ ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ.

Read Full Story
09:55 PM (IST) Jul 12

Karnataka News Live 12th July:ಮುರಿದ ಸೇತುವೆ ಮೇಲೆ ಬ್ಯಾಲೆನ್ಸ್ ನಡಿಗೆ - ನಿತ್ಯ ಜೀವ ಕೈಯಲ್ಲಿಡಿದು ನಡೆಯುವ ವಿದ್ಯಾರ್ಥಿಗಳು

ಏಳು ವರ್ಷಗಳ ಹಿಂದೆ ನುಗ್ಗಿದ ಪ್ರವಾಹ ಇದೀಗ ನೂರಾರು ಜನರು ನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ. ಜನರ ಸಂಕಷ್ಟ ಪರಿಹರಿಸುವ ಸೇತುವೆ ಜೀವಕ್ಕೆ ಕುತ್ತು ತಂದಿರುವುದಾದರೂ ಏಕೆ ಅಂತೀರಾ ಅದನ್ನು ನೀವೇ ಓದಿ.

Read Full Story
09:04 PM (IST) Jul 12

Karnataka News Live 12th July:ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಮಂಕುಬೂದಿ ಎರಚಿದ ಕಾಂಗ್ರೆಸ್ - ನಿಖಿಲ್ ಕುಮಾರಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸತ್ತ ಸರ್ಕಾರವಾಗಿದ್ದು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

Read Full Story
08:42 PM (IST) Jul 12

Karnataka News Live 12th July:ರೋಲ್ಸ್‌ ರಾಯ್ಸ್‌ನಲ್ಲಿ 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಉದ್ಯೋಗ ಪಡೆದ ಕನ್ನಡದ ಮೊದಲ ಹೆಣ್ಣುಮಗಳು!

ರೋಲ್ಸ್-ರಾಯ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ತುಳುನಾಡಿನ ರಿತುಪರ್ಣ ಪಾತ್ರರಾಗಿದ್ದಾರೆ. 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆದ ರಿತುಪರ್ಣ, ರೊಬೊಟಿಕ್ಸ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಅಮೆರಿಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
Read Full Story
08:03 PM (IST) Jul 12

Karnataka News Live 12th July:ಕುಳಿತಿದ್ರೂ ಅದು ಬೆಂಕಿನೇ ಅಂತೀರಾ?.. ಚೈತ್ರಾ ಆಚಾರ್ 'ಜೀನ್ಸ್‌-ವೈಟ್' ಲುಕ್‌ಗೆ ಹಾರ್ಟ್‌ಬೀಟ್ ಕಂಟ್ರೋಲ್ ತಪ್ತಿದ್ಯಾ?

ಟೋಬಿ ನಟಿ ಚೈತ್ರಾ ಆಚಾರ್‌ ಸಿನಿರಂಗದ ಜತೆ ಸಾಮಾಜಿಕ ಜಾಲತಾಣದಲ್ಲೂ ಸಖತ್‌ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಹೊಸ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ.

Read Full Story
07:03 PM (IST) Jul 12

Karnataka News Live 12th July:2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ - ಕೆ.ಎಚ್.ಮುನಿಯಪ್ಪ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆಯು 2027ಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.

Read Full Story
06:52 PM (IST) Jul 12

Karnataka News Live 12th July:Bhagyalakshmi Tanvi - ಚಿಕ್ಕಿ ಪೂಜಾಳ ಮದ್ವೆ ಖುಷಿಯಲ್ಲಿ ಸಕತ್​ ಫೋಟೋಶೂಟ್​ ಮಾಡಿಸಿಕೊಂಡ ಭಾಗ್ಯಲಕ್ಷ್ಮಿ ತನ್ವಿ

ಭಾಗ್ಯಲಕ್ಷ್ಮಿ ತನ್ವಿ ಉರ್ಫ್​ ಅಮೃತಾ ಗೌಡ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Read Full Story
06:25 PM (IST) Jul 12

Karnataka News Live 12th July:ಜು.13ರಂದು ನಟ ದರ್ಶನ್‌ ‘ಡೆವಿಲ್‌’ ಹಾಡಿನ ಶೂಟಿಂಗ್‌ ಥೈಲ್ಯಾಂಡ್‌ನಲ್ಲಿ ಶುರು!

ನಟ ದರ್ಶನ್ ನಟನೆಯ ಡೆವಿಲ್ ಚಿತ್ರದ ಬಾಕಿ ಇರುವ ಒಂದೇ ಒಂದು ಹಾಡಿನ ಶೂಟಿಂಗ್‌ಗಾಗಿ ಥೈಲ್ಯಾಂಡ್‌ ದೇಶಕ್ಕೆ ಹಾರಲಿದ್ದಾರೆ.

Read Full Story
06:10 PM (IST) Jul 12

Karnataka News Live 12th July:ಅಸಂಘಟಿತ ಕಾರ್ಮಿಕರಿಗೆ ಭದ್ರತೆ, ಮಹಿಳೆ-ಮಂಗಳಮುಖಿಯರಿಗೆ ಹೊಸ ಅವಕಾಶ - ಶೋಭಾ ಕರಂದ್ಲಾಜೆ

ಸಂಘಟಿತ ಕಾರ್ಮಿಕರಂತೆಯೇ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಮಿಕ ನೀತಿಗಳನ್ನು ಸಂಯೋಜಿಸಿ 'ನಾಲ್ಕು ಕೋಡ್‌'ಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Read Full Story
05:54 PM (IST) Jul 12

Karnataka News Live 12th July:ಧಾರವಾಡದಲ್ಲಿ ಲೋಕ ಅದಾಲತ್, 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಪ್ರಕರಣ ಇತ್ಯರ್ಥ

ಧಾರವಾಡದ ಉಚ್ಛ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆದು 1576 ಪ್ರಕರಣಗಳನ್ನು ಪರಿಗಣಿಸಲಾಯಿತು. 275 ಪ್ರಕರಣಗಳನ್ನು ರೂ.10,77,31,500/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಅಪಘಾತ ಪರಿಹಾರ, ಚೆಕ್ ಅಮಾನ್ಯ, ಸಿವಿಲ್ ಪ್ರಕರಣಗಳು ಸೇರಿದಂತೆ ಹಲವು ಬಗೆಯ ಪ್ರಕರಣಗಳ ಇತ್ಯರ್ಥವಾಯಿತು.
Read Full Story
05:44 PM (IST) Jul 12

Karnataka News Live 12th July:Bhagyalakshmi Serial - ಪೂಜಾ-ಕಿಶನ್​ ಮದ್ವೆ ಜೊತೆ ಭಾಗ್ಯ-ಆದಿ ಮದುವೆ! ಆಹಾ ಇದೆಂಥ ಟ್ವಿಸ್ಟು?

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸದ್ಯ ಪೂಜಾ ಮತ್ತು ಕಿಶನ್​ ಮದುವೆಯ ಸಂಭ್ರಮ ನಡೆಯುತ್ತಿದೆ. ಅದರ ನಡುವೆಯೇ ಭಾಗ್ಯ ನೇರಪ್ರಸಾರದಲ್ಲಿ ಬಂದು ಹೇಳಿದ್ದೇನು? ಇದೇನಿದು ಆದಿ-ಭಾಗ್ಯ ಮದುವೆ ಕಾನ್ಸೆಪ್ಟ್​?

Read Full Story
05:37 PM (IST) Jul 12

Karnataka News Live 12th July:ಸಿಎಂ ಸ್ಥಾನ ಭದ್ರತೆ, ಡಿಕೆಶಿಗೆ ಶಾಸಕರ ಬೆಂಬಲವಿಲ್ಲ ಎಂದ ಸಿದ್ದರಾಮಯ್ಯ ಹೇಳಿಕೆಗೆ ಯಾರು ಏನಂದ್ರು?

ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಿಎಂ ಸ್ಥಾನದ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ, ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Read Full Story
05:30 PM (IST) Jul 12

Karnataka News Live 12th July:ನನಗ್ಯಾವುದೇ ತಾರತಮ್ಯ ಇಲ್ಲ - ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ನಿಖಿಲ್ ಸ್ಪಷ್ಟ ಮಾತು

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಹಾಸನ ಕ್ಷೇತ್ರದ ಮೇಲಿನ ತಮ್ಮ ಭಾವನಾತ್ಮಕ ಸಂಬಂಧವನ್ನು ವಿವರಿಸಿದ್ದಾರೆ. 

Read Full Story
05:11 PM (IST) Jul 12

Karnataka News Live 12th July:Seetha Rama Sihi ಸೀರಿಯಲ್​ ಬಳಿಕ ಕಾಣೆಯಾಗಿರೋ ಪುಟಾಣಿ ರಿತು ಸಿಂಗ್​ ಈಗೇನು ಮಾಡ್ತಿದ್ದಾಳೆ?

ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯಾಗಿ, ಸುಬ್ಬಿಯಾಗಿ ಹವಾ ಸೃಷ್ಟಿಸಿದ್ದ ಪುಟಾಣಿ ರಿತುಸಿಂಗ್​ ಈಗ ಏನು ಮಾಡುತ್ತಿದ್ದಾಳೆ? ಬೇರೆ ಸೀರಿಯಲ್​ನಲ್ಲಿ ಬರ್ತಿದ್ದಾಳಾ?

Read Full Story
04:19 PM (IST) Jul 12

Karnataka News Live 12th July:Na Ninna Bidalare ಶರತ್​ಗೆ ಹುಟ್ಟುಹಬ್ಬ - ಎಂಜಿನಿಯರಿಂಗ್​ ಬಿಟ್ಟು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟನ ಸ್ಟೋರಿ ಇಲ್ಲಿದೆ...

ನಾ ನಿನ್ನ ಬಿಡಲಾರೆ ಶರತ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಗಳು ಹಿತಾಳ ಬಾಯಲ್ಲಿ ಅಪ್ಪಾ ಎಂದು ಕರೆಸಿಕೊಳ್ಳಲು ಕಾಯ್ತಿರೋ ನಟನ ಸ್ಟೋರಿ ಇಲ್ಲಿದೆ...

Read Full Story
03:14 PM (IST) Jul 12

Karnataka News Live 12th July:ಮೂರು ಪುಸ್ತಕ ಓದಲು ಸಿಎಂ ಸಿದ್ದರಾಮಯ್ಯ ಸಲಹೆ ನೀಡ್ತಾರೆ - ಭವ್ಯಾ ನರಸಿಂಹಮೂರ್ತಿ

ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಸಿದ್ದರಾಮಯ್ಯ ಮತ್ತು ದೇವೇಗೌಡರ ಬಳಿ ರಾಜಕೀಯ ಕಲಿಯುವ ಬಯಕೆ ವ್ಯಕ್ತಪಡಿಸಿದ್ದಾರೆ. 

Read Full Story
02:53 PM (IST) Jul 12

Karnataka News Live 12th July:ಮನೋವೈದ್ಯ ನಾಗರಾಜನ ಮತ್ತೊಂದು ಕರಾಳಮುಖ ಬಯಲು, ಉಗ್ರರಿಗಷ್ಟೇ ಅಲ್ಲ, ಹೈಪ್ರೊಫೈಲ್‌ ಕೈದಿಗಳಿಗೂ ಮೊಬೈಲ್‌ ಪೂರೈಕೆ!

ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧಿತರಾದ ಮೂವರ ವಿಚಾರಣೆ ತೀವ್ರಗೊಂಡಿದೆ. ಬಂಧಿತ ಮನೋವೈದ್ಯ ನಾಗರಾಜ್, ಹಣಕ್ಕಾಗಿ ಉಗ್ರರಿಗೆ ಮತ್ತು ಇತರೆ ಆರೋಪಿಗಳಿಗೆ ಮೊಬೈಲ್ ಪೂರೈಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Read Full Story
02:17 PM (IST) Jul 12

Karnataka News Live 12th July:ಮೂರುವರೆ ವರ್ಷದ ಬಾಲಕಿ ಮೇಲೆ ಬಲತ್ಕಾರ - 50 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 50 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಒಂದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
Read Full Story
02:14 PM (IST) Jul 12

Karnataka News Live 12th July:ಬನ್ನೇರುಘಟ್ಟ ಉದ್ಯಾನವನ - ಟಿಕೆಟ್‌ ದರ ಏರಿಕೆ, ಆಗಸ್ಟ್ 1ರಿಂದಲೇ ಜಾರಿಗೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ಆಗಸ್ಟ್ 1 ರಿಂದ ಏರಿಕೆಯಾಗಲಿದೆ. ವಯಸ್ಕರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಪ್ರವೇಶ ಶುಲ್ಕ ಹೆಚ್ಚಳವಾಗಲಿದ್ದು, ಸಫಾರಿ ಪ್ಯಾಕೇಜ್‌ಗಳ ದರಗಳು ಸಹ ಏರಿಕೆಯಾಗಿವೆ. ನಿರ್ವಹಣಾ ವೆಚ್ಚ ಹೆಚ್ಚಳದಿಂದಾಗಿ ಈ ಬದಲಾವಣೆ ಅನಿವಾರ್ಯವಾಗಿದೆ.
Read Full Story