11:42 PM (IST) Jul 11

Karnataka News Live 11 July 2026ರಾಧಿಕಾಗಿಂತ ನಾನೇ ಚಿರಂಜೀವಿಗೆ ಹೆಚ್ಚು - ಜಾನಕಿಯಮ್ಮ ಹೇಳಿದ್ದ ಆ ಮಾತಿನ ಮರ್ಮವೇನು?

ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಇಡೀ ಚಿತ್ರರಂಗವೇ ದುಃಖದಲ್ಲಿ ಮುಳುಗಿದೆ. ಸುಮಾರು 6 ದಶಕಗಳ ಕಾಲ, ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Read Full Story
10:41 PM (IST) Jul 11

Karnataka News Live 11 July 2026ಎಸ್. ಜಾನಕಿ ಆಸ್ತಿ ಮೌಲ್ಯ ಎಷ್ಟು ಕೋಟಿ? ಅಭಿಮಾನಿಗಳಲ್ಲಿ ಮೂಡಿದ ದೊಡ್ಡ ಪ್ರಶ್ನೆಗೆ ಇಲ್ಲಿದೆ ಉತ್ತರ!

ದಕ್ಷಿಣ ಭಾರತದ ಗಾನ ಕೋಗಿಲೆ ಎಸ್. ಜಾನಕಿ ನಮ್ಮನ್ನಗಲಿದ್ದಾರೆ. ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಇದೆ. ಆರು ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Read Full Story
10:30 PM (IST) Jul 11

Karnataka News Live 11 July 2026ಕಾಲು ನೋವು ತೋರಿಸಲು ಬಂದಿದ್ದ ಗಾಯಕಿ ಎಸ್‌ ಜಾನಕಿ ಸಾವು ಕಂಡಿದ್ದು ಹೇಗೆ? ಖಾಸಗಿ ಆಸ್ಪತ್ರೆ ಹೇಳಿದ್ದಿಷ್ಟು..

ಹಿರಿಯ ಗಾಯಕಿ ಎಸ್. ಜಾನಕಿ ಅವರ ಸಾವಿನ ಕಾರಣದ ಬಗ್ಗೆ ಇದ್ದ ಗೊಂದಲಕ್ಕೆ ತೆರೆಬಿದ್ದಿದೆ. ಕಾಲು ನೋವಿನ ಚಿಕಿತ್ಸೆಗೆಂದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು, ತೀವ್ರ ಸೋಂಕಿನಿಂದ ಉಂಟಾದ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕೃತವಾಗಿ ದೃಢಪಡಿಸಿದೆ.
Read Full Story
10:16 PM (IST) Jul 11

Karnataka News Live 11 July 2026S janaki - ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!

'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.

Read Full Story
10:07 PM (IST) Jul 11

Karnataka News Live 11 July 2026ಎಸ್‌ ಜಾನಕಿ ಅವರ ಇಚ್ಛೆಯಂತೆ ಮೈಸೂರಿನಲ್ಲಿಯೇ ಗಾನಕೋಗಿಲೆಯ ಅಂತ್ಯಸಂಸ್ಕಾರ

ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಕೊನೆಯ ಇಚ್ಛೆಯಂತೆ ಮೈಸೂರಿನಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

Read Full Story
09:50 PM (IST) Jul 11

Karnataka News Live 11 July 2026Singer S Janaki ಜೀವನದ ಅಪರೂಪದ ಸಂಗತಿಗಳು - ಇಲ್ಲಿದೆ ಗಾನ ಕೋಗಿಲೆಯ ಅಜ್ಞಾತ ಕಥೆ

ಎಸ್. ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಇತ್ತು. ಓದಿಗಿಂತ ಸಂಗೀತವೇ ಅವರ ಬದುಕಿನ ಕನಸಾಗಿತ್ತು. ಮಗಳ ಪ್ರತಿಭೆಯನ್ನು ಗುರುತಿಸಿದ ತಂದೆ ಸಂಗೀತಾಭ್ಯಾಸಕ್ಕೆ ಕಳುಹಿಸಿದರು.

Read Full Story
09:49 PM (IST) Jul 11

Karnataka News Live 11 July 20262013ರಲ್ಲಿ ನೀಡಿದ್ದ ದೇಶದ ಅತ್ಯುನ್ನುತ ನಾಗರಿಕ ಪದ್ಮಭೂಷಣ ಪ್ರಶಸ್ತಿಯೇ ಬೇಡ ಎಂದಿದ್ದ Singer S Janaki

Singer S Janaki: ಅಭಿಮಾನಿಗಳಿಂದ ಜಾನಕಿಯಮ್ಮ ಎಂದೇ ಕರೆಸಿಕೊಳ್ಳುವ S Janaki ಅವರು 25 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 'ದಕ್ಷಿಣ ಭಾರತದ ಕೋಗಿಲೆ' ಎಂಬ ಬಿರುದು ಪಡೆದಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿ ಹಾಡು ಹಾಡಿದ್ದ ಅವರು ಇಂದು ನಮಗೆ ನೆನಪು.

Read Full Story
09:44 PM (IST) Jul 11

Karnataka News Live 11 July 2026ಎಸ್‌ ಜಾನಕಿ ಅಂತ್ಯಸಂಸ್ಕಾರಕ್ಕೆ ಉಚಿತ ನಿವೇಶನ, ಸ್ವಯಾರ್ಜಿತ ಸೈಟ್‌ ನೀಡುವುದಾಗಿ ಹೇಳಿದ ಸಾರಾ ಮಹೇಶ್‌

ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಅಂತ್ಯಸಂಸ್ಕಾರಕ್ಕೆ ಮೈಸೂರಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಉಚಿತ ನಿವೇಶನ ನೀಡಲು ಮುಂದೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಂತಿಮ ನಿರ್ಧಾರಕ್ಕಾಗಿ ತುರ್ತು ಸಭೆ ನಡೆಸಲಾಗುತ್ತಿದೆ.
Read Full Story
09:31 PM (IST) Jul 11

Karnataka News Live 11 July 2026ಗಾನಕೋಗಿಲೆ ಎಸ್. ಜಾನಕಿ ಅಗಲಿಕೆ - ಸಂಗೀತ ಲೋಕದ ದಿಗ್ಗಜೆಗೆ ಡಿಕೆಶಿ-ಸಿದ್ದರಾಮಯ್ಯ ಭಾವುಕ ನಮನ

ಎಸ್. ಜಾನಕಿ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ. 

Read Full Story
09:26 PM (IST) Jul 11

Karnataka News Live 11 July 2026'ನನ್ನ ಸಿನಿಮಾಗಳಿಗೆ ಜೀವ ತುಂಬಿದ್ದೇ ಜಾನಕಮ್ಮನ ಧ್ವನಿ..' ಗಾನಕೋಗಿಲೆಯ ಸಾವಿಗೆ ಮೆಗಾಸ್ಟಾರ್‌ ಚಿರಂಜೀವಿ ಕಂಬನಿ

ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ವಾರ್ತೆಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ. ತಮ್ಮ ಸಿನಿಮಾಗಳ ಯಶಸ್ಸಿನಲ್ಲಿ ಜಾನಕಮ್ಮನವರ ಪಾತ್ರವನ್ನು ಸ್ಮರಿಸಿದ ಅವರು, ಅವರ ಧ್ವನಿ ಸದಾ ಅಮರ ಎಂದು ಕಂಬನಿ ಮಿಡಿದಿದ್ದಾರೆ.
Read Full Story
09:14 PM (IST) Jul 11

Karnataka News Live 11 July 2026S Janaki - ಗಾಯಕಿ ಎಸ್ ಜಾನಕಿಯ ಕೊನೆಯ ಗಾಯನ, ಕೊನೆಯ ಉಸಿರಿಗೆ ಸಾಕ್ಷಿಯಾಗಿದ್ದು ಕನ್ನಡನಾಡಿನ ಮೈಸೂರು!

1952ರಲ್ಲಿ ಜಿ.ಕೆ. ವೆಂಕಟೇಶ್‌ ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್‌ ಅವರೊಂದಿಗೆ ಹಾಡಿದ್ದ ಎಸ್ ಜಾನಕಿಯವರು, ಮತ್ತೆ ಅಕ್ಟೋಬರ್‌ 28, 2017ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಗಾನಸುಧೆ ಹರಿಸಿದ್ದೇ ಕೊನೆಯ ಕಾರ್ಯಕ್ರಮ.

Read Full Story
09:04 PM (IST) Jul 11

Karnataka News Live 11 July 2026ಎಸ್‌ ಜಾನಕಿ ಅವರ ಎಂದೂ ಮರೆಯದ ಕನ್ನಡದ ಟಾಪ್‌-10 ಹಾಡುಗಳು, ಇದರಲ್ಲಿ ನಿಮ್ಮಿಷ್ಟದ ಗೀತೆ ಯಾವುದು?

ಗಾನಕೋಗಿಲೆ ಎಸ್. ಜಾನಕಿ ಅವರ ಧ್ವನಿ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಈ ಲೇಖನವು ಅವರ ಕಂಠಸಿರಿಯಲ್ಲಿ ಮೂಡಿಬಂದ, ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವ 10 ಸಾರ್ವಕಾಲಿಕ ಶ್ರೇಷ್ಠ ಹಾಡುಗಳ ಪಟ್ಟಿಯನ್ನು ಒದಗಿಸುತ್ತದೆ.
Read Full Story
08:55 PM (IST) Jul 11

Karnataka News Live 11 July 2026KGF ನಂತರ ಯಶ್‌ ಅಬ್ಬರ - ಬಾಕ್ಸ್‌ ಆಫೀಸ್‌ ಶೇಕ್‌ ಮಾಡಲು ಬರ್ತಿವೆ 5 ಬಿಗ್‌ ಬಜೆಟ್‌ ಸಿನಿಮಾಗಳು

KGF ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆದ ಯಶ್, ಇದೀಗ 'ಟಾಕ್ಸಿಕ್', 'ರಾಮಾಯಣ' ಸೇರಿದಂತೆ 5 ದೊಡ್ಡ ಸಿನಿಮಾಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅವರ ಮುಂಬರುವ ಚಿತ್ರಗಳ ಸಂಪೂರ್ಣ ಪಟ್ಟಿ ಮತ್ತು ಲೇಟೆಸ್ಟ್ ಅಪ್‌ಡೇಟ್‌ ಇಲ್ಲಿದೆ.

Read Full Story
08:19 PM (IST) Jul 11

Karnataka News Live 11 July 2026S Janaki - ಮಹಾನಟಿ ಸಾವಿತ್ರಿಗೆ ನಾನು ಹಾಡಲ್ಲ ಎಂದಿದ್ದ ಜಾನಕಿಯಮ್ಮ? ಇಲ್ಲಿದೆ ಅಸಲಿ ಕಹಾನಿ

ಖ್ಯಾತ ಗಾಯಕಿ ಎಸ್. ಜಾನಕಿ ಅವರು ಮಹಾನಟಿ ಸಾವಿತ್ರಿ ಸಿನಿಮಾಗಳಿಗೆ ಹಾಡುವುದನ್ನು ಏಕೆ ನಿರಾಕರಿಸಿದ್ದರು? ಪಿ. ಸುಶೀಲಾ, ಸಾವಿತ್ರಿ ಮತ್ತು ಜಾನಕಿ ನಡುವೆ ನಡೆದ ಘಟನೆಯ ಹಿಂದಿನ ಅಸಲಿ ಕಥೆ ಹಾಗೂ ಜಾನಕಿ ಸಂದರ್ಶನದಲ್ಲಿ ಹೇಳಿದ ಸತ್ಯ ಇಲ್ಲಿದೆ.

Read Full Story
08:06 PM (IST) Jul 11

Karnataka News Live 11 July 2026Breaking - ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ

ಪ್ರಖ್ಯಾತ ಗಾಯಕಿ ಎಸ್‌.ಜಾನಕಿ ಶನಿವಾರ ವಹೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

Read Full Story
07:46 PM (IST) Jul 11

Karnataka News Live 11 July 2026'ಸಾವಿರಾರು ಕೋಟಿ ಹಣ ಎಲ್ಲಿಂದ ಬರುತ್ತೆ?' - ಆರ್‌ಎಸ್‌ಎಸ್ ಬಗ್ಗೆ ಶಿವರಾಜ ತಂಗಡಗಿ ಪ್ರಶ್ನೆ

ಶಾಸಕ ಶಿವರಾಜ ತಂಗಡಗಿ, ಆರ್‌ಎಸ್‌ಎಸ್‌ಗೆ ಬರುತ್ತಿರುವ ಹಣದ ಮೂಲದ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಿಜೆಪಿ, ಎಸ್‌ಐಆರ್‌, ಅಂಜನಾದ್ರಿ ಕಾಣಿಕೆ ಹುಂಡಿ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.

Read Full Story
07:34 PM (IST) Jul 11

Karnataka News Live 11 July 2026ಕೋಟೆನಾಡಿನಿಂದ ಕ್ಯಾಲಿಫೋರ್ನಿಯಾ - 2.6 ಕೋಟಿ ಸಂಬಳಕ್ಕೆ Nvidia ಕೇಂದ್ರ ಕಚೇರಿಯಲ್ಲಿ ಕೆಲಸ ಗಿಟ್ಟಿಸಿದ ಚಿತ್ರದುರ್ಗದ ಹುಡುಗ

ಚಿತ್ರದುರ್ಗದ ಸಣ್ಣ ಹಳ್ಳಿಯ ಯುವ ಇಂಜಿನಿಯರ್ ಪೃಥ್ವಿರಾಜ್, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಪ್ರಖ್ಯಾತ ಟೆಕ್ ಕಂಪನಿ ‘ಎನ್‌ವಿಡಿಯಾ’ದಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಐಐಟಿ ಪದವಿ ಇಲ್ಲದಿದ್ದರೂ, ಕೌಶಲ್ಯ ಅಭಿವೃದ್ಧಿಯಿಂದಲೇ ವಾರ್ಷಿಕ 2.6 ಕೋಟಿ ರೂ. ವೇತನದ ಉದ್ಯೋಗ ಗಿಟ್ಟಿಸಿದ್ದಾರೆ.

Read Full Story
07:00 PM (IST) Jul 11

Karnataka News Live 11 July 2026'ಎರಡು ಪ್ಲೇಟ್ ದೋಸೆ' ಲುಕ್‌ನಲ್ಲಿ ಮಿಂಚಿದ 'ಪುಟ್ಟಗೌರಿ' - ಇಲ್ಲಿವೆ ಸಾನ್ಯ ಅಯ್ಯರ್ ಬೋಲ್ಡ್ ಪೋಟೋಸ್

Sanya Iyer: 'ಬಿಗ್ ಬಾಸ್ ಕನ್ನಡ' ಖ್ಯಾತಿಯ ಸಾನ್ಯ ಅಯ್ಯರ್ 'ಎರಡು ಪ್ಲೇಟ್ ದೋಸೆ' ರ್ಯಾಪ್ ಸಾಂಗ್ ಬಿಡುಗಡೆಯಾಗಿ ಒಂದು ತಿಂಗಳಾದ ಬೆನ್ನಲ್ಲೇ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Read Full Story
06:27 PM (IST) Jul 11

Karnataka News Live 11 July 2026500ಕ್ಕೂ ಹೆಚ್ಚು ಕೆಲಸಕ್ಕೆ ಅರ್ಜಿ, ಒಂದೇ ಒಂದು ಇಂಟರ್ವ್ಯೂ ಕಾಲ್ ಬಂದಿಲ್ಲ! ಬೆಂಗಳೂರು ಟೆಕ್ಕಿಯ ಅಳಲು ವೈರಲ್

ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರನೊಬ್ಬ ಒಂದು ತಿಂಗಳಲ್ಲಿ 500ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಹಾಕಿದ್ರೂ ಒಂದೇ ಒಂದು ಇಂಟರ್ವ್ಯೂಗೆ ಕರೆ ಬಂದಿಲ್ಲ ಎಂದು ರೆಡ್ಡಿಟ್‌ನಲ್ಲಿ ಪೋಸ್ಟ್ ಹಾಕಿದ್ದಾನೆ. ಅನುಭವಕ್ಕಾಗಿ ಯಾವುದೇ ಟೆಕ್ ಕೆಲಸ ಸಿಕ್ಕರೂ ಸಾಕು ಎಂದು ಹೇಳಿಕೊಂಡಿದ್ದು, ಉದ್ಯೋಗ ಮಾರುಕಟ್ಟೆಯ ಕಠಿಣ ಪರಿಸ್ಥಿತಿಯ ಬಗ್ಗೆ ಈ ಪೋಸ್ಟ್ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
Read Full Story
06:17 PM (IST) Jul 11

Karnataka News Live 11 July 2026'ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿಮ್ಹಾನ್ಸ್‌ಗೆ ಹೋಗಲಿ' - ಶಾಸಕ ಜನಾರ್ದನ ರೆಡ್ಡಿ ವಿವಾದಾತ್ಮಕ ಹೇಳಿಕೆ

ಶಾಸಕ ಜನಾರ್ದನ ರೆಡ್ಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಕುರಿತು ನೀಡುತ್ತಿರುವ ಹೇಳಿಕೆಗಳು, ಇಲಾಖೆಯ ನಿರ್ವಹಣೆ ಹಾಗೂ ರಾಜಕೀಯ ಉದ್ದೇಶಗಳ ಬಗ್ಗೆ ರೆಡ್ಡಿ ಹಲವು ಆರೋಪಗಳನ್ನು ಮಾಡಿದರು.

Read Full Story