ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಡಿದ್ದು ವೈಮಾನಿ ಸಮೀಕ್ಷೆ ಮಾಡುತ್ತಾರೆ ಅಂತ ನೋಡಿದ್ದೇನೆ. ಸಿಎಂಗೆ ಹೃದಯದಲ್ಲಿ ಗಾಂಭೀರ್ಯತೆ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹತ್ತಿಕೊಂಡು ಉರಿಯುತ್ತಿದೆ, ಉತ್ತರ ಕರ್ನಾಟಕ ಭಾಗ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಿದ್ರು ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ. ಶಿಕಾರಿಪುರವನ್ನು ಮಾಡಲ್ ಮಾಡಲು ಹೊರಟಿದ್ದಾರಾ ಎಂದು ಸಿಎಂ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Politics Oct 19, 2020, 2:25 PM IST
ಭೀಮೆ ನದಿ ನಿರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದ್ದರೂ ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮಾತ್ರ ಕಡಿಮೆಯಾಗಿಲ್ಲ.
state Oct 19, 2020, 12:33 PM IST
ಭೀಕರ ಭೀಮಾ ಪ್ರವಾಹ ಜಿಲ್ಲೆಯಲ್ಲಿ ಸಾವು- ನೋವಿನ ಸರಣಿಯನ್ನೇ ಹೊತ್ತು ತಂದಿದ್ದು, ನರಿಬೋಳ ಗ್ರಾಮದ ಭಗವಾನ ಹಡಪದ (22) ಎಂಬ ಯುವಕ ನದಿ ನೋಡಲು ಹೋಗಿ ಕಾಲುಜಾರಿ ಅ.13ರಂದೇ ಕೊಚ್ಚಿಕೊಂಡು ಹೋಗಿದ್ದಾನೆ.
Karnataka Districts Oct 19, 2020, 12:00 PM IST
ಕಳೆದ ನಾಲ್ಕು ದಿನಗಳಿಂದ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಬಾಳ ಗ್ರಾಮದ 60ಕ್ಕೂ ಹೆಚ್ಚು ಸಂತ್ರಸ್ತರಿಗೆ ಆಶ್ರಯ ನೀಡಿದ್ದ ಪರಿಹಾರ ಕೇಂದ್ರಕ್ಕೆ ಶನಿವಾರ ಮಧ್ಯರಾತ್ರಿ ಪ್ರವಾಹದ ನೀರು ನುಗ್ಗಿ ತೊಂದರೆಯುಂಟಾಗಿದೆ. ಗ್ರಾಮದ ಶಾಲೆಯೊಂದರಲ್ಲಿ ತೆರೆದಿದ್ದ ಪರಿಹಾರ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಸಂತ್ರಸ್ತರು ಕಷ್ಟಅನುಭವಿಸಿದರು. ತಕ್ಷಣ ಅಲ್ಲಿನ ಸಿಬ್ಬಂದಿ ಈ ಕೇಂದ್ರವನ್ನು ಕೋಬಾಳದ ಹನುಮಾನ ಮಂದಿರಕ್ಕೆ ಸ್ಥಳಾಂತರಿಸಿ ಸಂತ್ರಸ್ತರಿಗೆಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದು, ಸಂತ್ರಸ್ತರಿಗೆ ಹೆಚ್ಚಿನ ಅನಾಹುತ ಆಗಿಲ್ಲ ಎನ್ನಲಾಗಿದೆ.
Karnataka Districts Oct 19, 2020, 11:24 AM IST
ಮಳೆ.. ಮಳೆ..ಮಳೆ... ಎಲ್ಲಿ ನೋಡಿದರೂ ಮಳೆ. ಹೈದ್ರಾಬಾದ್ ಕರ್ನಾಟಕ, ಮಹಾರಾಷ್ಟ್ರ, ಕಲ್ಯಾಣ ಕರ್ನಾಟಕದ ಕೆಲವು ಭಾಗಗಳು ಮಳೆಯಿಂದ ತತ್ತರಿಸಿ ಹೋಗಿವೆ. ಕೆಲವು ಭಾಗಗಳಲ್ಲಿ ಪ್ರವಾಹ ಅಬ್ಬರವನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ.
state Oct 19, 2020, 10:50 AM IST
ತಗ್ಗಿದ ನೆರೆ, ತಗ್ಗದ ಭೀತಿ| ಮತ್ತೆ ಭಾರೀ ಮಳೆ, ‘ಮಹಾ’ ಡ್ಯಾಂಗಳಿಂದ ನೀರು ಬಿಡುವ ಆತಂಕ| 24 ತಾಸು ಆತಂಕಕಾರಿ: ಕಲಬುರಗಿ ಡೀಸಿ| ರಕ್ಷಣೆಗೆ ಅರೆಸೇನೆ ಸನ್ನದ್ಧ
state Oct 19, 2020, 7:29 AM IST
ಕೃಷ್ಣಾ, ಕಾವೇರಿ, ಭೀಮಾ, ಗೋದಾವರಿ ಹೀಗೆ ಬರೋಬ್ಬರಿ ಹದಿನಾರು ನದಿಗಳ ಕ್ರೋದಾಗ್ನಿಗೆ ಲಕ್ಷಾಂತರ ಮಂದಿ ಆಹುತಿಯಾಗುತ್ತಿದ್ದಾರೆ. ನೀರಲ್ಲೇ ಜನರ ಬದುಕು ಧಗ ಧಗಿಸುತ್ತಿದೆ. ಜೀವ ನದಿಗಳೇ ಸೀರಿಯಲ್ ಕಿಲ್ಲರ್ಗಳಂತೆ ಮನುಕುಲದ ಮೇಲೆ ದಂಡೆತ್ತಿ ಬಂದಿವೆ. ಅರ್ಧ ಭಾರತವೇ ಈಗ ಜಲ ಗಂಡಾಂತರ ವಕ್ಕರಿಸಿದೆ. ಇದೇ ಭಯಾನಕ ಹಾಗೂ ಭೀಭತ್ಸ ಪರಿಸ್ಥಿತಿ ಇನ್ನೂ ಮೂರು ದಿನ ಮುಂದುವರೆಯಲಿದೆ ಅಂತಿದ್ದಾರೆ ತಜ್ಞರು. ಸದ್ಯ ಜೀವನದಿಗಳೇ ಶಾಪ ಕೊಟ್ಟಿವೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಈ ಅನುಮಾನದ ಅಸಲಿ ಕಾರಣದ ಅನಾವರಣವೇ ಈ ವರದಿ
India Oct 18, 2020, 5:02 PM IST
ವರುಣನ ಅವಕೃಪೆಯಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಭೀಕರ ಪ್ರವಾಹದಿಂದ ಜನರ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ. 21 ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
state Oct 18, 2020, 3:37 PM IST
ಭೀಮಾ ನದಿಯ ಪ್ರವಾಹಕ್ಕೆ ಕಲಬುರಗಿ ಜಿಲ್ಲೆಯ ಬಂಕಲಾದ ಗ್ರಾಮದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನದಿಯ ನೀರು ಮನೆಗಳಿಗೆ ಹೊಕ್ಕಿದ್ದರಿಂದ ದವಸ ಧಾನ್ಯ, ಪಠ್ಯ ಪುಸ್ತಕಗಳು, ಮನೆಯ ಪೀಠೋಪಕರಣಗಳು ಸೇರಿದಂತೆ ಮತ್ತಿತರ ವಸ್ತುಗಳು ನೀರು ಪಾಲಾಗಿವೆ. ಇದರಿಂದ ಜಿಲ್ಲೆಯ ಜನರು ಕಂಗಾಲಾಗಿ ಹೋಗಿದ್ದಾರೆ.
Karnataka Districts Oct 18, 2020, 1:09 PM IST
ಭೀಕರ ಪ್ರವಾಹಕ್ಕೆ ವೃದ್ಧ ದಂಪತಿ ಕಂಗಾಲಾದ ಘಟನೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ ನಡೆದಿದೆ. ಪ್ರವಾಹಕ್ಕೆ ಮನೆ ಬಿದ್ದಿದೆ, ಹೀಗಾಗಿ ಬಿದ್ದ ಮನೆಯನ್ನೇ ನೋಡುತ್ತಾ ಮಹಾಂತಯ್ಯ, ಚೆನ್ನಮ್ಮ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ಇಲ್ಲ, ಮನೆಯೂ ಇಲ್ಲದೆ ವೃದ್ಧ ದಂಪತಿ ಅತಂತ್ರ ಸ್ಥಿತಿಯಲ್ಲಿದ್ದಾರೆ.
Karnataka Districts Oct 18, 2020, 12:36 PM IST
ಶೇಷಮೂರ್ತಿ ಅವಧಾನಿ
ಮಣ್ಣೂರು (ಅಫಜಲ್ಪುರ):(ಅ.18): ಹಿಂಗ ಮಹಾಪುರ ಹೊಳಿಗೆ ಎಂದೂ ಬಂದಿರಲಿಲ್ಲ ಬಿಡ್ರಿ, ನೋಡುನೋಡೋದ್ರಾಗೇ ಹೊಳಿ ನೀರ ಹಾಂವ ಹರದ್ಹಂಗ ಹರ್ದು ನಮ್ಮೂರ ಮಂದಿ ಮನಿಗೊಳೋಳ್ಗ - ರೈತರ ಹೊಲದೊಳ್ಗ ಹೊಕ್ಕು ಬಕ್ಳ ಹೈರಾಣ ಮಾಡ್ಲಿಕತ್ತದ’
Karnataka Districts Oct 18, 2020, 11:48 AM IST
ಭೀಮಾ ನದಿಯಲ್ಲಿ ಸಿಲುಕಿಕೊಂಡು ಜೀವ ರಕ್ಷಣೆಗಾಗಿ ಪರದಾಡುತ್ತಿದ್ದ ನಾಯಿ ಮರಿಯನ್ನು ತಾಯಿ ಶ್ವಾನ ರಕ್ಷಣೆ ಮಾಡಿದೆ
Karnataka Districts Oct 18, 2020, 11:17 AM IST
ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರನ್ನ ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಂತ್ರಸ್ತರನ್ನ ಸುರಕ್ಷಿತವಾಗಿ ರಕ್ಷಿಸಲು ಸೇನಾಪಡೆ ಬಂದಿಳಿದಿದೆ.
Karnataka Districts Oct 18, 2020, 10:57 AM IST
112 ವರ್ಷಗಳ ಹಿಂದೆ ಮಹಾನ್ ವಿಜ್ಞಾನಿ ಸರ್ ರಂ ವಿಶ್ವೇಶ್ವರಯ್ಯ ಕೊಟ್ಟ ಎಚ್ಚರಿಕೆ ಮರೆತಿದ್ದಕ್ಕೆ ಈಗ ಮುತ್ತಿನ ನಗರಿ ಮಹಾರುದ್ರ ಪ್ರಳಯದಿಂದ ಮುಳುಗಿದೆ.
India Oct 18, 2020, 10:54 AM IST
ಉತ್ತರ ಕರ್ನಾಟಕದಲ್ಲಿ ಜಲಪ್ರವಾಹ ಇದ್ದರೆ ಕರ್ನಾಟಕದಲ್ಲಿ ಕೊರೋನಾ ಪ್ರವಾಹ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 7,184 ಹೊಸ ಪ್ರಕರಣ ಕಾಣಿಸಿಕೊಂಡಿದೆ.
Karnataka Districts Oct 17, 2020, 11:52 PM IST