ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಲಾಕ್ಡೌನ್ನಲ್ಲಿ ಮಾವಿನ ಮರದಡಿ ಬ್ಯುಸಿಯಾಗಿದ್ದರೆ, ಕನ್ನಡದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಈಗ ತರಕಾರಿ ಮಾರುತ್ತಿದ್ದಾರೆ. ಯಲಹಂಕದ ಮಾರುಕಟ್ಟೆಗೆ ಹೋದ್ರೆ ಸಾಕು, ನಿಮ್ಗೆ ಗುಲಾಲ್ ಡಾಟ್ ಕಾಂ ಚಿತ್ರದ ಈ ದಿವಾಕರ್ ತರಕಾರಿ ಮಾರೋದು ಘೋಚರಿಸುತ್ತಿದೆ. ಪಕ್ಕದಲ್ಲಿಯೇ ಮಾರಾಟಕ್ಕೆ ಇಟ್ಟ ಮಾಸ್ಕ್ ಸಹ ಇವೆ. ಆದರೆ,ಯಾಕೆ ಅನ್ನೋರಿಗೆ ಇಲ್ಲಿದೆ ಉತ್ತರ.
Sandalwood May 26, 2020, 4:49 PM IST
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ| ರಾಮಲಲ್ಲಾಗೆ ಪೂಜೆ ಮಾಡಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್| ಟ್ವೀಟ್ ಮಾಡಿ ಶುಭ ಕೋರಿದ ಸಚಿವ ಸಿ. ಟಿ. ರವಿ
India May 26, 2020, 3:12 PM IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹುಟ್ಟುಹಬ್ಬ ಹಿನ್ನೆಲೆ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ಅವರಿಂದ ಪಾದಪೂಜೆ ನಡೆದಿದೆ. ಲಾಕ್ಡೌನ್ ಹಿನ್ನೆಲೆ ಸ್ವಾಮೀಜಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಲ್ಲಿವೆ ಫೋಟೋಸ್
Karnataka Districts May 26, 2020, 2:19 PM IST
ರಾಣೇಬೆನ್ನೂರಿನ ಬಾಲಕಿಗೆ ನೆಗಟಿವ್ ವರದಿ ಬಂದಿದೆ. ಮುಂಬೈನ ಬಾಲಕಿಗೆ ಪಾಸಿಟಿವ್ ವರದಿ ಬಂದಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದ ಎಡವಟ್ಟು ಭಾರಿ ಅನಾಹುತಕ್ಕೆ ಕಾರಣವಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸೋಮವಾರ ವಿವರಿಸಿದ್ದಾರೆ.
Karnataka Districts May 26, 2020, 2:05 PM IST
ಲಾಕ್ಡೌನ್ ಸಂದರ್ಭದಲ್ಲಿ ಬಡವರು ಕೂಲಿ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವಾಗ ಪಟ್ಟಣದ ಸೆಲ್ವಮ್ಮ ಅವರು ಒಂದು ರುಪಾಯಿಗೆ ಒಂದು ಇಡ್ಲಿ ನೀಡುವ ಮೂಲಕ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಅನ್ನಪೂರ್ಣೇಶ್ವರಿಯಾಗಿದ್ದಾರೆ.
Karnataka Districts May 26, 2020, 1:22 PM IST
ಬೆಂಗಳೂರಿನ ಸ್ಲಂನಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಡಿಜೆ ಹಳ್ಳಿಯ ನನಿವಾಸಿ P2180 38 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತೆಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಆ ಮಹಿಳೆಯ ಮನೆಯಲ್ಲಿ 15 ಮಂದಿ ಸಂಬಂಧಿಕರಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿರುವವರು ಬರೋಬ್ಬರಿ 41 ಮಂದಿ. 40 ಮಂದಿಯನ್ನು ಕ್ವಾರಂಟೈನ್ಗೆ ಶಿಫ್ಟ್ ಮಾಡಿದೆ ಬಿಬಿಎಂಪಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
state May 26, 2020, 1:18 PM IST
ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮೈಮುಲ್) ನೇಮಕಾತಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮ ನೋಡಿ ಜಿಲ್ಲೆಯ ಶಾಸಕನಾಗಿ ಧ್ವನಿ ಎತ್ತಿದ್ದೇನೆ. ಈ ಹೋರಾಟವನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಸಚಿವರೂ ಆದ ಸಾ.ರಾ. ಮಹೇಶ್ ಹೇಳಿದ್ದಾರೆ.
Karnataka Districts May 26, 2020, 12:59 PM IST
ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಸ್ಟೇಟಸ್ ಭಾರಿ ವೈರಲ್ ಆಗುತ್ತಿದೆ.
Karnataka Districts May 26, 2020, 12:37 PM IST
47 ದಿನಗಳ ಕಾಲ ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಈಗ ಕೊರೋನಾ ಸ್ಫೋಟವಾಗಿದೆ. ಒಂದೇ ಒಂದು ಪ್ರಕರಣವಿಲ್ಲದೆ ಆರಾಮವಾಗಿದ್ದ ಉಡುಪಿಯಲ್ಲಿ ಇದೀಗ ಕೊರೋನಾ ಪ್ರಕರಣ ಹೆಚ್ಚುತ್ತಲೇ ಇದೆ.
Karnataka Districts May 26, 2020, 12:22 PM IST
ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳಲು ಜನ ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ನೆರೆಯ ರಾಜ್ಯಗಳಿಂದ ಕಂಟಕ ಎದುರಾಗುತ್ತಿದೆ. ತಮಿಳುನಾಡು ಆಯ್ತು, ಈಗ ಆಂಧ್ರದ ಜನರ ಸರದಿ. ಇವರು ಕ್ವಾರಂಟೈನ್ ತಪ್ಪಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡುತ್ತಿದ್ದಾರೆ. ಬಸ್ ಅಥವಾ ಸ್ವಂತ ವಾಹನದಲ್ಲಿ ಬಂದರೆ ಕ್ವಾರಂಟೈನ್ ಪಕ್ಕಾ! ಹಾಗಾಗಿ ಹಾಲಿನ ವ್ಯಾನ್ನಲ್ಲಿ ಬರುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ದೊಡ್ಡ ಹಾಲಿನ ವಾಹನದಲ್ಲಿ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನು ಸ್ಥಳೀಯರು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
state May 26, 2020, 12:00 PM IST
ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ರೆ ಅಲ್ಲೊಂದು ಯುವಕರ ಗುಂಪು ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ. ಇಲ್ಲಿವೆ ಫೋಟೋಸ್
Karnataka Districts May 26, 2020, 11:29 AM IST
ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಿದೆ. ಆಘಾತಕಾರಿ ವಿಚಾರವೆಂದರೆ ಸೋಂಕಿತರ ಸಂಪರ್ಕವಿಲ್ಲದೆ 21 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇದು ಆತಂಕ ಹೆಚ್ಚಿಸಿದೆ.
Karnataka Districts May 26, 2020, 10:36 AM IST
ಕ್ವಾರಂಟೈನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತರಲಾಗಿದೆ. 6 ಹೈಐ ರಿಸ್ಕ್ ರಾಜ್ಯಗಳ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊರೊನಾ ನೆಗೆಟಿವ್ ವರದಿ ಇದ್ದರೆ ಕ್ವಾರಂಟೈನ್ ಇಲ್ಲ. 7 ದಿನ ಸಾಂಸ್ಥಿಕ, 7 ದಿನ ಹೋಂ ಕ್ವಾರಂಟೈನ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. 2 ದಿನದ ಹಿಂದೆ ಮಾಡಿಸಿದ ಮೆಡಿಕಲ್ ರಿಪೋರ್ಟ್ ಇರಬೇಕು. ವರದಿಯಲ್ಲಿ ನೆಗೆಟಿವ್ ಬಂದರೆ ಕ್ವಾರಂಟೈನ್ ಇರುವುದಿಲ್ಲ.
state May 26, 2020, 10:24 AM IST
ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರ ಸಾಕು ಶ್ವಾನಗಳು ದಿಢೀರ್ ನಾಪತ್ತೆಯಾಗುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು, ಕಾಟಕೇರಿ, ಜೋಡುಪಾಲ, 2ನೇ ಮೊಣ್ಣಂಗೇರಿ ಮತ್ತಿತರ ವ್ಯಾಪ್ತಿಯಲ್ಲಿ ಸಾಕು ನಾಯಿಗಳನ್ನು ಚಿರತೆ ಹೊತ್ತೊಯ್ದಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದ್ದು, ನಾಯಿಗಳನ್ನು ಕಳೆದುಕೊಂಡ ಗ್ರಾಮಸ್ಥರು ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.
Karnataka Districts May 26, 2020, 10:06 AM IST
ಕಳ್ಳದಾರಿಯಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಬಾಲಕಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ಬಾಲಕಿ ಕುಡುಚಿಯಿಂದ ಮಹಾರಾಷ್ಟ್ರಕ್ಕೆ ಹೋಗಿದ್ದಳು ಎನ್ನಲಾಗಿದ್ದು, ಕುಡುಚಿ ಪಟ್ಟಣದ ಎರಡು ವಾರ್ಡ್ಗಳನ್ನು ಸೀಲ್ ಡೌನ್ ಮಾಡಲಾಗಿದೆ.
state May 26, 2020, 9:52 AM IST