Asianet Suvarna News Asianet Suvarna News

ಬಾಲಿವುಡ್​ ಖಳನಾಯಕ್​-2 ಚಿತ್ರದಲ್ಲಿ ನಟ ಯಶ್​? ನಿರ್ದೇಶಕ ಸುಭಾಷ್​ ಘಾಯ್​ ಹೇಳಿದ್ದೇನು?

ಖಳನಾಯಕ-2 ಚಿತ್ರದಲ್ಲಿ ಯಶ್​ ನಟಿಸುತ್ತಿದ್ದಾರಾ? ಸಾಕಷ್ಟು ಸದ್ದು ಮಾಡುತ್ತಿರುವ ಈ ವಿಷಯದ ಕುರಿತು ನಿರ್ದೇಶಕ ಸುಭಾಷ್​ ಘಾಯ್​ ಹೇಳಿದ್ದೇನು? 
 

Subhash Ghai clarrified that Sanjay Dutt will play Ballu Balaram in Khalnayak 2 suc
Author
First Published Apr 22, 2024, 2:11 PM IST

ಸದ್ಯ ಎಲ್ಲೆಲ್ಲೂ ನಟ ಯಶ್​ ಅವರದ್ದೇ ಹವಾ. ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ಗೆ ಹಾರಿದ ಮೇಲೆ ಇವರ ಮೇಲಿನ ಕ್ರೇಜ್​ ಇನ್ನಷ್ಟು ಹೆಚ್ಚಾಗಿದೆ.  ಹಿಂದಿಯ ರಾಮಾಯಣ ಚಿತ್ರದ  ಶೂಟಿಂಗ್​ ನಡೆಯುತ್ತಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಿಡುಗಡೆ  ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್​ ಅವರು ನಟಿಸುತ್ತಿರುವುದು. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್​​ನಲ್ಲಿ ಆಗಲಿದೆಯಂತೆ. ಈಗ ಸೆಟ್​ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಯಶ್​ ರಾಮಾಯಣ ಚಿತ್ರಕ್ಕೆ ಸಂಭಾವನೆನೇ ಪಡೆಯುತ್ತಿಲ್ಲ ಎನ್ನುವುದೂ ಸುದ್ದಿಯಾಗಿದೆ. ಅದರ ಬದಲು ಯಶ್​ ಅವರು,  ಚಿತ್ರದ ನಿರ್ಮಾಪಕರಾಗುತ್ತಿದ್ದಾರೆ ಎನ್ನುವುದು. ಅಂದರೆ,  ಯಶ್​, ಸಂಭಾವನೆ ಬದಲು ಸಹ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. 

ಇದರ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿರುವ ನಡುವೆಯೇ ಖಳನಾಯಕ್​-2 ಚಿತ್ರದ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವಿಷಯಗಳು ಬರುತ್ತಿವೆ. ಅದೇನೆಂದರೆ, 1993ರಲ್ಲಿ ಸಂಜಯ್​ ದತ್ತ ನಾಯಕರಾಗಿ ನಟಿಸಿರುವ ಬ್ಲಾಕ್​ಬಸ್ಟರ್​ ಖಳನಾಯಕ್​ ಚಿತ್ರದ ಪಾರ್ಟ್​-2 ಅನ್ನು ನಿರ್ದೇಶಕ ಸುಭಾಷ್ ಘಾಯ್ ಮಾಡಲು ಹೊರಟಿದ್ದಾರೆ. ಆಗ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಇದೀಗ ಪಾರ್ಟ್​-2 31 ವರ್ಷಗಳ ಬಳಿಕ ಬರುತ್ತಿದ್ದು,  ಸುಭಾಷ್ ಹೊಸ ಪಾತ್ರವರ್ಗದೊಂದಿಗೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಕೂಡ ಫೈನಲ್ ಆಗಿದೆ ಎಂದು ಸುದ್ದಿಯಾಗಿತ್ತು. ಅದರಲ್ಲಿ ನಾಯಕನಾಗಿ ಯಶ್​ ಅವರ ಹೆಸರೂ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅಂದಹಾಗೆ 3.75 ಕೋಟಿ ರೂಪಾಯಿ ಬಜೆಟ್​ನಲ್ಲಿ ತಯಾರಿಸಲಾಗಿದ್ದ ಖಳನಾಯಕ್​ ಚಿತ್ರವು 31 ವರ್ಷಗಳ ಹಿಂದೆಯೇ 25 ಸಾವಿರ ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಅದರ ಸೀಕ್ವೆಲ್​ ರೆಡಿಯಾಗುತ್ತಿದೆ. 

'ರಾಮಾಯಣ'ಕ್ಕೆ ಸಂಭಾವನೆ ಬೇಡವೆಂದ ನಟ ಯಶ್​, ಆದ್ರೆ ಇಲ್ಲಿದೆ ಇನ್ನೊಂದು ಟ್ವಿಸ್ಟ್​, ಏನದು?

ಖಳನಾಯಕ ಚಿತ್ರದಲ್ಲಿ ಸಂಜಯ್ ದತ್ ಮಾಡಿದ ಬಲ್ಲು ಬಲರಾಮ್ ಪಾತ್ರಕ್ಕೆ ಈಗ ಸುಭಾಷ್​ ಅವರು ಹೊಸಬರನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಪಾತ್ರಕ್ಕೆ  ರಣವೀರ್ ಸಿಂಗ್, ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿದೆ. ಜೊತೆಗೆ ಯಶ್​ ಅವರ ಬಗ್ಗೆಯೂ ಸುಭಾಷ್​ ಅವರು ಪ್ಲ್ಯಾನ್​ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್​ ಅವರ ಹೆಸರೂ ಅವರ ತಲೆಯಲ್ಲಿ ಓಡುತ್ತಿದೆ ಎಂದೇ ಸುದ್ದಿಯಾಗುತ್ತಿದೆ. ಯಶ್​ ಅವರೇ ಫೈನಲ್​ ಆಗುತ್ತಾರೆ, ಈ ಮೂಲಕ ಬಾಲಿವುಡ್​ನ ಇನ್ನೊಂದು ಚಿತ್ರದಲ್ಲಿ ಯಶ್​ ಕಾಣಿಸಿಕೊಳ್ಳಲಿದ್ದಾರೆ ಎಂದು  ಅವರ ಅಭಿಮಾನಿಗಳು ಸಕತ್​ ಖುಷಿಯಲ್ಲಿದ್ದಾರೆ. ಆದರೆ ಇದೀಗ ಸುಭಾಷ್​ ಘಾಯ್​ ಅವರು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಲ್ಲು ಬಲರಾಮ್ ಪಾತ್ರದ ಕುರಿತು ಸಾಕಷ್ಟು ಸುದ್ದಿಗಳು ಬರುತ್ತಿವೆ. ಹೊಸ ಮುಖಗಳನ್ನು ನಾನು ಹುಡುಕುತ್ತಿರುವುದಾಗಿ ಹೇಳಲಾಗುತ್ತಿದೆ. ಆದರೆ  ಖಳನಾಯಕ್ ಸೀಕ್ವೆಲ್ ಮಾಡಲು ಬಯಸುತ್ತಿರುವುದು ನಿಜ. ಆದರೆ ಈ ಚಿತ್ರದಲ್ಲಿ ಸಂಜಯ್​ ದತ್​ ಅವರೇ ಇರಲಿದ್ದಾರೆ ಎಂದಿದ್ದಾರೆ. ಈ ಮೂಲಕ ಹೊಸಬರನ್ನು ಸುಭಾಷ್​ ಘಾಯ್​ ಅವರು ಬಲ್ಲು ಬಲರಾಮ್  ಪಾತ್ರಕ್ಕೆ ನೋಡುತ್ತಿಲ್ಲ ಎಂದು ಸ್ಪಷ್ಟವಾದಂತಿದೆ. ಇದರ ಹೊರತಾಗಿಯೂ ಸುಭಾಷ್​ ಘಾಯ್​ ಯಶ್​ ಸೇರಿದಂತೆ ಕೆಲವು ನಾಯಕರನ್ನು ಅಪ್ರೋಚ್​ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದ್ದು, ಇದು ಬೇರೆ ಪಾತ್ರಕ್ಕಾ ಅಥವಾ ಇನ್ನೇನಾದರೂ ಟ್ವಿಸ್ಟ್​ ಇರಲಿದೆಯಾ ಎನ್ನುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಂದಹಾಗೆ, ಕಳೆದ ವರ್ಷವಷ್ಟೇ ಖಳನಾಯಕ್​ ಚಿತ್ರ 30ನೇ ವಾರ್ಷಿಕೋತ್ಸವವನ್ನು  ಮಾಧುರಿ ದೀಕ್ಷಿತ್, ಸಂಜಯ್ ದತ್, ಜಾಕಿ ಶ್ರಾಫ್, ಅನುಪಮ್ ಖೇರ್ ಮೊದಲಾದವರು ಭರ್ಜರಿಯಾಗಿ ಆಚರಿಸಿದ್ದು, ಇದರ ವಿಡಿಯೋಗಳು ಸಕತ್​ ವೈರಲ್​ ಆಗಿದ್ದವು. 
 

ಯಶ್​, ರಣಬೀರ್​-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್​ ಸೆಟ್​ ಹೀಗಿದೆ ನೋಡಿ: ವಿಡಿಯೋ ವೈರಲ್​

Follow Us:
Download App:
  • android
  • ios